Home ಭರವಸೆಯ ಬೆಳಕು ಕರಾವಳಿ ಸಿರಿ ಕ್ಲಬ್ ಬೆಂಗಳೂರು ಉದ್ಘಾಟನಾ ಕಾರ್ಯಕ್ರಮ.

ಕರಾವಳಿ ಸಿರಿ ಕ್ಲಬ್ ಬೆಂಗಳೂರು ಉದ್ಘಾಟನಾ ಕಾರ್ಯಕ್ರಮ.

ಕರಾವಳಿ ಸಿರಿ ಕ್ಲಬ್ ಬೆಂಗಳೂರು ಉದ್ಘಾಟನಾ ಕಾರ್ಯಕ್ರಮ.
ಕರಾವಳಿ ಎನ್ನುವುದೇ ಒಂದು ಸೊಬಗು. ಪರಶುರಾಮನ ಈ ನಾಡು ಅನ್ನುವುದೇ ಒಂದು ಆಕರ್ಷಣೆ….!
ಇಲ್ಲಿನ ಕಡಲು, ಮತ್ತದರ ಕಿನಾರೆಗಳು, ನದಿ, ಗುಡ್ಡಗಳು, ವಿಭಿನ್ನ ಸಂಸ್ಕೃತಿ, ಆಚಾರ ವಿಚಾರ ಎಲ್ಲವೂ ಬಣ್ಣಿಸಲಾಗದಷ್ಟು ಅಧ್ಭುತ. ಕರಾವಳಿಯ ಗಂಡುಕಲೆ ಯಕ್ಷಗಾನ,ಭೂತಾರಾಧನೆ, ಕಂಬಳ,ತೇರು, ಜಾತ್ರೆ ಹೀಗೆ ಬೆಳೆಯುತ್ತಲೇ ಸಾಗುತ್ತದೆ ಪಟ್ಟಿ.  ಈ ಕರಾವಳಿ ಎನ್ನುವ ಬೆರಗಿನೊಳಗೆ ಯಾವುದೂ ಇಲ್ಲ ಹೇಳಿ?? ಅದನ್ನೆಷ್ಟು ಕಣ್ತುಂಬಿ ಕೊಂಡರೂ ಅದು ಕಮ್ಮಿಯೇ.. ಬೆಂಗಳೂರು ನಗರದಲ್ಲೂ ಸಾಕಷ್ಟು ಕರಾವಳಿಗರು ನೆಲೆಸಿದ್ದಾರೆ. ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಕ್ಷೇತ್ರಗಳಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಹೀಗೆ ವಿವಿಧ ಪ್ರಕಾರಗಳಲ್ಲಿ ಚಟುವಟಿಕೆ ನಡೆಸಲು ಕರಾವಳಿ ಸಿರಿ ಕ್ಲಬ್ ಬೆಂಗಳೂರು ಎನ್ನುವ ನಾಮದೇಯದೊಂದಿಗೆ ಒಂದು  ವಿಶೇಷ  ಸಂಸ್ಥೆ  ಹುಟ್ಟಿಕೊಂಡಿದೆ. ಸಣ್ಣದೊಂದು ಕನಸು ದೊಡ್ಡ ಯೋಚನೆಯೊಂದಿಗೆ ಚಿಕ್ಕ ತಂಡದೊಂದಿಗೆ ನಮ್ಮ ನಿಮ್ಮೆಲ್ಲರ  ಮುಂದೆ ಭರವಸೆಯ ಬೆಳಕಾಗಿ ಇದು ಬರಲಿದೆ….
ಬರುವ ಆಗಸ್ಟ್ 6 ರಂದು  ಚೆಫ್ ಟಾಕ್  ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್, ಮುನಿರೆಡ್ಡಿ ಬಡಾವಣೆ, ಮಂಗಮ್ಮನ ಪಾಳ್ಯ ಬೆಂಗಳೂರು ಇಲ್ಲಿನ ನಾರಾಯಣ ಗುರು ಸಭಾಭವನದಲ್ಲಿ  ಈ ಸಂಸ್ಥೆಯ  ಉದ್ಘಾಟನಾ ಕಾರ್ಯಕ್ರಮ. ಸಾಂಸ್ಕ್ರತಿಕ ಕಾರ್ಯಕ್ರಮಗಳೊಂದಿಗೆ ಜರುಗಲಿದೆ. ಕರಾವಳಿ ಸಿರಿ ಕ್ಲಬ್ ನಡೆಸುವ ಚಟುವಟಿಕೆಗಳು ಬೆಂಗಳೂರು ನಗರದಲ್ಲಿ ನೆಲೆಸಿರುವ ಕರಾವಳಿಯ ಯುವ ಪ್ರತಿಭೆಗಳಿಗೆ ತಮ್ಮ ಪ್ರತಿಭಾ ಪ್ರದರ್ಶನವನ್ನು ನೀಡಲು ಒದಗಿಸಲಾಗಿರುವ ಒಂದು ವೇದಿಕೆ.  ಸುಪ್ತ ಕಲಾಪ್ರತಿಭೆಯನ್ನು ಗುರುತಿಸಿ ಅವರ ಪ್ರತಿಭೆಯ ಅಭಿವ್ಯಕ್ತಿಗೆ ನಿರಂತರ ವೇದಿಕೆಯೊಂದನ್ನು ನಿರ್ಮಿಸುವ ಸಲುವಾಗಿ ಬೆಂಗಳೂರಿನಲ್ಲಿರುವ ಉದಯೋನ್ಮುಖ ಹಾಗೂ ಪ್ರತಿಭಾವಂತ ಕರಾವಳಿಯ ಮಕ್ಕಳಿಂದ ವಿವಿಧ ರೀತಿಯ  ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಸಾಂಸ್ಕೃತಿಕ ಪರಂಪರೆ ಮತ್ತು ಎಲ್ಲಾ ಸಂಸ್ಕೃತಿಗಳ ಸಮಾನ ಘನತೆಯನ್ನು ಉತ್ತೇಜಿಸುವ ಮೂಲಕ,  ಬೆಂಗಳೂರಲ್ಲಿ ವಾಸವಾಗಿರುವ ಕರಾವಳಿಗರ ನಡುವಿನ ಬಾಂಧವ್ಯವನ್ನು ಈ ಸಂಸ್ಥೆ ಬಲಪಡಿಸಲಿದೆ,
ಕರಾವಳಿ ಸಿರಿ ಕ್ಲಬ್ ಬೆಂಗಳೂರಿನ  ಗುರಿ “ಶಾಂತಿ ನಿರ್ಮಾಣಕ್ಕೆ ಕೊಡುಗೆ ನೀಡುವುದು, ಬಡತನದ ನಿರ್ಮೂಲನೆ, ಉದಯೋನ್ಮುಖ ಸಾಮಾಜಿಕ ಮತ್ತು ನೈತಿಕ ಸವಾಲುಗಳನ್ನು ಪರಿಹರಿಸುವುದು, ಸಾಂಸ್ಕೃತಿಕ ವೈವಿಧ್ಯತೆಯನ್ನು ಬೆಳೆಸುವುದು. ಬೆಂಗಳೂರು ನಗರದಲ್ಲಿ ಈ ಸಂಸ್ಥೆಯು ಏರ್ಪಡಿಸುವ ನಿರಂತರ  ಕಾರ್ಯಕ್ರಮಗಳು ಬೆಂಗಳೂರು ಕರಾವಳಿಗರ ಸಂರಕ್ಷಣೆ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಮುಂದಿನ ಯೋಜನೆಗಳನ್ನು ರೂಪಿಸಿ, ಅನುಷ್ಠಾನಗೊಳಿಸಲಿದೆ. ಈ ಸಂಸ್ಥೆಯೇ ಹೇಳುವ ಪ್ರಕಾರ  ಕೀರ್ತಿ ಸಂಪಾದಿಸುವ ಯೋಚನೆ ಅವರದಲ್ಲ , ಆಸೆ ಆಕಾಂಕ್ಷಿಗಳನ್ನ ಹೊತ್ತು ಬರುವ ತಂಡ  ಕರಾವಳಿ ಸಿರಿ ಕ್ಲಬ್ ನದ್ದಲ್ಲ..
ಯೋಚನೆಗಳು ಇಂತಿವೆ…
1) ರಕ್ತದಾನ ಶ್ರೇಷ್ಠದಾನ ಅಮೂಲ್ಯ ದಾನವಂತೆ  ಮಂಗಳೂರು, ಉಡುಪಿ, ಕುಂದಾಪುರ ಭಾಗದವರು ಬೆಂಗಳೂರಿನ ಕಡೆ ಬಂದಾಗ ರಕ್ತದ ಅವಶ್ಯಕತೆ ಇದ್ದಾಗ ಅಂತವರ ನೆರವಿಗೆ  ಒಂದು ತಂಡವಾಗಿ ಬರುವ ಕಲ್ಪನೆಯೊಂದಿಗೆ….
2) ಸ್ವಚ್ಛ ಭಾರತ್ ಕನಸಿನೊಂದಿಗೆ ಮುಂದಿರುವ ಹಾದಿಯೊಂದಿಗೆ ಮುಂದಿರುವ ಯೋಚನೆಗಳೊಂದಿಗೆ….
3) ಕರಾವಳಿಯ  ನಮ್ಮ ನುಡಿಯನ್ನ ,ನಮ್ಮ ಸಂಸ್ಕೃತಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಯೋಚನೆಗಳೊಂದಿಗೆ…
4) ಕ್ರೀಡೆಗಳಲ್ಲಿ ಪ್ರತಿಬಿಂಬಿಸುವ ಹಾಗೆ
5)  ಆರ್ಥಿಕವಾಗಿ ಸಾಮಾಜಿಕವಾಗಿ ಯೋಚನೆಗೂ ಮಿಲುಕದ ಅತಿ ಹೀನ ಪರಿಸ್ಥಿತಿಯಲ್ಲಿರುವ  ವಿದ್ಯಾರ್ಥಿಗಳಿಗೆ ಕುಟುಂಬದ ಸದಸ್ಯರಾಗಿ ನೆರವಾಗುವ ಬಗ್ಗೆ…
6) ನೆರೆ ಹೊರೆ ಹಾನಿಗಳ ವಿಚಾರವಾಗಿ ಸ್ವಯಂಸೇವಕರಂತೆ ತೊಗಡಗಿಸಿಕೊಳ್ಳುವ ಬಗ್ಗೆ…
7) ದೂರದ ಊರಿಂದ ಬಂದು ಬೆಂಗಳೂರಿನಲ್ಲಿ ಸಣ್ಣಪುಟ್ಟ ಕನಸಿನೊಂದಿಗೆ   ಹೋಟೆಲ್ , ಬೇಕರಿ ಮಾಡಿಕೊಂಡು ಜೀವನ ನಡೆಸುವವರಿಗೆ ಸಮಸ್ಯೆ ಬಂದಾಗ ಅವರ ಪರವಾಗಿ ನಿಲ್ಲುವ ಬಗ್ಗೆ  …
8) ಕರಾವಳಿಯ ಸಂಸ್ಕೃತಿಯನ್ನಎತ್ತಿ ಹಿಡಿಯುವ ಬಗ್ಗೆ
ಇವರಲ್ಲಿರುವ ಕನಸುಗಳು ನೂರೊಂದು. ಹೀಗೆ ಹಲವು ಕನಸುಗಳು ಕೂಡಿಕೊಳ್ಳಲಿದೆ … ಕರಾವಳಿ ಸಿರಿ ಕ್ಲಬ್ ಕನಸನ್ನ ಕಂಡಿದೆ. ಇದು ಅವರಿಗಾಗಿ ಕಂಡ ಕನಸಲ್ಲ.  ನಮ್ಮವರಿಗಾಗಿ ಕಂಡಂತ ಕನಸು ….
ಪ್ರೋತ್ಸಾಹಿಸುವ ವಿಚಾರ ನಮ್ಮೆಲ್ಲ ಕರಾವಳಿಗರದ್ದು , ನಾವೂ ಕೂಡ ಅವರಲ್ಲಿಲ್ಲಿ ಒಬ್ಬರು ಎನ್ನುವ ಹಾಗೆ ಹರಸಿ ಹಾರೈಸಿ ಆಶೀರ್ವದಿಸೋಣ….

LEAVE A REPLY

Please enter your comment!
Please enter your name here

four + eighteen =

ಕರಾವಳಿ ಸಿರಿ ಕ್ಲಬ್ ಬೆಂಗಳೂರು ಉದ್ಘಾಟನಾ ಕಾರ್ಯಕ್ರಮ.

ಕರಾವಳಿ ಎನ್ನುವುದೇ ಒಂದು ಸೊಬಗು. ಪರಶುರಾಮನ ಈ ನಾಡು ಅನ್ನುವುದೇ ಒಂದು ಆಕರ್ಷಣೆ....! ಇಲ್ಲಿನ ಕಡಲು, ಮತ್ತದರ ಕಿನಾರೆಗಳು, ನದಿ, ಗುಡ್ಡಗಳು, ವಿಭಿನ್ನ ಸಂಸ್ಕೃತಿ, ಆಚಾರ ವಿಚಾರ ಎಲ್ಲವೂ ಬಣ್ಣಿಸಲಾಗದಷ್ಟು ಅಧ್ಭುತ. ಕರಾವಳಿಯ ಗಂಡುಕಲೆ ಯಕ್ಷಗಾನ,ಭೂತಾರಾಧನೆ, ಕಂಬಳ,ತೇರು, ಜಾತ್ರೆ ಹೀಗೆ ಬೆಳೆಯುತ್ತಲೇ ಸಾಗುತ್ತದೆ ಪಟ್ಟಿ.  ಈ ಕರಾವಳಿ ಎನ್ನುವ ಬೆರಗಿನೊಳಗೆ ಯಾವುದೂ ಇಲ್ಲ ಹೇಳಿ?? ಅದನ್ನೆಷ್ಟು ಕಣ್ತುಂಬಿ ಕೊಂಡರೂ ಅದು ಕಮ್ಮಿಯೇ.. ಬೆಂಗಳೂರು ನಗರದಲ್ಲೂ ಸಾಕಷ್ಟು ಕರಾವಳಿಗರು ನೆಲೆಸಿದ್ದಾರೆ. ನಮ್ಮ ಕನ್ನಡ ಭಾಷೆ ಮತ್ತು ಸಾಹಿತ್ಯ, ಸಂಸ್ಕೃತಿ, ಪರಂಪರೆಯ ಕ್ಷೇತ್ರಗಳಲ್ಲಿ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಂಸ್ಕ್ರತಿಕ ಹೀಗೆ ವಿವಿಧ ಪ್ರಕಾರಗಳಲ್ಲಿ ಚಟುವಟಿಕೆ ನಡೆಸಲು ಕರಾವಳಿ ಸಿರಿ ಕ್ಲಬ್ ಬೆಂಗಳೂರು ಎನ್ನುವ ನಾಮದೇಯದೊಂದಿಗೆ ಒಂದು  ವಿಶೇಷ  ಸಂಸ್ಥೆ  ಹುಟ್ಟಿಕೊಂಡಿದೆ. ಸಣ್ಣದೊಂದು ಕನಸು ದೊಡ್ಡ ಯೋಚನೆಯೊಂದಿಗೆ ಚಿಕ್ಕ ತಂಡದೊಂದಿಗೆ ನಮ್ಮ ನಿಮ್ಮೆಲ್ಲರ  ಮುಂದೆ ಭರವಸೆಯ ಬೆಳಕಾಗಿ ಇದು ಬರಲಿದೆ.... ಬರುವ ಆಗಸ್ಟ್ 6 ರಂದು  ಚೆಫ್ ಟಾಕ್  ಫುಡ್ ಅಂಡ್ ಹಾಸ್ಪಿಟಾಲಿಟಿ ಸರ್ವಿಸಸ್

Send this to a friend