Categories
ಕ್ರಿಕೆಟ್

ಎಸ್.ಎಮ್.ಸಿ.ಸಿ ನ್ಯಾಶ್ ಮಡಿಲಿಗೆ ದುರ್ಗನ್ಸ್ ಕಪ್-2022

ಚಿತ್ರದುರ್ಗ-ಇಲ್ಲಿನ ದುರ್ಗಾ ಇಲೆವೆನ್ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ ನಡೆದ ಮೊದಲ ರಾಜ್ಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ದುರ್ಗನ್ಸ್ ಕಪ್-2022 ಪ್ರಶಸ್ತಿಯನ್ನು ಎಸ್.ಎಮ್.ಸಿ.ಸಿ ನ್ಯಾಶ್ ಮುಡಿಗೇರಿಸಿಕೊಂಡಿದೆ.
ರೋಚಕವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ಎಸ್.ಎಮ್.ಸಿ.ಸಿ ನ್ಯಾಶ್,ಜೈ ಕರ್ನಾಟಕ ಬೆಂಗಳೂರು ತಂಡವನ್ನು ಸೋಲಿಸುವುದರ ಮೂಲಕ ಪ್ರಥಮ ಪ್ರಶಸ್ತಿ ರೂಪದಲ್ಲಿ ಆಕರ್ಷಕ ಪಾರಿತೋಷಕ ಸಹಿತ 2 ಲಕ್ಷ ನಗದು ಬಹುಮಾನ ತನ್ನದಾಗಿಸಿಕೊಂಡಿತು.
ದ್ವಿತೀಯ ಸ್ಥಾನಿ ಜೈ ಕರ್ನಾಟಕ ಬೆಂಗಳೂರು 1ಲಕ್ಷ ನಗದು ಸಹಿತ ಆಕರ್ಷಕ ಪಾರಿತೋಷಕವನ್ನು ಪಡೆದರು.
ಪಂದ್ಯಾಟದ ಬೆಸ್ಟ್ ಬ್ಯಾಟರ್ ಪ್ರಶಾಂತ್ ಕುಟ್ಟಿ,ಬೆಸ್ಟ್ ಬೌಲರ್ ಮಾರ್ಕ್ ಮಹೇಶ್,ಸರಣಿ ಶ್ರೇಷ್ಠ ಗೌರವ ಫ್ರೆಂಡ್ಸ್ ಬೆಂಗಳೂರಿನ ಸಾಗರ್ ಭಂಡಾರಿ ಮತ್ತು ನ್ಯಾಶ್ ಪುರುಷೋತ್ತಮ್(ಪುರುಷಿ) ಜಂಟಿಯಾಗಿ ಪಡೆದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

8 + 2 =