Action Replayಆಗಸ್ಟ್ 15 ರಿಂದ 18ರ ತನಕ ಕೋಲಾರ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ...

ಆಗಸ್ಟ್ 15 ರಿಂದ 18ರ ತನಕ ಕೋಲಾರ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ “ಶ್ರೀನಿವಾಸಪುರ ಪ್ರಿಮಿಯರ್ ಲೀಗ್ M.K.S CUP-2019”

-

- Advertisment -spot_img

ಚಿನ್ನದ ನಾಡು,ಮಾವಿನ ಬೀಡು ಕೋಲಾರ ಜಿಲ್ಲೆಯ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅತ್ಯಂತ ಅದ್ಧೂರಿಯ ಪಂದ್ಯಾಕೂಟ “ಶ್ರೀನಿವಾಸಪುರ ಪ್ರಿಮಿಯರ್ ಲೀಗ್ M.K.S CUP-2019” ಇದೇ ಬರುವ ಆಗಸ್ಟ್ 15 ರಿಂದ 18 ರ ತನಕ 4 ದಿನಗಳ ಕಾಲ ಹಗಲಿನಲ್ಲಿ ಕೋಲಾರದ ರಿಜ್ವಾನ್ ಮ್ಯಾಂಗೋ ಯಾರ್ಡ್ ಗ್ರೌಂಡ್ ನಲ್ಲಿ ನಡೆಯಲಿದೆ.

ಈ ವ್ಯವಸ್ಥಿತ ಪಂದ್ಯಾಕೂಟದಲ್ಲಿ ಕೋಲಾರದ 10 ಫ್ರಾಂಚೈಸಿಗಳು ಭಾಗವಹಿಸಲಿದ್ದು.ಕರ್ನಾಟಕ ರಾಜ್ಯದ ಪ್ರತಿಷ್ಟಿತ ತಂಡಗಳಾದ ಜೈ ಕರ್ನಾಟಕ ತಂಡದ ಸಚಿನ್,ಮಾರ್ಕ್ ಮಹೇಶ್,ಮೊಹ್ಸಿನ್, ಫ್ರೆಂಡ್ಸ್ ತಂಡದಿಂದ ಸಾಗರ್ ಭಂಡಾರಿ, ಪ್ರಸಾದ್ ನೇರಳಕಟ್ಟೆ, ಸೀನ, ನವೀನ, ನ್ಯಾಶ್ ನ ಪುರುಷಿ, ಜಾನ್, ಮಹೇಶ್, ಶ್ರೀಕಾಂತ್, ಸಂದೀಪ್ ಕೀನ್ಯಾ ಎಸ್.ಝಡ್,ಸಿ.ಸಿ ತಂಡದಿಂದ ಅಜರ್, ಸುಜಯ್, ಸ್ವಸ್ತಿಕ್ ಹಾಗೂ ಅಶೋಕ್ ಪಿಳ್ಳೆ ಐಕಾನ್ ಆಟಗಾರರ ರೂಪದಲ್ಲಿ ಪ್ರತಿ ಫ್ರಾಂಚೈಸಿಯಲ್ಲೂ 2 ಆಟಗಾರರು ಹಾಗೂ ಕೋಲಾರ ಜಿಲ್ಲೆಯ 3 ಐಕಾನ್ ಆಟಗಾರರು ಹಾಗೂ ಸ್ಥಳೀಯ ಆಟಗಾರರು ಪ್ರತಿಷ್ಟಿತ ಪಂದ್ಯಾಕೂಟದಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದ್ದಾರೆ.

ಪಂದ್ಯಾಕೂಟದ ವಿಜೇತ ತಂಡ 1,55,555 ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ತಂಡ 77,777 ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದು,ಬೆಸ್ಟ್ ಬ್ಯಾಟ್ಸ್‌ಮನ್, ಬೆಸ್ಟ್ ಬೌಲರ್, ಸರಣಿ ಶ್ರೇಷ್ಠ, ಪಂದ್ಯಶ್ರೇಷ್ಟ, ಹ್ಯಾಟ್ರಿಕ್ ಸಿಕ್ಸ್ ಹಾಗೂ ಹ್ಯಾಟ್ರಿಕ್ ಬೌಂಡರಿಗಳಿಗೆ ಆಕರ್ಷಕ ಟ್ರೋಫಿ ನೀಡಿ ಗೌರವಿಸಲಾಗುವುದು.

ಈ ಪ್ರತಿಷ್ಟಿತ ಪಂದ್ಯಾಕೂಟ ಶ್ರೀಯುತ ನದೀಮ್ ಅಖ್ತರ್ ರವರ ದಕ್ಷ ಸಾರಥ್ಯದಲ್ಲಿ,ಚಂದು ಮಾಲೂರು,ನೀಲು, ಕಾರ್ತಿಕ್ (ರಾಕರ್ಸ್) ರವರ ಸಹಕಾರದೊಂದಿಗೆ ನಡೆಯಲಿದ್ದು, ಸಚಿನ್ ಮಹಾದೇವ್ ನೇತೃತ್ವದ M Sports ನೇರ ಪ್ರಸಾರ ಬಿತ್ತರಿಸಲಿದ್ದು,ರಾಜ್ಯದ ಪ್ರಸಿದ್ಧ ವೀಕ್ಷಕ ವಿವರಣೆಕಾರರಾದ ಪ್ರಶಾಂತ್ ಅಂಬಲಪಾಡಿ,ಹಿಂದಿಯ ಪ್ರಸಿದ್ಧ ಹಿರಿಯ ವೀಕ್ಷಕ ವಿವರಣೆಕಾರ ಮಾಧವ ಶ್ಯಾನುಭೋಗ್ ಹಾಗೂ ತೀರ್ಪುಗಾರರಾಗಿ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ಹಾಗೂ ಸಂಗಡಿಗರು ಪಂದ್ಯಾಕೂಟಕ್ಕೆರಂಗೇರಿಸಲಿದ್ದಾರೆ.

ಕಳೆದವಾರ ಆಟಗಾರರ ಆಕ್ಷನ್ ಪ್ರಕ್ರಿಯೆಯನ್ನು ಹಿರಿಯ ಅನುಭವಿ ವೀಕ್ಷಕ ವಿವರಣೆಕಾರ ಶಿವನಾರಾಯಣ್ ಐತಾಳ್ ಕೋಟ ನಡೆಸಿದ್ದರು.

ಭಾಗವಹಿಸುವ ಫ್ರಾಂಚೈಸಿಗಳು ಹಾಗೂ ಆಟಗಾರರ ವಿವರ ಈ ಕೆಳಗಿನಂತಿದೆ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

19 + 3 =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you