ಕ್ರಿಕೆಟ್ಹರಿದುಹೊದ ಶೂನಲ್ಲಿಯೇ ಆಟವಾಡಿದ ಪರಿಸ್ಥಿತಿಯನ್ನು ಬಿಚ್ಚಿಟ್ಟ ಅಂತಾರಾಷ್ಟ್ರೀಯ ಕ್ರಿಕೆಟಿಗ

ಹರಿದುಹೊದ ಶೂನಲ್ಲಿಯೇ ಆಟವಾಡಿದ ಪರಿಸ್ಥಿತಿಯನ್ನು ಬಿಚ್ಚಿಟ್ಟ ಅಂತಾರಾಷ್ಟ್ರೀಯ ಕ್ರಿಕೆಟಿಗ

-

- Advertisment -spot_img
ಪ್ರತಿಯೊಬ್ಬ ಕ್ರಿಕೆಟಿಗರ ಜೀವನ ಅಭಿಮಾನಿಗಳು ತಿಳಿದುಕೊಂಡಿಂತಿರುವುದಿಲ್ಲ ಒಬ್ಬ ಕ್ರಿಕೆಟ್ ಆಟಗಾರನೆಂದರೆ  ಆತ ದೊಡ್ಡ ಮಟ್ಟದ ಸಂಭಾವನೆ, ಐಷಾರಾಮಿ ಬದುಕು ಹಾಗೂ ತನಗೆ ಬೇಕಾದ ಎಲ್ಲಾ ಸವಲತ್ತುಗಳು ಆತನಿಗೆ ಸಿಗುತ್ತವೆ ಎನ್ನುವ ದೊಡ್ಡ ಭ್ರಮೆ ಆಭಿಮಾನಿಗಳಲ್ಲಿದೆ.
ಆದರೆ ಕೆಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ ಪಾಲಿಗೆ ಈ ರೀತಿಯ ಐಶರಾಮಿ ಬದುಕು ಇರುವುದಿಲ್ಲ.
 ಹೌದು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದರೂ ಸಹ ಸರಿಯಾದ ಸವಲತ್ತುಗಳಿಲ್ಲದೆ ದಿನನಿತ್ಯ ಸಂಕಷ್ಟಗಳನ್ನು ಎದುರಿಸುತ್ತಿರುವ ಆಟಗಾರರು ಇಂದಿಗೂ ನಮ್ಮ ಕಣ್ಣೆದುರಿಗೆ ಇದ್ದಾರೆ.
ಇದಕ್ಕೆ ಸರಿಯಾದ ಉದಾಹರಣೆ ಜಿಂಬಾಬ್ವೆ ತಂಡದ ಯುವ ಆಟಗಾರ *ರ‍್ಯಾನ್ ಬರ್ಲ್*. ಕಳೆದ ಶನಿವಾರ ಜಿಂಬಾಬ್ವೆ ತಂಡದ ಯುವ ಆಟಗಾರ ರ‍್ಯಾನ್ ಬರ್ಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ತಂಡದ ಆಟಗಾರರ ಕಷ್ಟದ ಕುರಿತು ಟ್ವೀಟ್‌ವೊಂದನ್ನು ಮಾಡುವುದರ ಮೂಲಕ ನೆಟ್ಟಿಗರನ್ನು ಭಾವುಕರನ್ನಾಗಿಸಿದ್ದಾರೆ. ಹಾಗೂ ಪ್ರತಿಯೊಬ್ಬನ ಯಶಸ್ಸಿನ ಹಾದಿಯ ಹಿಂದಿನ ಕಷ್ಟಗಳನ್ನು ಹೇಳಿದ್ದಾರೆ.
ನಮಗೆ ಪಂದ್ಯಗಳನ್ನಾಡಲು ಕಾಲಿಗೆ ಸರಿಯಾದ ಶೂ ಗಳೇ ಇಲ್ಲದೇ ಇರುವ ಪರಿಸ್ಥಿತಿಯನ್ನು ತನ್ನ ಟ್ವೀಟ್ ಮೂಲಕ ತಿಳಿಸಿರುವ ರ‍್ಯಾನ್ ಬರ್ಲ್ ಸದ್ಯ ಚರ್ಚೆಗೀಡಾಗಿದ್ದಾರೆ.
‘ಪ್ರತಿ ಸರಣಿ ಮುಗಿದ ಬಳಿಕವೂ ನಮ್ಮ ಕಿತ್ತುಹೋದ ಶೂಗಳನ್ನು ನಾವೇ ಅಂಟಿಸಿಕೊಳ್ಳಬೇಕು ಮತ್ತು ಹೊಲಿದುಕೊಳ್ಳಬೇಕು, ಯಾರಾದರೂ ನಮಗೆ ಶೂ ಪ್ರಾಯೋಜಕತ್ವವನ್ನು ವಹಿಸಿಕೊಂಡರೆ ಈ ಕಷ್ಟ ಇರುವುದಿಲ್ಲ’ ಎಂದು ತಮ್ಮ ಕಿತ್ತುಹೋದ ಶೂ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಬರೆದುಕೊಂಡು ಸಹಾಯ ಕೇಳಿದ್ದಾರೆ ರ‍್ಯಾನ್ ಬರ್ಲ್. ಸದ್ಯ ರ‍್ಯಾನ್ ಬರ್ಲ್ ಮಾಡಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಜಿಂಬಾಬ್ವೆ ತಂಡದ ಆಟಗಾರರ ಈ ಪರಿಸ್ಥಿತಿ ಕಂಡು ಕ್ರೀಡಾಭಿಮಾನಿಗಳು ಮರುಗಿದ್ದಾರೆ.
ಇದು ಸುಳ್ಳಲ್ಲ ದೇಶಿ ಆಟಗಾರನಾಗಿರಲಿ ಸ್ವದೇಶಿ ಆಟಗಾರನಾಗಿರಲಿ ಬೆರಳೆಣಿಕೆಯ ಆಟಗಾರರನ್ನು ಬಿಟ್ಟು ಇನ್ನೂಳಿದ ಆಟಗಾರರಿಗೆ ಕ್ರಿಕೆಟ್ ಕಲಿಕೆ ಎನ್ನುವುದು ಬಲು ಕಷ್ಟದ ಹಾದಿ ಅದರಲ್ಲೂ ಕ್ರಿಕೆಟ್ ಕಲಿತೆ ಸಾಧಿಸಬೇಕೆನ್ನುವ ಛಲ ಪ್ರತಿಯೊಬ್ಬ ಆಟಗಾರನಿಗಿರುತ್ತದೆ. ಇಂತಹ ಸಂಕಷ್ಟಗಳನ್ನು ಮೆಟ್ಟಿ ಒಬ್ಬ ಉತ್ತಮ ಕ್ರಿಕೆಟಿಗನಾಗಿ ಗುರುತಿಸಿ ಕೊಳ್ಳುತ್ತಿರುರುವ ಸ್ವದೇಶೀ ಮತ್ತು ವಿದೇಶಿ ಆಟಗಾರರನ್ನು ನಾವು ಗೌರವಿಸ ಬೇಕಿದೆ.
ಕ್ರಿಕೆಟ್ ಆಟಗಾರರ ದುಸ್ಥಿತಿಯ ಬಗ್ಗೆ ಮನಸ್ಸು ಬಿಚ್ಚಿ ಹೇಳಿಕೊಂಡ ಜಿಂಬಾಬ್ವೆ ತಂಡದ ಯುವ ಆಟಗಾರನಿಗೆ ಪ್ರತಿಯೊಬ್ಬರು ಗೌರವಿಸ ಬೇಕಿದೆ.
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

LEAVE A REPLY

Please enter your comment!
Please enter your name here

18 − 5 =

Latest news

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ

ಫ್ರೆಂಡ್ಸ್ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಟ್ರೋಫಿ ಹೆಮ್ಮಾಡಿ ಕ್ರಿಕೆಟ್ ಟೂರ್ನಿ: ಮೇ 30 ಮತ್ತು 31ರಂದು ಆಯೋಜನೆ ಯುವ...

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!

ಕಪ್ ರೆಡಿಯಾ..? ಗುಜರಾತ್ ಮಣಿಸಿ ಫೈನಲ್‌ಗೆ ಎಂಟ್ರಿ ಕೊಟ್ಟ ಬೆಂಗಳೂರು!   2026ರ ಐಪಿಎಲ್‌ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು 92 ರನ್‌ಗಳಿಂದ ಮಣಿಸಿದ ರಾಯಲ್...

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ!

20 ಲಕ್ಷದ ಆಟಗಾರ… ಇಂದು ಆರ್‌ಸಿಬಿಯ ಅಮೂಲ್ಯ ರತ್ನ! ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಇತಿಹಾಸದಲ್ಲಿ ಕೆಲವು ಆಟಗಾರರು ಕೇವಲ ಕ್ರಿಕೆಟಿಗರಾಗಿ ಮಾತ್ರ ಉಳಿಯುವುದಿಲ್ಲ; ಅವರು ಭಾವನೆಗಳಾಗುತ್ತಾರೆ....

RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ… ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ?

  RCBvsGT: ಫೈನಲ್‌ಗೆ ಯಾರು ಮುನ್ನಡೆಯುತ್ತಾರೆ... ಪ್ಲೇ-ಆಫ್ ಸುತ್ತನ್ನು ಗೆಲ್ಲುವ ಹೆಚ್ಚಿನ ಅವಕಾಶ ಯಾರಿಗೆ ಇದೆ? ಈ ಋತುವಿನ ಐಪಿಎಲ್‌ನ ಮೊದಲ ಅರ್ಹತಾ ಸುತ್ತಿನಲ್ಲಿ ಬೆಂಗಳೂರು ಮತ್ತು ಗುಜರಾತ್...
- Advertisement -spot_imgspot_img

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ

ಮಾಜಿ ಕರ್ನಾಟಕ ಕ್ರಿಕೆಟಿಗ ಎಸ್.ಎಲ್. ಅಕ್ಷಯ್ ಹೃದಯಾಘಾತದಿಂದ ನಿಧನ ಕರ್ನಾಟಕದ ಮಾಜಿ ಕ್ರಿಕೆಟಿಗ ಹಾಗೂ ಪ್ರತಿಭಾವಂತ ವೇಗದ ಬೌಲರ್ ಎಸ್.ಎಲ್. ಅಕ್ಷಯ್ ಅವರು ಭಾನುವಾರ ಲೀಗ್ ಪಂದ್ಯವೊಂದರ...

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್

ಜೆ ಕೆ ಪ್ರೆಸೆಂಟ್ಸ್ ಅರಸೀಕೆರೆ ಚಾಂಪಿಯನ್ಸ್ ಕಪ್ 2026 – ಕ್ರಿಕೆಟ್ ಟೂರ್ನಮೆಂಟ್ ಅರಸೀಕೆರೆಯ ಕ್ರಿಕೆಟ್ ಅಭಿಮಾನಿಗಳಿಗೆ ಭರ್ಜರಿ ಕ್ರೀಡಾ ರಸದೌತಣ ನೀಡಲು “ಅರಸೀಕೆರೆ ಚಾಂಪಿಯನ್ಸ್...

Must read

- Advertisement -spot_imgspot_img

You might also likeRELATED
Recommended to you