Categories
ಇತರೆ ಭರವಸೆಯ ಬೆಳಕು ಯಶೋಗಾಥೆ ರಾಜ್ಯ

ಕರಾವಳಿ ಕನ್ನಡಿಗ ಕೋಟ ರಾಮಕೃಷ್ಣ ಆಚಾರ್ಯರಿಗೆ ರಾಯಚೂರಿನಲ್ಲಿ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಟೆನ್ನಿಸ್ ಬಾಲ್ ಕ್ರಿಕೆಟ್ ಗೆ ಆಟಗಾರರ ಮಧ್ಯೆ ಒಂದು ಸಂಕೋಲೆಯನ್ನು  ಸೃಷ್ಟಿಸಿದ ಕರ್ನಾಟಕದ ಮೊತ್ತ ಮೊದಲ ಕ್ರೀಡಾ ವೆಬ್ ಸೈಟ್ ಎಂಬ ಕೀರ್ತಿಗೆ ಪಾತ್ರವಾಗಿದೆ
ಈ sportskannada.com . ಕೋಟ ರಾಮಕೃಷ್ಣ ಆಚಾರ್ ರವರು ಸತತ 10 ವರ್ಷಗಳ ಅಧ್ಯಯನ ಮತ್ತು ಅವಿರತ ಶ್ರಮದಿಂದ ಕರ್ನಾಟಕದಲ್ಲಿರುವ 1970 ರಿಂದ 2020 ರ ಕಾಲಘಟ್ಟದ ಹಿರಿಯ ಹಾಗೂ ಕಿರಿಯ ಟೆನ್ನಿಸ್ ಬಾಲ್ ಕ್ರಿಕೆಟ್ ಆಟಗಾರರನ್ನು ಅವರಿದ್ದಲ್ಲೇ ಹೋಗಿ ಸಂದರ್ಶಿಸಿ ಅವರ ಬಗೆಗಿನ ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ. ಹಿರಿಯ ಆಟಗಾರರ ಅನುಭವಗಳನ್ನು ನಮ್ಮ ಭವಿಷ್ಯದ ಪೀಳಿಗೆಗಳಿಗೆ ಹಂಚಿ ಟೆನ್ನಿಸ್ ಬಾಲ್ ಕ್ರಿಕೆಟ್ ಎಂಬ ಹಳೆಯ ಬೇರು ಹೊಸ ಚಿಗುರೊಡೆಯುದಕ್ಕೊಸ್ಕರ ನೀರೆರೆಯುವ ಪ್ರಯತ್ನವನ್ನ ಮಾಡಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆಗಳ ಹಿರಿಯ ಮತ್ತು ಕಿರಿಯ ಆಟಗಾರರನ್ನು “ರಾಜ್ಯ ಟೆನ್ನಿಸ್ ಕ್ರಿಕೆಟ್” ಎಂಬ ಗ್ರೂಪ್ ಮೂಲಕ ಒಗ್ಗೂಡಿಸುವ ಸಫಲ ಪ್ರಯತ್ನವನ್ನು ಮಾಡಿರುವ ಆರ್.ಕೆ sportskannada.com ವೆಬ್ಸೈಟ್ ಗಾಗಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ವೆಬ್ಸೈಟ್ ಲಾಂಚಿಂಗ್  ಕಾರ್ಯಕ್ರಮದ ಯಶಸ್ಸಿಗೆ  ಕ್ರೀಡಾಪಟುಗಳು ಮತ್ತು ಕ್ರೀಡಾಭಿಮಾನಿಗಳು ಸ್ವಯಂ ಪ್ರೇರಿತರಾಗಿ ಸಹಾಯವನ್ನು ಮಾಡಿರುವರು ಎನ್ನುವುದಕ್ಕೆ ಸಂತಸ ಪಡಬೇಕು ಹಾಗೂ ಯಾವುದೇ ಸಹಾಯಕ್ಕಾಗಿ ಆರ್.ಕೆ ಯವರು ಎಂದಿಗೂ ಕೈ ಚಾಚಿಲ್ಲ ಎಂಬುವುದು ನಾವು ಗಮನಿಸಬೇಕಾದ ಮುಖ್ಯ ವಿಷಯ.
ಕೇವಲ ಮೂರು ವರ್ಷದಲ್ಲೇ ಊಹಿಸಲಸಾಧ್ಯವಾಗುವಷ್ಟು ಸಾಧನೆಗಳನ್ನು ಮಾಡಿದ್ದಾರೆ. ಸುಮಾರು 2000ಕ್ಕಿಂತಲೂ ಹೆಚ್ಚು ಕ್ರೀಡಾಪಟುಗಳನ್ನು ಸಂದರ್ಶನ ನಡೆಸಿ ಅವರ ಬಗೆಗೆನ ಲೇಖನ, ಮಾಹಿತಿಗಳನ್ನು ವೆಬ್ ಸೈಟ್ ನಲ್ಲಿ ಪ್ರಕಟಗೊಳಿಸಿದ್ದಾರೆ.  ಅಸಂಖ್ಯಾತ ಅಭಿಮಾನಿ ಓದುಗರನ್ನು ಹೊಂದಿದ್ದು ಇದರಲ್ಲಿ ಬರುವ ಕ್ರೀಡಾ ಸುದ್ಧಿಗಳು, ವಿಶೇಷ ವರದಿಗಳು, ಉತ್ತಮ ಅಂಕಣಗಳಿಗೆ ವ್ಯಾಪಕವಾದ ಮೆಚ್ಚುಗೆ ವ್ಯಕ್ತವಾಗಿದೆ. ಪ್ರತಿನಿತ್ಯ ಈ ವೆಬ್ ಸೈಟ್ನಲ್ಲಿ ಬರುವ ಹೊಸ ವಿಷಯಗಳಿಗಾಗಿ ಕಾದು ಕುಳಿತುಕೊಳ್ಳುವ ಒಂದಷ್ಟು ಜನ ಸಮೂಹವೇ ಇದೆ ಎಂದರೆ ತಪ್ಪಾಗದು.
ಇತ್ತೀಚೆಗೆ ರಾಯಚೂರು ಜಿಲ್ಲೆಯಲ್ಲಿ ಕಲಾ ಸಂಕುಲ ಸಂಸ್ಥೆ (ರಿ) ರಾಯಚೂರು ಇವರ ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಆರ್ ಕೆ.ಯವರ ಮೇಲಿನ ಅಭಿಮಾನ ಇನ್ನಷ್ಟು ಇಮ್ಮಡಿಯಾಗಿದೆ. ಇದೇ ಬರುವ 28-11-2020ರಂದು ರಾಯಚೂರುನಲ್ಲಿ ನಡೆಯಲಿರುವ ಈ ಕಲ್ಯಾಣ ಕರ್ನಾಟಕ ಉತ್ಸವ್ದಲ್ಲಿ ವಿವಿಧ ಸಾಹಿತಿಗಳು,ಸಂಸದರು, ಶಾಸಕರು ಉಪಸ್ಥಿತರಿರುವ ವೇಧಿಕೆಯಲ್ಲಿ ಕ್ರೀಡ ಕ್ಷೇತ್ರಕ್ಕೆ ವಿಶಿಷ್ಟ ಸಾಧನೆಗೈದ ಸಾಮಾನ್ಯ ಯುವಕನೊಬ್ಬನು ಸನ್ಮಾನಿಸಲ್ಪಡುತ್ತಿರುವುದು ನಿಜಕ್ಕೂ ಸಂತಸದ ವಿಷಯ. ಇಷ್ಟೊಂದು ಸಾಧಿಸಿದರೂ, ಕಳೆದ 2 ವರ್ಷಗಳಲ್ಲಿ ಪ್ರಶಸ್ತಿಗಳ ಸಾಲೇ ಹರಿದು ಬಂದರೂ ಕ್ರೀಡಾಲೋಕದ ಮೇಲಿರುವ ಆರ್.ಕೆ ಯ ಕನಸು ಬೆಟ್ಟದಷ್ಟಿದೆ. ಇದು ಕೇವಲ ಆರಂಭ,ತಲುಪಬೇಕಾದ ಹಾದಿ ಬಲುದೂರವಿದೆ.
ಯಾವುದೇ ಸರಕಾರದ ಅಕಾಡೆಮಿಗಳ ನೆರವುಗಳಿಲ್ಲದೆ ತನ್ನ ಸ್ವಂತ ಪ್ರಯತ್ನದಲ್ಲಿ ಕ್ರೀಡಾರಂಗಕ್ಕೋಸ್ಕರ, ಕ್ರೀಡಾಪಟುಗಳಿಗೋಸ್ಕರ, ಹಿರಿಯ ನಿವೃತ್ತ ಆಟಗಾರರಿಗೊಸ್ಕರ, ಮುಂದಿನ ಯುವ ಪೀಳಿಗೆಗೊಸ್ಕರ ದುಡಿಯುತ್ತಿರುವ ನಮ್ಮ ಆರ್.ಕೆ ಗೆ ನಮ್ಮೆಲ್ಲರ ಪ್ರೊತ್ಸಾಹದ ಅಗತ್ಯವಿದೆ. ಆಶೀರ್ವಾದದ ಅಗತ್ಯವಿದೆ. ಆರ್ ಕೆ. ಯವರ ಕನಸಿನಂತೆ ನಮ್ಮ ರಾಜ್ಯದಲ್ಲೊಂದು ಟೆನ್ನಿಸ್ ಬಾಲ್ ಕ್ರಿಕೆಟ್ ಅಸೋಸಿಯೇಶನ್ ಸ್ಥಾಪನೆಗೊಳ್ಳಲಿ.  ಸಮಾಜದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯನಂತೆ ಬದುಕಿ ಅಸಾಮಾನ್ಯ ರೀತಿಯ ಸಾಧನೆಯನ್ನು ಮಾಡಿದ ನಮ್ಮ ಆರ್ ಕೆ ಯವರಿಗೆ ಸರಕಾರದ ವಿವಿಧ ಪ್ರಶಸ್ತಿಗಳು ದೊರಕಲಿ. ಅವರ ಕಾರ್ಯಕ್ಕೆ ಸರಕಾರದ ಬೆಂಬಲ ಸಿಗಲಿ. ಅದರಿಂದ ಅವರ ಈ ಒಂದು ವಿಭಿನ್ನ ಪ್ರಯತ್ನ ಇನ್ನಷ್ಟು ಉತ್ತುಂಘ ಶಿಖರವನ್ನೇರಲಿ. ಆರ್.ಕೆ ಯಂತವರ ಪ್ರಯತ್ನದಿಂದ ನಮ್ಮ ಊರಿನ ಮಕ್ಕಳು ಮುಂದೆ ರಾಷ್ಟ್ರ – ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತಾಗಲಿ. ಆರ್.ಕೆ ಯ ಕನಸು ನನಸಾಗಲಿ ಎಂದು ನಾವೆಲ್ಲ ಹಾರೈಸೋಣ.
ದಿನೇಶ ಆಚಾರ್ಯ ಸಾಲಿಗ್ರಾಮ
Categories
ಕ್ರಿಕೆಟ್ ಜಿಲ್ಲಾ ರಾಜ್ಯ

ಕಲ್ಯಾಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಉಡುಪಿಯ ವೀಕ್ಷಕ ವಿವರಣೆಕಾರ ಪ್ರಶಾಂತ್.ಕೆ‌.ಎಸ್ ಅಂಬಲಪಾಡಿ ಆಯ್ಕೆ

ಕ್ರೀಡಾ ನಿರೂಪಕರಾಗಿ ,ಟೆನಿಸ್ ಬಾಲ್ ಕ್ರಿಕೆಟ್ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ್ದಕ್ಕಾಗಿ ಉಡುಪಿಯ ಪ್ರಶಾಂತ್.ಕೆ.ಎಸ್. ಅಂಬಲಪಾಡಿ ಇವರಿಗೆ ರಾಯಚೂರಿನ “ಕಲಾ ಸಂಕುಲ ಸಂಸ್ಥೆ” ವತಿಯಿಂದ ಕೊಡಲ್ಪಡುವ ಪ್ರತಿಷ್ಟಿತ “ಕಲ್ಯಾಣ ಕರ್ನಾಟಕ ರಾಜ್ಯೋತ್ಸವ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ‌.ದಿನಾಂಕ 28/11/2020 ರಂದು ರಾಯಚೂರು ನಗರದಲ್ಲಿ ನಡೆಯಲಿರುವ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದೆ.
ಉಡುಪಿ ಅಂಬಲಪಾಡಿಯ ಪ್ರಶಾಂತ್.ಕೆ‌‌.ಎಸ್ ಇವರು
ಪೊಡವಿಗೊಡೆಯ ಶ್ರೀ ಕೃಷ್ಣ ನ ನಾಡಾದ ಉಡುಪಿ ಜಿಲ್ಲೆಯ ಅಂಬಲಪಾಡಿಯಲ್ಲಿ ಜನಿಸಿರುವ ಇವರು ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಕೃತ ಬ್ಯಾಂಕೊಂದರಲ್ಲಿ ಉದ್ಯೋಗಿಯಾಗಿದ್ದುಕೊಂಡು,
ರಾಷ್ಟ್ರ,ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟಗಳ ವೀಕ್ಷಕ ವಿವರಣೆ ಜೊತೆ ನಾಟಕ,ಯಕ್ಷಗಾನ ಹಾಗೂ ನೃತ್ಯ ರಂಗದಲ್ಲಿ ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡವರು.
2000 ನೇ ರಾಜ್ಯದ ಪ್ರತಿಷ್ಟಿತ ತಂಡ “ಪಡುಬಿದ್ರಿ ಫ್ರೆಂಡ್ಸ್”
ಸಂಘಟಿಸಿದ್ದ ರಾಜ್ಯಮಟ್ಟದ ಪಂದ್ಯಾಟದಿಂದ ವೀಕ್ಷಕ ವಿವರಣೆಯ ಇವರ ಪಯಣ ಇಂದು ರಾಜ್ಯದ ಅತಿ ಹೆಚ್ಚಿನ ಜಿಲ್ಲೆಗಳಲ್ಲಿ ಸಹಸ್ರಾರು ಕ್ರೀಡಾ ಪ್ರೇಮಿಗಳನ್ನು ತಲುಪಿ “ವಾಯ್ಸ್ ಆಫ್ ಕರ್ನಾಟಕ”ಎಂದೇ ಪ್ರಖ್ಯಾತರಾಗಿದ್ದಾರೆ‌.ಸುಮಾರು 600 ಕ್ಕೂ ಮಿಕ್ಕಿದ ಪಂದ್ಯಾಕೂಟಗಳಲ್ಲಿ ವೀಕ್ಷಕ ವಿವರಣೆ ನೀಡಿದ ಕೀರ್ತಿ ಇವರದ್ದು.ಪ್ರಸ್ತುತ ರಾಜ್ಯದ ಬಹು ಬೇಡಿಕೆಯ ವೀಕ್ಷಕ ವಿವರಣೆಕಾರರಲ್ಲಿ ಪ್ರಶಾಂತ್ ಗುರುತಿಸಿಕೊಳ್ಳುತ್ತಾರೆ.
ಇದಲ್ಲದೆ ನಾಟಕ ಕಲಾವಿದರಾಗಿ,ಸುಮಾರು 75 ಕ್ಕೂ ಹೆಚ್ಚಿನ ನಾಟಕದಲ್ಲಿ ಭಾಗವಹಿಸಿದ್ದು ಜೊತೆಗೆ ಯಕ್ಷಗಾನ ರಂಗದಲ್ಲೂ ನೈಪುಣ್ಯತೆಯನ್ನು ಸಾಧಿಸಿದವರು.
ಕಾಲಿಗೆ ಗೆಜ್ಜೆ ಕಟ್ಟಿ ಯಕ್ಷಗಾನದ ತಾಳ ಮೇಳಕ್ಕೆ ತನ್ನ ಪ್ರತಿಭೆಯನ್ನು ಓರೆ ಹಚ್ಚಿರುವ ಶ್ರೀ ಲಕ್ಷ್ಮೀ ಜನಾರ್ಧನ ಯಕ್ಷಗಾನ ಕಲಾಮಂಡಳಿಯಂತಹ ಹವ್ಯಾಸಿ ಸಂಘಗಳ ಜೊತೆಗೆ ಹಲವಾರು ಸಂಘ ಸಂಸ್ಥೆಗಳಲ್ಲಿ ಗೆಜ್ಜೆ ಕಟ್ಟಿದವರು.ಜೊತೆಗೆ ನಾಟ್ಯ ರಂಗದಲ್ಲೂ ತಮ್ಮನ್ನು ತೊಡಗಿಸಿಕೊಂಡಿರುತ್ತಾರೆ.
ಇವರ ಸಾಧನೆಯನ್ನು ಗುರುತಿಸಿ 2012_13 ನೇ ಸಾಲಿನಲ್ಲಿ ವಿಶ್ವ ಕ್ರೀಡಾಂಗಣ ಮತ್ತು ಸ್ಪೋರ್ಟ್ಸ್ ಫೌಂಡೇಶನ್ ಬೆಂಗಳೂರು ಇವರು ಜಂಟಿಯಾಗಿ ಕೊಡಮಾಡಿದ “ಕ್ರೀಡಾರತ್ನ” ಪ್ರಶಸ್ತಿಯನ್ನು ಬೆಂಗಳೂರಿನ ಟೌನ್ ಹಾಲ್ ನಲ್ಲಿ ಅನಿವಾಸಿ ಕನ್ನಡಿಗ ಅಬುಧಾಬಿಯ
ಉದ್ಯಮಿ ಡಾ.ಬಿ.ಆರ್.ಶೆಟ್ಟಿಯವರ ಮುಖಾಂತರ ಪಡೆದಿರುವುದು ಅವರ ಪ್ರತಿಭೆಗೆ ಹಿಡಿದ ಕೈಗನ್ನಡಿ.
ಇತ್ತೀಚೆಗಷ್ಟೇ ಅಂಬಲಪಾಡಿಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆ ಕಾರ್ಯಕ್ರಮದಲ್ಲಿ ಹುಟ್ಟೂರ ಸನ್ಮಾನಕ್ಕೂ ಪಾತ್ರರಾಗಿದ್ದರು.
ಅಂಬಲಪಾಡಿ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಿದಲ್ಲದೇ,ಹಲವಾರು ಸಂಘ ಸಂಸ್ಥೆಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಂಡಿರುತ್ತಾರೆ.
ಈ ವರೆಗೆ 18 ಬಾರಿ ರಕ್ತದಾನ ನೀಡಿದ್ದಾರೆ.ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಬ್ಯಾಂಕ್ ನಲ್ಲಿ ಉದ್ಯೋಗ ಕೊಡಿಸಿದ್ದಾರೆ.ಇವರು ಸುಮಾರು 500 ಕ್ಕೂ ಮಿಕ್ಕಿರುವ ನೆನಪಿನ ಕಾಣಿಕೆಗಳು,ಸ್ಮರಣಿಕೆಗಳು,ಹಾರ ತುರಾಯಿಗಳು ಮನೆಯಲ್ಲಿ ಎಲ್ಲರನ್ನು ಆಕರ್ಷಿಸದಿರದು.
ಇತಿಹಾಸ ಸೃಷ್ಟಿಸಿದ್ದ ಧಾರಾವಾಹಿ “ಗುಡ್ಡದ ಭೂತ” ದಲ್ಲಿ ಪ್ರಕಾಶ್ ರೈ  ಅವರ ಜೊತೆಗೆ ಕಿರುಪಾತ್ರದಲ್ಲಿ ನಟಿಸಿರುವುದು ಹಾಗೂ ರಕ್ತದಾನದಂತಹ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿ ಕೊಂಡಿದ್ದು ,ಇತ್ತೀಚೆಗೆ ಉಡುಪಿಯ ಸ್ಥಳೀಯ
ಟಿ.ವಿ ಚಾನೆಲ್ ಪ್ರೈಮ್ ಟಿ.ವಿ ಯ ಮನದ ಮಾತು ಕಾರ್ಯ ಕ್ರಮದಲ್ಲಿ ಸಂದರ್ಶಿಸಿರುವದು ಇವರ ಬಹುಮುಖ ಪ್ರತಿಭೆಗೆ ಸಂದ ಗೌರವ…