5 C
London
Wednesday, April 24, 2024
Homeಕ್ರಿಕೆಟ್ಮತ್ತೆ ವಿರಾಟ ದರ್ಶನ... ಸೂಪರ್ ಕಿಂಗ್ಸ್ ವಿರುದ್ಧ R.C.B ಗೆ ಸೂಪರ್ ಜಯ

ಮತ್ತೆ ವಿರಾಟ ದರ್ಶನ… ಸೂಪರ್ ಕಿಂಗ್ಸ್ ವಿರುದ್ಧ R.C.B ಗೆ ಸೂಪರ್ ಜಯ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಐ.ಪಿ.ಎಲ್ ಹಣಾಹಣಿಯ ಎರಡು ಬಲಿಷ್ಠ ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧವಾಗಿ  ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಬಹುಕುತೂಹಲಕಾರಿ ಪಂದ್ಯದಲ್ಲಿ R.C.B ತನ್ನ ಸರ್ವಾಂಗೀಣ ಪ್ರದರ್ಶನದೊಂದಿಗೆ ಅಧಿಕಾರಯುತವಾದ ಗೆಲುವನ್ನು ದಾಖಲಿಸಿತು
.
ಚಾಂಪಿಯನ್ ಕ್ಯಾಪ್ಟನ್ ವಿರುದ್ದವಾಗಿ  ಚಾಂಪಿಯನ್ ಬ್ಯಾಟ್ಸ್ ಮನ್ ಸೊಗಸಾದ ಆಟ ತಂಡಕ್ಕೆ ಜಯವನ್ನು ತಂದುಕೊಟ್ಟಿತು.
ಟಾಸ್ ಅನ್ನು ಜಯಿಸಿದ ಕೊಹ್ಲಿ  ದೊಡ್ಡ ಮೊತ್ತವನ್ನು ಪೇರಿಸುವ ಸಲುವಾಗಿ  ಮೊದಲು ಬ್ಯಾಟಿಂಗ್ ನ್ನು ಆಯ್ದುಕೊಂಡು ಬಹುದೊಡ್ಡ ಗುರಿಯನ್ನು ನೀಡಬೇಕೆಂದು ತಮ್ಮ ನಿರ್ಣಯವನ್ನು ಸಮರ್ಥಿಸಿಕೊಳ್ಳಬೇಕೆಂಬ ಹೊತ್ತಿಗೆ c.s.k, ಯ ಬೌಲರ್ ಗಳು r.c.b ದಾಂಡಿಗರನ್ನು ಬಲವಾಗಿ ಕಾಡಿದ್ದರು.
ಆ ಹೊತ್ತಿಗೆ  ಎಂದಿನಂತೆ ತನ್ನ ಸ್ಪೋಟಕ ಬ್ಯಾಂಟಿಂಗ್ ನ ಮೂಲಕ ಕೊಹ್ಲಿಯ ಆರ್ಭಟ ಚೈನ್ನೈ ತಂಡದ ತಂತ್ರವನ್ನು ತೆಲೆಕೆಳಗೆ ಮಾಡಿಬಿಟ್ಟಿತ್ತು.  ಭರ್ಜರಿ ಬ್ಯಾಟಿಂಗ್ ಮೂಲಕ ತನ್ನನ್ನು ಟೀಕಿಸುತ್ತಿದ್ದವರಿಗೆ ಕೊಹ್ಲಿಯ ಉತ್ತರ ರವಾನೆಯಾಯಿತು. 170 ರ ಗುರಿಯನ್ನು ತಲುಪಬೇಕಿದ್ದ ಚೆನ್ನೈ ಮತ್ತೆ ತನ್ನ ಬಿರುಸಿನ ಬ್ಯಾಟಿಂಗ್ ಹಾಗೂ ಹೊಂದಾಣಿಕೆ ಕೊರತೆಯನ್ನು ಅನುಭವಿಸಿತು. .ಧೋನಿಯ ನಾಯಕತ್ವದ ಜಾಣ್ಮೆ ಮೊದಮೊದಲು ಪಂದ್ಯದ ಮೇಲೆ ಹಿಡಿತವನ್ನು ಸಾಧಿಸಿದರೂ ಕೊಹ್ಲಿಯ ಅಬ್ಬರದ ನಡುವೆ ನಿರಸ ಪ್ರದರ್ಶನದೊಂದಿಗೆ ಧೋನಿ ಬಳಗ ಕೊಹ್ಲಿ ಬಳಗಕ್ಕೆ ಶರಣಾಯಿತು. ಈ ಹಂತದಲ್ಲಿ ಪ್ರಬಲ ದಾಳಿಯನ್ನು ಸಂಘಟಿಸಿದ R.C.B ಬೌಲರ್ ಗಳು ತಮ್ಮ ನೈಜ ತಾಕತ್ತನ್ನು ತೋರ್ಪಡಿಸಿದರು. ಅತ್ಯುತ್ತಮ  ಕ್ಷೇತ್ರರಕ್ಷಣೆಯು R.C.B ಬೌಲಿಂಗ್ ಗೆ ಪ್ರಮುಖ ಸಾಥ್ ನೀಡಿತು. ಧೋನಿಎಂಬ  ಚಾಂಪಿಯನ್ ಕ್ಯಾಪ್ಟನ್ ನ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿ ಕೊಹ್ಲಿ ಎಂಬ ಚಾಂಪಿಯನ್ ಆಟಗಾರನ ತಂಡ ತನ್ನ ಸರ್ವಾಂಗೀಣ ಪ್ರದರ್ಶನವನ್ನು ತೋರಿ  ಪಂದ್ಯವನ್ನು ಗೆದ್ದು ಅಭಿಮಾನಿಗಳ ಸಂತಸವನ್ನು ಹೆಚ್ಚಿಸಿತು…

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

15 + seventeen =