ಕ್ರಿಕೆಟ್ಅಡೆತಡೆಗಳ ಎಲ್ಲೆಗಳ ಮೀರಿ ಮತ್ತೆ ಬೆಳೆದು ನಿಂತ ಶ್ರೀಲಂಕಾ ಕ್ರಿಕೆಟ್‌ ತಂಡ....

ಅಡೆತಡೆಗಳ ಎಲ್ಲೆಗಳ ಮೀರಿ ಮತ್ತೆ ಬೆಳೆದು ನಿಂತ ಶ್ರೀಲಂಕಾ ಕ್ರಿಕೆಟ್‌ ತಂಡ….

-

- Advertisment -spot_img
ಏಷ್ಯಾ ಖಂಡದ ಪಾಲಿಗೆ ಕ್ರಿಕೆಟ್ ಮಿನಿ ವಿಶ್ವಕಪ್‌ ಎಂಬ ಖ್ಯಾತಿಯಲ್ಲೇ ಪ್ರತಿಷ್ಠಿತ ಕ್ರಿಕೆಟ್‌ ಪಂದ್ಯಾಟವಾಗಿ ಸಾಗುವ ಏಷ್ಯಾ ಕಪ್ ಈ ಬಾರಿಯಂತು ಕ್ರಿಕೆಟ್ ಪಂಡಿತರ ಲೆಕ್ಕಾಚಾರವನ್ನೇ ತಲೆಕೆಳಗಾಗಿಸುವಂತೆ ಅಚ್ಚರಿಯ ಫಲಿತಾಂಶವನ್ನು ನೀಡಿದೆ. ಅನುಭವಿ ಕ್ರಿಕೇಟಿಗರಿಂದ ತುಂಬಿ ತುಳುಕುತ್ತಿದ್ದ ಟೀಮ್ ಇಂಡಿಯಾ ಪ್ರಶಸ್ತಿಯ ಫೇವರಿಟ್ ಆಗಿದ್ದರು, ತನ್ನ ಪರಿಪೂರ್ಣ ಸಂಘಟಿತ ಹೋರಾಟವನ್ನು ತೋರ್ಪಡಿಸದೇ ಸೂಪರ್ 4 ಹಂತದಲ್ಲಿ ನಂಬಲಸಾಧ್ಯ ಸೋಲಿನೊಂದಿಗೆ  ಬರಿಗೈಯಲ್ಲಿ ಹಿಂತಿರುಗಿದೆ.
ಆರ್ಥಿಕ ದಿವಾಳಿತನ, ರಾಜಕೀಯ ಅಸ್ಥಿರತೆ ಸಾರ್ವಜನಿಕ ದಂಗೆಯಿಂದಾಗಿ  ವಿಶ್ವದ ಮುಂದೆ ತಲೆಬಾಗಿದ್ದ ಶ್ರೀಲಂಕಾ ತನ್ನ ನೆಲದಲ್ಲಿ ಆತಿಥ್ಯ ಕಾಣಬೇಕಿದ್ದ ಏಷ್ಯಾ ಕಪ್ ಪಂದ್ಯಾಟವನ್ನು ಅರಬ್ ನಾಡಿಗೆ ಸ್ಥಳಾಂತರಿಸಿತು.
 ಆರಂಭಿಕ ಪಂದ್ಯಾಟದಲ್ಲಿ ಅಫಘನ್ನರ ವಿರುದ್ದ ಹೀನಾಯ ಸೋಲು ಕಂಡ ಧನುಸು ಶನಕ ಸಾರಥ್ಯದ ಶ್ರೀಲಂಕಾ ಕ್ರಿಕೆಟ್‌ ಪಡೆ ಮತ್ತೆ ಪುಟಿದೆದ್ದು ನಿಂತು ಪ್ರಶಸ್ತಿ ಗೆಲ್ಲುತ್ತದೆ ಎಂದು ಯಾರೂ ಕೂಡ ಊಹಿಸಿರಲಿಲ್ಲ, ಆರಂಭಿಕ ಸೋಲಿಗೆ ಆಘಾತಗೊಳ್ಳದೇ ಸತತ 5 ಪಂದ್ಯಾಟಗಳ ಗೆಲುವಿನೊಂದಿಗೆ ತನ್ನ ಪಾರುಪತ್ಯವನ್ನು ತೋರಿದ ರೀತಿ ನಿಜಕ್ಕೂ ಕ್ರಿಕೆಟ್‌ ಜಗತ್ತು ಹುಬ್ಬೇರಿಸಿ ನೋಡುವಂತದ್ದು.
ದುಬೈ ನೆಲದಲ್ಲಿ ಈ ಬಾರಿಯ ಏಷ್ಯಾಕಪ್ ಕ್ರಿಕೆಟ್ ಪಂದ್ಯಾಟದಲ್ಲಿ ತನ್ನ ಅಸಾಧಾರಣ ಪ್ರದರ್ಶನದೊಂದಿಗೆ ಪಾರುಪತ್ಯ ಮೆರೆದದಿದ್ದರೆ ಅದು ಶ್ರೀಲಂಕಾ ಕ್ರಿಕೆಟ್‌ ತಂಡ. ಮಹೇಲಾ ಜಯವರ್ಧನ, ಕುಮಾರ ಸಂಗಕ್ಕಾರ, ತಿಲಕರತ್ನೇ ದಿಲ್ಶಾನ್, ಲಸಿತ್ ಮಾಲಿಂಗ ರಂತಹ ಕ್ರಿಕೆಟ್ ದೈತ್ಯರ ನಿರ್ಗಮನದ ಬಳಿಕ ಒಂದು ಪ್ರಬಲ ಪೈಪೋಟಿಯ ತಂಡವನ್ನು ತನ್ನದಾಗಿಸಿಕೊಳ್ಳುವಲ್ಲಿ ಶ್ರೀಲಂಕಾ ಪದೇ ಪದೇ ಎಡವುತ್ತಿತ್ತು. ಆದರೆ ಈ ಬಾರಿ 2022ರ ಏಷ್ಯಾ ಕಪ್ ಗೆ ಆಯ್ಕೆಗೊಂಡ ದಸುನು ಶನಕ ಸಾರಥ್ಯದ ತಂಡ ಹಲವು ವರ್ಷಗಳ ತರುವಾಯ ಶ್ರೀಲಂಕಾ ಮುಡಿಗೆ ಪ್ರತಿಷ್ಠಿತ ಪಂದ್ಯಾಟದ ಪ್ರಶಸ್ತಿಯ ಗರಿಯನ್ನು ದೊರಕಿಸಿ ಕೊಡುವಲ್ಲಿ ಯಶಸ್ವಿಯಾಯಿತು.
ಪ್ರತಿಷ್ಠಿತ ಏಷ್ಯಾಕಪ್ ನ ಪ್ರಶಸ್ತಿ ಸುತ್ತಿನ ಅಂತಿಮ ಹಣಾಹಣಿಯಲ್ಲಿ  ಪಾಕ್ ಸೂಪರ್ 4 ಹಂತದಲ್ಲಿ ಶ್ರೀಲಂಕಾದ ವಿರುದ್ದ ಸೋಲು ಕಂಡಿದ್ದರೂ , ಪ್ರಶಸ್ತಿಯ ಫೇವರಿಟ್ ಪಾಕಿಸ್ಥಾನವೇ ಆಗಿತ್ತೂ, ಅದಕ್ಕೆ ಪೂರಕ ಎಂಬಂತೆ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿದ  ಲಂಕಾ 58 ರನ್ ಗಳಿಸುವುದರಲ್ಲಿ ತನ್ನ 5 ಅಗ್ರ ಪಂಕ್ತಿಯ ಆಟಗಾರರನ್ನು ಕಳೆದುಕೊಂಡಿತ್ತು,  ತದನಂತರದಲ್ಲಿ ಜೊತೆಯಾದ ರಾಜಪಕ್ಸ ಹಾಗೂ ಹಸರಂಗ ಜೋಡಿ ಪಾಕ್ ಬೌಲಿಂಗ್ ದಾಳಿಗೆ ದಿಟ್ಟ ಉತ್ತರವನ್ನು ನೀಡಿ 170 ರ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿತ್ತು.
170 ರ ಜಯದ ಗುರಿಯನ್ನು ಬೆನ್ನತ್ತಲು ಹೊರಟ ಪಾಕ್ ಗೆ ಲಂಕಾ ಬೌಲರ್ ಒಂದು ಎಸೆತ ಎಸೆಯುವ ಮುನ್ನವೇ 9 ರನ್ ಗಳ ದಾನ ರೂಪದ ಕೊಡುಗೆಯನ್ನು ನೀಡಿದರೂ ನಂತರದಲ್ಲಿ ಬೌಲಿಂಗ್‌ ನಲ್ಲಿ ಹಿಡಿತ ಸಾಧಿಸಿ ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್‌ ಕಬಳಿಸುವ ಮೂಲಕ  ಪಾಕ್ ಆರಂಭಿಕ ಆಘಾತವನ್ನು  ಎದುರಿಸುವಂತೆ ಮಾಡಿ ಮತ್ತೆ ರನ್ ಗಳಿಕೆಯಲ್ಲಿ ಚೇತರಿಕೆ ಕಾಣದಂತೆ ಒತ್ತಡ ಹೇರುವಲ್ಲಿ ಬಿಗು ಬೌಲಿಂಗ್ ದಾಳಿಯನ್ನು ಸಂಘಟಿಸಿತು. ರಿಜ್ವಾನ್ ಹಾಗೂ ಇಪ್ತಿಕಾರ್ ಗೆಲುವಿನ ಹೋರಾಟಕ್ಕೆ  ಪ್ರಯತ್ನಿಸಿದರು, ಲಂಕಾದ ಯುವ ಪಡೆಯ ಪ್ರಬಲ ಬೌಲಿಂಗ್ ಹಾಗೂ ಸಂಘಟಿತ  ಫೀಲ್ಡಿಂಗ್ ಎದುರು ಪ್ರತಿಸ್ಪರ್ಧೆಯೊಡ್ಡುವಲ್ಲಿ  ಸಶಕ್ತರಾಗದಂತಾದರು. ಲಂಕಾ ತನ್ನ ಪ್ರಬಲ ಹೋರಾಟದ ಬಲದಿಂದ ಪಾಕ್ ಹೋರಾಟವನ್ನು 147  ರನ್ ಗಳಿಗೆ ಅಂತ್ಯಗೊಳಿಸಿ 2022ರ ಏಷ್ಯಾ ಕಪ್ ಫೈನಲ್ ನಲ್ಲಿ ಅಧಿಕಾರಯುತ ಗೆಲುವನ್ನು ದಾಖಲಿಸಿ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿತು.
ಏಷ್ಯಾ ಕಪ್ ನಂತಹ ಪ್ರತಿಷ್ಠಿತ ಪಂದ್ಯಾಟದಲ್ಲಿ ತಮ್ಮ ಮೇಲಿನ ಹಂಬಲ ಬೆಂಬಲದ ಆಯ್ಕೆಯನ್ನು ಸಮರ್ಥಿಸಿಕೊಂಡು,  ಪರಿಪೂರ್ಣ  ಸಾಮರ್ಥ್ಯದೊಂದಿಗೆ ಸರ್ವಾಂಗೀಣ  ಪ್ರದರ್ಶನವನ್ನು ತೋರಿದ ಯಾವುದೇ ಸ್ಟಾರ್ ಕ್ರಿಕೆಟಿಗರಿಲ್ಲದಿದ್ದರೂ ತಮ್ಮ ಕೆಚ್ಚೆದೆಯ ಹೋರಟ , ಗೆಲುವಿನ ಹುಮ್ಮಸ್ಸಿನಿಂದ ಅರ್ಹವಾಗಿ ಏಷ್ಯಾ ಕಪ್ ಕಿರೀಟವನ್ನು ತನ್ನ ಮುಡಿಗೇರಿಸಿಕೊಂಡ  ಶ್ರೀಲಂಕಾದ ಹೊಸ ಹುಡುಗರ ತಂಡ 2022 ರ ಏಷ್ಯಾದ ಕ್ರಿಕೆಟ್‌ ಚಾಂಪಿಯನ್ ಆಗುವುದರೊಂದಿಗೆ ಮುಂದೆ  ವಿಶ್ವಮಟ್ಟದಲ್ಲಿ ಪ್ರಬಲ ಪೈಪೋಟಿ ನೀಡುವುದರೊಂದಿಗೆ ಹೊಸ  ಸಂಚಲನ ಮೂಡಿಸುವ ನಿರೀಕ್ಷೆಯನ್ನು ಶ್ರೀಲಂಕಾ ಕ್ರಿಕೆಟ್ ತಂಡ ಮತ್ತೆ ಹುಟ್ಟುಹಾಕಿದೆ.

LEAVE A REPLY

Please enter your comment!
Please enter your name here

2 × 1 =

Latest news

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್

ವಿಶ್ವಕರ್ಮ ಪ್ರೀಮಿಯರ್ ಲೀಗ್ 2026ಕ್ಕೆ ಮಧು ಡೈಮಂಡ್ಸ್ ಟೈಟಲ್ ಸ್ಪಾನ್ಸರ್ ಚಿತ್ರದುರ್ಗ: ಕರ್ನಾಟಕ ರಾಜ್ಯದ ವಿಶ್ವಕರ್ಮ ಸಮುದಾಯದ ಕ್ರೀಡಾ ಪ್ರತಿಭೆಗಳನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಮಹತ್ವಾಕಾಂಕ್ಷೆಯ ಕ್ರಿಕೆಟ್ ಮಹಾಕೂಟ ವಿಶ್ವಕರ್ಮ...

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ!

16 ವರ್ಷಗಳ ಸಾಹಸಗಾಥೆ ಅಂತ್ಯಗೊಂಡಿದೆ! ಡಬ್ಲ್ಯೂಟಿಸಿ ಹೀರೋ ಕೇನ್ ವಿಲಿಯಮ್ಸನ್ ಅಂತರರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ! ನ್ಯೂಜಿಲೆಂಡ್ ಕ್ರಿಕೆಟ್ ಇತಿಹಾಸದಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆಯನ್ನು ಕೇನ್...

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ

ಮಹಿಳಾ ಟಿ-20 ವಿಶ್ವಕಪ್‌ಗೆ ಕ್ಷಣಗಣನೆ: ವಿಶ್ವದ ಕಣ್ಣುಗಳು ಇಂಗ್ಲೆಂಡ್ ಕಡೆ ಕ್ರಿಕೆಟ್ ಅಭಿಮಾನಿಗಳು ಬಹು ನಿರೀಕ್ಷೆಯಿಂದ ಕಾಯುತ್ತಿರುವ ಐಸಿಸಿ ಮಹಿಳಾ ಟಿ-20 ವಿಶ್ವಕಪ್ 2026 ಟೂರ್ನಿಯು ಜೂನ್...

ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ

  ಮಹಾರಾಜ ಟ್ರೋಫಿ 2026: ಕರ್ನಾಟಕ ಕ್ರಿಕೆಟ್‌ಗೆ ಮತ್ತೊಂದು ಹಬ್ಬ Maharaja Trophy: ಜೂನ್‌ 20 ರಿಂದ ಟೂರ್ನಿ ಆರಂಭ, ಬೆಂಗಳೂರು, ಮೈಸೂರು, ಹುಬ್ಬಳ್ಳಿಯಲ್ಲಿ ಪಂದ್ಯ ಆಯೋಜನೆ ಐದನೇ ಆವೃತ್ತಿಯ...
- Advertisement -spot_imgspot_img

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ

ಟೆಂಪೋ ಚಾಲಕರು ಮತ್ತು ಮಾಲಕರ ಸಂಘ (ರಿ.) ಮಲ್ಪೆ ಆಯೋಜಕರಿಂದ “ಸಾರಥಿ ಮಾನ್ಸೂನ್ ಟ್ರೋಫಿ – 2026” ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ ಉಡುಪಿ ಜಿಲ್ಲೆಯ ಮಲ್ಪೆಯ...

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ

ಯೋಗದಿಂದ ಗೋಸೇವೆ-ಕಾಮಧೇನು ಗೋಶಾಲೆಯ ಅನಾಥ ಗೋವುಗಳ ಪಾಲನೆಗೆ ಯೋಗರತ್ನ ತನುಶ್ರೀ ಪಿತ್ರೋಡಿ 300 ಯೋಗಾಸನ ಪ್ರದರ್ಶನ ಕಾಮಧೇನು‌ ಗೋಶಾಲೆ ಮಹಾಸಂಘ ಟ್ರಸ್ಟ್(ರಿ)ನಂಚಾರು ಇಲ್ಲಿರುವ ಗೋವುಗಳಿಗಾಗಿ 12 ನೇ...

Must read

- Advertisement -spot_imgspot_img

You might also likeRELATED
Recommended to you