2.7 C
London
Thursday, January 23, 2025
Homeಉಡುಪಿ ಜಿಲ್ಲಾ ಟೆನ್ನಿಸ್ಬಾಲ್ ಕ್ರಿಕೆಟ್ಕೋಟೇಶ್ವರ ಪ್ರೀಮಿಯರ್ ಲೀಗ್ ಸೀಸನ್ 11-ಕೊಂಕಣ್ ಎಕ್ಸ್‌ಪ್ರೆಸ್‌ ಚಾಂಪಿಯನ್ಸ್

ಕೋಟೇಶ್ವರ ಪ್ರೀಮಿಯರ್ ಲೀಗ್ ಸೀಸನ್ 11-ಕೊಂಕಣ್ ಎಕ್ಸ್‌ಪ್ರೆಸ್‌ ಚಾಂಪಿಯನ್ಸ್

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ಕೋಟೇಶ್ವರ: ನ್ಯೂ ಫ್ರೆಂಡ್ಸ್ ಕ್ರಿಕೆಟರ್ಸ್ ಕೋಟೇಶ್ವರ ಇವರ ಆಶ್ರಯದಲ್ಲಿ 76 ನೇ ಸ್ವಾತಂತ್ರೋತ್ಸವದ ಪ್ರಯುಕ್ತ  ಲೀಗ್ ಮಾದರಿಯ 60 ಗಜಗಳ ಕೆ.ಪಿ.ಎಲ್ ಸೀಸನ್-11 ಕ್ರಿಕೆಟ್ ಪಂದ್ಯಾಟವನ್ನು ಆಗಸ್ಟ್ 15 ರಂದು ಕೋಟೇಶ್ವರ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿತ್ತು.
ನ್ಯೂ ಫ್ರೆಂಡ್ಸ್ ಕ್ರಿಕೆಟರ್ಸ್ ಕೋಟೇಶ್ವರ ಇದರ ಸದಸ್ಯರುಗಳ ಸಮರ್ಥ ಮಾರ್ಗದರ್ಶನದಲ್ಲಿ ಪಂದ್ಯಾವಳಿ ಯಶಸ್ವಿಯಾಯಿತು. ಎಲ್ಲಾ ತಂಡಗಳು
ಅತ್ಯಂತ ಉತ್ಸಾಹ ಮತ್ತು ಕ್ರೀಡಾಮನೋಭಾವದಿಂದ ಭಾಗವಹಿಸಿದರು.
ಅಂತಿಮವಾಗಿ ಕೊಂಕಣ್ ಎಕ್ಸ್ ಪ್ರೆಸ್ ಕೋಟೇಶ್ವರ ಮತ್ತು ವಿಜಯ ಕ್ರಿಕೆಟರ್ಸ್ ಕೋಟೇಶ್ವರ ನಡುವೆ ಫೈನಲ್ ಪಂದ್ಯ ನಡೆಯಿತು, ಇದರಲ್ಲಿ ಕೊಂಕಣ್ ಎಕ್ಸ್ ಪ್ರೆಸ್ ಜಯಭೇರಿ ಬಾರಿಸಿ ವಿಜಯಶಾಲಿಯಾಯಿತು.
ಪ್ರಶಸ್ತಿ ವಿಜೇತ ಕೊಂಕಣ ಎಕ್ಸ್ ಪ್ರೆಸ್56789 ರೂ,ರನ್ನರ್ ಅಪ್- ವಿಜಯ್ ಕ್ರಿಕೆಟರ್ಸ್ 43,210 ರೂ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ಫೈನಲ್ ಪಂದ್ಯ ಶ್ರೇಷ್ಠ ಮತ್ತು ಪಂದ್ಯಾಟದ ಅತ್ಯುತ್ತಮ ಬ್ಯಾಟರ್ ಶರತ್ ಉತ್ತಪ್ಪ,ಅತ್ಯುತ್ತಮ ಬೌಲರ್- ಹರೀಶ್ ಪ್ರಗತಿ,ಅತ್ಯುತ್ತಮ ಫೀಲ್ಡರ್- ಸುಕೇಶ್,ನಯಾಜ್ ಸರಣಿ ಪುರುಷೋತ್ತಮ ಗೌರವಕ್ಕೆ ಪಾತ್ರರಾದರು.
 ಸಮಾರೋಪ ಸಮಾರಂಭದಲ್ಲಿ ಕ್ರೀಡಾ ಪ್ರೋತ್ಸಾಹಕರಾದ  ಸುಭಾಸ ಶೆಟ್ಟಿ ಕೋಟೇಶ್ವರ, ಇಮ್ರಾನ್ ಕೋಟೇಶ್ವರ, ಶ್ರೀಧರ್ ನಾಯ್ಕ್, ನರೇಶ್ ಭಟ್. ಸರ್ದಾರ್, ರಂಜನ್ ಮಿಥ್ಯಾಂತಾಯ ಮತ್ತು ರಾಜೇಶ್ ಪ್ರಭು ಉಪಸ್ಥಿತರಿದ್ದರು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಉಪಸ್ಥಿತರಿದ್ದ ಅತಿಥಿಗಳು ಭಾಗವಹಿಸಿದ ಎಲ್ಲಾ ತಂಡಗಳ ಆಟಗಾರರ ಮತ್ತು ಆಯೋಜಕರ ಪ್ರಯತ್ನವನ್ನು ಶ್ಲಾಘಿಸಿದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

12 + 8 =