Categories
ಕ್ರಿಕೆಟ್

ಸಿಂಹಳೀಯರ ವಿರುದ್ಧ ಮೈಸೂರು ಮಹಾರಾಜರ ಸಮರ ಇಂದು ರಾತ್ರಿ

ಬೆಂಗಳೂರು-ಫ್ರೆಂಡ್ಸ್ ಬೆಂಗಳೂರು ಕಪ್-2023 ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಾಟದ ನಾಲ್ಕನೇ ದಿನವಾದ ಇಂದಿನ ಕೊನೆಯ ಪಂದ್ಯ ರಾತ್ರಿ 8 ಗಂಟೆಗೆ ಸೂಪರ್ ಫ್ಯಾಶನ್ ಶ್ರೀಲಂಕಾ ತಂಡ,ಸತತ ಎರಡು ಪಂದ್ಯವನ್ನು ಗೆದ್ದು ಬೀಗಿದ ಸಂಯೋಜಿತ ತಂಡ ಮೈಸೂರು ಇಲೆವೆನ್ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ.
ಶುಕ್ರವಾರ ರಾತ್ರಿ ಆಯೋಜಕರಾದ ಫ್ರೆಂಡ್ಸ್ ಬೆಂಗಳೂರು ತಂಡದ ವಿರುದ್ಧ ನಡೆದ ಪ್ರದರ್ಶನ ಪಂದ್ಯದಲ್ಲಿ ಸೂಪರ್ ಫ್ಯಾಶನ್ ತಂಡ  ಒಂದು ರನ್ ಅಂತರದ ಗೆಲುವು ದಾಖಲಿಸಿತ್ತು.
ಮೊನಚಾದ ಬೌಲಿಂಗ್ ಪಡೆಯನ್ನು ಹೊಂದಿರುವ ಸೂಪರ್ ಫ್ಯಾಶನ್ ಶ್ರೀಲಂಕಾ,ಎರಡು ಪಂದ್ಯಗಳಲ್ಲಿ ಸಂಯೋಜಿತ ಹೋರಾಟದ ಮೂಲಕ ಗೆಲುವು ಸಾಧಿಸಿದ ಮೈಸೂರು ಇಲೆವೆನ್ ವಿರುದ್ಧ ಗೆಲುವು ದಾಖಲಿಸೀತೇ ಕಾದು ನೋಡಬೇಕಾಗಿದೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

5 × five =