6.4 C
London
Wednesday, April 24, 2024
HomeAction Replayಮೈಟಿ ಬೆಂಗಳೂರು ತಂಡಕ್ಕೆ ರಂಗಣ್ಣ & ಹನುಮಂತರಾಯಪ್ಪ ಮೆಮೋರಿಯಲ್ ಕಪ್-2019

ಮೈಟಿ ಬೆಂಗಳೂರು ತಂಡಕ್ಕೆ ರಂಗಣ್ಣ & ಹನುಮಂತರಾಯಪ್ಪ ಮೆಮೋರಿಯಲ್ ಕಪ್-2019

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img

ಟಿ.ದಾಸರಹಳ್ಳಿಯ M.E.I layout ನ ಅಂಗಣದಲ್ಲಿ 2 ದಿನಗಳ ಕಾಲ ನಡೆದ ರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ರಂಗಣ್ಣ & ಹನುಮಂತರಾಯಪ್ಪ ಮೆಮೋರಿಯಲ್ ಕಪ್ ನ್ನು ಮೈಟಿ ಬೆಂಗಳೂರು ತಂಡ ಜಯಿಸಿದೆ.

ಬರೋಡದ ರಣಜಿ ಆಟಗಾರ ಅಂಕುರ್ ಸಿಂಗ್,ಮುಂಬಯಿ ಟೆನ್ನಿಸ್ ಕ್ರಿಕೆಟಿಗ ಬಂಟಿ ಪಾಟೀಲ್ ಒಳಗೊಂಡ ಪಿರಮಿತಾ ತಂಡ ಸೇರಿದಂತೆ ರಾಜ್ಯದ 16 ತಂಡಗಳು ಭಾಗವಹಿಸಿದ್ದ ಈ ಟೂರ್ನಿಯ ಸೆಮಿಫೈನಲ್‌ನಲ್ಲಿ ARP ನ್ಯಾಶ್ ತಂಡ ಸ್ನೇಹಪ್ರಿಯ ತಂಡವನ್ನು ಸೋಲಿಸಿದರೆ,ಮೈಟಿ ತಂಡ ಫ್ರೆಂಡ್ಸ್ ಬೆಂಗಳೂರು ತಂಡವನ್ನು ರೋಚಕ ಕದನದಲ್ಲಿ 1 ರನ್ ಗಳ ಅಂತರದಲ್ಲಿ ಸೋಲುಣಿಸಿ ಫೈನಲ್ ಗೆ ನೆಗೆದೇರಿದ್ದವು.

ಮಳೆ ಹಾಗೂ ಸಮಯದ ಅಭಾವದಿಂದ ಕೇವಲ 1 ಓವರ್ ಗಳಿಗೆ ಸೀಮಿತವಾದ ಫೈನಲ್ ನಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಮೈಟಿ ಶಾಬುದ್ದೀನ್,ನ್ಯಾಶ್ ಪುರುಷಿಗೆ ಸಿಡಿಸಿದ 1 ಸಿಕ್ಸರ್,1ಬೌಂಡರಿ ಸಹಿತ 13 ರನ್ ಗಳ ಗುರಿಯನ್ನು ನೀಡಿತ್ತು. ಉತ್ತರವಾಗಿ ಮೈಟಿ ಕೃಷ್ಣ ಅದ್ಭುತ ಬೌಲಿಂಗ್ ನಲ್ಲಿ ನ್ಯಾಶ್ ತಂಡವನ್ನು ಒಂದು ಓವರ್ ನಲ್ಲಿ ಕೇವಲ 2ರನ್ ನೀಡಿ 2 ವಿಕೆಟ್ ಉರುಳಿಸಿ ಮೈಟಿಗೆ ಗೆಲುವು ತಂದಿತ್ತರು.

ವಿಜಯಿ ತಂಡ ಮೈಟಿ 3 ಲಕ್ಷ ನಗದು ಸಹಿತ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ತಂಡ A.R.P ನ್ಯಾಶ್ 1.5 ಲಕ್ಷ ಸಹಿತ ಆಕರ್ಷಕ ಟ್ರೋಫಿ ತನ್ನದಾಗಿಸಿಕೊಂಡಿತು.

ಫೈನಲ್ ತಂಡದ ಪಂದ್ಯಶ್ರೇಷ್ಟ ಪ್ರಶಸ್ತಿ ಶಾಬುದ್ದೀನ್ ಪಡೆದುಕೊಂಡರೆ ಕ್ರಮವಾಗಿ ಬೆಸ್ಟ್ ಬೌಲರ್ ಮೈಟಿ ಕೃಷ್ಣ, ಸರಣಿ ಶ್ರೇಷ್ಠ ಮೈಟಿ ಸ್ಯಾಂಡಿ,ಬೆಸ್ಟ್ ಬ್ಯಾಟ್ಸ್‌ಮನ್ A.R.P ನ್ಯಾಶ್ ನ ಶ್ರೀಕಾಂತ್ ಪಡೆದುಕೊಂಡರು.

ವಿಜೇತರಿಗೆ ದಿ| ರಂಗಣ್ಣ ಹಾಗೂ ದಿ|ಹನುಮಂತರಾಯಪ್ಪ ಕುಟುಂಬಸ್ಥರು ಬಹುಮಾನ ವಿತರಿಸಿದರು. ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಯುವ ಜನತಾದಳದ ಅಧ್ಯಕ್ಷ ಶ್ರೀಯುತ ಜಿ.ಗುರುಪ್ರಸಾದ್ ಸಾರಥ್ಯದಲ್ಲಿ,ಶ್ರೀ ನಿತೇಶ್ ಹಾಗೂ ಸಂಗಡಿಗರ ಸಹಕಾರದೊಂದಿಗೆ ಈ ವ್ಯವಸ್ಥಿತ ಪಂದ್ಯಾಕೂಟ ಭರ್ಜರಿ ಯಶಸ್ಸು ಸಾಧಿಸಿ,ಜನಮೆಚ್ಚುಗೆಗೆ ಪಾತ್ರವಾಯಿತು.

ಸಚಿನ್ ಮಹಾದೇವ್ ನೇತೃತ್ವದ M.Sports ಯೂಟ್ಯೂಬ್ ಚಾನೆಲ್ ಪಂದ್ಯಾಕೂಟದ ನೇರಪ್ರಸಾರವನ್ನು ಬಿತ್ತರಿಸಿ,ವಿಶ್ವದಾದ್ಯಂತ ಸುಮಾರು 40,000 ಕ್ರೀಡಾಭಿಮಾನಿಗಳು ಪಂದ್ಯಾಕೂಟ ವೀಕ್ಷಿಸಿದರು.

ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

twenty − 19 =