17.3 C
London
Monday, May 13, 2024
Homeಕ್ರಿಕೆಟ್ವಿಪಿಎಲ್‌ಗೆ ವೇದಿಕೆ ಸಜ್ಜು:ಮೂಲ್ಕಿಯಲ್ಲಿ ಜಿಎಸ್‌ಬಿ ಟೂರ್ನಿ

ವಿಪಿಎಲ್‌ಗೆ ವೇದಿಕೆ ಸಜ್ಜು:ಮೂಲ್ಕಿಯಲ್ಲಿ ಜಿಎಸ್‌ಬಿ ಟೂರ್ನಿ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಮೂಲ್ಕಿ: ಬಹು ನಿರೀಕ್ಷೆಯ ವಿಪಿಎಲ್‌ ಪಂದ್ಯಾವಳಿಗೆ ವೇದಿಕೆ ಸಜ್ಜಾಗಿದೆ.ಈ ಪಂದ್ಯಾವಳಿಯಲ್ಲಿ 12 ತಂಡಗಳು ಪಾಲ್ಗೊಳ್ಳಲಿವೆ. ಇದು ಹಗಲು ಮತ್ತು ರಾತ್ರಿಯ ಪಂದ್ಯಾಟವಾಗಿ ಸಾಗಿ ಬರಲಿದ್ದು ಎರಡು ದಿನಗಳ ಕಾಲ ಮೂಲ್ಕಿಯಲ್ಲಿ ಜಿಎಸ್‌ಬಿ
ಸಮಾಜದ ಕ್ರಿಕೆಟಿಗರು ಅಬ್ಬರಿಸಲಿದ್ದಾರೆ.
 *ಟೂರ್ನಿ ಸ್ವರೂಪ:* 
ಪಂದ್ಯಗಳು ಡಿಸೆಂಬರ್​ 9ರಿಂದ 10ರವರೆಗೆ  ವಿಜಯ ಕಾಲೇಜು ಮೈದಾನದಲ್ಲಿ  ನಡೆಯಲಿವೆ.ಲೀಗ್‌ ಪಂದ್ಯಗಳನ್ನು ತಲಾ ಆರು ಓವರ್ ಗಳಂತೆ ನಡೆಸುವ ಯೋಜನೆ ಇದೆ. ಟೂರ್ನಿಯಲ್ಲಿ ಆಡುವ 12 ತಂಡಗಳನ್ನು 3 ಗುಂಪುಗಳಲ್ಲಿ ವಿಭಾಗಿಸಲಾಗಿದೆ. ಎ, ಬಿ, ಸಿ ಗುಂಪಿನಲ್ಲಿ ತಲಾ 4  ತಂಡಗಳಿವೆ. ಪ್ರತಿ ಗುಂಪಿನ ಅಗ್ರ 2 ತಂಡಗಳು
ಎರಡನೇಯ ಲೀಗ್ ಹಂತಕ್ಕೇರಲಿವೆ. ಅದಾದ ಬಳಿಕ ಕ್ವಾಲಿಫೈಯರ್, ಎಲಿಮಿನೇಟರ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.
ಶನಿವಾರ ಡಿ.9ರಂದು ಬೆಳಿಗ್ಗೆ 9:00ಗೆ ಪ್ರಥಮ ಪಂದ್ಯ ಪ್ರಾರಂಭವಾಗಿ ರಾತ್ರಿ 12:30 ಗಂಟೆಯ ವರೆಗೆ ಮೊದಲ ದಿನದ ಪಂದ್ಯಗಳು ನಡೆಯಲಿವೆ.ಮರುದಿನ ಭಾನುವಾರ ದಿನಾಂಕ 10ರಂದು ರಾತ್ರಿ 8:30ಗೆ ಫೈನಲ್ ಪಂದ್ಯ ನಡೆಯಲಿದೆ.ಅದಾದ ಬಳಿಕ ಅದ್ದೂರಿಯ ಸಮಾರೋಪ ಸಮಾರಂಭವು ಕೂಡ ನಡೆಯಲಿದೆ. ಅಸಂಖ್ಯಾತ ಕ್ರೀಡಾಭಿಮಾನಿಗಳು ಈ  ಪಂದ್ಯಾಕೂಟವನ್ನು ಕಣ್ತುಂಬಿಸಿಕೊಳ್ಳಲಿದ್ದಾರೆ.
ಇತ್ತೀಚಿಗೆ ಸ್ಪೋರ್ಟ್ಸ್ ಕನ್ನಡ ಆಯೋಜಕರ ಜೊತೆ ನಡೆಸಿದ ಸಂದರ್ಶನದಲ್ಲಿ ಒಳಲಂಕೆ ಸ್ಪೋರ್ಟ್ಸ್ ಅಂಡ್ ಕಲ್ಚರಲ್ ಅಸೋಸಿಯೇಷನ್ ಪದಾಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.
ಈ ಪಂದ್ಯಾವಳಿಯಲ್ಲಿ ರಾಜ್ಯದ ಅನುಭವಿ ನಿರ್ಣಾಯಕರು ಮತ್ತು ಹೆಸರಾಂತ ವೀಕ್ಷಕ ವಿವರಣೆಗಾರರು ಕೂಡ ಭಾಗವಹಿಸಿ ಟೂರ್ನಿಯ ಮೆರುಗನ್ನು ಹೆಚ್ಚಿಸಲಿದ್ದಾರೆ ಎಂದು ಸ್ಪೋರ್ಟ್ಸ್ ಕನ್ನಡದ ವರದಿಗಾರರಾದ ಸುರೇಶ್ ಭಟ್ ಮೂಲ್ಕಿ ತಿಳಿಸಿದ್ದಾರೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

two × two =