ಕ್ರಿಕೆಟ್ಹರಿದುಹೊದ ಶೂನಲ್ಲಿಯೇ ಆಟವಾಡಿದ ಪರಿಸ್ಥಿತಿಯನ್ನು ಬಿಚ್ಚಿಟ್ಟ ಅಂತಾರಾಷ್ಟ್ರೀಯ ಕ್ರಿಕೆಟಿಗ

ಹರಿದುಹೊದ ಶೂನಲ್ಲಿಯೇ ಆಟವಾಡಿದ ಪರಿಸ್ಥಿತಿಯನ್ನು ಬಿಚ್ಚಿಟ್ಟ ಅಂತಾರಾಷ್ಟ್ರೀಯ ಕ್ರಿಕೆಟಿಗ

-

- Advertisment -spot_img
ಪ್ರತಿಯೊಬ್ಬ ಕ್ರಿಕೆಟಿಗರ ಜೀವನ ಅಭಿಮಾನಿಗಳು ತಿಳಿದುಕೊಂಡಿಂತಿರುವುದಿಲ್ಲ ಒಬ್ಬ ಕ್ರಿಕೆಟ್ ಆಟಗಾರನೆಂದರೆ  ಆತ ದೊಡ್ಡ ಮಟ್ಟದ ಸಂಭಾವನೆ, ಐಷಾರಾಮಿ ಬದುಕು ಹಾಗೂ ತನಗೆ ಬೇಕಾದ ಎಲ್ಲಾ ಸವಲತ್ತುಗಳು ಆತನಿಗೆ ಸಿಗುತ್ತವೆ ಎನ್ನುವ ದೊಡ್ಡ ಭ್ರಮೆ ಆಭಿಮಾನಿಗಳಲ್ಲಿದೆ.
ಆದರೆ ಕೆಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರರ ಪಾಲಿಗೆ ಈ ರೀತಿಯ ಐಶರಾಮಿ ಬದುಕು ಇರುವುದಿಲ್ಲ.
 ಹೌದು ಅಂತಾರಾಷ್ಟ್ರೀಯ ಕ್ರಿಕೆಟಿಗರಾಗಿದ್ದರೂ ಸಹ ಸರಿಯಾದ ಸವಲತ್ತುಗಳಿಲ್ಲದೆ ದಿನನಿತ್ಯ ಸಂಕಷ್ಟಗಳನ್ನು ಎದುರಿಸುತ್ತಿರುವ ಆಟಗಾರರು ಇಂದಿಗೂ ನಮ್ಮ ಕಣ್ಣೆದುರಿಗೆ ಇದ್ದಾರೆ.
ಇದಕ್ಕೆ ಸರಿಯಾದ ಉದಾಹರಣೆ ಜಿಂಬಾಬ್ವೆ ತಂಡದ ಯುವ ಆಟಗಾರ *ರ‍್ಯಾನ್ ಬರ್ಲ್*. ಕಳೆದ ಶನಿವಾರ ಜಿಂಬಾಬ್ವೆ ತಂಡದ ಯುವ ಆಟಗಾರ ರ‍್ಯಾನ್ ಬರ್ಲ್ ತನ್ನ ಟ್ವಿಟ್ಟರ್ ಖಾತೆಯಲ್ಲಿ ತಮ್ಮ ತಂಡದ ಆಟಗಾರರ ಕಷ್ಟದ ಕುರಿತು ಟ್ವೀಟ್‌ವೊಂದನ್ನು ಮಾಡುವುದರ ಮೂಲಕ ನೆಟ್ಟಿಗರನ್ನು ಭಾವುಕರನ್ನಾಗಿಸಿದ್ದಾರೆ. ಹಾಗೂ ಪ್ರತಿಯೊಬ್ಬನ ಯಶಸ್ಸಿನ ಹಾದಿಯ ಹಿಂದಿನ ಕಷ್ಟಗಳನ್ನು ಹೇಳಿದ್ದಾರೆ.
ನಮಗೆ ಪಂದ್ಯಗಳನ್ನಾಡಲು ಕಾಲಿಗೆ ಸರಿಯಾದ ಶೂ ಗಳೇ ಇಲ್ಲದೇ ಇರುವ ಪರಿಸ್ಥಿತಿಯನ್ನು ತನ್ನ ಟ್ವೀಟ್ ಮೂಲಕ ತಿಳಿಸಿರುವ ರ‍್ಯಾನ್ ಬರ್ಲ್ ಸದ್ಯ ಚರ್ಚೆಗೀಡಾಗಿದ್ದಾರೆ.
‘ಪ್ರತಿ ಸರಣಿ ಮುಗಿದ ಬಳಿಕವೂ ನಮ್ಮ ಕಿತ್ತುಹೋದ ಶೂಗಳನ್ನು ನಾವೇ ಅಂಟಿಸಿಕೊಳ್ಳಬೇಕು ಮತ್ತು ಹೊಲಿದುಕೊಳ್ಳಬೇಕು, ಯಾರಾದರೂ ನಮಗೆ ಶೂ ಪ್ರಾಯೋಜಕತ್ವವನ್ನು ವಹಿಸಿಕೊಂಡರೆ ಈ ಕಷ್ಟ ಇರುವುದಿಲ್ಲ’ ಎಂದು ತಮ್ಮ ಕಿತ್ತುಹೋದ ಶೂ ಚಿತ್ರವನ್ನು ಟ್ವೀಟ್ ಮಾಡುವ ಮೂಲಕ ಬರೆದುಕೊಂಡು ಸಹಾಯ ಕೇಳಿದ್ದಾರೆ ರ‍್ಯಾನ್ ಬರ್ಲ್. ಸದ್ಯ ರ‍್ಯಾನ್ ಬರ್ಲ್ ಮಾಡಿರುವ ಈ ಟ್ವೀಟ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಜಿಂಬಾಬ್ವೆ ತಂಡದ ಆಟಗಾರರ ಈ ಪರಿಸ್ಥಿತಿ ಕಂಡು ಕ್ರೀಡಾಭಿಮಾನಿಗಳು ಮರುಗಿದ್ದಾರೆ.
ಇದು ಸುಳ್ಳಲ್ಲ ದೇಶಿ ಆಟಗಾರನಾಗಿರಲಿ ಸ್ವದೇಶಿ ಆಟಗಾರನಾಗಿರಲಿ ಬೆರಳೆಣಿಕೆಯ ಆಟಗಾರರನ್ನು ಬಿಟ್ಟು ಇನ್ನೂಳಿದ ಆಟಗಾರರಿಗೆ ಕ್ರಿಕೆಟ್ ಕಲಿಕೆ ಎನ್ನುವುದು ಬಲು ಕಷ್ಟದ ಹಾದಿ ಅದರಲ್ಲೂ ಕ್ರಿಕೆಟ್ ಕಲಿತೆ ಸಾಧಿಸಬೇಕೆನ್ನುವ ಛಲ ಪ್ರತಿಯೊಬ್ಬ ಆಟಗಾರನಿಗಿರುತ್ತದೆ. ಇಂತಹ ಸಂಕಷ್ಟಗಳನ್ನು ಮೆಟ್ಟಿ ಒಬ್ಬ ಉತ್ತಮ ಕ್ರಿಕೆಟಿಗನಾಗಿ ಗುರುತಿಸಿ ಕೊಳ್ಳುತ್ತಿರುರುವ ಸ್ವದೇಶೀ ಮತ್ತು ವಿದೇಶಿ ಆಟಗಾರರನ್ನು ನಾವು ಗೌರವಿಸ ಬೇಕಿದೆ.
ಕ್ರಿಕೆಟ್ ಆಟಗಾರರ ದುಸ್ಥಿತಿಯ ಬಗ್ಗೆ ಮನಸ್ಸು ಬಿಚ್ಚಿ ಹೇಳಿಕೊಂಡ ಜಿಂಬಾಬ್ವೆ ತಂಡದ ಯುವ ಆಟಗಾರನಿಗೆ ಪ್ರತಿಯೊಬ್ಬರು ಗೌರವಿಸ ಬೇಕಿದೆ.
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

LEAVE A REPLY

Please enter your comment!
Please enter your name here

16 − 13 =

Latest news

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...
- Advertisement -spot_imgspot_img

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್

ಕೌಡೂರು ಮೈದಾನದಲ್ಲಿ ಉಡುಪಿ ಅಂಡರ್-15 ಟಿ-20 ಕ್ರಿಕೆಟ್ ಟೂರ್ನಿ: ಅಕ್ಷಯ ಕ್ರಿಕೆಟ್ ಅಕಾಡೆಮಿ ಚಾಂಪಿಯನ್ ಮಟ್ಟು ಅಸೋಸಿಯೇಟ್ಸ್, ಉಡುಪಿ, ಇವರ ಪ್ರಾಯೋಜಕತ್ವದಲ್ಲಿ, ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ...

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್

ಉಡುಪಿಯಲ್ಲಿ ಸುಸಜ್ಜಿತ ಫುಟ್ಬಾಲ್ ಕ್ರೀಡಾಂಗಣ ನಿರ್ಮಾಣ-ಎಂ.ಗಫೂರ್ ಉಡುಪಿ-ಶಿವಾಸ್ ಫುಟ್ಬಾಲ್ ಕ್ಲಬ್ ಇವರ ವತಿಯಿಂದ ಅಂಡರ್ 21 ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟದ ಉದ್ಘಾಟನಾ ಸಮಾರಂಭ ಸಿಟಿ ಅರೆನಾ...

Must read

- Advertisement -spot_imgspot_img

You might also likeRELATED
Recommended to you