Categories
#covid19

ಅಶಕ್ತ ಬಡಕುಟುಂಬಗಳಿಗೆ ಮಾರುತಿ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಆರ್ಥಿಕ ನೆರವು.

ಕಡು ಬಡವರಿಗೆ, ಕಡು ಬಡತನದ ಕುಟುಂಬಗಳಿಗೆ ತಮ್ಮ ಕೈಲಾದ ನೆರವುಗಳನ್ನು ನೀಡಬೇಕು ಅನ್ನುವ ನಿಟ್ಟಿನಲ್ಲಿ “ಮುಕ್ಕ ಮಿತ್ರ ಪಟ್ಣ ಮಾರುತಿ ಸ್ಪೋರ್ಟ್ಸ್ ಕ್ಲಬ್” ತಂಡ ಜಾತಿ ಮತಗಳ ಭೇದವಿಲ್ಲದೆ ಸಮಾಜದಲ್ಲಿ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ

ಆ ನಿಟ್ಟಿನಲ್ಲಿ ದೇಶಾದ್ಯಂತ ಕಾಡುತ್ತಿರುವ ಸಮಸ್ಯೆಯಾದ ಕೊರೋನ ವೈರಸ್ ಮಾರಣಾಂತಿಕ ರೋಗದ ಲಾಕ್ ಡೌನ್ ಆಗಿರುವ ಈ ಸಂದರ್ಭದಲ್ಲಿ ಇದಕ್ಕೆ ಪೂರಕವಾಗಿ ಆರ್ಥಿಕವಾಗಿ ಅಶಕ್ತರಾಗಿರುವ ಕುಟುಂಬಗಳಿಗೆ ಅಗತ್ಯ ಆಹಾರಗಳ ನೆರವು ನೀಡಲು ಮುಂದೆ ಬಂದಿದ್ದು ದಿನಾಂಕ 2-4-2020 ರಂದು ಮುಕ್ಕ ಮಿತ್ರ ಪಟ್ಣ ಪರಿಸರದ ವ್ಯಾಪ್ತಿಯಲ್ಲಿ 10 ಅಶಕ್ತ ಕುಟುಂಬಗಳನ್ನು ಗುರುತಿಸಿ ದೈನಂದಿನ ಬಳಕೆಗೆ ಅಗತ್ಯವಿರುವ ಸಾಮಗ್ರಿಗಳಾದ 25 ಕಿಲೋ ಅಕ್ಕಿ, ತೆಂಗಿನಕಾಯಿ, ಸಕ್ಕರೆ ಇತ್ಯಾದಿ ವಸ್ತುಗಳನ್ನು ಕ್ಲಬ್ ವತಿಯಿಂದ ನೀಡಲಾಯಿತು.

ಈ ಸಂದರ್ಭದಲ್ಲಿ ಕ್ಲಬ್ ನ ಸಲಹೆಗಾರರಾದ ಪುರುಷೋತ್ತಮ ದೇವಾಡಿಗ, ಸದಸ್ಯರಾದ ಯಶವಂತ ಕುಂದರ್, ಕಿಶೋರ್ ಕರ್ಕೇರ, ಶೈಲೇಶ್ ಸುವರ್ಣ, ಸಂದೀಪ್ ಕುಂದರ್, ರಾಜೇಶ್ ಕುಂದರ್, ಸತೀಶ್ ಕುಂದರ್, ಸತೀಶ್ ಕೋಟ್ಯಾನ್, ಸತೀಶ್ ಬಂಗೇರ, ನವೀನ್ ಶ್ರೀಯಾನ್ , ಅವಿನಾಶ್, ಪ್ರಶಾಂತ್ ಬಂಗೇರ ಉಪಸ್ಥಿತರಿದ್ದರು

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

13 + four =