ಕ್ರಿಕೆಟ್ರಿಯಾನ್ ಬರ್ಲ್ ಮನವಿಗೆ ಸ್ಪಂದಿಸಿದ ಪೂಮಾ..!!

ರಿಯಾನ್ ಬರ್ಲ್ ಮನವಿಗೆ ಸ್ಪಂದಿಸಿದ ಪೂಮಾ..!!

-

- Advertisment -spot_img
ಜಿಂಬಾಬ್ವೆ ಕ್ರಿಕೆಟಿಗ ರಿಯಾನ್ ಬರ್ಲ್ ತನ್ನ ಟ್ವಿಟರ್ ಖಾತೆಯಲ್ಲಿ ಹರಿದುಹೊದ ಶೂಗಳ ಚಿತ್ರವನ್ನು ಪೋಸ್ಟ್ ಮಾಡುವುದರ ಜೊತೆಗೆ ಅರ್ಥಿಕ ಬಿಕ್ಕಟ್ಟಿನಲ್ಲಿ ನಲುಗಿಹೊಗಿರುವ ತನ್ನ ತಂಡಕ್ಕೆ ಪ್ರಾಯೋಜಕರಿಗಾಗಿ ಭಾವನಾತ್ಮಕ ಮನವಿಯನ್ನು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡ ನಂತರ, ಕೆಲವೇ ಗಂಟೆಗಳಲ್ಲಿ  ಜನಪ್ರಿಯ ಕ್ರೀಡಾ ದೈತ್ಯ ಪೂಮಾ ಸಂಸ್ಥೆ ಜಿಂಬಾಬ್ವೆಯ ಕ್ರಿಕೆಟ್ ತಂಡಕ್ಕೆ ತಾನು ಪ್ರಾಯೋಜಿಸುವುದಾಗಿ ಹೇಳಿದೆ.
 ಜಿಂಬಾಬ್ವೆ ಕ್ರಿಕೆಟಿಗ ರಿಯಾನ್ ಬರ್ಲ್ ಧರಿಸಿರುವ ಹರಿದ ಶೂಗಳ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸ್ಪೋರ್ಟ್ಸ್ ವೇರ್ ಬ್ರಾಂಡ್ ಪ್ರಾಯೋಜಕತ್ವ ನೀಡುವುದಾಗಿ ಪೂಮಾ ಪ್ರತಿಜ್ಞೆ ಮಾಡಿದೆ.
ಭಾರತೀಯ ಕ್ರಿಕೆಟಿಗ ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಟಗಾರ ಹರ್ಭಜನ್ ಸಿಂಗ್ ಅವರು ಪೂಮಾ ಸಂಸ್ಥೆ ಜಿಂಬಾಬ್ವೆ ತಂಡಕ್ಕೆ ತೊರಿದ ಪ್ರಾಯೋಜಕತ್ವಕ್ಕೆ ಇದು ಅದ್ಭುತ ಸೇವೆ ಎಂದು ಶ್ಲಾಘಿಸಿದ್ದಾರೆ
 “ಯಾವಾಗಲೂ ಆಟಗಾರರಿಗಾಗಿ  ಪೂಮಾ ಸಂಸ್ಥೆ ಸಹಾಯ ಹಸ್ತವನ್ನು ನೀಡುತ್ತಲೆ ಇರುತ್ತದೆ ಜನಪ್ರಿಯ ಕ್ರೀಡಾ ದೈತ್ಯ ಸಂಸ್ಥೆಯಾಗಿದೆ ಪೂಮಾ.  ಪೂಮಾ ಸಂಸ್ಥೆ ಜಿಂಬಾಬ್ವೆಯ ಬರ್ಲ್‌ ಮನವಿಗೆ ಸಹಾಯ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಕ್ರಿಡಾಭಿಮಾನಿಗಳು ಪೂಮಾ ಸಂಸ್ಥೆಯು ಜಿಂಬಾಬ್ವೆ ತಂಡಕ್ಕೆ ತೊರಿದ ಔದಾರ್ಯವನ್ನು ಹಾಡಿ ಹೊಗಳಿದ್ದಾರೆ
 ಜಿಂಬಾಬ್ವೆ ಕ್ರಿಕೆಟಿಗನು ಕ್ರೀಡಾ ಬ್ರಾಂಡ್‌ಗಳ ಸಹಾಯವನ್ನು ಕೋರಿದ ನಂತರ ” ಹರಿದ ಶೂಗಳನ್ನು ದೂರವಿಡುವ ಸಮಯ, ನಾವು ನಿಮ್ಮ ಸಹಾಯಕ್ಕೆ ಇದ್ದೇವೆ ” ಎಂದು ಬರ್ಲ್ ಅವರ ಟ್ವೀಟ್‌ಗೆ ಪೂಮಾ ಕ್ರೀಡಾ ದೈತ್ಯ ಸಂಸ್ಥೆ ಪ್ರತಿಕ್ರಿಯಿಸಿತ್ತು.
ನಾವು ಪ್ರಾಯೋಜಕರನ್ನು ಪಡೆಯುವ ಯಾವುದೇ ಅವಕಾಶಕ್ಕಾಗಿ ಕಾಯುತ್ತಿದ್ದೇವೆ
ಪ್ರತಿ ಸರಣಿಯ ನಂತರವೂ ನಾವುಗಳು ನಮ್ಮ ಜೋಡಿ ಶೂಗಳನ್ನು ಹೊಲಿದುಕೊಳ್ಳಬೇಕಿತ್ತು ಎಂದು ಬರ್ಲ್ ಬಹಿರಂಗಪಡಿಸಿದ್ದರು.
ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಬರ್ಲ್‌ನ ಅಗ್ನಿಪರೀಕ್ಷೆಯನ್ನು ರಿಟ್ವೀಟ್ ಮಾಡುವ ಮೂಲಕ ಮತ್ತು ಪ್ರಸ್ತಾಪಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರೀಡಾ ಅನುಯಾಯಿಗಳು ತಮ್ಮ ಬೆಂಬಲವನ್ನು ವಿಸ್ತರಿಸಿದ್ದರಿಂದ ಬರ್ಲ್ ಅವರ ಟ್ವೀಟ್ ಅತಿ ಶೀಘ್ರದಲ್ಲಿ ವಿಶ್ವಮಟ್ಟದಲ್ಲಿ  ಚರ್ಚೆಯಾಯಿತು.
 ಆಲ್‌ರೌಂಡರ್ ಬರ್ಲ್, ಜಿಂಬಾಬ್ವೆ ಕ್ರಿಕೆಟ್ ತಂಡದ ಪರ 46 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
27 ರ ಹರೆಯದವರು ಎಲ್ಲಾ ಸ್ವರೂಪಗಳಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.  ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬರ್ಲ್ ತನ್ನ ಸ್ಪಿನ್ ಮೊಡಿಯೊಂದಿಗೆ 26 ವಿಕೆಟ್ ಗಳಿಸಿದ್ದಾರೆ.
 ಜಿಂಬಾಬ್ವೆ ತಂಡ ಆಗಸ್ಟ್‌ನಲ್ಲಿ ಸೀಮಿತ ಓವರ್‌ಗಳ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಆಡಲಿದೆ.
ಪೂಮಾ ಸಹಾಯ ಹಸ್ತ ವಿಶ್ವವ್ಯಾಪ್ತಿಯಲ್ಲಿರು ಕ್ರಿಕೆಟ್  ಅಭಿಮಾನಿಗಳ ಬೆಂಬಲದೊಂದಿಗೆ ಜಿಂಬಾಬ್ವೆ ತಂಡ ಪಾಕಿಸ್ತಾನದ ಎದುರಿನ ಸೋಲಿಕ ಕಹಿಯನ್ನು ಮರೆತು ಪುಟಿದೇಳುವಂತಾಗಲಿ ಎನ್ನುವುದೆ ನಮ್ಮೆಲ್ಲರ ಆಶಯವಾಗಿದೆ……
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

LEAVE A REPLY

Please enter your comment!
Please enter your name here

10 − 4 =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you