Categories
ಕ್ರಿಕೆಟ್

ಸಬ್ಲಾಡಿ ನೈಟ್ ರೈಡರ್ಸ್ ತಂಡಕ್ಕೆ- ತಲ್ಲೂರು ಪ್ರೀಮಿಯರ್ ಲೀಗ್(T.P.L-4)ಪ್ರಶಸ್ತಿ.

ಸಮುದಾಯ ಯುವಕ ಮಂಡಲ ತಲ್ಲೂರು ಮತ್ತು ತಲ್ಲೂರು ಫ್ರೆಂಡ್ಸ್ ತಲ್ಲೂರು ಪ್ರಾಯೋಜಕತ್ವದಲ್ಲಿ ತಲ್ಲೂರು ಪರಿಸರದ ಗ್ರಾಮೀಣ ಮಟ್ಟದ ಪ್ರತಿಭೆಗಳ ಅನ್ವೇಷಣೆಯ ಸದುದ್ದೇಶದಿಂದ 4 ನೇ ಬಾರಿಗೆ ತಲ್ಲೂರು ಪ್ರೀಮಿಯರ್ ಲೀಗ್
(T.P.L-4) 60 ಗಜಗಳ ಕ್ರಿಕೆಟ್ ಪಂದ್ಯಾವಳಿ  ಅಕ್ಟೋಬರ್ 3 ಹಾಗೂ 4 ರಂದು ತಲ್ಲೂರು ಶಾಲಾ ಮೈದಾನದಲ್ಲಿ ನಡೆದ ಪಂದ್ಯಾವಳಿಯಲ್ಲಿ ಸಬ್ಲಾಡಿ ನೈಟ್ ರೈಡರ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿದೆ.
 
ಒಟ್ಟು 13 ತಂಡಗಳು ಭಾಗವಹಿಸಿದ್ದ ಈ  ಪಂದ್ಯಾವಳಿಯ ಉಪಾಂತ್ಯ ಪಂದ್ಯಗಳಲ್ಲಿ ಕ್ರಮವಾಗಿ 
ಸಮುದಾಯ ಸೂಪರ್ ಕಿಂಗ್ಸ್ , ಎಮ್.ಸಿ.ಸಿ ಗರಡಿ ಎ ತಂಡವನ್ನು ಹಾಗೂ ಸಬ್ಲಾಡಿ ನೈಟ್ ರೈಡರ್ಸ್, ಕೋಟೆಬಾಗಿಲು ಫ್ರೆಂಡ್ಸ್ ತಂಡವನ್ನು ಸೋಲಿಸಿ ಫೈನಲ್ ಪ್ರವೇಶಿಸಿದ್ದರು.
 
ಫೈನಲ್ ನಲ್ಲಿ ಸಬ್ಲಾಡಿ ನೈಟ್ ರೈಡರ್ಸ್ ,ಸಮುದಾಯ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿ
ಜಯಿಸಿದೆ.
 
ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್ ಪ್ರಶಸ್ತಿ ಉಮೇಶ್ ಆಚಾರ್ಯ, ಬೆಸ್ಟ್ ಬೌಲರ್ ಬಾಲಚಂದ್ರ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಶಶಾಂಕ್ ಶೆಟ್ಟಿ ಪಡೆದುಕೊಂಡರು…

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

two × 2 =