Uncategorizedಮಂಗಳೂರಿನಲ್ಲಿ ಪ್ರೀಮಿಯರ್ ಲೀಗ್- SVT TROPHY 2024

ಮಂಗಳೂರಿನಲ್ಲಿ ಪ್ರೀಮಿಯರ್ ಲೀಗ್- SVT TROPHY 2024

-

- Advertisment -spot_img
2024 ರ ಜನವರಿ 13 ಮತ್ತು 14 ರಂದು “ಎಸ್ ವಿ ಟಿ ಟ್ರೋಫಿ 2024, ಸೀಸನ್ 2”  ಶೀರ್ಷಿಕೆಯ  ಕ್ರಿಕೆಟ್ ಪಂದ್ಯಾಟವನ್ನು ಎಸ್ ವಿ ಟಿ ಸ್ವಯಂಸೇವಕರ ಅಸೋಸಿಯೇಷನ್ ಮಂಗಳೂರು ಪ್ರಸ್ತುತಪಡಿಸುತ್ತಿದೆ.
”ಕ್ರಿಕೆಟ್ ಏಕ್ ನೆವನ್, ಹೇಂ ಸ್ವಯಂ ಸೇವಕ ಸಮ್ಮಿಲನ್” ಎಂಬ ಟ್ಯಾಗ್ ಲೈನ್ ಇಟ್ಟುಕೊಂಡು ಮಂಗಳೂರಿನ ರಥಬೀದಿ ವೆಂಕಟರಮಣ ದೇವಸ್ಥಾನದ ಸ್ವಯಂ ಸೇವಕರಿಗೋಸ್ಕರ ಆಯೋಜಿಸಲ್ಪಡುವ ಈ ಫ್ಲಡ್ ಲೈಟ್ ಕ್ರಿಕೆಟ್ ಪಂದ್ಯಾವಳಿಯು ಡೊಂಗರಕೇರಿ ಕೆನರಾ ಹೈಸ್ಕೂಲ್ ಮೈದಾನದಲ್ಲಿ ಎರಡು ದಿನಗಳ ಕಾಲ ನಡೆಯಲಿದೆ.
2023ರ ಏಪ್ರಿಲ್ ತಿಂಗಳಿನಲ್ಲಿ ಇತಿಹಾಸದಲ್ಲೇ ಮೊದಲ ಬಾರಿ ಎಂಬಂತೆ  SVT TROPHY 2023 ಅಭೂತ ಪೂರ್ವ ಯಶಸ್ಸು ಮತ್ತು ವಿಜೃಂಭಣೆಯಿಂದ ಅದ್ದೂರಿಯಾಗಿ ಸಂಪನ್ನಗೊಂಡಿತ್ತು. ಕಳೆದ ಬಾರಿ SVT TROPHY 2023ರಲ್ಲಿ  46 ವರ್ಷ ಮೇಲ್ಪಟ್ಟ ಸ್ವಯಂ ಸೇವಕರ ಪಂದ್ಯಾಕೂಟದಲ್ಲಿ  4 ತಂಡಗಳು ಭಾಗವಹಿಸಿದ್ದು ಅಂತಿಮವಾಗಿ ಶ್ರೀನಿವಾಸ ತಂಡ ಪ್ರಶಸ್ತಿ ವಿಶೇತ ತಂಡವಾಗಿ ಹೊರಹೊಮ್ಮಿದ್ದು ಆಕರ್ಷಕ ಟ್ರೋಫಿ ಮತ್ತು ಸ್ಮರಣಿಕೆಯನ್ನು ಪಡೆದಿತ್ತು. ಕಠಾರಿ ವೀರ ತಂಡ ಎರಡನೇ ಪ್ರಶಸ್ತಿ ತನ್ನದಾಗಿಸಿತ್ತು. 15 ವರ್ಷದಿಂದ 45 ವರ್ಷದೊಳಗಿನ ಪಂದ್ಯಾಟದಲ್ಲಿ 8 ತಂಡಗಳು ಭಾಗವಹಿಸಿದ್ದು ನಾಗನಕಟ್ಟೆ ಪ್ಯಾಂಥರ್ಸ್ ಪ್ರಥಮ,  ಶ್ರಂಗೇರಿ ರೈಸಿಂಗ್ ಸ್ಟಾರ್ಸ್ ದ್ವಿತೀಯ ಬಹುಮಾನ ಪಡೆದಿತ್ತು.
ಕಳೆದ ಬಾರಿ  ಯಶಸ್ವಿಯಾಗಿ ನಡೆದ ಪಂದ್ಯಾವಳಿಯಿಂದ ಪ್ರೇರಣೆಗೊಂಡು ಈ ಬಾರಿ  ಮತ್ತೆ  ಪಂದ್ಯಾಟ ಆಯೋಜನೆ ಮಾಡುವ ಇರಾದೆಯನ್ನು ಇಟ್ಟುಕೊಂಡು ಇದಕ್ಕೆ ಬೇಕಾದ ಒಂದು ಸಮಿತಿಯನ್ನು ಎಸ್ ವಿ ಟಿ ಸ್ವಯಂಸೇವಕರ ಸಂಘ ರಚಿಸಿದೆ.  ಹೊನಲು ಬೆಳಕಿನಲ್ಲಿ  ನಡೆಯುವ ಈ ಪಂದ್ಯಾವಳಿಯಲ್ಲಿ 46 ವರ್ಷ ಮೇಲ್ಪಟ್ಟ ಸ್ವಯಂಸೇವಕರ  ತಂಡಗಳು ಮತ್ತು  ಅದೇ ರೀತಿ 15 ವರ್ಷದಿಂದ 45 ವರ್ಷದೊಳಗಿನ ಸ್ವಯಂಸೇವಕರ ತಂಡಗಳು ಭಾಗವಹಿಸಲಿವೆ. ಇದು ಹರಾಜು ಆಧಾರಿತ ಪಂದ್ಯಾವಳಿಯಾಗಿದ್ದು ಇತ್ತೀಚಿಗೆ ಡಿಸೆಂಬರ್ 9 ರಂದು ಇದರ ಹರಾಜು ಪ್ರಕ್ರಿಯೆಯು ಮಂಗಳೂರಿನ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದಿತ್ತು. ಹರಾಜು ಪ್ರಕ್ರಿಯೆಯ ನಿಷ್ಣಾತ   ಕಾತ್ಯಾಯಿನಿ ಮಠದ ಎಂ ಗೋಪಾಲ ಕೃಷ್ಣ ಭಟ್ (ಗೋಪಿ ಭಟ್ ಮಾಮ್) ಇವರು ಹರಾಜು ಪ್ರಕ್ರಿಯೆಯನ್ನು ನಡೆಸಿಕೊಟ್ಟಿದ್ದರು.
SVT VOLUNTEERS ASSOCIATION ಅಧ್ಯಕ್ಷರಾಗಿರುವ ಶ್ರೀ ಜಿ ಸುರೇಶ್  ಕಾಮತ್ ಅವರು ಈ ವರ್ಷದ ಪಂದ್ಯಾವಳಿ ಮತ್ತು ಅಸೋಸಿಯನ್ ಸದಸ್ಯರ ಬಗ್ಗೆ ಮಾಹಿತಿ ನೀಡಿದರು. ಈ ಅಸೋಸಿಯೇಷನ್ ನ ಉಪಾಧ್ಯಕ್ಷರಾಗಿ ಸ್ವಯಂ ಸೇವಕರು, ದೇವಳದ ಮೊಕ್ತೇಸರರು ಹಾಗೂ  ಪ್ರಸಿದ್ಧ ಉದ್ಯಮಿ ಆಗಿರುವ ಸಾಹುಕಾರ್ ಎಂ ಕಿರಣ್ ಪೈ, ಕಾರ್ಯದರ್ಶಿಯಾಗಿ ಉದ್ಯಮಿ,  XL ಸ್ಟುಡಿಯೋ ಮಾಲಕ ಕೆ ಮಂಜುನಾಥ್ ಶೆಣೈ, ಖಜಾಂಚಿ ಯಾಗಿ ದೇವಸ್ಥಾನದ ಸ್ವಯಂ ಸೇವಕರು ವಾಣಿಜ್ಯ ಅಕೌಂಟೆಂಟ್ ಆಗಿರುವ  ಸುಧೀರ್ ಭಗತ್  ಇವರುಗಳನ್ನು ಒಳಗೊಂಡಿದೆ ಎಂದು ಅಸೋಸಿಯೇಷನ್ ನ ಅಧ್ಯಕ್ಷರು ತಿಳಿಸಿದರು. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿರುವ ಅಡಿಗೆ ದಾಮೋದರ್ ಶೆಣೈ, ಸ್ವಯಂಸೇವಕರಾಗಿರುವ  ಬಿ ರಾಮಚಂದ್ರ ಕಾಮತ್ ಮತ್ತು ಹರೀಶ್ ಕಾಮತ್ ಇವರುಗಳು ಇದ್ದಾರೆ.  ಕ್ರೀಡಾ ಸಮಿತಿಯ ಚೀಫ್ ಕೋಆರ್ಡಿನೇಟರ್ ಆಗಿ ಕಾರ್ಯಕ್ರಮ ನಿರೂಪಕರು ಮತ್ತು ಜಿ ಎಸ್ ಬಿಗಳ  ಮಾತ್ರ ಭಾಷೆಯ ಜನಪ್ರಿಯ ವಿವರಣೆಗಾರರಾದಂತಹ ಎಂ ಗೋಪಾಲ ಕೃಷ್ಣ ಭಟ್ ಇವರು ಕಾರ್ಯನಿರ್ವಹಿಸಲಿದ್ದಾರೆ. ಸದಸ್ಯರುಗಳಾದ  ಡಿ ನರಸಿಂಹ ಭಟ್ ಡೊಂಗರಕೇರಿ, ಲ್ಲಕ್ಷ್ಮೀಶ ಬಾಳಿಗ, ಕಂದೇಲ್  ವಸಂತ್ ಕಾಮತ್, ಅನಂತ್ ರಾಯ್ ಪೈ , ಕೊಂಚಾಡಿ ನರಸಿಂಹ ಶೆಣೈ, ವಿಘ್ನೇಶ್ ಪ್ರಭು, ರಮೇಶ್ ಕಾಮತ್, ವಿಘ್ನೇಶ್ ಹೆಗ್ಡೆ, ಪಡುಬಿದ್ರಿ ಅನಿರುದ್ಧ ಭಟ್,ಜಗದೀಶ್ ಶೆಣೈ, ಎಂ ಸತೀಶ್ ಕಾಮತ್, ದೀಪಕ್ ಭಂಡಾರಿ,ಅನ್ವಿತ್ ಮಲ್ಯ, ವಿವೇಕ್ ಪ್ರಭು ಮತ್ತು ವಿಘ್ನೇಶ್  ನಾಯಕ್ ಇವರೆಲ್ಲರ ಸಂಯೋಜನೆಯಲ್ಲಿ ಒಂದು ವ್ಯವಸ್ಥಿತ ಕ್ರಿಕೆಟ್ ಪಂದ್ಯಾವಳಿಯು ಜರುಗಲಿದೆ.
ಇದೇ ಪಂದ್ಯಾವಳಿ ಸಂಧರ್ಭದಲ್ಲಿ ಅಯ್ದ ಹಿರಿಯ ಸ್ವಯಂ ಸೇವಕರ ಸೇವೆ ಗುರುತಿಸಿ ಆಯೋಕರ ವತಿಯಿಂದ ಸನ್ಮಾನ ಕಾರ್ಯಕ್ರಮ ಕೂಡ ನಡೆಯಲಿದೆ.
SVT TROPHY ಆಯೋಜಕರು ಹಾಗೂ ಸ್ವಯಂ ಸೇವಕರ ವತಿಯಿಂದ  ದೇವರ ಅನುಗ್ರಹದಿಂದ ಈ ಪಂದ್ಯಾ ಕೂಟವು ಉತ್ಸವ ವಿಜೃಂಭಣೆಯಿಂದ ನಡೆಯಲಿ.
ಆಲ್ ದಿ ಬೆಸ್ಟ್ ಎಸ್. ವಿ. ಟಿ ಪ್ರೀಮಿಯರ್ ಲೀಗ್.
ಶುಭಾಶಯಗಳೊಂದಿಗೆ,
✍ ಸುರೇಶ್ ಭಟ್ ಮೂಲ್ಕಿ
ವೀಕ್ಷಕ ವಿವರಣೆಗಾರರು ಮತ್ತು ಸ್ಪೋರ್ಟ್ಸ್ ಕನ್ನಡ ಪ್ರತಿನಿಧಿ
{ ಸ್ಪೋರ್ಟ್ಸ್ ಕನ್ನಡ  ಕ್ರೀಡಾ ಈವೆಂಟ್ ಬ್ರಾಡ್‌ಕಾಸ್ಟಿಂಗ್ ಕಂಪನಿಯಾಗಿದ್ದು ಲೈವ್ ಕ್ರಿಕೆಟ್  ಟೂರ್ನಮೆಂಟ್ ಮತ್ತು ಇನ್ನಿತರ ಈವೆಂಟ್‌ಗಳನ್ನು ಪ್ರಸಾರ ಮಾಡುತ್ತದೆ: -ನೇರ ಪ್ರಸಾರ ಮತ್ತು ಲೈವ್ ಸ್ಟ್ರೀಮಿಂಗ್  ನಮ್ಮನ್ನು ಸಂಪರ್ಕಿಸಿ @ 6363022576 ಅಥವಾ  9632178537 }
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

eleven + 6 =

Latest news

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

ಅಮ್ಗೆಲೆ ಅಭರಣ್ GPL ಉತ್ಸವ – 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ

ಅಮ್ಗೆಲೆ ಅಭರಣ್ GPL– 2026: ತಂಡಗಳ ಫಿಕ್ಸ್ಚರ್ಸ್ ಬಿಡುಗಡೆ, ಕಾದಿದ್ದ ಕ್ಷಣಕ್ಕೆ ತೆರೆ ಜಿಎಸ್‌ಬಿ ಕ್ರೀಡಾಭಿಮಾನಿಗಳು ಆತುರದಿಂದ ಕಾಯುತ್ತಿದ್ದ ಕ್ಷಣ ಕೊನೆಗೂ ಬಂದಿದೆ. *ಅಮ್ಗೆಲೆ ಅಭರಣ್ GPL...
- Advertisement -spot_imgspot_img

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ

ಮುಂಬೈಯಲ್ಲಿ ಮಾಜಿ ರಣಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ನಿಧನ ರೈಲ್ವೇಸ್ ಪರವಾಗಿ ರಣಜಿ ಟ್ರೋಫಿಯಲ್ಲಿ ಪ್ರತಿನಿಧಿಸಿದ್ದ ಮಾಜಿ ಕ್ರಿಕೆಟಿಗ ಪ್ರಕಾಶ್ ಕರ್ಕೇರಾ ಅವರು ಹೃದಯಾಘಾತದಿಂದ ಮುಂಬೈನ ಮುಲುಂಡ್‌ನಲ್ಲಿರುವ...

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು

ಅಳಿಯೂರು ಪ್ರೀಮಿಯರ್ ಲೀಗ್ (APL-2026) ಗೆ ಸಜ್ಜಾಗಿದೆ ಅಳಿಯೂರು ಫ್ರೆಂಡ್ಸ್ ಅಳಿಯೂರು ವತಿಯಿಂದ ಮೊದಲ ಬಾರಿಗೆ ಅಳಿಯೂರು ಪ್ರೀಮಿಯರ್ ಲೀಗ್ (APL-2026) – ಸೀಸನ್ 1 ಆಯೋಜಿಸಲಾಗಿದೆ....

Must read

- Advertisement -spot_imgspot_img

You might also likeRELATED
Recommended to you