ಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ಪಡುಬಿದ್ರಿ-ಪಾಣರ ಪ್ರೀಮಿಯರ್ ಲೀಗ್ -2021

ಪಡುಬಿದ್ರಿ-ಪಾಣರ ಪ್ರೀಮಿಯರ್ ಲೀಗ್ -2021

-

- Advertisment -spot_img
ಕ್ರೀಡಾ ಕ್ಷೇತ್ರದಲ್ಲಿ ತನ್ನದೆ ಆದ ಚಾಪನ್ನು ಮೂಡಿಸುತ್ತ ರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿರುವ ಪಡುಬಿದ್ರಿ ಯ ಬೋರ್ಡ್ ಶಾಲಾ ಮೈದಾನದಲ್ಲಿ ಈ ಬಾರಿ ಪಾಣರ ಪ್ರೀಮಿಯರ್ ಲೀಗ್ ಪಂದ್ಯಾಟಕ್ಕೆ ಸಿದ್ದವಾಗಿದೆ.
ಪಡುಬಿದ್ರಿಯ ಯುವ ಉತ್ಸಾಹಿ ಸಂಘಟಕರಾದ ಶ್ರೀ ಶಂಕರ್ ಕಂಚಿನಡ್ಕ ಇವರ ನೇತೃತ್ವದಲ್ಲಿ ತುಳುನಾಡಿನ ದೈವಾರಾಧನೆಯ ಸೇವೆಯಲ್ಲಿ ತೊಡಗಿಸಿಕೊಂಡಿರುವ ನಲಿಕೆ ಯಾನೆ ಪಾಣರ ಸಮಾಜ ಬಾಂಧವರ ಒಗ್ಗಟ್ಟನ್ನು ಬಲಪಡಿಸುವ ಮತ್ತು  ಸಮಾಜದ ಆಸಕ್ತ ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಂಡರ್ ಆರ್ಮ್ ಮಾದರಿಯಲ್ಲಿ ಪ್ರೀಮಿಯರ್ ಲೀಗ್ ಪಂದ್ಯಾಟವನ್ನು ಪ್ರಥಮ ಬಾರಿಗೆ ಆಯೋಜಿಸಲಾಗಿದೆ.
ಆಕ್ಷನ್ ಪ್ರಕ್ರಿಯೆ
ಓವರ್ ಆರ್ಮ್ ಮಾದರಿಯ ಸಾಕಷ್ಟು ಪಂದ್ಯಾಟಕ್ಕೆ ಸಾಕ್ಷಿಯಾಗಿದ್ದ ಪಡುಬಿದ್ರ ಬೋರ್ಡ್ ಶಾಲಾ ಮೈದಾನ ಈ ಬಾರಿ ಅಂಡರ್ ಆರ್ಮ್ ಪಂದ್ಯಾಟಕ್ಕೂ ಪರಿಚಯವಾಗುತ್ತಿದೆ. ನಲಿಕೆ ಸಮಾಜದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಇಷ್ಟೊಂದು ಅಚ್ಚುಕಟ್ಟಾಗಿ, ವ್ಯವಸ್ಥಿತವಾಗಿ ಹಾಗೂ  ಗರಿಷ್ಠ ಮೊತ್ತದ ನಗದು ಬಹುಮಾನಗಳನ್ನು ಒಳಗೊಂಡ ಪಂದ್ಯಾಟವಾಗಿದೆ. ಒಟ್ಟು 12 ಫ್ರಾಂಚೈಸಿಗಳ ನಡುವಿನ ಪ್ರೀಮಿಯರ್ ಲೀಗ್ ನಲ್ಲಿ ಸುಮಾರು  180 ಆಟಗಾರರು ಭಾಗವಹಿಸಲಿದ್ದು, ಇದೇ ಬರುವ ದಿನಾಂಕ 07.11.2021 ಭಾನುವಾರ ಪಡುಬಿದ್ರಿ ಅಮರ್ ಕಂಫರ್ಟ್ಸ್ ನಲ್ಲಿ ಬಿಡ್ಡಿಂಗ್ ಪ್ರಕ್ರಿಯೆ ನಡೆಯಲಿದೆ.
 ಈಗಾಗಲೇ ಪಂದ್ಯಾಟಕ್ಕೆ ಚಿತ್ರರಂಗದ ಕಲಾವಿದರು,ಕ್ರೀಡಾ ತಾರೆಗಳು, ರಂಗಭೂಮಿ ನಟರು, ರಾಜಕೀಯ ಧುರೀಣರ ಶುಭಾಶಯಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಹುನಿರೀಕ್ಷೆಯೊಂದಿಗೆ ಪಂದ್ಯಾಟದ ರೂಪುರೇಷೆಗಳು ಸಿದ್ಧವಾಗುತ್ತಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

sixteen + 17 =

Latest news

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್

ಭಾರತದ ‘ಬಿಗ್ ಗೇಮ್ ಪ್ಲೇಯರ್’ ಯುವರಾಜ್ ಸಿಂಗ್ ಭಾರತೀಯ ಕ್ರಿಕೆಟ್‌ನ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ಯುವರಾಜ್ ಸಿಂಗ್, ದೊಡ್ಡ ವೇದಿಕೆಗಳಲ್ಲಿ ತಂಡಕ್ಕೆ ಜಯ ತಂದುಕೊಡುವ ಶಕ್ತಿಶಾಲಿ ಪ್ರದರ್ಶನಗಳಿಂದ...

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು

ಹೊನಲುಬೆಳಕಿನ ರಾಜ್ಯಮಟ್ಟದ ‘K.M.S CUP ಸೀಸನ್–2’ ವಾಲಿಬಾಲ್ ಟೂರ್ನಿ ಡಿಸೆಂಬರ್ 29–30ರಂದು ಯಲಹಂಕ ತಾಲ್ಲೂಕಿನ ಕುದುರೆಗೆರೆ ಪ್ರದೇಶದಲ್ಲಿ ಕೆ.ಎಂ.ಶ್ರೀನಿವಾಸ್ ರವರ ಸ್ಮರಣಾರ್ಥ ಹಾಗೂ ಕೆ.ಎಂ. ಸುಬ್ರಮಣಿ ರವರ...

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು

ಶಿವ ಬಿಗ್ ಬ್ಯಾಷ್ 2025: ಕೋಟ ಸಾಲಿಗ್ರಾಮದಲ್ಲಿ ಡಿಸೆಂಬರ್ 13-14ರಂದು ಶಿವ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ, ಕೋಟ ಸಾಲಿಗ್ರಾಮದ ಆಯೋಜನೆಯಲ್ಲಿ ನಡೆಯುವ ಪ್ರತಿಷ್ಠಿತ ಶಿವ ಬಿಗ್...

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..!

ಕೆಚ್ಚಿನ.. ಕಿಚ್ಚಿನ ಯುವರಾಜನ ಕಥೆ..! ಪಂಜಾಬ್’ನ ಲೂಧಿಯಾನದ ಕೆನೆಚ್ ಎಂಬ ಹಳ್ಳಿ. ಅಲ್ಲೊಬ್ಬರು ಒಂದೊಮ್ಮೆ ಭಾರತ ಪರ ಆಡಿದ್ದ ಮಾಜಿ ಕ್ರಿಕೆಟಿಗ.. ಅವರಿಗೊಬ್ಬ ಮಗ.. ತನ್ನ ಕ್ರಿಕೆಟ್...
- Advertisement -spot_imgspot_img

ಅರಬ್ಬರ ನಾಡಿನಲ್ಲಿ ಕುಂದಗನ್ನಡಿಗರ ಸಮಾಗಮ

ಅರಬ್ಬರ ನಾಡಿನಲ್ಲಿ ಕುಂದಗನ್ನಡಿಗರ ಸಮಾಗಮ ನಮ್ಮ ಕುಂದಾಪ್ರ ಕನ್ನಡ ಬಳಗ ಗಲ್ಫ್ ವತಿಯಿಂದ ಯುಎಇ ನಲ್ಲಿ ನೆಲೆಸಿರುವ ಕುಂದಗನ್ನಡಿಗರಿಗಾಗಿ ವಿಹಾರ ಕೂಟ ಮತ್ತು ಗ್ರಾಮೀಣ ಆಟೋಟ ಸ್ಪರ್ದೆಗಳು...

ಕಂದಾಯೋತ್ಸವ 2025 : ಕಂದಾಯ ಇಲಾಖೆಯ ಸಾಂಸ್ಕೃತಿಕ – ಕ್ರೀಡಾ ಸಂಭ್ರಮ

ಕಂದಾಯೋತ್ಸವ 2025 : ಕಂದಾಯ ಇಲಾಖೆಯ ಸಾಂಸ್ಕೃತಿಕ – ಕ್ರೀಡಾ ಸಂಭ್ರಮ ಶಿವಮೊಗ್ಗ ಜಿಲ್ಲೆಯ ಕಂದಾಯ ಇಲಾಖೆಯ ವತಿಯಿಂದ **ಕಂದಾಯೋತ್ಸವ – 2025** ನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ....

Must read

- Advertisement -spot_imgspot_img

You might also likeRELATED
Recommended to you