Categories
ಕ್ರಿಕೆಟ್

ಮಾಯಾಂಕ್ ಶತಕ ವ್ಯರ್ಥ-ತೇವಾಟಿಯಾ ಬ್ಯಾಟಿಂಗ್ ಗೆ ಅರ್ಥ-ರಾಜಸ್ಥಾನ ರಾಯಲ್ಸ್ ಅಧಿಕಾರಯುತ ಗೆಲುವು

ಭಾನುವಾರ ಶಾರ್ಜಾದ ಕ್ರಿಕೆಟ್ ಸ್ಟೇಡಿಯಂ ನಲ್ಲಿ ನಡೆದ
ಐ.ಪಿ.ಎಲ್ ನ ರೋಚಕ ಕದನವೊಂದರಲ್ಲಿ ರಾಜಸ್ಥಾನ ರಾಯಲ್ಸ್ ,ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು ಭರ್ಜರಿಯಾಗಿ ಸೋಲಿಸಿ ಗೆಲುವಿನ ನಗೆ ಬೀರಿದೆ.
ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್ ಮೊದಲು ಪಂಜಾಬ್ ತಂಡಕ್ಕೆ ಬ್ಯಾಟಿಂಗ್ ಆಹ್ವಾನ‌ ನೀಡಿತ್ತು.ಕಿಂಗ್ಸ್ ನ ಪರವಾಗಿ ಕನ್ನಡಿಗರಾದ ಮಾಯಾಂಕ್ ವೇಗದ ಶತಕ (50 ಎಸೆತಗಳಲ್ಲಿ 106)ಹಾಗೂ ಕೆ.ಎಲ್.ರಾಹುಲ್ ಅರ್ಧಶತಕ 69 ರನ್ ಗಳ ಭರ್ಜರಿ ಆರಂಭ ಒದಗಿಸಿದ್ದರು ಹಾಗೂ 20 ಓವರ್ ಗಳಿಗೆ ಕೇವಲ 2 ವಿಕೆಟ್ ನಷ್ಟಕ್ಕೆ 223 ರನ್ ಗಳಿಸಿತ್ತು.
 ಅಸಾಧ್ಯದ ಗುರಿಯನ್ನು ಬೆಂಬತ್ತಿದ ರಾಜಸ್ಥಾನ ರಾಯಲ್ಸ್ ಸಂಜು ಸ್ಯಾಮ್ಸನ್ ವೇಗದ ಅರ್ಧಶತಕ 42 ಎಸೆತಗಳಲ್ಲಿ 85 ರನ್ ಹಾಗೂ ಸ್ಟೀವ್ ಸ್ಮಿತ್ ಅರ್ಧಶತಕ 27 ಎಸೆತಗಳಲ್ಲಿ 50 ರನ್ ಸಿಡಿಸಿ ಭರ್ಜರಿ ಆರಂಭ ನೀಡಿದ್ದರು.
*ತೆವಳುತ್ತಾ ತೆವಳುತ್ತಾ ಎದುರಾಳಿಗಳ ಗೆಲುವಿನ ಬಿಸಿ ತೇವಗೊಳಿಸಿದ ತೇವಾಟಿಯಾ*
ಇವರೀರ್ವರ ವಿಕೆಟ್‌ ಪತನದ ಬಳಿಕ
ರನ್ ವೇಗದಲ್ಲಿ ಹಠಾತ್ ಕುಸಿತ ಅನುಭವಿಸಿದ ಸಂದರ್ಭ ಕ್ರೀಸ್ ಗೆ ಆಗಮಿಸಿದ ಎಡಗೈ ದಾಂಡಿಗ ರಾಹುಲ್ ತೇವಾಟಿಯ ಆರಂಭದಲ್ಲಿ ರಕ್ಷಣಾತ್ಮಕ ಆಟಕ್ಕೆ ಮುಂದಾಗಿದ್ದರು. ಅಂತಿಮ ಹಂತದಲ್ಲಿ ಪಂಜಾಬ್ ನ ಸುಲಭ ಗೆಲುವಿನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದ ತೇವಾಟಿಯ, ಕಾಟ್ರೆಲ್ ಒಂದೇ ಓವರ್ ನಲ್ಲಿ 5 ಸಿಕ್ಸರ್ ಗಳನ್ನು ಚಚ್ಚಿ ಒಟ್ಟು 7 ಭರ್ಜರಿ ಸಿಕ್ಸರ್ ಗಳ ನೆರವಿನಿಂದ
ಅರ್ಧಶತಕ 31 ಎಸೆತಗಳಲ್ಲಿ 53 ರನ್ ಗಳಿಸಿ ರಾಜಸ್ಥಾನ ರಾಯಲ್ಸ್ ತಂಡವನ್ನು ಗೆಲುವಿನ ದಡಕ್ಕೆ ತಲುಪಿಸಿದ್ದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

five × four =