Categories
ಕ್ರಿಕೆಟ್ ಟೆನಿಸ್

ಉದ್ಯಾವರ-“ಸಮಾಗಮ ಟ್ರೋಫಿ-2021” 90 ರ ದಶಕದಲ್ಲಿ ಗತವೈಭವ ಮೆರೆದ ತಂಡಗಳ ಕ್ರಿಕೆಟ್ ಪಂದ್ಯಾಕೂಟ.

90 ರ ದಶಕದಲ್ಲಿ ಟೆನ್ನಿಸ್ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಉದ್ಯಾವರ ಪರಿಸರದ ಹಿರಿಯ ಆಟಗಾರರನ್ನೆಲ್ಲಾ ಒಗ್ಗೂಡಿಸುವ ಸಲುವಾಗಿ,ಉದ್ಯಾವರದ ಕ್ರೀಡಾ ಪ್ರೋತ್ಸಾಹಕರು,ಕುತ್ಪಾಡಿ ಫ್ರೆಂಡ್ಸ್ ನ ಹಿರಿಯ ಆಟಗಾರರಾದ ಶ್ರೀ.ವಸಂತ್ ಕುತ್ಪಾಡಿ ಇವರ ಸಾರಥ್ಯದಲ್ಲಿ,90 ರ ದಶಕದಲ್ಲಿ ಗತವೈಭವ ಮೆರೆದ ಉದ್ಯಾವರ ಪರಿಸರದ ಆಹ್ವಾನಿತ 9 ತಂಡಗಳ ನಡುವೆ ಕ್ರಿಕೆಟ್ ಪಂದ್ಯಾಕೂಟ “ಸಮಾಗಮ ಟ್ರೋಫಿ-2021” ಆಯೋಜಿಸಲಾಗಿದೆ
ಮಾರ್ಚ್ 7 ರವಿವಾರದಂದು ಉದ್ಯಾವರ ಗ್ರಾಮ ಪಂಚಾಯತ್ ಕ್ರೀಡಾಂಗಣದಲ್ಲಿ ಪ‌ಂದ್ಯಾಟ ನಡೆಯಲಿದ್ದು,ತನ್ನ ತಂಡದ ಪರವಾಗಿ ಸೇವೆ ಸಲ್ಲಿಸಿದ ಆಟಗಾರರಿಗೆ,35 ವರ್ಷ ಮತ್ತು ಮೇಲ್ಪಟ್ಟವರಿಗೆ ಹಾಗೂ ವಿಶೇಷವಾಗಿ 30 ರಿಂದ 35 ವರ್ಷದ ಗರಿಷ್ಠ 3 ಆಟಗಾರರಿಗೆ ತಂಡದಲ್ಲಿ ಆಡಲು ಅವಕಾಶ ಕಲ್ಪಿಸಲಾಗಿದೆ.ಭಾಗವಹಿಸುವ ತಂಡಗಳಿಗೆ ಉಚಿತ ಪ್ರವೇಶಾತಿ ಹಾಗೂ ವಿಜಯೀ ತಂಡಗಳಿಗೆ ಅತ್ಯಾಕರ್ಷಕ ಬಹುಮಾನಗಳನ್ನು ನೀಡಲಾಗುತ್ತಿದೆ.
ಭಾಗವಹಿಸುವ 9 ತಂಡಗಳ ವಿವರ ಈ ಕೆಳಗಿನಂತಿದೆ.
1) ವೆಂಕಟರಮಣ ಕ್ರಿಕೆಟರ್ಸ್ ಪಿತ್ರೋಡಿ-ಪ್ರವೀಣ್ ಪಿತ್ರೋಡಿ ಸಾರಥ್ಯದಲ್ಲಿ
2)ಸಭಾ ಕ್ರಿಕೆಟರ್ಸ್-ರಿಯಾಜ್ ಪಳ್ಳಿ ಸಾರಥ್ಯದಲ್ಲಿ
3)ಜನಪ್ರಿಯ ಕ್ರಿಕೆಟರ್ಸ್-ರಾಘು ಉದ್ಯಾವರ ಸಾರಥ್ಯದಲ್ಲಿ
4)ಸಂಪಿಗೆ ನಗರ ಫ್ರೆಂಡ್ಸ್-ಪ್ರಶಾಂತ್ ಸಾರಥ್ಯದಲ್ಲಿ
5)11 ಸ್ಟಾರ್-ವಿನೋದ್ ಪಿತ್ರೋಡಿ ಸಾರಥ್ಯದಲ್ಲಿ
6)ಆಜಾದ್ ಕ್ರಿಕೆಟರ್ಸ್-ಆಬಿದ್ ಸಾರಥ್ಯದಲ್ಲಿ
7)ಕರಾವಳಿ ಕ್ರಿಕೆಟರ್ಸ್-ಲೋಹಿತ್ ಕುಮಾರ್ ಪಿತ್ರೋಡಿ ಸಾರಥ್ಯದಲ್ಲಿ
8)ಬೊಳ್ಜೆ ಫ್ರೆಂಡ್ಸ್-ರಾಜಾ ಬೊಳ್ಜೆ ಸಾರಥ್ಯದಲ್ಲಿ
9)ಕುತ್ಪಾಡಿ ಫ್ರೆಂಡ್ಸ್-ಆಯೂಬ್ ಸಾಹೇಬ್ ಸಾರಥ್ಯದಲ್ಲಿ.
ಹೆಚ್ಚಿನ ವಿವರಗಳಿಗಾಗಿ 9886619217,9964380701,9743577986 ಈ ಮೊಬೈಲ್ ನಂಬರ್ ಗಳನ್ನು ಸಂಪರ್ಕಿಸಬಹುದಾಗಿದೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

8 + 7 =