ಕ್ರಿಕೆಟ್ಅಲ್ಲಿ ಆಸ್ಪತ್ರೆ ಬೆಡ್ ಮೇಲೆ ಹೆತ್ತ ತಾಯಿ.., ಇಲ್ಲಿ ದೇಶದ ಪರ...

ಅಲ್ಲಿ ಆಸ್ಪತ್ರೆ ಬೆಡ್ ಮೇಲೆ ಹೆತ್ತ ತಾಯಿ.., ಇಲ್ಲಿ ದೇಶದ ಪರ ಟೆಸ್ಟ್ ಕ್ರಿಕೆಟ್ ಆಡುವ ಗೌರವ.. ಮಧ್ಯೆ ಸೇತುವೆಯಾದ ಚಾರ್ಟೆಡ್ ಫ್ಲೈಟ್..!

-

- Advertisment -spot_img
ಭಾರತ ಮತ್ತು ಇಂಗ್ಲೆಂಡ್ ನಡುವಿನ 3ನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಆಗಷ್ಟೇ ಮುಗಿದಿತ್ತು. ಟೆಸ್ಟ್ ಕ್ರಿಕೆಟ್’ನಲ್ಲಿ 500 ವಿಕೆಟ್’ಗಳ ಮಹೋನ್ನತ ಸಾಧನೆಯ ನಂತರ ಡ್ರೆಸ್ಸಿಂಗ್ ರೂಮ್’ಗೆ ಬಂದ ರವಿಚಂದ್ರನ್ ಅಶ್ವಿನ್ ದೊಡ್ಡ ನಿಟ್ಟುಸಿರು ಬಿಟ್ಟಿದ್ದ ಅಷ್ಟೇ. ಫೋನ್ ಕೈಗೆತ್ತಿಕೊಂಡ ಕೆಲವೇ ನಿಮಿಷಗಳಲ್ಲಿ ಅತ್ತ ಕಡೆಯಿಂದ ಪತ್ನಿಯ ಕರೆ. ಸುದ್ದಿ ಕೇಳಿ ಅಶ್ವಿನ್ ಉಸಿರೇ ಒಂದು ಕ್ಷಣ ಕಂಪಿಸಿ ಬಿಟ್ಚಿತ್ತು.
‘’ನಿಮ್ಮ ತಾಯಿಗೆ ಹುಷಾರಿಲ್ಲ, ತುಂಬಾ ಬಳಲಿದ್ದಾರೆ. ಆಸ್ಪತ್ರೆಗೆ ಸೇರಿಸಿದ್ದೇವೆ, ICUನಲ್ಲಿದ್ದಾರೆ’’ ಎಂದು ಪತ್ನಿ ತಿಳಿಸುತ್ತಿದ್ದಂತೆ ನಿಂತ ನೆಲದಲ್ಲೇ ಕುಸಿದು ಬಿಟ್ಟಿದ್ದ.
ಹೆತ್ತ ತಾಯಿ ಆಸ್ಪತ್ರೆಯಲ್ಲಿ ಮಲಗಿದ್ದರೆ ಮಗನ  ಹೃದಯ ಕಂಪಿಸದೆ ಇದ್ದೀತೇ..? ಅಮ್ಮನನ್ನು ಹೋಗಿ ನೋಡಿಕೊಂಡು ಬರೋಣ ಎಂದರೆ, ರಾಜ್’ಕೋಟ್’ಗೂ ಚೆನ್ನೈಗೂ 2000 ಕಿ.ಮೀ ಅಂತರ. ವಿಮಾನದಲ್ಲಿ ಹೋದರೆ ನಾಲ್ಕೂವರೆ ಗಂಟೆ ಪ್ರಯಾಣ. ರಾಜ್’ಕೋಟ್’ನಿಂದ ಚೆನ್ನೈಗೆ ಡೈರೆಕ್ಟ್ ಫ್ಲೈಟ್ ಬೇರೆ ಇಲ್ಲ.
ಟೀಮ್ ಮ್ಯಾನೇಜ್ಮೆಂಟ್’ಗೆ ಅಶ್ವಿನ್ ವಿಷಯ ತಿಳಿಸುತ್ತಾನೆ. ಸುದ್ದಿ ಬಿಸಿಸಿಐ ಅಧಿಕಾರಿಗಳ ಕಿವಿಗೆ ಬಿದ್ದ ಒಂದು ಗಂಟೆಯೊಳಗೆ ಅಶ್ವಿನ್ ಚೆನ್ನೈಗೆ ಹೋಗಲು ಚಾರ್ಟೆಡ್ ಫ್ಲೈಟ್ ವ್ಯವಸ್ಥೆಯಾಗುತ್ತದೆ. ಭಾರತ ತಂಡದ ದಿಗ್ಗಜ ಸ್ಪಿನ್ನರ್, ಟೀಮ್ ಇಂಡಿಯಾಗೆ ಸಾಕಷ್ಟು ಟೆಸ್ಟ್ ಪಂದ್ಯಗಳನ್ನು ಗೆಲ್ಲಿಸಿಕೊಟ್ಟವನು, ತಾನು ಹೆಸರು ಮಾಡಿದ್ದಷ್ಟೇ ಅಲ್ಲದೆ, ಭಾರತೀಯ ಕ್ರಿಕೆಟ್’ಗೂ ಗೌರವ ತಂದ ಆಟಗಾರ. ಎರಡನೇ ಯೋಚನೆಯೇ ಇಲ್ಲದೆ, ಅಶ್ವಿನ್ ಸಹಾಯಕ್ಕೆ ಬಿಸಿಸಿಐ ನಿಂತು ಬಿಟ್ಟಿತ್ತು.
ರಾತ್ರೋ ರಾತ್ರಿ ಅಶ್ವಿನ್ ರಾಜ್’ಕೋಟ್’ನಿಂದ ಚೆನ್ನೈಗೆ ಬಂದಿಳಿದ. ನೇರವಾಗಿ ಆಸ್ಪತ್ರೆಗೆ ಹೋಗಿ ತಾಯಿಯ ಮುಂದೆ ನಿಂತು ಬಿಟ್ಟ. ಇದೆಲ್ಲಾ ನಡೆದದ್ದು ಶುಕ್ರವಾರ. ಶನಿವಾರ ಪೂರ್ತಿ ತಾಯಿಯ ಜೊತೆಗಿದ್ದ ಅಶ್ವಿನ್.
ತಾಯಿಯ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಾಣುತ್ತಿದ್ದಂತೆ ಅಶ್ವಿನ್ ಮನಸ್ಸು ಮತ್ತೆ ರಾಜ್’ಕೋಟ್’ಗೆ ಮರಳುವ ಲೆಕ್ಕಾಚಾರ ಹಾಕುತ್ತಿತ್ತು. ಟೀಮ್ ಮ್ಯಾನೇಜರ್’ಗೆ ಕರೆ ಮಾಡಿ ತಾನು ವಾಪಸ್ ಬರುವ ನಿರ್ಧಾರ ಮಾಡಿರುವುದಾಗಿ ತಿಳಿಸುತ್ತಾನೆ.
‘’Are you sure..? ಈ ಸಮಯದಲ್ಲಿ ನೀನು ತಾಯಿಯ ಜೊತೆಗಿರುವುದಕ್ಕೆ ಮೊದಲ ಆದ್ಯತೆ. ಅಲ್ಲೇ ಇದ್ದು ತಾಯಿಯನ್ನು ನೋಡಿಕೋ’’ ಎಂದು ಬಿಟ್ಟಿತ್ತು ಭಾರತ ತಂಡದ ಟೀಮ್ ಮ್ಯಾನೇಜ್ಮೆಂಟ್.
ಆದರೆ ಅಶ್ವಿನ್ ದೃಢವಾಗಿ ನಿರ್ಧರಿಸಿ ಬಿಟ್ಟಿದ್ದ. ಬಿಸಿಸಿಐಗೆ ತನ್ನ ನಿರ್ಧಾರವನ್ನು ತಿಳಿಸಿ ಭಾನುವಾರ ಚಾರ್ಟೆಟ್ ಫ್ರೈಟ್ ಹತ್ತಿ ಮತ್ತೆ ರಾಜ್’ಕೋಟ್’ಗೆ ಬಂದಿಳಿದಿದ್ದಾನೆ. ನೇರವಾಗಿ ನಿರಂಜನ್ ಶಾ ಮೈದಾನಕ್ಕೆ ಬಂದು 4ನೇ ದಿನದಾಟಕ್ಕೆ ಭಾರತ ತಂಡವನ್ನು ಸೇರಿಕೊಂಡಿದ್ದಾನೆ.
ಇದು Unreal dedication.  ಅನ್ನ ಕೊಟ್ಟ ಆಟಕ್ಕೆ, ಹೆಸರು-ಗೌರವ ತಂದು ಕೊಟ್ಟ ಕ್ರಿಕೆಟ್’ಗೆ, ಭಾರತ ತಂಡಕ್ಕೆ ಒಬ್ಬ ಆಟಗಾರ ತೋರುವ ಬದ್ಧತೆಗೆ ಇದು ಬೆಸ್ಟ್ ಎಕ್ಸಾಂಪಲ್.
#RavichandranAshwin #INDvsENG

LEAVE A REPLY

Please enter your comment!
Please enter your name here

fourteen − five =

Latest news

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್, ದೊಡ್ಡ ವೇದಿಕೆಗಳಲ್ಲಿ ತಂಡಕ್ಕೆ ಜಯ ತಂದುಕೊಡುವ ಶಕ್ತಿಶಾಲಿ ಪ್ರದರ್ಶನಗಳಿಂದ...

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು ಯಲಹಂಕ ತಾಲ್ಲೂಕಿನ ಕುದುರೆಗೆರೆ ಪ್ರದೇಶದಲ್ಲಿ ಕೆ.ಎಂ.ಶ್ರೀನಿವಾಸ್ ರವರ ಸ್ಮರಣಾರ್ಥ ಹಾಗೂ ಕೆ.ಎಂ. ಸುಬ್ರಮಣಿ ರವರ...

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ, ಕೋಟ ಸಾಲಿಗ್ರಾಮದ ಆಯೋಜನೆಯಲ್ಲಿ ನಡೆಯುವ ಪ್ರತಿಷ್ಠಿತ ಶಿವ ಬಿಗ್...

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..!

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..! ಪಂಜಾಬ್’ನ ಲೂಧಿಯಾನದ ಕೆನೆಚ್ ಎಂಬ ಹಳ್ಳಿ. ಅಲ್ಲೊಬ್ಬರು ಒಂದೊಮ್ಮೆ ಭಾರತ ಪರ ಆಡಿದ್ದ ಮಾಜಿ ಕ್ರಿಕೆಟಿಗ.. ಅವರಿಗೊಬ್ಬ ಮಗ.. ತನ್ನ ಕ್ರಿಕೆಟ್...
- Advertisement -spot_imgspot_img

ಅರಬ್ಬರ ನಾಡಿನಲ್ಲಿ ಕುಂದಗನ್ನಡಿಗರ ಸಮಾಗಮ

ಅರಬ್ಬರ ನಾಡಿನಲ್ಲಿ ಕುಂದಗನ್ನಡಿಗರ ಸಮಾಗಮ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಯುಎಇ ನಲ್ಲಿ ನೆಲೆಸಿರುವ ಕುಂದಗನ್ನಡಿಗರಿಗಾಗಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ದೆಗಳು...

ಕಂದಾಯೋತ್ಸವ 2025 : ಕಂದಾಯ ಇಲಾಖೆಯ ಸಾಂಸ್ಕೃತಿಕ – ಕ್ರೀಡಾ ಸಂಭ್ರಮ

ಕಂದಾಯೋತ್ಸವ 2025 : ಕಂದಾಯ ಇಲಾಖೆಯ ಸಾಂಸ್ಕೃತಿಕ – ಕ್ರೀಡಾ ಸಂಭ್ರಮ ಶಿವಮೊಗ್ಗ ಜಿಲ್ಲೆಯ ಕಂದಾಯ ಇಲಾಖೆಯ ವತಿಯಿಂದ **ಕಂದಾಯೋತ್ಸವ – 2025** ನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ....

Must read

- Advertisement -spot_imgspot_img

You might also likeRELATED
Recommended to you