ಕ್ರಿಕೆಟ್ರಿಯಾನ್ ಬರ್ಲ್ ಮನವಿಗೆ ಸ್ಪಂದಿಸಿದ ಪೂಮಾ..!!

ರಿಯಾನ್ ಬರ್ಲ್ ಮನವಿಗೆ ಸ್ಪಂದಿಸಿದ ಪೂಮಾ..!!

-

- Advertisment -spot_img
ಜಿಂಬಾಬ್ವೆ ಕ್ರಿಕೆಟಿಗ ರಿಯಾನ್ ಬರ್ಲ್ ತನ್ನ ಟ್ವಿಟರ್ ಖಾತೆಯಲ್ಲಿ ಹರಿದುಹೊದ ಶೂಗಳ ಚಿತ್ರವನ್ನು ಪೋಸ್ಟ್ ಮಾಡುವುದರ ಜೊತೆಗೆ ಅರ್ಥಿಕ ಬಿಕ್ಕಟ್ಟಿನಲ್ಲಿ ನಲುಗಿಹೊಗಿರುವ ತನ್ನ ತಂಡಕ್ಕೆ ಪ್ರಾಯೋಜಕರಿಗಾಗಿ ಭಾವನಾತ್ಮಕ ಮನವಿಯನ್ನು ಸಾಮಾಜಿಕ ಜಾಲತಾಣದಲ್ಲಿ  ಹಂಚಿಕೊಂಡ ನಂತರ, ಕೆಲವೇ ಗಂಟೆಗಳಲ್ಲಿ  ಜನಪ್ರಿಯ ಕ್ರೀಡಾ ದೈತ್ಯ ಪೂಮಾ ಸಂಸ್ಥೆ ಜಿಂಬಾಬ್ವೆಯ ಕ್ರಿಕೆಟ್ ತಂಡಕ್ಕೆ ತಾನು ಪ್ರಾಯೋಜಿಸುವುದಾಗಿ ಹೇಳಿದೆ.
 ಜಿಂಬಾಬ್ವೆ ಕ್ರಿಕೆಟಿಗ ರಿಯಾನ್ ಬರ್ಲ್ ಧರಿಸಿರುವ ಹರಿದ ಶೂಗಳ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸ್ಪೋರ್ಟ್ಸ್ ವೇರ್ ಬ್ರಾಂಡ್ ಪ್ರಾಯೋಜಕತ್ವ ನೀಡುವುದಾಗಿ ಪೂಮಾ ಪ್ರತಿಜ್ಞೆ ಮಾಡಿದೆ.
ಭಾರತೀಯ ಕ್ರಿಕೆಟಿಗ ಮತ್ತು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಆಟಗಾರ ಹರ್ಭಜನ್ ಸಿಂಗ್ ಅವರು ಪೂಮಾ ಸಂಸ್ಥೆ ಜಿಂಬಾಬ್ವೆ ತಂಡಕ್ಕೆ ತೊರಿದ ಪ್ರಾಯೋಜಕತ್ವಕ್ಕೆ ಇದು ಅದ್ಭುತ ಸೇವೆ ಎಂದು ಶ್ಲಾಘಿಸಿದ್ದಾರೆ
 “ಯಾವಾಗಲೂ ಆಟಗಾರರಿಗಾಗಿ  ಪೂಮಾ ಸಂಸ್ಥೆ ಸಹಾಯ ಹಸ್ತವನ್ನು ನೀಡುತ್ತಲೆ ಇರುತ್ತದೆ ಜನಪ್ರಿಯ ಕ್ರೀಡಾ ದೈತ್ಯ ಸಂಸ್ಥೆಯಾಗಿದೆ ಪೂಮಾ.  ಪೂಮಾ ಸಂಸ್ಥೆ ಜಿಂಬಾಬ್ವೆಯ ಬರ್ಲ್‌ ಮನವಿಗೆ ಸಹಾಯ ಮಾಡುವುದಾಗಿ ಬಹಿರಂಗವಾಗಿ ಘೋಷಿಸಿದ ನಂತರ ಸಾಮಾಜಿಕ ಜಾಲತಾಣದಲ್ಲಿ ಕ್ರಿಡಾಭಿಮಾನಿಗಳು ಪೂಮಾ ಸಂಸ್ಥೆಯು ಜಿಂಬಾಬ್ವೆ ತಂಡಕ್ಕೆ ತೊರಿದ ಔದಾರ್ಯವನ್ನು ಹಾಡಿ ಹೊಗಳಿದ್ದಾರೆ
 ಜಿಂಬಾಬ್ವೆ ಕ್ರಿಕೆಟಿಗನು ಕ್ರೀಡಾ ಬ್ರಾಂಡ್‌ಗಳ ಸಹಾಯವನ್ನು ಕೋರಿದ ನಂತರ ” ಹರಿದ ಶೂಗಳನ್ನು ದೂರವಿಡುವ ಸಮಯ, ನಾವು ನಿಮ್ಮ ಸಹಾಯಕ್ಕೆ ಇದ್ದೇವೆ ” ಎಂದು ಬರ್ಲ್ ಅವರ ಟ್ವೀಟ್‌ಗೆ ಪೂಮಾ ಕ್ರೀಡಾ ದೈತ್ಯ ಸಂಸ್ಥೆ ಪ್ರತಿಕ್ರಿಯಿಸಿತ್ತು.
ನಾವು ಪ್ರಾಯೋಜಕರನ್ನು ಪಡೆಯುವ ಯಾವುದೇ ಅವಕಾಶಕ್ಕಾಗಿ ಕಾಯುತ್ತಿದ್ದೇವೆ
ಪ್ರತಿ ಸರಣಿಯ ನಂತರವೂ ನಾವುಗಳು ನಮ್ಮ ಜೋಡಿ ಶೂಗಳನ್ನು ಹೊಲಿದುಕೊಳ್ಳಬೇಕಿತ್ತು ಎಂದು ಬರ್ಲ್ ಬಹಿರಂಗಪಡಿಸಿದ್ದರು.
ಮೈಕ್ರೋಬ್ಲಾಗಿಂಗ್ ಸೈಟ್‌ನಲ್ಲಿ ಬರ್ಲ್‌ನ ಅಗ್ನಿಪರೀಕ್ಷೆಯನ್ನು ರಿಟ್ವೀಟ್ ಮಾಡುವ ಮೂಲಕ ಮತ್ತು ಪ್ರಸ್ತಾಪಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳು ಮತ್ತು ಕ್ರೀಡಾ ಅನುಯಾಯಿಗಳು ತಮ್ಮ ಬೆಂಬಲವನ್ನು ವಿಸ್ತರಿಸಿದ್ದರಿಂದ ಬರ್ಲ್ ಅವರ ಟ್ವೀಟ್ ಅತಿ ಶೀಘ್ರದಲ್ಲಿ ವಿಶ್ವಮಟ್ಟದಲ್ಲಿ  ಚರ್ಚೆಯಾಯಿತು.
 ಆಲ್‌ರೌಂಡರ್ ಬರ್ಲ್, ಜಿಂಬಾಬ್ವೆ ಕ್ರಿಕೆಟ್ ತಂಡದ ಪರ 46 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
27 ರ ಹರೆಯದವರು ಎಲ್ಲಾ ಸ್ವರೂಪಗಳಲ್ಲಿ 500 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.  ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬರ್ಲ್ ತನ್ನ ಸ್ಪಿನ್ ಮೊಡಿಯೊಂದಿಗೆ 26 ವಿಕೆಟ್ ಗಳಿಸಿದ್ದಾರೆ.
 ಜಿಂಬಾಬ್ವೆ ತಂಡ ಆಗಸ್ಟ್‌ನಲ್ಲಿ ಸೀಮಿತ ಓವರ್‌ಗಳ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ಆಡಲಿದೆ.
ಪೂಮಾ ಸಹಾಯ ಹಸ್ತ ವಿಶ್ವವ್ಯಾಪ್ತಿಯಲ್ಲಿರು ಕ್ರಿಕೆಟ್  ಅಭಿಮಾನಿಗಳ ಬೆಂಬಲದೊಂದಿಗೆ ಜಿಂಬಾಬ್ವೆ ತಂಡ ಪಾಕಿಸ್ತಾನದ ಎದುರಿನ ಸೋಲಿಕ ಕಹಿಯನ್ನು ಮರೆತು ಪುಟಿದೇಳುವಂತಾಗಲಿ ಎನ್ನುವುದೆ ನಮ್ಮೆಲ್ಲರ ಆಶಯವಾಗಿದೆ……
ಸುಧೀರ್ ವಿಧಾತ
ಸುಧೀರ್ ವಿಧಾತ
*- ಸುಧೀರ್ ವಿಧಾತ, ಭಾರತ್ ಕ್ರಿಕೆಟರ್ಸ್, ಶಿವಮೊಗ್ಗ*

LEAVE A REPLY

Please enter your comment!
Please enter your name here

4 × two =

Latest news

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ ಮಂಗಳೂರು/ಬೆಂಗಳೂರು: ಪ್ರತಿಷ್ಠಿತ ಆರ್‌ಪಿ ಟ್ರೋಫಿ 2026 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಗೆ ಕರ್ನಾಟಕದ ಅಕುಲ್ ಟೂರಿಸಂ...

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಭರ್ಜರಿ ಸಿದ್ಧತೆ

ಬೈಂದೂರಿನಲ್ಲಿ “ವಿಕ್ರಂ ಟ್ರೋಫಿ–2026” ಅಂಡರ್-23 ಟಿ-20 ಕ್ರಿಕೆಟ್ ಟೂರ್ನಿಗೆ ಸಿದ್ಧತೆ ಬೈಂದೂರು: ಯುವ ಕ್ರಿಕೆಟ್ ಪ್ರತಿಭೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ವಿಕ್ರಂ ಕ್ರಿಕೆಟ್ ಕ್ಲಬ್ ಬೈಂದೂರು ವತಿಯಿಂದ,...

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್

ಉರ್ವಾ ಮೈದಾನದಲ್ಲಿ ಮಂಗಳಾಪುರ ಟ್ರೋಫಿ ಸಂಭ್ರಮ – ಕೊಂಕಣ್ ಎಕ್ಸ್‌ಪ್ರೆಸ್ ಚಾಂಪಿಯನ್ ಮಂಗಳೂರು ಉರ್ವಾ ಮೈದಾನದಲ್ಲಿ ಎರಡು ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆದ “ಮಂಗಳಾಪುರ ಟ್ರೋಫಿ...

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 ‘HPL-2K26’ ಕ್ರಿಕೆಟ್ ಸಂಭ್ರಮ

ಹೊಸಂಗಡಿಯಲ್ಲಿ ಕುಂಬ್ರಿ ಪ್ರೀಮಿಯರ್ ಲೀಗ್ – 2026 'HPL-2K26’ ಕ್ರಿಕೆಟ್ ಸಂಭ್ರಮ ಫ್ರೆಂಡ್ಸ್ ಹೊಸಂಗಡಿ ವತಿಯಿಂದ ಮೇ 9 ಮತ್ತು 10 ರಂದು ಹೊಸಂಗಡಿಯ ಅಂಬೇಡ್ಕರ್ ಕ್ರೀಡಾಂಗಣದಲ್ಲಿ...
- Advertisement -spot_imgspot_img

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ

ಮಾರುತಿ ಆಶ್ರಯ ಹಸ್ತಾಂತರ ಕಾರ್ಯಕ್ರಮ: ಮಾನವೀಯ ಸೇವೆಯ ಉದಾತ್ತ ಉದಾಹರಣೆ ಉಳ್ಳಾಲ, ಮೇ 5: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾರುತಿ ಜನಸೇವಾ ಸಂಘ (ರಿ) ಹಾಗೂ...

ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ

  ಎಸ್‌ವಿಎಸ್ ಮೈದಾನದಲ್ಲಿ ಚಾರಿಟಿ ಕ್ರಿಕೆಟ್: ವಿಜೇತರಿಂದ ದೇಣಿಗೆಯ ಮಹತ್ವದ ಹೆಜ್ಜೆ ಬಂಟ್ವಾಳ: ಅರ್ಜುನ್ ಭಂಡಾರ್ಕರ್ ಅವರ ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ (ರಿ) ವತಿಯಿಂದ ಆಶಕ್ತ ಕುಟುಂಬಗಳಿಗೆ...

Must read

- Advertisement -spot_imgspot_img

You might also likeRELATED
Recommended to you