ಕ್ರಿಕೆಟ್ಉದ್ಯಾನನಗರಿ ಬೆಂಗಳೂರಿನಲ್ಲಿ, ಮಳೆಗಾಲದಲ್ಲೊಂದು ವಿಶೇಷ ಪಂದ್ಯಾಕೂಟ "ಮಾನ್ಸೂನ್ ರೈನಿ ಕಪ್-2019"

ಉದ್ಯಾನನಗರಿ ಬೆಂಗಳೂರಿನಲ್ಲಿ, ಮಳೆಗಾಲದಲ್ಲೊಂದು ವಿಶೇಷ ಪಂದ್ಯಾಕೂಟ “ಮಾನ್ಸೂನ್ ರೈನಿ ಕಪ್-2019”

-

- Advertisment -spot_img

ಟೆನ್ನಿಸ್ ಕ್ರಿಕೆಟ್ ನಲ್ಲಿ ವಿನೂತನ ಪ್ರಯೋಗಗಳನ್ನು ಹಲವಾರು ಸಂಸ್ಥೆಗಳು ದಶಕಗಳಿಂದ ನಡೆಸಿಕೊಂಡು ಬಂದಿರುತ್ತದೆ. ಇತ್ತೀಚಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಯುವ ಪ್ರತಿಭೆಗಳ ಅನ್ವೇಷಣೆಗೆ ಪ್ರಿಮಿಯರ್ ಲೀಗ್ ಪಂದ್ಯಾಕೂಟಗಳು ಕಳೆದ ಋತುವಿನಿಂದ ಯಥೇಚ್ಛವಾಗಿ ನಡೆದರೆ,ರಾಜ್ಯ, ರಾಷ್ಟ್ರ ಮಟ್ಟದ ಪಂದ್ಯಾಕೂಟಗಳು ಮಳೆಗಾಲದ ಪ್ರಾರಂಭದವರೆಗೆ ಹಲವೆಡೆ ನಡೆಸಿದ್ದರು.

ಟೆನ್ನಿಸ್ ಕ್ರಿಕೆಟ್ ಇನ್ನಷ್ಟು ಹೊಸತನ ನೀಡುವ ಸಲುವಾಗಿ,ಬೆಂಗಳೂರಿನ ಹಿರಿಯ ತಂಡ ಜೈ ಕರ್ನಾಟಕದ ಮಾಸ್ಟರ್ ಮೈಂಡ್ ಸಚಿನ್ ಮಹಾದೇವ್ ಮಾಲೀಕತ್ವದ M.SPORTS ಹಾಗೂ ಫ್ರೆಂಡ್ಸ್ ಬೆಂಗಳೂರು ತಂಡದ ಡ್ಯಾಶಿಂಗ್ ಆಲ್ ರೌಂಡರ್ ಸಾಗರ್ ಭಂಡಾರಿ ಮಾಲೀಕತ್ವದ SRB ಸ್ಪೋರ್ಟ್ಸ್ ಸಂಸ್ಥೆ ಪ್ರಾಯೋಜಕತ್ವ ಹಾಗೂ ರಾಜ್ಯದ ಟೆನ್ನಿಸ್ ಕ್ರಿಕೆಟ್ ನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಶ್ರಮಿಸುತ್ತಿರುವ ಆರ್.ಕೆ‌.ಆಚಾರ್ಯ ನೇತೃತ್ವದ ” ಸ್ಪೋರ್ಟ್ಸ್ ಕನ್ನಡ” ಸಹಭಾಗಿತ್ವದಲ್ಲಿ ಸೆಪ್ಟೆಂಬರ್ 21,22 ರಂದು ಬೆಂಗಳೂರಿನ ಮತ್ತಿಕೆರೆ ಜೆ.ಪಿ.ಪಾರ್ಕ್ ಅಂಗಣದ ಸಿಮೆಂಟ್ ಪಿಚ್ ನಲ್ಲಿ ಮಾನ್ಸೂನ್ ರೈನಿ ಕಪ್ ನಡೆಯಲಿದೆ.

ವಿಜೇತ ತಂಡವು 30,000 ನಗದು,ರನ್ನರ್ಸ್ ತಂಡ 15,000 ನಗದು ಸಹಿತ ಆಕರ್ಷಕ ಟ್ರೋಫಿ,ಇನ್ನಿತರ ವೈಯಕ್ತಿಕ ಪ್ರಶಸ್ತಿಗಳು ಆಟಗಾರರನ್ನು ಹುರಿದುಂಬಿಸಲಿದೆ.

ಪ್ರತಿಪಂದ್ಯವು 5 ಓವರ್ ಗಳಲ್ಲಿ ವಿಲ್ಸನ್ ಚೆಂಡಿನಲ್ಲಿ ನಡೆಯಲಿದೆ. ಪಂದ್ಯಾಕೂಟದ ನೇರ ಪ್ರಸಾರ ಹಾಗೂ ಲೈವ್ ಸ್ಕೋರ್ ನ್ನು M.Sports ಯೂ ಟ್ಯೂಬ್ ಚಾನೆಲ್ ಬಿತ್ತರಿಸಲಿದೆ.

ವಿಶೇಷ ಸೂಚನೆ: ಪಂದ್ಯಾಕೂಟದ ಸಂಘಟಕರು ಸ್ಲೀವ್ಲೆಸ್ ಮಾತ್ರ ನೀಡಲಿದ್ದು, ಭಾಗವಹಿಸುವ ಆಟಗಾರು ಕಡ್ಡಾಯವಾಗಿ ಜೆರ್ಸಿ ರೂಪದಲ್ಲಿ ಸ್ಲೀವ್ಲೆಸ್ ಟಿ ಶರ್ಟ್ ಹಾಗು ಸ್ಪೋರ್ಟ್ಸ್ ಶಾರ್ಟ್ಸ್ ಧರಿಸಿ‌‌ ಆಡಬೇಕಾಗಿದೆ. ಈಗಾಗಲೇ 20 ತಂಡಗಳು ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದು,
ಪ್ರವೇಶಾತಿ ಪ್ರಕ್ರಿಯೆ ಮುಗಿದಿರುತ್ತದೆ.

ಆರ್.ಕೆ‌.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

thirteen − 12 =

Latest news

ಉಬರ್ ಚಾಲಕನಿಂದ ವಿಶ್ವಕಪ್ ಕನಸಿನವರೆಗೆ: ಜಸ್ಪ್ರೀತ್ ಸಿಂಗ್ ಕಥೆ

ಉಬರ್ ಚಾಲಕನಿಂದ ವಿಶ್ವಕಪ್ ಕನಸಿನವರೆಗೆ: ಜಸ್ಪ್ರೀತ್ ಸಿಂಗ್ ಕಥೆ ಪಂಜಾಬ್‌ನ ಸಣ್ಣ ಪಟ್ಟಣದಿಂದ ಆರಂಭವಾದ ಯುವ ಕ್ರಿಕೆಟಿಗ ಜಸ್ಪ್ರೀತ್ ಸಿಂಗ್ ಅವರ ಜೀವನಯಾನ ಇಂದು ಸಾವಿರಾರು ಯುವ...

ಕೊಲ್ನಾಡ್ ನಲ್ಲಿ LK ಕ್ರಿಕೆಟ್ ಪ್ರೀಮಿಯರ್ ಲೀಗ್ – ಸೀಸನ್ 2

ಕೊಲ್ನಾಡ್ ನಲ್ಲಿ LK ಕ್ರಿಕೆಟ್ ಪ್ರೀಮಿಯರ್ ಲೀಗ್  2026– ಸೀಸನ್ 2 ಕೊಲ್ನಾಡ್ ಮೈದಾನದಲ್ಲಿ ಫೆಬ್ರವರಿ 14 ಮತ್ತು 15ರಂದು LK ಕ್ರಿಕೆಟ್ ಪ್ರೀಮಿಯರ್ ಲೀಗ್ –...

ಮುಂಬೈ ನೆಲದಲ್ಲಿ ಕರ್ನಾಟಕದ ಐತಿಹಾಸಿಕ ವಿಜಯ

ಮುಂಬೈ ನೆಲದಲ್ಲಿ ಕರ್ನಾಟಕದ ಐತಿಹಾಸಿಕ ವಿಜಯ ರಣಜಿ ಟ್ರೋಫಿ ಕ್ರಿಕೆಟ್ ಎಂದರೆ ಮುಂಬೈಗೆ ಪ್ರತಿಷ್ಠೆಯ ಪ್ರಶ್ನೆ. 42 ಬಾರಿ ಚಾಂಪಿಯನ್ ಆಗಿರುವ ತಂಡದ ಎದುರು ಅವರದ್ದೇ ಮೈದಾನದಲ್ಲಿ...

ಟಿ20 ವಿಶ್ವಕಪ್‌ಗೆ ಭಾರತಕ್ಕೆ ಭರ್ಜರಿ ಆರಂಭ: ಅಮೆರಿಕ ವಿರುದ್ಧ 29 ರನ್ ಜಯ

ಟಿ20 ವಿಶ್ವಕಪ್‌ಗೆ ಭಾರತಕ್ಕೆ ಭರ್ಜರಿ ಆರಂಭ: ಅಮೆರಿಕ ವಿರುದ್ಧ 29 ರನ್ ಜಯ 2026ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ತನ್ನ ಗೆಲುವಿನ ಅಭಿಯಾನವನ್ನು ಭರ್ಜರಿಯಾಗಿ ಆರಂಭಿಸಿದೆ....
- Advertisement -spot_imgspot_img

ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾ ಆಯೋಜನೆಯ MIDMAC ಟ್ರೋಫಿ ಸೀಸನ್–2 ಫೈನಲ್‌ನಲ್ಲಿ ಭಟ್ಕಲ್ ಫ್ರೆಂಡ್ಸ್ ಭರ್ಜರಿ ಜಯ; ನಿಹಾಲ್ XI ಮೇಲೆ 50 ರನ್‌ಗಳ ಗೆಲುವು

ಕರಾವಳಿ ಸ್ಪೋರ್ಟ್ಸ್ ಕ್ಲಬ್, ಕುಮಟಾ ಆಯೋಜನೆಯ MIDMAC ಟ್ರೋಫಿ ಸೀಸನ್–2 ಫೈನಲ್‌ನಲ್ಲಿ ಭಟ್ಕಲ್ ಫ್ರೆಂಡ್ಸ್ ಭರ್ಜರಿ ಜಯ; ನಿಹಾಲ್ XI ಮೇಲೆ 50 ರನ್‌ಗಳ ಗೆಲುವು ಕರಾವಳಿ...

ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕುಮಟಾ ಅರ್ಪಿಸುವ MIDMAC TROPHY SEASON-2 ಸೆಮಿಫೈನಲ್ ಪಂದ್ಯಗಳಲ್ಲಿ ಭಟ್ಕಲ್ ಫ್ರೆಂಡ್ಸ್ ಹಾಗೂ ನಿಹಾಲ್ XI ಗೆ ಜಯ

ಕರಾವಳಿ ಸ್ಪೋರ್ಟ್ಸ್ ಕ್ಲಬ್ ಕುಮಟಾ ಅರ್ಪಿಸುವ MIDMAC TROPHY SEASON-2 ಸೆಮಿಫೈನಲ್ ಪಂದ್ಯಗಳಲ್ಲಿ ಭಟ್ಕಲ್ ಫ್ರೆಂಡ್ಸ್ ಹಾಗೂ ನಿಹಾಲ್ XI ಗೆ ಜಯ (Sports Kannada Live...

Must read

- Advertisement -spot_imgspot_img

You might also likeRELATED
Recommended to you