5.4 C
London
Wednesday, April 17, 2024
Homeಕ್ರಿಕೆಟ್ಕೋಲಾರ-ಟೆನಿಸ್ಬಾಲ್ ಕ್ರಿಕೆಟ್ ದಾಖಲೆಯ ಅತಿ ಗರಿಷ್ಠ ನಗದು ಬಹುಮಾನದ ಕ್ರಿಕೆಟ್ ಪಂದ್ಯಾಟ- ಈ-ಜೋನ್ ಟ್ರೋಫಿ-2022

ಕೋಲಾರ-ಟೆನಿಸ್ಬಾಲ್ ಕ್ರಿಕೆಟ್ ದಾಖಲೆಯ ಅತಿ ಗರಿಷ್ಠ ನಗದು ಬಹುಮಾನದ ಕ್ರಿಕೆಟ್ ಪಂದ್ಯಾಟ- ಈ-ಜೋನ್ ಟ್ರೋಫಿ-2022

Date:

Related stories

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...

RCB ಯನ್ನು ಸುಟ್ಟು ಹಾಕಿದ ಮಯಾಂಕ್ ಯಾದವ್ ಅವರ ವೇಗ

RCB ವಿರುದ್ಧ 3/14 ರ ಅದ್ಭುತ ಬೌಲಿಂಗ್ ಅಂಕಿಅಂಶಗಳಿಗಾಗಿ  ಮಯಾಂಕ್ ಯಾದವ್...
spot_imgspot_img
ಕೋಲಾರ ಅಟ್ಯಾಕರ್ಸ್ ತಂಡವನ್ನು‌ ಬಹಳಷ್ಟು ವರ್ಷಗಳ ಕಾಲ‌ ಯಶಸ್ವಿಯಾಗಿ ಮುನ್ನಡೆಸಿದ್ದ ಆಟಗಾರರು,ಕ್ರೀಡಾ ಪ್ರೋತ್ಸಾಹಕರು ಹಾಗೂ ಈ-ಝೋನ್ ಗ್ರೂಪ್ಸ್ ನ‌ ಮಾಲೀಕರಾದ ಬಿ‌.ಆರ್.ಮಂಜುನಾಥ್ ರೆಡ್ಡಿ(ವಡು) ಇವರ ದಕ್ಷ ಸಾರಥ್ಯದಲ್ಲಿ 2022 ಮಾರ್ಚ್ 11,12 ಮತ್ತು 13 ರಂದು ಹೊನಲು ಬೆಳಕಿನಲ್ಲಿ ಕೋಲಾರದಲ್ಲಿ ಈ-ಝೋನ್ ಟ್ರೋಫಿ-2022 ದಾಖಲೆಯ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿದ್ದಾರೆ.
ಟೂರ್ನಮೆಂಟ್ ನ ಚಾಂಪಿಯನ್ ತಂಡ 5,05,555,ದ್ವಿತೀಯ ಸ್ಥಾನಿ 2,55,555 ನಗದು ಬಹುಮಾನಗಳೊಂದಿಗೆ ಆಕರ್ಷಕ ಪಾರಿತೋಷಕಗಳು ಜೊತೆಗೆ ಪ್ರತಿಯೊಂದು ಪಂದ್ಯದ ಪಂದ್ಯಶ್ರೇಷ್ಟ ಗೌರವದ ರೂಪದಲ್ಲಿ ಅಚ್ಚರಿಯ ಬಹುಮಾನ ಹಾಗೂ ಸರಣಿ ಶ್ರೇಷ್ಠ ಪ್ರಶಸ್ತಿ ಕೂಡ ಸರ್ಪ್ರೈಸ್ ಆಗಿಯೇ ನೀಡಲಿದ್ದಾರೆ.
ಈ ಹಿಂದೆ 2007 ರಲ್ಲಿ ಹೊನಲು ಬೆಳಕಿನ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದು,
ಸ್ಪಾರ್ಕ್ ಉಡುಪಿ ಪ್ರಥಮ ಪ್ರಶಸ್ತಿಯೊಂದಿಗೆ 2 ಲಕ್ಷ ನಗದು ಬಹುಮಾನ ಹಾಗೂ ಹಾಸನಾಂಬಾ ದ್ವಿತೀಯ ಪ್ರಶಸ್ತಿ ರೂಪದಲ್ಲಿ 1 ಲಕ್ಷ ಬಹುಮಾನವನ್ನು ಜಯಿಸಿತ್ತು.ಆಟಗಾರರಿಗೆ ವಿಶೇಷ ಬಹುಮಾನಗಳನ್ನು ನೀಡಿ
ಗೌರವಿಸಿದ್ದರು.
2017 ರಲ್ಲಿ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾಕೂಟವನ್ನು ಆಯೋಜಿಸಿದ್ದು ಕೋಲಾರದ ಎಲೈಟ್ ತಂಡ ಪ್ರಥಮ ಬಹುಮಾನ ಜಯಿಸಿದ್ದು,ಲಕ್ಷಾಂತರ ನಗದಿನೊಂದಿಗೆ ಕೊನೆಯ ಕ್ಷಣದ  ಅಚ್ಚರಿಯ ಬಹುಮಾನದ ರೂಪದಲ್ಲಿ ವಿಜೇತ ತಂಡದ ನಾಯಕನಿಗೆ R15 ಬೈಕ್ ಹಾಗೂ 11  ಮಂದಿ ಆಟಗಾರರಿಗೆ FZ ಬೈಕ್ ಗಳನ್ನು ನೀಡಿ ದೇಶೀಯ ಕ್ರಿಕೆಟ್ ನಲ್ಲೇ ಪ್ರಪ್ರಥಮ ಬಾರಿಗೆ ದಾಖಲೆ ಬರೆದಿತ್ತು.
ಟೆನಿಸ್ಬಾಲ್ ಕ್ರಿಕೆಟ್ ಇತಿಹಾಸದಲ್ಲಿ ಈ ಹಿಂದೆ ಸಾಂಗ್ಲಿಯಾನ ಟ್ರೋಫಿಯಲ್ಲಿ 5 ಲಕ್ಷ ಬಹುಮಾನ ನೀಡಿ ದಾಖಲೆ ಬರೆದಿದ್ದು,ಈ-ಜೋನ್ ಟ್ರೋಫಿಯಲ್ಲಿ ಅದಕ್ಕಿಂತ ಹೆಚ್ಚಿನ‌ ನಗದು ಬಹುಮಾನ‌ ನೀಡಲಾಗುತ್ತಿದ್ದು ಕ್ರೀಡಾ ಪ್ರೇಮಿಗಳ ಕುತೂಹಲಕ್ಕೆ ಕಾರಣವಾಗಿದೆ.
ಸ್ಪೋರ್ಟ್ಸ್ ಕನ್ನಡ ಈ ಪಂದ್ಯಾಕೂಟದ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

17 + four =