10 C
London
Tuesday, April 23, 2024
Homeಕ್ರಿಕೆಟ್ಎಮ್.ಎನ್ ಕಪ್-2022 ಮಿಂಚಿದ ನಿತಿನ್.ಮುಲ್ಕಿ, ಇಬ್ರಾಹಿಂ ಆತ್ರಾಡಿ-ಸಿಟಿ ಕ್ರಿಕೆಟ್ ಕ್ಲಬ್ ತೀರ್ಥಹಳ್ಳಿಗೆ ಪ್ರಶಸ್ತಿ

ಎಮ್.ಎನ್ ಕಪ್-2022 ಮಿಂಚಿದ ನಿತಿನ್.ಮುಲ್ಕಿ, ಇಬ್ರಾಹಿಂ ಆತ್ರಾಡಿ-ಸಿಟಿ ಕ್ರಿಕೆಟ್ ಕ್ಲಬ್ ತೀರ್ಥಹಳ್ಳಿಗೆ ಪ್ರಶಸ್ತಿ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಬೆಂಗಳೂರು-ಎಮ್.ಎನ್‌.ಗ್ರೂಪ್ಸ್ ಬೆಂಗಳೂರು ಇವರ ಆಶ್ರಯದಲ್ಲಿ ಬೆಂಗಳೂರಿನ ಅಶೋಕ ಇಂಟರ್ನ್ಯಾಷನಲ್ ಸ್ಕೂಲ್ ಮೈದಾನದಲ್ಲಿ ಹೊನಲು ಬೆಳಕಿನಲ್ಲಿ ನಡೆದ 40ರ ವಯೋಮಿತಿ ಯ  ಎಮ್.ಎನ್.ಕಪ್-2022-ಟಿ-20 ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಟದಲ್ಲಿ ನಿತಿನ್.ಜಿ.ಮುಲ್ಕಿ  ಬೆಸ್ಟ್ ಬ್ಯಾಟರ್ ಗೌರವಕ್ಕೆ ಭಾಜನರಾದರು.
ಸಿಟಿ ಕ್ರಿಕೆಟ್ ಕ್ಲಬ್ ತೀರ್ಥಹಳ್ಳಿ ತಂಡದ ಪರವಾಗಿ ಆಡಿದ ನಿತಿನ್‌.ಜಿ.ಮುಲ್ಕಿ ತಾನಾಡಿದ ಮೊದಲ ಪಂದ್ಯದಲ್ಲಿ 40 ಎಸೆತಗಳಲ್ಲಿ 94 ರನ್ ಸಿಡಿಸಿದ್ದರು.ಇದರಲ್ಲಿ ಭರ್ಜರಿ 5 ಸಿಕ್ಸರ್ ಮತ್ತು 10 ಬೌಂಡರಿಗಳು ಒಳಗೊಂಡಿತ್ತು.
ದ್ವಿತೀಯ ಪಂದ್ಯದಲ್ಲಿ 38 ಎಸೆತಗಳಲ್ಲಿ 10 ಮನಮೋಹಕ ಬೌಂಡರಿಗಳ ನೆರವಿನಿಂದ 55 ರನ್ ಸಿಡಿಸಿದ್ದರು.ಫೈನಲ್ ನಲ್ಲಿ ಪಿ.ಎಲ್.ಗ್ಲೋಬಲ್ ತಂಡದ ವಿರುದ್ಧ ಜಯಗಳಿಸಿ ಸಿಟಿ ಕ್ರಿಕೆಟ್ ಕ್ಲಬ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
*ಇಬ್ರಾಹಿಂ ಆತ್ರಾಡಿ ಸರ್ವಾಂಗೀಣ ಆಟ*
ಅಬ್ದುಲ್ ಕಲಾಂ ನಾಯಕತ್ವದ ಸಿಟಿ ಕ್ರಿಕೆಟ್ ಕ್ಲಬ್ ನ ಪರವಾಗಿ ನಿತಿನ್ ಮುಲ್ಕಿ,ವಿಶ್ವನಾಥ್,ಪ್ರಶಾಂತ್ ಬ್ರಾಗ್ಸ್ ಮತ್ತು ಉಡುಪಿಯ ಇಬ್ರಾಹಿಂ ಆತ್ರಾಡಿ ಪ್ರತಿನಿಧಿಸಿದ್ದರು.
ಈ ಪೈಕಿ ತನ್ನ ಶ್ರೇಷ್ಠ ಸರ್ವಾಂಗೀಣ ಆಟ ಪ್ರದರ್ಶಿಸಿದ ಇಬ್ರಾಹಿಂ ಆತ್ರಾಡಿ ತಾನಾಡಿದ ಮೊದಲ ಪಂದ್ಯದಲ್ಲಿ
21,ದ್ವಿತೀಯ ಪಂದ್ಯದಲ್ಲಿ 25 ಮತ್ತು ಫೈನಲ್ ನಲ್ಲಿ 60 ರನ್ ಗಳಿಸಿದ್ದರು.ಕೀಪಿಂಗ್ ವಿಭಾಗದಲ್ಲಿ ಅತ್ಯುತ್ತಮ ನಿರ್ವಹಣೆ ನೀಡಿದ ಇಬ್ರಾಹಿಂ ಆತ್ರಾಡಿ ಫೈನಲ್ ನಲ್ಲಿ 3 ಸ್ಟಂಪಿಂಗ್ ನಡೆಸಿದ್ದರು.ಅರ್ಹವಾಗಿಯೇ ಫೈನಲ್ ನ
ಪಂದ್ಯ ಶ್ರೇಷ್ಠ, ಬೆಸ್ಟ್ ಫೀಲ್ಡರ್ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

twelve + eight =