ಭರವಸೆಯ ಬೆಳಕು"ಗೋವಿ‌ಗಾಗಿ ನಾವು"-ಗೋಶಾಲಾ ನಿರ್ಮಾಣ ನಿಧಿ ಅಭಿಯಾನಕ್ಕೆ ಕೈ ಜೋಡಿಸಲಿರುವ ಸ್ಪೋರ್ಟ್ಸ್ ಕನ್ನಡ

“ಗೋವಿ‌ಗಾಗಿ ನಾವು”-ಗೋಶಾಲಾ ನಿರ್ಮಾಣ ನಿಧಿ ಅಭಿಯಾನಕ್ಕೆ ಕೈ ಜೋಡಿಸಲಿರುವ ಸ್ಪೋರ್ಟ್ಸ್ ಕನ್ನಡ

-

- Advertisment -spot_img
ಹಿರಿಯ -ಕಿರಿಯ ತಂಡಗಳು,ಕ್ರೀಡಾ ಪ್ರಾಯೋಜಕರು,
ಕ್ರೀಡಾಪಟುಗಳು,ಕ್ರೀಡಾಭಿಮಾನಿಗಳಲ್ಲಿ ಸ್ಪೋರ್ಟ್ಸ್ ಕನ್ನಡದ ವಿನಮ್ರ ವಿಜ್ಞಾಪನೆ-ಬನ್ನಿ ಕ್ರೀಡಾಪಟುಗಳೇ ಸಹೃದಯಿ ಹಿರಿಯ-ಕಿರಿಯ ಮಿತ್ರರೇ ಈ ಪುಣ್ಯಕಾರ್ಯದಲ್ಲಿ ನೀವು ಕೈ ಜೋಡಿಸಿ.
ಅನಾಥ,ಅಪಘಾತಕ್ಕೀಡಾದ ಮತ್ತು ಕಟುಕರ ಕೈಗಳಿಂದ ರಕ್ಷಿಸಲ್ಪಡುವ ಗೋವುಗಳಿಗಾಗಿ ಒಂದು ಸುಸಜ್ಜಿತ ಆಧುನಿಕ ಪಶುಚಿಕಿತ್ಸಾಲಯ ಮತ್ತು ಅವುಗಳ ರಕ್ಷಣೆಗೆ ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ನಂಚಾರು ಗ್ರಾಮದಲ್ಲಿ “ಕಾಮಧೇನು ಗೋಶಾಲಾ ಮಹಾಸಂಘ ಟ್ರಸ್ಟ್ (ರಿ)” ನಿರ್ಮಾಣವಾಗಲಿದೆ.
ಈ ಗೋಶಾಲೆಯ ನಿರ್ಮಾಣಕ್ಕೆ ದಾನಿಗಳ ಆರ್ಥಿಕ‌ ಸಹಾಯದ ಅಗತ್ಯವಿದ್ದು, ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಸಂಪೂರ್ಣವಾಗಿ ಈ ಯೋಜನೆಯಲ್ಲಿ ಕೈ ಜೋಡಿಸಿದೆ.
ರಾಜ್ಯದ ಯಾವುದೇ ನಾನಾ ಭಾಗಗಳಲ್ಲಿ ನಡೆಯುವ ಟೆನ್ನಿಸ್ಬಾಲ್  ಕ್ರಿಕೆಟ್  ಇನ್ನಿತರ ಕ್ರೀಡಾಕೂಟಗಳಲ್ಲಿ ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯನಿರ್ವಹಿಸಲು ಆಯೋಜಕರು “ಗೋವಿಗಾಗಿ ನಾವು” ಈ ಯೋಜನೆಯಲ್ಲಿ ಕೈಜೋಡಿಸಿ ಕಾಮಧೇನು ಗೋಶಾಲೆ ನಿರ್ಮಾಣಕ್ಕೆ ಸಹಾಯ ಮಾಡಬಹುದು.
ಕ್ರೀಡಾಕೂಟಗಳ‌ ಆಯೋಜಕರು ಮಾಡಬೇಕಾದ್ದು ಇಷ್ಟೇ
ಕಾಮಧೇನು ಗೋ “ಆಶ್ರಯ ತಾಣ” ನಿರ್ಮಾಣದ ನಿಧಿ ಸಂಗ್ರಹಕ್ಕಾಗಿ “ಗೋವಿಗಾಗಿ ನಾವು”-100 ರೂಪಾಯಿಗಳ ದೇಣಿಗೆ ಚೀಟಿ ಮೂಲಕ ಗೋ ಪ್ರೇಮಿಗಳಿಂದ ಧನಸಂಗ್ರಹ ಮಾಡಲು ಉದ್ದೇಶಿಸಿದ್ದಾರೆ‌.
ಆಯೋಜಕರು ಈ ಅಭಿಯಾನದ 100 ರೂ ದೇಣಿಗೆ ಚೀಟಿಯನ್ನು ಪಂದ್ಯಾಕೂಟಕ್ಕೆ ಆಗಮಿಸಿದ ಪ್ರಾಯೋಜಕರು,ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳಿಗೆ ವಿತರಿಸಿ ಧನಸಂಗ್ರಹ ಮಾಡಿ ಕಾಮಧೇನು ಗೋಶಾಲೆಗೆ ನೀಡಬಹುದಾಗಿದೆ ಹಾಗೂ ಪೋಸ್ಟರ್ ನಲ್ಲಿ ಕಾಣಿಸಿದ ಕಾಮಧೇನು ಗೋಶಾಲೆ ಖಾತೆಗೆ ಹಣ ವರ್ಗಾಯಿಸಬಹುದು ಅಥವಾ QR ಕೋಡ್ ಸ್ಕ್ಯಾನ್ ಮಾಡಬಹುದು.
ಈಗಾಗಲೇ ಹಲವಾರು ತಂಡಗಳು, ಸಂಘ ಸಂಸ್ಥೆಗಳು ಈ ಯೋಜನೆಯಲ್ಲಿ ಕೈ ಜೋಡಿಸಲು ಮುಂದೆ ಬಂದಿದ್ದು
ಪುಣ್ಯಕಾರ್ಯದಲ್ಲಿ ಕೈ ಜೋಡಿಸುವ ಎಲ್ಲಾ ಕ್ರೀಡಾಭಿಮಾನಿಗಳಿಗೆ  ಗೋ ಮಾತೆಯ ರಕ್ಷಣೆಯ ಸಂತಸ-ನಮ್ಮ‌ತಾಯಿ ಮತ್ತು ತಾಯ್ನಾಡನ್ನು ರಕ್ಷಿಸಿದಷ್ಟೇ ಪುಣ್ಯ ಪ್ರಾಪ್ತಿಯಾಗಲಿದ್ದು,ಅನಾಥ ಹಸುಗಳ ಆಲಯಕ್ಕಾಗಿ ನಿಮ್ಮ ಸಂಪೂರ್ಣ ಸಹಕಾರ ಮತ್ತು ಸಹಾಯಹಸ್ತದ ನಿರೀಕ್ಷೆಯಲ್ಲಿದೆ ಕಾಮಧೇನು ಗೋಶಾಲೆ
ಮಹಾಸಂಘ ಟ್ರಸ್ಟ್ (ರಿ)ನಂಚಾರು
ಬ್ರಹ್ಮಾವರ ತಾಲೂಕು (ಉಡುಪಿ ಜಿಲ್ಲೆ).
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

twenty + 17 =

Latest news

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...
- Advertisement -spot_imgspot_img

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್ ಮಟ್ಟು ಅಸೋಸಿಯೇಟ್ಸ್, ಉಡುಪಿ, ಇವರ ಪ್ರಾಯೋಜಕತ್ವದಲ್ಲಿ, ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ...

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

Must read

- Advertisement -spot_imgspot_img

You might also likeRELATED
Recommended to you