Categories
ಕ್ರಿಕೆಟ್

ಸುರತ್ಕಲ್-ಹಿರಿಯರ ಕ್ರಿಕೆಟ್ ಹಬ್ಬ-ಗತ ವೈಭವದ ಮರು ಸೃಷ್ಟಿ-ಲೆಜೆಂಡ್ಸ್ ಕ್ರಿಕೆಟ್ ಲೀಗ್-2022

ಹಿರಿಯ ಆಟಗಾರರನ್ನು ಒಟ್ಟುಗೂಡಿಸಿ,ಗತ ವೈಭವವನ್ನು ಮರು ಸೃಷ್ಟಿಸುವ ಸದುದ್ದೇಶದೊಂದಿಗೆ,ಮಂಗಳೂರು ಉತ್ತರದ ACP ಅಧಿಕಾರಿ ಎಸ್.ಮಹೇಶ್ ಕುಮಾರ್ ರವರ ಚಿಂತನೆ ಮಾರ್ಗದರ್ಶನದಲ್ಲಿ ಸಮಾಜ ಸೇವಕರು-ಧಾರ್ಮಿಕ ಮುಖಂಡರಾದ ಮಹಾಬಲ ಪೂಜಾರಿ ಕಡಂಬೋಡಿಯವರ ಅಧ್ಯಕ್ಷತೆಯಲ್ಲಿ ಸುರತ್ಕಲ್ ಸ್ಪೋರ್ಟ್ಸ್ &ಕಲ್ಚರಲ್ ಕ್ಲಬ್ ಇವರ ಆಶ್ರಯದಲ್ಲಿ 40 ವರ್ಷ ಮೇಲ್ಪಟ್ಟ ಆಟಗಾರರಿಗಾಗಿ ಲೆಜೆಂಡ್ಸ್ ಕ್ರಿಕೆಟ್ ಲೀಗ್ ಪಂದ್ಯಾವಳಿ ಆಯೋಜಿಸಲಾಗಿದೆ.
ಮೇ 28 ಮತ್ತು 29 ರಂದು ಸುರತ್ಕಲ್ ನ ಗೋವಿಂದದಾಸ ಕ್ರೀಡಾಂಗಣದಲ್ಲಿ ಆಯೋಜಿಸಲಾದ ಈ ಪಂದ್ಯಾಟದಲ್ಲಿ 90 ರ ದಶಕದಲ್ಲಿ ಬಹಳಷ್ಟು ಪ್ರಸಿದ್ಧಿ ಪಡೆದ ಸುರತ್ಕಲ್ ಸುತ್ತಮುತ್ತಲಿನ ಪರಿಸರದ ಆಹ್ವಾನಿತ 8 ಹಿರಿಯ ತಂಡಗಳು ಭಾಗವಹಿಸಲಿದೆ.
ಪ್ರತಿ ಪಂದ್ಯವು 8 ಓವರ್ ಗಳಲ್ಲಿ ಸಾಗಲಿದ್ದು,
ಟೂರ್ನಮೆಂಟ್ ನ ಪ್ರಥಮ ಬಹುಮಾನ 1,00,001ರೂ ನಗದು ಮತ್ತು ದ್ವಿತೀಯ ಬಹುಮಾನ 50,005 ರೂ ನಗದು ಬಹುಮಾನ‌ ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.ಇತ್ತೀಚೆಗಷ್ಟೇ ಮಂಗಳೂರಿನಲ್ಲಿ ಟೂರ್ನಮೆಂಟ್ ನ ಲಾಂಛನ,ಟ್ರೋಫಿ ಅನಾವರಣ ಮತ್ತು ಆಟಗಾರರಿಗೆ ಸಮವಸ್ತ್ರ ವಿತರಣೆ ಕಾರ್ಯಕ್ರಮ ಬಹಳ ಅದ್ಧೂರಿಯಾಗಿ ನಡೆದಿತ್ತು.
ಲೆಜೆಂಡ್ಸ್ ಕ್ರಿಕೆಟ್ ಲೀಗ್-2022 ಪಂದ್ಯಾಟದಲ್ಲಿ ಭಾಗವಹಿಸುವ ತಂಡಗಳ ವಿವರ ಈ ಕೆಳಗಿನಂತಿವೆ.
1)ಟೀಮ್ ಸೂಪರ್ ಕಾಪ್ಸ್
2)ಆಂಜನೇಯ ಸಸಿಹಿತ್ಲು
3)ವಿದ್ಯಾರ್ಥಿ ಸಂಘ ಬೈಕಂಪಾಡಿ
4)ವೀರ ಕೇಸರಿ(ರಿ)ತಡಂಬೈಲ್
5)ಪ್ಯಾರಡೈಸ್ ಕ್ಲಬ್ ಕೃಷ್ಣಾಪುರ
6)ಫ್ರೆಂಡ್ಸ್ ಹಳೆಯಂಗಡಿ
7)ಫ್ರೆಂಡ್ಸ್ ಸರ್ಕಲ್ ಸುರತ್ಕಲ್
8)ಕರ್ನಾಟಕ ಸೇವಾವೃಂದ ಸುರತ್ಕಲ್

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

ten − 6 =