Categories
ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್

ಉಡುಪಿ-ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಪ್ರಾಯೋಜಿತ-ಹೆಬ್ರಿ ತಾಲೂಕು ಕ್ರಿಕೆಟ್ ಪಂದ್ಯಾಟ

ಉಡುಪಿ ಜಿಲ್ಲಾ ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಮೊದಲ ಹಂತದ ಯೋಜನೆ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ, ಈಗಾಗಲೇ ಕಾರ್ಕಳ,ಉಡುಪಿ,
ಬೈಂದೂರು,ಕಾಪು ಈ ನಾಲ್ಕು ತಾಲೂಕುಗಳಲ್ಲಿ ಯಶಸ್ವಿಯಾಗಿದ್ದು,ಇದೀಗ ಜನವರಿ 29 ಮತ್ತು 30 ರಂದು ಹೆಬ್ರಿ ತಾಲೂಕಿನಲ್ಲಿ 10 ಓವರ್ ಗಳ 90 ಗಜಗಳ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.
90 ರ ದಶಕದ ಹೆಬ್ರಿಯ ಪ್ರಸಿದ್ಧ ತಂಡ ಸವ್ಯಸಾಚಿ ಹೆಬ್ರಿಯ ಪರವಾಗಿ ಹಲವಾರು ಪಂದ್ಯಾಟಗಳಲ್ಲಿ ಆಡಿದ ಹಾಗೂ ಹಲವಾರು ಜಿಲ್ಲಾ ಹಾಗೂ ರಾಜ್ಯಮಟ್ಟದ ಪಂದ್ಯಾಟಗಳನ್ನು  ಸಂಘಟಿಸಿದ ಅನುಭವಿ ಸುಕೇಶ್ ಶೆಟ್ಟಿ ಇವರ ಸಾರಥ್ಯದಲ್ಲಿ ಈ ಬಾರಿ ಹೆಬ್ರಿಯಲ್ಲಿ ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾಟ ನಡೆಯಲಿದೆ.
ಈ ಮುಂಚೆ ಹೆಬ್ರಿ ತಾಲೂಕಿನ ಒಟ್ಟು 67 ಮಂದಿ ಆಟಗಾರರು ನೋಂದಣಿ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದು,
ಈ ಆಟಗಾರರು ಅಗಸ್ತ್ಯ ಮದಗ,ಚೈತನ್ಯ ವಾರಿಯರ್ಸ್, ಚಕ್ರವರ್ತಿ ಹೆಬ್ರಿ,ಎಸ್.ಎಲ್.ಎನ್ ಹಳೆ ಸೋಮೇಶ್ವರ,ಹೆಬ್ರಿ ಹಾಕ್ಸ್,ಶಿವಪುರ ಫ್ರೆಂಡ್ಸ್  ಈ 6 ತಂಡಗಳ ಪರವಾಗಿ ಆಡಲಿದ್ದಾರೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

fourteen − 1 =