ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ಟಿ.ಸಿ.ಎ ಉಡುಪಿ ಆಶ್ರಯದಲ್ಲಿ ಕ್ರಿಕೆಟ್-ಪರಂಪರೆ ಮತ್ತು ಇತಿಹಾಸದ ಕುರಿತು ವಿದ್ಯಾರ್ಥಿಗಳಿಗೆ ಬ್ರೈನ್...

ಟಿ.ಸಿ.ಎ ಉಡುಪಿ ಆಶ್ರಯದಲ್ಲಿ ಕ್ರಿಕೆಟ್-ಪರಂಪರೆ ಮತ್ತು ಇತಿಹಾಸದ ಕುರಿತು ವಿದ್ಯಾರ್ಥಿಗಳಿಗೆ ಬ್ರೈನ್ ಟೀಸರ್

-

- Advertisment -spot_img
ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಅವರ ಜನ್ಮದಿನವನ್ನು ಗೌರವಿಸಲು ಪ್ರತಿ ವರ್ಷ ಆಗಸ್ಟ್ 29 ರಂದು ರಾಷ್ಟ್ರೀಯ ಕ್ರೀಡಾ ದಿನವನ್ನು ಆಚರಿಸಲಾಗುತ್ತದೆ.
ರಾಷ್ಟ್ರೀಯ ಕ್ರೀಡಾ ದಿನವನ್ನು ರಾಷ್ಟ್ರೀಯ ಖೇಲ್ ದಿವಸ್ ಎಂದೂ ಕರೆಯಲಾಗುತ್ತದೆ.
ಇದರ ಅಂಗವಾಗಿ ಟೆನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಷನ್, ಉಡುಪಿ ಜಿಲ್ಲೆ ಮತ್ತು ಮಾಹೆ ಮಣಿಪಾಲ ಇವರುಗಳ ಜಂಟಿ ಆಶ್ರಯದಲ್ಲಿ ಆಗಸ್ಟ್ 29,2023 ರಂದು ಟಿ .ಎಂ. ಎ ಪೈ ಹಾಲ್, ಮಾಹೆ ಮಣಿಪಾಲದಲ್ಲಿ ಶಾಲಾ ಕಾಲೇಜು ಮಕ್ಕಳಿಗೆ  ಕ್ರಿಕೆಟ್‌ಗೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರಾಥಮಿಕ ಶಾಲೆ,  ಪ್ರೌಢಶಾಲೆ, ಪಿಯು ಕಾಲೇಜು ಮತ್ತು ಪದವಿ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರು  ಈ ಕ್ವಿಜ್ ಸ್ಪರ್ಧೆಯಲ್ಲಿ ಭಾಗವಹಿಸಲಿರುವರು.
ವಿದ್ಯಾರ್ಥಿಗಳು ಕ್ರೀಡೆಯನ್ನು ಜೀವನದ ಭಾಗವಾಗಿ ಅಳವಡಿಸಿಕೊಳ್ಳಲು ಕ್ರೀಡೆ ಸಂಯೋಜಿತ ಕಲಿಕೆಗೆ ವಿಶೇಷ ಗಮನವನ್ನು ಟಿ.ಸಿ. ಎ ಉಡುಪಿ  ನೀಡುತ್ತದೆ. ಈ ನಿಟ್ಟಿನಲ್ಲಿ  ಕ್ರೀಡೆ  ಕುರಿತ ರಸಪ್ರಶ್ನೆ ಕಾರ್ಯಕ್ರಮಕ್ಕೆ ಟಿ.ಸಿ. ಎ ಉಡುಪಿ  ಚಾಲನೆ ನೀಡಲಿದೆ. ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ತಮ್ಮ ಜ್ಞಾನವನ್ನು ಪ್ರದರ್ಶಿಸಲು , ವೈಶಿಷ್ಟ್ಯಗೊಳಿಸಲು ಅವಕಾಶವನ್ನು ಒದಗಿಸುವ ವಿಶಿಷ್ಟ ವೇದಿಕೆಯನ್ನು ಟಿ.ಸಿ. ಎ ಉಡುಪಿ ನೀಡುತ್ತದೆ ಟಿ.ಸಿ. ಎ ಉಡುಪಿಯ ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳನ್ನು ಅದರ ವಿಜೇತರನ್ನಾಗಿ ಮಾಡುವುದಲ್ಲದೆ ಜಿಲ್ಲೆಯಲ್ಲಿ ಕ್ರೀಡಾ ಸಂಸ್ಕೃತಿಯನ್ನು ನಿರ್ಮಿಸಲು ಉತ್ತೇಜನವನ್ನು ನೀಡುತ್ತದೆ.  ದೈಹಿಕ ಸಾಮರ್ಥ್ಯದಷ್ಟೇ ಮಾನಸಿಕ ಸಾಮರ್ಥ್ಯ ಕೂಡ ಅಷ್ಟೇ ಮುಖ್ಯ. ಟಿ.ಸಿ. ಎ ಉಡುಪಿ  ನಡೆಸುವ ಕ್ವಿಜ್ ಚಿಕ್ಕ ವಯಸ್ಸಿನಲ್ಲಿಯೇ ಮಾನಸಿಕ ಜಾಗರೂಕತೆಯನ್ನು ಮೂಡಿಸುತ್ತದೆ ಮತ್ತು ಕ್ರೀಡಾ ಜ್ಞಾನವನ್ನು ಏಕಕಾಲದಲ್ಲಿ ಹೆಚ್ಚಿಸಲು ರಸಪ್ರಶ್ನೆ ಕಾರ್ಯಕ್ರಮ ಒಂದು ಪರಿಪೂರ್ಣ ಮಾರ್ಗವಾಗಿದೆ.  ಈ  ರಸಪ್ರಶ್ನೆ ಕಾರ್ಯಕ್ರಮವು ಶಾಲೆಗೆ ಹೋಗುವ ಮಕ್ಕಳಲ್ಲಿ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ, ಅದೇ ಸಮಯದಲ್ಲಿ ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ಕರೆತರಲು ಮಾತ್ರವಲ್ಲದೆ ಅವರನ್ನು ಮಾನಸಿಕ ಕೌಶಲ್ಯ ಮತ್ತು  ಸಾಮರ್ಥ್ಯದ ಸ್ಪರ್ಧೆಯಲ್ಲಿ ತೊಡಗಿಸಲು ವಿನ್ಯಾಸಗೊಳಿಸಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಟಿ.ಸಿ. ಎ ಉಡುಪಿ ಅಧ್ಯಕ್ಷ  ಗೌತಮ್ ಶೆಟ್ಟಿ ಕುಂದಾಪುರ “ವಿದ್ಯಾರ್ಥಿಗಳಿಗಾಗಿ ನಾವು ಆಯೋಜಿಸಿರುವ ರಸಪ್ರಶ್ನೆ ಕಾರ್ಯಕ್ರಮ ಮತ್ತು ಕ್ರೀಡಾಕೂಟಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದ್ದು ಸಂತೋಷದ ವಿಷಯ ಮತ್ತು ಇದು ಖಂಡಿತವಾಗಿಯೂ ಎಲ್ಲ ವಿದ್ಯಾರ್ಥಿಗಳನ್ನು ಪ್ರೇರೇಪಿಸುತ್ತದೆ. ರಸಪ್ರಶ್ನೆ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ವೇದಿಕೆಯನ್ನು ನೀಡಲಿದ್ದು, ಕ್ರೀಡಾ ಇತಿಹಾಸದ ಬಗ್ಗೆ ಅರಿವು ಮೂಡಿಸುತ್ತದೆ. ಪ್ರತಿ ವಿದ್ಯಾರ್ಥಿಯು ಈ ರಸಪ್ರಶ್ನೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.”
ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಲು, ಶಾಲೆಗಳು ಅಥವಾ ವಿದ್ಯಾರ್ಥಿಗಳು ಕೆಳಗೆ ನೀಡಲಾಗಿರುವ ದೂರವಾಣಿ ಸಂಖ್ಯೆಗೆ ಕರೆ ಮಾಡಿ ನೋಂದಾಯಿಸಿಕೊಳ್ಳಬೇಕು ಮತ್ತು  ಆಗಸ್ಟ್ ಕೊನೆಯಲ್ಲಿನಡೆಯುವ  ರಸಪ್ರಶ್ನೆಯ ಸುತ್ತಿನಲ್ಲಿ ಭಾಗವಹಿಸುವ ತಮ್ಮ ವಿದ್ಯಾರ್ಥಿಗಳ ಹೆಸರನ್ನು ಸೂಚಿಸಬೇಕು.
ಚೇತನ್-9901850385
ಪ್ರವೀಣ್-9964244946
ಪ್ರಶಾಂತ್-8660457633
ಅಜೀಜ್-8310010819
ಹೆಸರಾಂತ ಕ್ವಿಜ್ ಮಾಸ್ಟರ್ ರಂಜನ್  ನಾಗರಕಟ್ಟೆ
ಇವರು ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ರಸಪ್ರಶ್ನೆ ಕಾರ್ಯಕ್ರಮದ ಸುತ್ತು ಯೂಟ್ಯೂಬ್ ನಲ್ಲಿ ಪ್ರಸಾರವಾಗಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

fifteen − 9 =

Latest news

ತುಮಕೂರಿನಲ್ಲಿ ರಾಜ್ಯಮಟ್ಟದ  ಕ್ರಿಕೆಟ್ ಟೂರ್ನಮೆಂಟ್

ತುಮಕೂರಿನಲ್ಲಿ ರಾಜ್ಯಮಟ್ಟದ  ಕ್ರಿಕೆಟ್ ಟೂರ್ನಮೆಂಟ್ ಡಾ. ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ, ತುಮಕೂರು  ಹಾಗೂ ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್ ತುಮಕೂರು ಇವರ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಈ ಟೂರ್ನಮೆಂಟ್ ಡಾ....

ಶೆಫ್‌ಟಾಕ್ ಪ್ರೀಮಿಯರ್ ಲೀಗ್ ಸೀಸನ್ 6 ಕ್ರಿಕೆಟ್ ಸಂಭ್ರಮ-ಕಂಪೆನಿ ಸಿಬ್ಬಂದಿಗಳ ಮಹಾಸಂಗಮ

ಶೆಫ್‌ಟಾಕ್ ಪ್ರೀಮಿಯರ್ ಲೀಗ್ ಸೀಸನ್ 6 ಕ್ರಿಕೆಟ್ ಸಂಭ್ರಮ-ಕಂಪೆನಿ ಸಿಬ್ಬಂದಿಗಳ ಮಹಾಸಂಗಮ! ಬೆಂಗಳೂರು:  ಪ್ರತೀ ಬಾರಿಯಂತೆ ಈ ವರ್ಷದ ‘Cheftalk Premier League – Season 6’ ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 13...

ಮಲ್ಪೆ ಬಂದರು ಸಹಕಾರಿ ನೌಕರರ ಸಂಘದಿಂದ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾ ಸ್ಪರ್ಧೆಗಳು

ಮಲ್ಪೆ ಬಂದರು ಸಹಕಾರಿ ನೌಕರರ ಸಂಘದಿಂದ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾ ಸ್ಪರ್ಧೆಗಳು! ಮಲ್ಪೆ, ಮೀನುಗಾರಿಕಾ ಬಂದರು: ಮಲ್ಪೆ ಬಂದರು ಸಹಕಾರಿ ನೌಕರರ ಸಂಘ, ಮಲ್ಪೆ ಇವರ ವತಿಯಿಂದ,...

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”   ಉಡುಪಿ: ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ (Kinnimulki Sports Club) ವತಿಯಿಂದ ಪ್ರತಿಷ್ಠಿತ ಕಿನ್ನಿಮೂಲ್ಕಿ ಸೂಪರ್...
- Advertisement -spot_imgspot_img

ಗೆಳೆಯರು ಕಪ್ 2025 – 42 ವರ್ಷ ಮೇಲ್ಪಟ್ಟ ಲೆಜೆಂಡ್ಸ್‌ಗಳ ಟೂರ್ನಿಯಲ್ಲಿ ಫ್ರೆಂಡ್ಸ್ ಬೆಂಗಳೂರು ವಿಜಯ! 

ಗೆಳೆಯರು ಕಪ್ 2025 – 42 ವರ್ಷ ಮೇಲ್ಪಟ್ಟ ಲೆಜೆಂಡ್ಸ್‌ಗಳ ಟೂರ್ನಿಯಲ್ಲಿ ಫ್ರೆಂಡ್ಸ್ ಬೆಂಗಳೂರು ವಿಜಯ!  ಕ್ರಿಕೆಟ್ ಲೋಕದ ಅಭಿಮಾನಿಗಳನ್ನು ರಂಜಿಸಿದ ಗೆಳೆಯರು ಕಪ್ 2025 ಟೂರ್ನಮೆಂಟ್...

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ.

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ. ಖ್ಯಾತ ಕ್ರಿಕೆಟ್ ಆಟಗಾರ ವಿಠಲ್ ರಿಶಾನ್ ನಾಯಕ್ ಅವರು ದುಬೈನ ಪ್ರಸಿದ್ಧ ಕ್ರಿಕೆಟ್ ತಂಡವಾದ ಕರ್ನಾಟಕ...

Must read

- Advertisement -spot_imgspot_img

You might also likeRELATED
Recommended to you