ಕ್ರಿಕೆಟ್ಕೋಲಾರ-ಟೆನಿಸ್ಬಾಲ್ ಕ್ರಿಕೆಟ್ ದಾಖಲೆಯ ಅತಿ ಗರಿಷ್ಠ ನಗದು ಬಹುಮಾನದ ಕ್ರಿಕೆಟ್ ಪಂದ್ಯಾಟ-...

ಕೋಲಾರ-ಟೆನಿಸ್ಬಾಲ್ ಕ್ರಿಕೆಟ್ ದಾಖಲೆಯ ಅತಿ ಗರಿಷ್ಠ ನಗದು ಬಹುಮಾನದ ಕ್ರಿಕೆಟ್ ಪಂದ್ಯಾಟ- ಈ-ಜೋನ್ ಟ್ರೋಫಿ-2022

-

- Advertisment -spot_img
ಕೋಲಾರ ಅಟ್ಯಾಕರ್ಸ್ ತಂಡವನ್ನು‌ ಬಹಳಷ್ಟು ವರ್ಷಗಳ ಕಾಲ‌ ಯಶಸ್ವಿಯಾಗಿ ಮುನ್ನಡೆಸಿದ್ದ ಆಟಗಾರರು,ಕ್ರೀಡಾ ಪ್ರೋತ್ಸಾಹಕರು ಹಾಗೂ ಈ-ಝೋನ್ ಗ್ರೂಪ್ಸ್ ನ‌ ಮಾಲೀಕರಾದ ಬಿ‌.ಆರ್.ಮಂಜುನಾಥ್ ರೆಡ್ಡಿ(ವಡು) ಇವರ ದಕ್ಷ ಸಾರಥ್ಯದಲ್ಲಿ 2022 ಮಾರ್ಚ್ 11,12 ಮತ್ತು 13 ರಂದು ಹೊನಲು ಬೆಳಕಿನಲ್ಲಿ ಕೋಲಾರದಲ್ಲಿ ಈ-ಝೋನ್ ಟ್ರೋಫಿ-2022 ದಾಖಲೆಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
ಟೂರ್ನಮೆಂಟ್ ನ ಚಾಂಪಿಯನ್ ತಂಡ 5,05,555,ದ್ವಿತೀಯ ಸ್ಥಾನಿ 2,55,555 ನಗದು ಬಹುಮಾನಗಳೊಂದಿಗೆ ಆಕರ್ಷಕ ಪಾರಿತೋಷಕಗಳು ಜೊತೆಗೆ ಪ್ರತಿಯೊಂದು ಪಂದ್ಯದ ಪಂದ್ಯಶ್ರೇಷ್ಟ ಗೌರವದ ರೂಪದಲ್ಲಿ ಅಚ್ಚರಿಯ ಬಹುಮಾನ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಸರ್ಪ್ರೈಸ್ ಆಗಿಯೇ ನೀಡಲಿದ್ದಾರೆ.
ಈ ಹಿಂದೆ 2007 ರಲ್ಲಿ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದು,
ಸ್ಪಾರ್ಕ್ ಉಡುಪಿ ಪ್ರಥಮ ಪ್ರಶಸ್ತಿಯೊಂದಿಗೆ 2 ಲಕ್ಷ ನಗದು ಬಹುಮಾನ ಹಾಗೂ ಹಾಸನಾಂಬಾ ದ್ವಿತೀಯ ಪ್ರಶಸ್ತಿ ರೂಪದಲ್ಲಿ 1 ಲಕ್ಷ ಬಹುಮಾನವನ್ನು ಜಯಿಸಿತ್ತು.ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಿ
ಗೌರವಿಸಿದ್ದರು.
2017 ರಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸಿದ್ದು ಕೋಲಾರದ ಎಲೈಟ್ ತಂಡ ಪ್ರಥಮ ಬಹುಮಾನ ಜಯಿಸಿದ್ದು,ಲಕ್ಷಾಂತರ ನಗದಿನೊಂದಿಗೆ ಕೊನೆಯ ಕ್ಷಣದ  ಅಚ್ಚರಿಯ ಬಹುಮಾನದ ರೂಪದಲ್ಲಿ ವಿಜೇತ ತಂಡದ ನಾಯಕನಿಗೆ R15 ಬೈಕ್ ಹಾಗೂ 11  ಮಂದಿ ಆಟಗಾರರಿಗೆ FZ ಬೈಕ್ ಗಳನ್ನು ನೀಡಿ ದೇಶೀಯ ಕ್ರಿಕೆಟ್ ನಲ್ಲೇ ಪ್ರಪ್ರಥಮ ಬಾರಿಗೆ ದಾಖಲೆ ಬರೆದಿತ್ತು.
ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಈ ಹಿಂದೆ ಸಾಂಗ್ಲಿಯಾನ ಟ್ರೋಫಿಯಲ್ಲಿ 5 ಲಕ್ಷ ಬಹುಮಾನ ನೀಡಿ ದಾಖಲೆ ಬರೆದಿದ್ದು,ಈ-ಜೋನ್ ಟ್ರೋಫಿಯಲ್ಲಿ ಅದಕ್ಕಿಂತ ಹೆಚ್ಚಿನ‌ ನಗದು ಬಹುಮಾನ‌ ನೀಡಲಾಗುತ್ತಿದ್ದು ಕ್ರೀಡಾ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.
ಸ್ಪೋರ್ಟ್ಸ್ ಕನ್ನಡ ಈ ಪಂದ್ಯಾಕೂಟದ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

five × 4 =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you