7.7 C
London
Saturday, April 20, 2024
HomeUncategorizedಶ್ರೀಲಂಕಾದ ಈ ಸ್ಪೋಟಕ ಆಟಗಾರನ ಕಾಲಿನ‌ ಗಂಭೀರ ಕಾಯಿಲೆಯನ್ನು ಗುಣಪಡಿಸಿದ ಮುಂಬಯಿ ವೈದ್ಯ.

ಶ್ರೀಲಂಕಾದ ಈ ಸ್ಪೋಟಕ ಆಟಗಾರನ ಕಾಲಿನ‌ ಗಂಭೀರ ಕಾಯಿಲೆಯನ್ನು ಗುಣಪಡಿಸಿದ ಮುಂಬಯಿ ವೈದ್ಯ.

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಅವರ ಸೊಂಟ ಮತ್ತು ಕಾಲುಗಳಲ್ಲಿ   ಇದ್ದ ಕೆಲವು ಗಂಭೀರ ಕಾಯಿಲೆಗಳಿಂದ ಹಾಸಿಗೆ ಹಿಡಿದಿದ್ದರು, ಅವರು ಸ್ವಲ್ಪ ನಡೆಯಬೇಕಾದರೆ ಸ್ಟ್ಯಾಂಡ್ ಅನ್ನು ಆಶ್ರಯಿಸುತ್ತಿದ್ದರು.  ಜಯಸೂರ್ಯ ಅವರಿಗೆ ಆಸ್ಟ್ರೇಲಿಯಾದಲ್ಲಿ (ಮೆಲ್ಬೋರ್ನ್) ಮಾತ್ರವಲ್ಲದೆ ಶ್ರೀಲಂಕಾದ ಕೊಲಂಬೊದ ನವಲೋಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ ಅವರಿಗೆ ಎಲ್ಲಿಯೂ ಪರಿಹಾರ ಸಿಗಲಿಲ್ಲ.
ಜಯಸೂರ್ಯ ಅವರ ಈ ಸ್ಥಿತಿಯನ್ನು ನೋಡಿ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮೊ. ಅಜರುದ್ದೀನ್  ಆಯುರ್ವೇದ ಗಿಡಮೂಲಿಕೆಗಳಿಂದ ಚಿಕಿತ್ಸೆ ನೀಡುವ ಡಾ.ಪ್ರಕಾಶ್ ಟಾಟಾ ಅವರಿಂದ  ಚಿಕಿತ್ಸೆ ತೆಗೆದುಕೊಳ್ಳುವಂತೆ  ಸಲಹೆ ನೀಡಿದರು.  ಅಜರುದ್ದೀನ್‌ ಸಲಹೆ ಮೇರೆಗೆ ಜಯಸೂರ್ಯ ಮುಂಬೈಗೆ ಬಂದು ಡಾ. ಟಾಟಾ ಅವರ ನಿವಾಸಕ್ಕೆ ತೆರಳಿ ಅವರ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದರು, ನಂತರ ಡಾ. ಟಾಟಾ ಜಯಸೂರ್ಯರನ್ನು ಪರೀಕ್ಷಿಸಿ ಅವರನ್ನು ಗುಣಪಡಿಸುವ ಭರವಸೆ ನೀಡಿದರು.
ಈ ಕಾಯಿಲೆಯಿಂದ ಹೊರಬರಲು ಜಯಸೂರ್ಯ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾದಲ್ಲಿ ಚಿಕಿತ್ಸೆ ಪಡೆದಿದ್ದಾರೆ ಅಂತ ಡಾ. ಟಾಟಾ ಅವರಿಗೆ ಚೆನ್ನಾಗಿ ತಿಳಿದಿತ್ತು. ಜಯಸೂರ್ಯ ಅವರನ್ನ ವಾಪಸ್ ಶ್ರೀಲಂಕಾಗೆ ಕಳುಹಿಸಿ ಇನ್ನೊಬ್ಬ ವೈದ್ಯ ಮಾಕನ್ ವಿಶ್ವಕರ್ಮ ಅವರೊಟ್ಟಿಗೆ ಒಂದು ವಾರ  ಪಾತಾಳ್ಕೊಟ್ ನ ದಟ್ಟವಾದ ಕಾಡಿನಲ್ಲಿ ಒಂದು ವಾರ ಅಲೆದು ಗಿಡಮೂಲಿಕೆಗಳನ್ನು ಸಂಗ್ರಹಿಸಿ ಅದನ್ನು ಚಿಂದ್ವಾಡ ಕ್ಕೆ ತಂದು ಔಷಧವನ್ನು ತಯಾರಿಸಿದರು.
ಚಿಂದ್ವಾಡಾ ದಿಂದ 78 ಕಿ ಮಿ ದೂರ ಇರುವ ಪಾತಾಳ್ಕೊಟ್ ನ ಕಾಡು ಗಿಡಮೂಲಿಕೆಗಳನ್ನು ತುಂಬಿದೆ. ಅಪರೂಪದ ಗಿಡಮೂಲಿಕೆಗಳ  ಭಂಡಾರವೇ ಈ ಕಾದಲ್ಲಿ ಇದೆ ಅಂತ ಹೇಳಲಾಗುತ್ತದೆ. ಒಟ್ಟಾರೆ 89 ಚದರ ಕಿಮೀ ವ್ಯಾಪ್ತಿಯಲ್ಲಿರುವ ಈ ಕಣಿವೆ 1700 ಅಡಿ ಆಳದಲ್ಲಿದೆ.ಇಲ್ಲಿ ಸೂರ್ಯನ ಕಿರಣ ತಲುಪೋದು ಮಧ್ಯಾಹ್ನ 12 ಗಂಟೆಗೆ ಮಾತ್ರ.ಇಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರು ಗಿಡಮೂಲಿಕೆಗಳನ್ನು ಉಪಯೋಗಿಸಿ ಬೇರೆ ಕಡೆ ಗುಣಪಡಿಸಲಾಗದ ರೋಗವನ್ನೆಲ್ಲ ವಾಸಿ ಮಾಡ್ತಾರೆ ಅಂತಾನೂ ಹೇಳ್ತಾರೆ.
 ಗಿಡಮೂಲಿಕೆ ಸಂಗ್ರಹಿಸಿದ ನಂತರ, ಡಾ.ಪ್ರಕಾಶ್ ಟಾಟಾ ಸಹೋದ್ಯೋಗಿ ಜೈ ಹೋ ಫೌಂಡೇಶನ್ ಅಧ್ಯಕ್ಷ ತರುಣ್ ತಿವಾರಿ ಅವರೊಂದಿಗೆ ಶ್ರೀಲಂಕಾಕ್ಕೆ ತೆರಳಿದರು.  ಶ್ರೀಲಂಕಾ ತಲುಪಿದ ನಂತರ, ಜಯಸೂರ್ಯ ಅವರಿಗೆ ಚಿಕಿತ್ಸೆಯನ್ನು ಪ್ರಾರಂಭಿಸಿ ಕೇವಲ 72 ಗಂಟೆಗಳನ್ನು ತೆಗೆದುಕೊಂಡು ಜಯಸೂರ್ಯನನ್ನು ಅವರ ಕಾಲ ಮೇಲೆ ಅವರು ನಿಲ್ಲುವಂತೆ ಮಾಡ್ತಾರೆ.
 ಮೆಲ್ಬೋರ್ನ್‌ ಹಾಗೂ ನವಲೋಕ್ ಆಸ್ಪತ್ರೆಯಲ್ಲಿ ಆಧುನಿಕ ವಿಜ್ಞಾನ ಮಾಡಲಾಗದ ಕೆಲಸವನ್ನು  ಭಾರತದ ಆಯುರ್ವೇದ  ಮಾಡಿ ಮುಗಿಸಿದೆ!
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

14 − fourteen =