7.8 C
London
Friday, March 29, 2024
Homeಕ್ರಿಕೆಟ್ತುಮಕೂರು-"ಕರ್ನಾಟಕ ರಾಕ್" TCL season -2 ಮೇಯರ್ಸ್ ಕಪ್-2020 ಚಾಂಪಿಯನ್ಸ್

ತುಮಕೂರು-“ಕರ್ನಾಟಕ ರಾಕ್” TCL season -2 ಮೇಯರ್ಸ್ ಕಪ್-2020 ಚಾಂಪಿಯನ್ಸ್

Date:

Related stories

ಕರ್ನಾಟಕದ ಮೊದಲ ರಣಜಿ ಟ್ರೋಫಿ ಗೆಲುವಿಗೆ 50 ವರ್ಷ..

50 ವರ್ಷಗಳ ಹಿಂದೆ ಚರಿತ್ರೆ ಸೃಷ್ಠಿಸಿದ್ದ ಎರಾಪಳ್ಳಿ ಪ್ರಸನ್ನ & ಟೀಮ್..! 1958ರಿಂದ...

ಫ್ರೆಂಡ್ಸ್ ಕಪ್-ಸೋತ ತಂಡಗಳಿಗೂ ಇಲ್ಲಿದೆ ಆಶಾದಾಯಕ ಅಂಶ-ಆರಂಭದಲ್ಲಿ ಪಂದ್ಯ ಸೋತರೂ ಪ್ರಶಸ್ತಿ ಗೆಲ್ಲುವ ಅವಕಾಶ…!!!

ಬೆಂಗಳೂರು-ಫ್ರೆಂಡ್ಸ್ ಕಪ್ 2ನೇ ಆವೃತ್ತಿಯ ಕ್ರಿಕೆಟ್​ ​ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಪೀಣ್ಯ...

ರಾಜ್ಯದ ಅತ್ಯಂತ ಜನಪ್ರಿಯ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಫ್ರೆಂಡ್ಸ್ ಕಪ್ 2024 ಗೆ ಫಿಧಾ ಆಗಲಿದೆ ಕ್ರಿಕೆಟ್ ಲೋಕ

ಟೆನಿಸ್ ಬಾಲ್ ಕ್ರಿಕೆಟ್ ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಗಳಲ್ಲಿ ಒಂದಾಗಿದೆ, ಮತ್ತು ...
spot_imgspot_img
ರಾಕ್ ಯೂತ್ ಕ್ಲಬ್(ರಿ)ತುಮಕೂರು ಇವರ ಆಶ್ರಯದಲ್ಲಿ,ರಾಕ್ ರಾಜು,ರಾಕ್ ರವಿ,ರಾಕ್ ಅಝ್ಝು, ಮುಜ್ಜು ,ಯತೀಶ್,ರಾಕ್ ರಘು,ಶಂಕು ಇವರೆಲ್ಲರ ಸಾರಥ್ಯದಲ್ಲಿ ತುಮಕೂರು ಜಿಲ್ಲೆಯ ಆಟಗಾರರಿಗಾಗಿ ತುಮಕೂರಿನ ಸರಕಾರಿ ಹೈಸ್ಕೂಲ್ ಫೀಲ್ಡ್ ಮೈದಾನದಲ್ಲಿ ಆಯೋಜಿಸಿದ್ದ ಮೇಯರ್ಸ್ ಕಪ್ T.C.L-2020 ಪ್ರಶಸ್ತಿಯನ್ನು ರಾಕ್ ರವಿ ಸಾರಥ್ಯದ ಕರ್ನಾಟಕ ರಾಕ್ ತಂಡ ಜಯಿಸಿದೆ.
ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಿದ ಈ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸಿದ್ದು,ಅಂತಿಮವಾಗಿ ಫೈನಲ್ ನಲ್ಲಿ ಕರ್ನಾಟಕ ರಾಕ್ ತಂಡದ ಆಟಗಾರರ ಸಂಘಟಿತ ಹೋರಾಟದ ಫಲವಾಗಿ ಶ್ರೀ ಪ್ರಿನ್ಸ್ ಸಿಟಿ ಕ್ಲಬ್ ತಂಡವನ್ನು ಮಣಿಸಿ ಪ್ರಶಸ್ತಿ ಜಯಿಸಿತು.
ಪ್ರಥಮ ಪ್ರಶಸ್ತಿ ವಿಜೇತ ತಂಡ  ಕರ್ನಾಟಕ ರಾಕ್ ತಂಡ1 ಲಕ್ಷ ಹಾಗೂ ದ್ವಿತೀಯ ಸ್ಥಾನಿ ಶ್ರೀ ಪ್ರಿನ್ಸ್ ಸಿಟಿ ಕ್ಲಬ್ 50 ಸಾವಿರ ನಗದು ಸಹಿತ ಆಕರ್ಷಕ ಟ್ರೋಫಿಗಳನ್ನು ಪಡೆದರು.
ವೈಯಕ್ತಿಕ ಪ್ರಶಸ್ತಿ ಕ್ರಮವಾಗಿ ಬೆಸ್ಟ್ ಬ್ಯಾಟ್ಸ್‌ಮನ್ ಶ್ರೀ ಪ್ರಿನ್ಸ್ ಸಿಟಿಯ ನಿತಿನ್,ಬೆಸ್ಟ್ ಬೌಲರ್ ಆರ್.ಆರ್.ಹೆಗ್ಗೆರೆಯ ರಘುಪತಿ ಹಾಗೂ ಕರ್ನಾಟಕ ರಾಕ್ ತಂಡದ ಶಂಕು ಸರಣಿಶ್ರೇಷ್ಟ ಪ್ರಶಸ್ತಿ ಪಡೆದರು.
ತುಮಕೂರಿನ ಸಿದ್ಧಗಂಗಾ ಮಠದ ಅಧ್ಯಕ್ಷರಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಪಂದ್ಯಾವಳಿ ಉದ್ಘಾಟಿಸಿ
“ಕ್ರೀಡೆಯಿಂದ ಮಾನಸಿಕ ಮತ್ತು ದೈಹಿಕ ಸ್ಥೈರ್ಯ,ಸೌಹಾರ್ದ ಮನೋಭಾವದ ಜೊತೆಗೆ ರಾಷ್ಟ್ರೀಯ ಭಾವೈಕ್ಯತೆ ಹೆಚ್ಚಾಗುತ್ತದೆ ಎಂದು ಹೇಳಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ತುಮಕೂರಿನ ಮಾನ್ಯ ಮಹಾಪೌರರಾದ ಶ್ರೀಮತಿ‌ ಫರೀದಾ ಬೇಗಂ,ಜೆ‌.ಡಿ.ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ  ಶ್ರೀ,ಗೋವಿಂದರಾಜು,ತುಮಕೂರು ಜೆ.ಡಿ.ಎಸ್ ಯುವ ಮುಖಂಡರು ರುದ್ರೇಶ್,ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷರು ತುಮಕೂರಿನ ಎನ್. ನರಸಿಂಹರಾಜು(ರಾಕ್ ರಾಜು),ರಾಕ್ ಮೆನೇಜರ್ ರಾಕ್ ರವಿ,ಮಾಜಿ ಕಪ್ತಾನ‌ ರಾಕ್ ರಘು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದರು.
ಪಂದ್ಯಾವಳಿಯ ನೇರ ಪ್ರಸಾರ M9 ಸ್ಪೋರ್ಟ್ಸ್ ಬಿತ್ತರಿಸಿದರೆ,ಹಿರಿಯ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ,ರಾಜಶೇಖರ್ ಶ್ಯಾಮರಾವ್ ಉಡುಪಿ ವೀಕ್ಷಕ ವಿವರಣೆಯಲ್ಲಿ ಭಾಗವಹಿಸಿದ್ದರು.ಸಮಸ್ತ ಕನ್ನಡಿಗರ ಹೆಮ್ಮೆಯ ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಹಾಗೂ ಫ್ರೆಂಡ್ಸ್ ಬೆಂಗಳೂರು ಸಾಗರ್ ಭಂಡಾರಿ ಮಾಲೀಕತ್ವದ ಎಸ್‌‌.ಆರ್.ಬಿ ಸ್ಪೋರ್ಟ್ಸ್ ಪಂದ್ಯಾವಳಿಗೆ ಸಂಪೂರ್ಣ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Subscribe

- Never miss a story with notifications

- Gain full access to our premium content

- Browse free from up to 5 devices at once

Latest stories

LEAVE A REPLY

Please enter your comment!
Please enter your name here

8 + 6 =