Categories
ಕ್ರಿಕೆಟ್

ಸಕಲೇಶಪುರ ಫ್ರೆಂಡ್ಸ್ ಆಶ್ರಯದಲ್ಲಿ-ಪುನೀತ್ ರಾಜ್ ಕುಮಾರ್ ಕಪ್-2021

ಸಕಲೇಶಪುರ ಫ್ರೆಂಡ್ಸ್ ಕ್ರಿಕೆಟರ್ಸ್ ಇವರ ವತಿಯಿಂದ ಮೊದಲನೇ ವರ್ಷದ ಟೆನಿಸ್ಬಾಲ್ ಕ್ರಿಕೆಟ್ ಪಂದ್ಯಾವಳಿ ಆಯೋಜಿಸಲಾಗಿದೆ.
ಅಗಲಿದ ಯುವರತ್ನ ಅಪ್ಪು-ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ,ಸಕಲೇಶಪುರದ ಸುಭಾಷ್ ಮೈದಾನದಲ್ಲಿ ಈ ಪಂದ್ಯಾವಳಿ ಡಿಸೆಂಬರ್ 25 ಮತ್ತು 25 ರಂದು  ನಡೆಯಲಿದೆ.
ಶನಿವಾರದಂದು ಸಕಲೇಶಪುರದ ಸ್ಥಳೀಯ 16 ತಂಡಗಳು ಹಾಗೂ ರವಿವಾರ ಮುಕ್ತ 16 ತಂಡಗಳು ಭಾಗವಹಿಸಲಿದ್ದು,ಪ್ರಥಮ ಬಹುಮಾನ ವಿಜೇತ ತಂಡ 33,333 ದ್ವಿತೀಯ ಸ್ಥಾನಿ 17,777 ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.
ಸಕಲೇಶಪುರದ ಎಸ್.ಸಿ.ಎಲ್ ಗ್ರೂಪ್ಸ್ ಪ್ರಥಮ ಬಹುಮಾನ ಹಾಗೂ ಕಟ್ಟಾಯ-ಆಲೂರು ಸಕಲೇಶಪುರದ ಕಾಂಗ್ರೆಸ್ ಮುಖಂಡರಾದ ಶ್ರೀ ಮುರಳಿ ಮೋಹನ್ ದ್ವಿತೀಯ ಬಹುಮಾನವನ್ನು ಕೊಡಮಾಡಿದ್ದಾರೆ.
ವಿಶೇಷ ಆಕರ್ಷಣೆ ಎಂಬಂತೆ ಮಜಾಟಾಕೀಸ್ ನ ಹಾಸ್ಯ ಚಕ್ರವರ್ತಿ ತರಂಗ ವಿಶ್ವ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

three + 2 =