ಟಿ.ಸಿ.ಎ ಉಡುಪಿ ವತಿಯಿಂದ ರಾಜ್ಯ ಮಟ್ಟದ ಮತ್ತು ಶಾಲಾ-ಕಾಲೇಜು ಮಟ್ಟದ ಕ್ರಿಕೆಟ್ ಪಂದ್ಯಾವಳಿ ಕುರಿತು ಚರ್ಚೆ

ಟಿ.ಸಿ.ಎ ಉಡುಪಿ ವತಿಯಿಂದ ರಾಜ್ಯ ಮಟ್ಟದ ಮತ್ತು ಶಾಲಾ-ಕಾಲೇಜು ಮಟ್ಟದ ಕ್ರಿಕೆಟ್  ಪಂದ್ಯಾವಳಿ ಕುರಿತು ಚರ್ಚೆ
ಉಡುಪಿ-ದಿನಾಂಕ 21.06.2023 ನೇ ಬುಧವಾರ ಸಂಜೆ  6:೦೦ಕ್ಕೆ ಉಡುಪಿಯ  ಜಗನ್ನಾಥ ಸಭಾಭವನದಲ್ಲಿ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ನ ಸಾಮಾನ್ಯ ಸಭೆ ನಡೆಯಿತು. ಸಭಾ ಕಾರ್ಯಕ್ರಮದಲ್ಲಿ ಪ್ರಥಮವಾಗಿ ಇತ್ತೀಚೆಗಷ್ಟೇ ಅಗಲಿದ  ಖ್ಯಾತ ವೀಕ್ಷಕ ವಿವರಣಾಗಾರರಾದಂತಹ ಜಾಕಿರ್ ಹುಸೇನ್ ಬಜ್ಪೆ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿ ಮೊದಲು ಗೌರವ ಸಲ್ಲಿಸಲಾಯಿತು.
ರಾಜ್ಯಮಟ್ಟದ ಪಂದ್ಯಾಕೂಟವನ್ನು ನಡೆಸುವ ಬಗ್ಗೆ ಮಾತನಾಡಿದ ಟಿ.ಸಿ.ಎ ಅಧ್ಯಕ್ಷ ಗೌತಮ್ ಶೆಟ್ಟಿ ಟೊರ್ಪೆಡೋಸ್ ಮಾತನಾಡಿ “ಎಲ್ಲಾ ಜಿಲ್ಲೆಗಳಲ್ಲಿ ಅಸೋಸಿಯೇಷನ್ ನ ಸ್ಥಾಪನೆಯ ಬಗ್ಗೆ ಚರ್ಚೆ ನಡೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸಲಾಗುವುದು ಹಾಗೂ ಈ ಬಗ್ಗೆ ಹೆಚ್ಚಿನ ಜಿಲ್ಲೆ ಗಳಲ್ಲಿ ಉತ್ತಮ ಸ್ಪಂದನೆ ಇದೆ ಹಾಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ” ಎಂದು ಕೂಡ ಹೇಳಿದರು.
ತದನಂತರ ಅಂತರ್ ಶಾಲಾ ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸುವ ಕುರಿತು ಚರ್ಚಿಸಲಾಯಿತು. ಮುಂದಿನ ಸಭೆಯಲ್ಲಿ ಇದನ್ನೂ ಮಂಜೂರು ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ರಾಷ್ಟ್ರೀಯ ಕ್ರೀಡಾ ದಿನವಾದ ಆಗಸ್ಟ್ 29 ರಂದು ವಿದ್ಯಾರ್ಥಿಗಳಿಗೆ ಕ್ರಿಕೆಟ್ ರಸಪ್ರಶ್ನೆ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಚರ್ಚಿಸಲಾಯಿತು.
ಮುಂದಿನ ಸಭೆಯನ್ನು ಮುಂದಿನ ಗುರುವಾರ, ಜೂನ್ 29 ರಂದು ನಡೆಸಲಾಗುವುದು ಎಂದು ನಿರ್ಧರಿಸಲಾಯಿತು. ಈ ಸಭೆಯಲ್ಲಿ ಉಡುಪಿ ಜಿಲ್ಲಾ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರು ಮತ್ತು ಸರ್ವ ಪದಾಧಿಕಾರಿಗಳು ಭಾಗವಹಿಸಿದ್ದರು. ಗೌತಮ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪ್ರಶಾಂತ್ ಅಂಬಲಪಾಡಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *