9.9 C
London
Saturday, April 20, 2024
Homeಭರವಸೆಯ ಬೆಳಕುಉಡುಪಿ-ಅಶಕ್ತರ ಬಾಳಿನ ಆಶಾಕಿರಣ-ವಿಶ್ವಕರ್ಮ ಮಹಾಸಭಾ ಟ್ರೋಫಿ-ಪೋಸ್ಟರ್ ಬಿಡುಗಡೆಗೊಳಿಸಿದ ಕೆ.ಪಿ.ನಂಜುಂಡಿ ವಿಶ್ವಕರ್ಮ

ಉಡುಪಿ-ಅಶಕ್ತರ ಬಾಳಿನ ಆಶಾಕಿರಣ-ವಿಶ್ವಕರ್ಮ ಮಹಾಸಭಾ ಟ್ರೋಫಿ-ಪೋಸ್ಟರ್ ಬಿಡುಗಡೆಗೊಳಿಸಿದ ಕೆ.ಪಿ.ನಂಜುಂಡಿ ವಿಶ್ವಕರ್ಮ

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ(ರಿ),ಉಡುಪಿ ಜಿಲ್ಲಾ ಘಟಕ ಮತ್ತು ಕೋಟ ಹೋಬಳಿ ಯುವ ಘಟಕದ ಆಶ್ರಯದಲ್ಲಿ 2022 ರ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವಕರ್ಮ ಮಹಾಸಭಾ ಟ್ರೋಫಿ-2022 ಪೋಸ್ಟರನ್ನು ವಿಧಾನ ಪರಿಷತ್ ಸದಸ್ಯರು ಮತ್ತು ಅ.ಕ.ವಿ.ಮ ರಾಜ್ಯಾಧ್ಯಕ್ಷರು ಶ್ರೀ ಕೆ.ಪಿ.ನಂಜುಂಡಿ ವಿಶ್ವಕರ್ಮ ಇವರು ಬಿಡುಗಡೆಗೊಳಿಸಿದರು.
ಜೂನ್ 12 ರವಿವಾರ ಕೋಟ ಮಾಂಗಲ್ಯ ಮಂದಿರದಲ್ಲಿ ನಡೆದ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ(ರಿ)ಕೋಟ ಹೋಬಳಿ ಯುವಘಟಕದ ಉದ್ಘಾಟನಾ ಕಾರ್ಯಕ್ರಮ,ಟೂರ್ನಮೆಂಟ್ ಪೋಸ್ಟರ್ ಬಿಡುಗಡೆ ಗೊಳಿಸಿ ಮಾತನಾಡಿದ ಕೆ.ಪಿ‌.ನಂಜುಂಡಿಯವರು
“ವಿಶ್ವಕರ್ಮ ಸಮಾಜದ ಕ್ರೀಡಾ ಮತ್ತು ಸಾಂಸ್ಕೃತಿಕ  ಪ್ರೋತ್ಸಾಹ ಮತ್ತು
ಅಶಕ್ತರ ಬಾಳಿನ‌ ಆಶಾಕಿರಣ ವಾಗುವಂತೆ ಸಹಾಯನಿಧಿ ಸಂಗ್ರಹಣೆ-ಸಮಾಜದ ಅಭಿವೃದ್ಧಿಯ ಕುರಿತಾದ ಮುಖ್ಯ ಉದ್ದೇಶದೊಂದಿಗೆ ವಿಶ್ವಕರ್ಮ ಮಹಾಸಭಾ ಕೋಟ ಹೋಬಳಿ ದಿಟ್ಟ ಹೆಜ್ಜೆಯಿಟ್ಟಿದ್ದು ಸಮಾಜಕ್ಕೆ ಮಾದರಿಯಾಗಲಿ ಎಂದು ಈ ಸಂದರ್ಭ ಹೇಳಿದರು.ಮತ್ತು ವೈಯಕ್ತಿಕವಾಗಿ 50 ಸಾವಿರ ನೀಡುವುದಾಗಿ ಘೋಷಿಸಿದರು.”
ಈ ಸಂದರ್ಭ ವಾಸ್ತುಶಿಲ್ಪಿಗಳಾದ ಸುದರ್ಶನ್ ಆಚಾರ್,ಯೋಗೀಶ್ ಇನ್ನಾ
ಮತ್ತು ಸುಧೀರ್ ಆಚಾರ್ ಪೆರ್ಡೂರು ಇವರನ್ನು ಸನ್ಮಾನಿಸಲಾಯಿತು.
ಎಸ್‌.ಎಸ್.ಎಲ್.ಸಿ ಯಲ್ಲಿ‌ 600   ಕ್ಕಿಂತ ಅಧಿಕ ಅಂಕಗಳಿಸಿದ ಸುಶಾನ್,
ಅಂಕಿತಾ,ದೀಪ್ತಿ,ಅಶ್ವಿನಿ,ದಿಶಾ, ಪ್ರಮೋದ್ ಮತ್ತು ಸುಜಯ್ ಇವರಿಗೆ ಸನ್ಮಾನದ ಜೊತೆಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಯುವ ಸಾಧಕರಾದ ಇತ್ತೀಚೆಗಷ್ಟೇ ಸಿನಿಮಾ ನಟನೆಗಾಗಿ ರಾಜ್ಯ ಪ್ರಶಸ್ತಿ ಪಡೆದ  ಶ್ಲಾಘ ಸಾಲಿಗ್ರಾಮ(ಸಿನಿಮಾ ನಟನೆ),ಥೈಲ್ಯಾಂಡ್ ನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಯೋಗ ಸ್ಪರ್ಧೆಗೆ ಆಯ್ಕೆಯಾದ ಕವನಾ ಕಾರ್ಕಳ(ಯೋಗ),
ಸಚಿನ್ ಕುಂಭಾಶಿ (ಯಕ್ಷಗಾನ),ವೈಷ್ಣವಿ ಕಡಿಯಾಳಿ(ಕ್ರಿಕೆಟ್),ನವನೀತ್
(ಕರಾಟೆ) ಮತ್ತು ಸಮೀಕ್ಷಿತ್(ಯಕ್ಷಗಾನ) ಇವರನ್ನು ಗೌರವಿಸಲಾಯಿತು.
ವಿಶ್ವಕರ್ಮ ಸಮಾಜದ ಕ್ರಿಕೆಟ್ ಪಂದ್ಯಾಟ ಸಂಘಟಿಸಿ ಸಮಾಜದ ನೆರವು ನೀಡಿದ ಶಿವರಾಮ ಆಚಾರ್ ಕಿನ್ನಿಗೋಳಿ,ಭಾಸ್ಕರ್ ಆಚಾರ್ ಉಡುಪಿ,ರಾಜ್ಯ ಮಟ್ಟದಲ್ಲಿ ಸಮಾಜದ ತಂಡವನ್ನು ಮುನ್ನಡೆಸಿ ಯಶಸ್ಸು ಸಾಧಿಸಿದ ವಿಜೇಂದ್ರ ಆಚಾರ್(ವೃಷ್ಟಿ ಸಾಲಿಗ್ರಾಮ),ಶ್ರೀಶ ಆಚಾರ್(ಹನ್ಸಿನಿ ಉಡುಪಿ),ಪ್ರಶಾಂತ್ ಆಚಾರ್(ಭಾರ್ಗವ ಸಾಲಿಗ್ರಾಮ),ಸುಧೀರ್ ಪೆರ್ಡೂರು(ಬಾಲಾಜಿ ಬುಲ್ಸ್ ಪೆರ್ಡೂರು),ಶ್ರೀಕಾಂತ್ ಆಚಾರ್(ವಿ.ವಿ.ಸಿ ಕುಂದಾಪುರ)ಸದಾಶಿವ ಆಚಾರ್ (ವಿ.ಕೆ.ಅವರಾಲು) ಮತ್ತು ಪ್ರಕಾಶ್ ಆಚಾರ್(ಖುಷಿ ಬೆನಗಲ್) ನಾಯಕರನ್ನು ಸನ್ಮಾನಿಸಲಾಯಿತು.
ಬಹು ನಿರೀಕ್ಷೆಯನ್ನು ಮೂಡಿಸಿದ ವಿಶ್ವಕರ್ಮ ಮಹಾಸಭಾ ಟ್ರೋಫಿ-2022 ಈ ವರ್ಷಾಂತ್ಯದಲ್ಲಿ ನಡೆಯಲಿದ್ದು,ವಿನೂತನ ಪ್ರಯೋಗದೊಂದಿಗೆ ವಿಶ್ವಕರ್ಮ ಸಮಾಜದ ಗ್ರಾಮೀಣ ಮಟ್ಟದ ಪ್ರತಿಭೆಗಳಿಗೂ ಸಮನಾವಕಾಶ ಲಭಿಸಲಿದ್ದು,
ವಿಶಿಷ್ಟ ಕಾರ್ಯಕ್ರಮಗಳೊಂದಿಗೆ ಇತಿಹಾಸ ಸೃಷ್ಟಿಸಲಿದೆ ಎಂದು ಉಡುಪಿ ಜಿಲ್ಲೆ ಯುವ ಘಟಕಾಧ್ಯಕ್ಷರು ಮತ್ತು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ನ ಪ್ರವರ್ತಕ ಕೋಟ ರಾಮಕೃಷ್ಣ ಆಚಾರ್ ತಿಳಿಸಿದ್ದಾರೆ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

thirteen + four =