10.4 C
London
Saturday, May 4, 2024
Homeಕ್ರಿಕೆಟ್ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್ (ರಿ) ಉಳ್ಳಾಲ‌ ಆಶ್ರಯದಲ್ಲಿ ಅಗಲಿದ ಹಿರಿಯ ಆಟಗಾರರ...

ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್ (ರಿ) ಉಳ್ಳಾಲ‌ ಆಶ್ರಯದಲ್ಲಿ ಅಗಲಿದ ಹಿರಿಯ ಆಟಗಾರರ ಸ್ಮರಣಾರ್ಥ ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಂದ್ಯಾಟ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಉಳ್ಳಾಲ-ಮಾರುತಿ ಯುವಕ ಮಂಡಲ(ರಿ) ಮತ್ತು ಮಾರುತಿ ಕ್ರಿಕೆಟರ್ಸ್(ರಿ) ಮೊಗವೀರ ಪಟ್ಣ ಉಳ್ಳಾಲ ಇವರ ಆಶ್ರಯದಲ್ಲಿ ಅಗಲಿದ ಹಿರಿಯ ಆಟಗಾರರು ಮತ್ತು ಕ್ರೀಡಾಪ್ರೋತ್ಸಾಹಕರಾದ ಸಾಹುಕಾರ್ ರಂಗಪ್ಪ ಬೆಂಗಳೂರು,ಶರತ್ ತಿಂಗಳಾಯ,ಅಶ್ವತ್ಥ್ ಪುತ್ರನ್ ಮತ್ತು ವಿನೋದ್ ಬೆಂಗ್ರೆ ಇವರ ಸ್ಮರಣಾರ್ಥ,ಮಂಗಳೂರಿನ ನೆಹರೂ ಮೈದಾನದಲ್ಲಿ ಫೆಬ್ರವರಿ 15 ರಿಂದ 19 ರ ತನಕ 5 ದಿನಗಳ‌ ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ “ಮಾರುತಿ ಟ್ರೋಫಿ-2023” ಆಯೋಜಿಸಲಾಗಿದೆ.
*ಮೊಗವೀರ ಟ್ರೋಫಿ-2023(ಮೊಗವೀರ ಸಮಾಜ ಬಾಂಧವರಿಗಾಗಿ)*
ಫೆಬ್ರವರಿ 15 ಮತ್ತು 16 ರಂದು ಮೊಗವೀರ ಸಮಾಜ ಬಾಂಧವರಿಗಾಗಿ ನೆಹರೂ ಮೈದಾನದಲ್ಲಿ ಮೊಗವೀರ ಟ್ರೋಫಿ ಆಯೋಜಿಸಲಾಗಿದೆ.
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ನಡೆಯಲಿರುವ ಈ ಪಂದ್ಯಾಟದ ಪ್ರಥಮ‌ ಪ್ರಶಸ್ತಿ  2 ಲಕ್ಷ ನಗದು ಹಾಗೂ ದ್ವಿತೀಯ ಪ್ರಶಸ್ತಿ 1 ಲಕ್ಷ ನಗದು ಬಹುಮಾನದೊಂದಿಗೆ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ ಹಾಗೂ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶನ ನೀಡಿದ ಆಟಗಾರ ವಿಶೇಷ ಉಡುಗೊರೆಗಳನ್ನು ಪಡೆಯಲಿದ್ದಾರೆ.
*ಮಾರುತಿ ಟ್ರೋಫಿ-2023(ರಾಷ್ಟ್ರೀಯ ಮಟ್ಟದ ಪಂದ್ಯಾಟ)*
ಫೆಬ್ರವರಿ 17,18 ಮತ್ತು 19 ರಂದು ರಾಷ್ಟ್ರೀಯ ಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟ ಮಂಗಳೂರಿನ ನೆಹರೂ ಮೈದಾನದಲ್ಲಿ ಆಯೋಜಿಸಲಾಗಿದೆ.ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಲಿರುವ ಈ ಪಂದ್ಯಾಟದ ಪ್ರಥಮ ಪ್ರಶಸ್ತಿ 4 ಲಕ್ಷ ನಗದು,ದ್ವಿತೀಯ 2 ಲಕ್ಷ ನಗದು,ಸೆಮಿಫೈನಲ್ ಪರಾಜಿತ ತಂಡಗಳು ತಲಾ 50 ಸಾವಿರ ನಗದು ಸಹಿತ ಆಕರ್ಷಕ ಪಾರಿತೋಷಕಗಳನ್ನು ಪಡೆಯಲಿದ್ದಾರೆ.ಹಾಗೂ ವೈಯಕ್ತಿಕ ಶ್ರೇಷ್ಠ ನಿರ್ವಹಣೆ ಪ್ರದರ್ಶಿಸಿದ ಆಟಗಾರರಿಗೆ ವಿಶೇಷ ಬಹುಮಾನ ಹಾಗೂ ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದ ಆಟಗಾರ ಆಕರ್ಷಕ ದ್ವಿಚಕ್ರ ವಾಹನ ತಮ್ಮದಾಗಿಸಿಕೊಳ್ಳಲಿದ್ದಾರೆ.
*ಕ್ರೀಡೆಯಲ್ಲದೇ ಸಮಾಜಸೇವೆಯ ಸಾರ್ಥಕತೆಯಲ್ಲಿ ಸುಧೀರ್ಘ ಪ್ರಯಾಣ-ಮಾರುತಿ ಯುವಕ ಮಂಡಲ(ರಿ)*
1985 ರಲ್ಲಿ ಸ್ಥಾಪನೆಯಾದ ಮಾರುತಿ ಯುವಕ ಮಂಡಲ(ರಿ)  ಕ್ರೀಡೆಯೊಂದಿಗೆ ಸದ್ದಿಲ್ಲದೇ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಬಂದಿದ್ದು,ದ‌.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಅನೇಕ ಗೌರವಗಳಿಗೆ ಪಾತ್ರವಾಗಿದೆ.ಮಾರುತಿ ಕ್ರಿಕೆಟರ್ಸ್ ಸನ್ಮಾನಗಳ ಹಿಂದೆ ಓಡದೆ ಸೇವೆಗಳ ಸಾರ್ಥಕತೆಯಲ್ಲಿ ಈಗಾಗಲೇ 37 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ.
ಉಳ್ಳಾಲದ ಮೊಗವೀರ ಹಿರಿಯ ಪ್ರಾಥಮಿಕ ಶಾಲೆಗೆ ಮಾರುತಿ ಯುವಕ ಮಂಡಲವು ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಸುಸಜ್ಜಿತವಾದ ಶಾಲಾ ಕಟ್ಟಡವನ್ನು ಗುರುಕಾಣಿಕೆಯಾಗಿ ಅರ್ಪಿಸಿದೆ,ಒಂದು ಯುವಕ ಮಂಡಲವು ಶಿಕ್ಷಣ ಸಂಸ್ಥೆಯೊಂದಕ್ಕೆ ಇಷ್ಟು ಮೊತ್ತದ ಕೊಡುಗೆ ನೀಡಿರುವುದು ಕರ್ನಾಟಕದ ಇತಿಹಾಸದಲ್ಲೇ ಮೊದಲು.2012 ರಲ್ಲಿ ಮಾರುತಿ ಸಂಸ್ಥೆಯ ರಜತ ಮಹೋತ್ಸವ ಸುಸಂದರ್ಭದಲ್ಲಿ ಸಾಂಸ್ಕೃತಿಕ ಕಲರವದೊಂದಿಗೆ ಉಳ್ಳಾಲದಲ್ಲಿ  ಬೀಚ್ ಉತ್ಸವ ಆಚರಿಸಿದ್ದು ಸುಮಾರು ಒಂದು ಲಕ್ಷಕ್ಕೂ‌ ಅಧಿಕ ಮಂದಿ ಉತ್ಸವದಲ್ಲಿ ಪಾಲ್ಗೊಂಡಿದ್ದು ದಾಖಲೆ.
ದೈಹಿಕ-ಮಾನಸಿಕ ಅಸ್ವಸ್ಥರಿಗೆ,ಕ್ಯಾನ್ಸರ್ ನಂತಹ ಗಂಭೀರ ಕಾಯಿಲೆಗೆ ಒಳಗಾದವರಿಗೆ ಜಾತಿ ಮತ ಭೇದವಿಲ್ಲದೆ ಅಗತ್ಯವಾದ ಸಲಕರಣೆ ಮತ್ತು ಆರ್ಥಿಕ ನೆರವನ್ನು ನೀಡಿ ಮಾನವೀಯ ಮೌಲ್ಯದ ಸಂದೇಶವನ್ನು‌ ಸಮಾಜಕ್ಕೆ ನೀಡಿದ್ದಾರೆ.ಇದಲ್ಲದೇ ವರ್ಷಂಪ್ರತಿ ಜಿಲ್ಲಾ,ರಾಜ್ಯ,ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ವಿವಿಧ ಕ್ಷೇತ್ರಗಳ ಸಾಧಕರಿಗೆ ಗೌರವಪೂರ್ವಕವಾಗಿ ಸನ್ಮಾನ ಮತ್ತು ಯೋಧರಿಗೆ ಹೃದಯಸ್ಪರ್ಶಿ ಗೌರವಾರ್ಪಣೆ-ಮಾರುತಿ ಪುರಸ್ಕಾರವನ್ನು ನೀಡುತ್ತಾ ಬಂದಿದ್ದಾರೆ.ಜಿಲ್ಲಾಮಟ್ಟದ ಪ್ರತಿಷ್ಠಿತ ಮಾರುತಿ ಕ್ರಿಕೆಟ್ ಟ್ರೋಫಿ ಪ್ರತಿವರ್ಷವೂ ಆಯೋಜಿಸುತ್ತಿದ್ದು ಜೊತೆಗೆ ಸಾಮಾಜಿಕ ಸೇವಾ ಕಾರ್ಯಗಳಿಗೆ ಲಕ್ಷಾಂತರ ರೂಪಾಯಿಗಳನ್ನು ವಿನಿಯೋಗಿಸಿರುತ್ತಾರೆ.
*ಮಾರುತಿ ಟ್ರೋಫಿ-2023 ಪದಾಧಿಕಾರಿಗಳ ಸಮಗ್ರ ವಿವರ*
ಗೌರವಸಲಹೆಗಾರರಾಗಿ ಉಡುಪಿ-ದ.ಕ  ಮೀನುಗಾರಿಕಾ ಫೆಡರೇಶನ್(ನಿ)ಅಧ್ಯಕ್ಷರಾದ ಯಶ್ಪಾಲ್ ಸುವರ್ಣ,ಟೆನಿಸ್ಬಾಲ್ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷರಾದ ಗೌತಮ್ ಶೆಟ್ಟಿ ಕುಂದಾಪುರ,ಗೌರವಾಧ್ಯಕ್ಷ ಶರತ್ ಶೆಟ್ಟಿ ಪಡುಬಿದ್ರಿ,ಭರತ್ ಕುಮಾರ್ ಉಳ್ಳಾಲ, ಪ್ರವೀಣ್ ಪಿತ್ರೋಡಿ ಮತ್ತು ಪ್ರಶಾಂತ್ ಅಂಬಲಪಾಡಿ ಇವರನ್ನು ನೇಮಿಸಲಾಗಿದೆ.
ಮಾರುತಿ ಟ್ರೋಫಿ-2022 ರ ಗೌರವಾಧ್ಯಕ್ಷರಾಗಿ‌‌ ಸುಧೀರ್.ವಿ.ಅಮೀನ್,ಅಧ್ಯಕ್ಷರಾಗಿ ವರದರಾಜ್ ಬಂಗೇರ,ಉಪಾಧ್ಯಕ್ಷ ಪುಷ್ಪರಾಜ್ ಕೋಟ್ಯಾನ್,ಕಾರ್ಯದರ್ಶಿ ಕಪಿಲ್.ಎಸ್.ಬಂಗೇರ,ಕೋಶಾಧಿಕಾರಿ ಅನಿಲ್ ಚರಣ್,ಕ್ರೀಡಾ ಕಾರ್ಯದರ್ಶಿ ಮಹೇಶ್ ಸಾಲಿಯಾನ್,ಸಹ ಕೋಶಾಧಿಕಾರಿ ಪುನೀತ್ ಬಂಗೇರ ಮತ್ತು ಸಹ ಕಾರ್ಯದರ್ಶಿಯಾಗಿ ಪವನ್ ಬಂಗೇರ ಆಯ್ಕೆ ಮಾಡಲಾಗಿದೆ.
ಪಂದ್ಯಾಟದ ಸಂಚಾಲಕರಾಗಿ ಸಂದೀಪ್ ಪುತ್ರನ್,ದಿನೇಶ್ ಕರ್ಕೇರ,ಹರೀಶ್ ಪುತ್ರನ್,ಕಮಲಾಕ್ಷ ಬಂಗೇರ,ಅಶ್ವಿನ್ ಕೋಟ್ಯಾನ್ ಯಾನ್ ಮತ್ತು ಕಿರಣ್ ಪುತ್ರನ್ ಇವರನ್ನು ನೇಮಿಸಲಾಗಿದೆ.
ಪಂದ್ಯಾಟ ಸಮಿತಿಯ ಸದಸ್ಯರು-ರಘುವೀರ್ ಸಾಲ್ಯಾನ್,ಚನ್ನಪ್ಪ ಅಮೀನ್,ಲೋಕನಾಥ್ ಕೋಟ್ಯಾನ್,ಅಮರನಾಥ್ ಪುತ್ರನ್,ವಾಸುದೇವ್,ಅಜಿತ್ ಮುನ್ನ,ಪ್ರಕಾಶ್,ಸುಧೀರ್ ಸುವರ್ಣ,ಗಣರಾಜ್ ಕೋಟ್ಯಾನ್,ರೂಪೇಶ್ ಸಾಲ್ಯಾನ್,ಮನೋಹರ್,ಪ್ರಶಾಂತ್ ಬಂಗೇರ,ತಿಲಕ್ ಬಂಗೇರ,ಸುಧೀರ್ ಕೋಟ್ಯಾನ್,ವರುಣ್ ಪುತ್ರನ್ ಮತ್ತು ರಂಜಿತ್ ಪುತ್ರನ್.
ಪಂದ್ಯಾಟದ ನೇರ ಪ್ರಸಾರ M9 ಸ್ಪೋರ್ಟ್ಸ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿತ್ತರಗೊಳ್ಳಲಿದ್ದು,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯನಿರ್ವಹಿಸಲಿದೆ.
ಹೆಚ್ಚಿನ ಮಾಹಿತಿಗಾಗಿ ಸುಧೀರ್.ವಿ.ಅಮೀನ್-9731733141,ವರದರಾಜ್-7899752454 ಮತ್ತು ಮಹೇಶ್ 9632628562 ಈ ನಂಬರ್ ಗಳನ್ನು ಸಂಪರ್ಕಿಸಬಹುದು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

3 × two =