9.1 C
London
Thursday, April 24, 2025
HomeUncategorizedವೆಸ್ಟ್ ಇಂಡೀಸ್ ಬ್ಯಾಟರ್ ಗಳ ಬೆವರಿಳಿಸಿದ ಭಾರತದ ಸ್ಪಿನ್ ಬೌಲರ್ ಗಳು; ...

ವೆಸ್ಟ್ ಇಂಡೀಸ್ ಬ್ಯಾಟರ್ ಗಳ ಬೆವರಿಳಿಸಿದ ಭಾರತದ ಸ್ಪಿನ್ ಬೌಲರ್ ಗಳು; ಇಶಾನ್ ಕಿಶನ್ ಅವರ ಅರ್ಧಶತಕದ ನಂತರ ಗೆದ್ದ ಭಾರತ

Date:

Related stories

spot_imgspot_imgspot_imgspot_img
spot_imgspot_img
spot_imgspot_img
spot_imgspot_img
spot_imgspot_imgspot_img
spot_imgspot_img
ವೆಸ್ಟ್ ಇಂಡೀಸ್ ವಿರುದ್ಧ ಬಾರ್ಬಡೋಸ್ ಏಕದಿನ ಪಂದ್ಯದಲ್ಲಿ, ಭಾರತ ತಂಡವು ಉತ್ತಮ ಪ್ರದರ್ಶನ ನೀಡಿ 7 ವಿಕೆಟ್‌ಗಳಿಂದ ಗೆದ್ದಿದೆ. ಮೊದಲು ಬ್ಯಾಟ್ ಮಾಡಿದ ವೆಸ್ಟ್ ಇಂಡೀಸ್ ತಂಡ 23 ಓವರ್ ಗಳಲ್ಲಿ 114 ರನ್ ಗಳಿಗೆ ಆಲೌಟ್ ಆಯಿತು.  ಇದಕ್ಕೆ ಉತ್ತರವಾಗಿ ಆಡಿದ ಭಾರತ ಪಂದ್ಯವನ್ನು ಗೆದ್ದು ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು.
ಟಾಸ್ ಗೆದ್ದ ಭಾರತ  ತಂಡ ಮೊದಲು ಫೀಲ್ಡಿಂಗ್ ಮಾಡಿತು. ಟೀಮ್ ಇಂಡಿಯಾದ ಬೌಲರ್‌ಗಳು ಈ ನಿರ್ಧಾರವನ್ನು ಸರಿ ಎಂದು ಸಾಬೀತುಪಡಿಸಿದ್ದಾರೆ. ವೆಸ್ಟ್ ಇಂಡೀಸ್ ಒಂದರ ಹಿಂದೆ ಒಂದರಂತೆ ಹಲವಾರು ವಿಕೆಟ್ ಕಳೆದುಕೊಂಡಿತು. ಕೈಲ್ ಮೇಯರ್ಸ್ (2) ವಿಕೆಟ್‌
ಪತನದ ನಂತರ ಅದು ಕೊನೆಯವರೆಗೂ ಮುಂದುವರೆಯಿತು. ಭಾರತದ ಸ್ಪಿನ್ನರ್ ಗಳಾದ ಜಡೇಜಾ ಮತ್ತು ಕುಲದೀಪ್ ಯಾದವ್ ಅವರನ್ನು ಎದುರಿಸಲು ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಗಳಿಗೆ ಸಾಧ್ಯವಾಗಲಿಲ್ಲ. ಶಾಯ್ ಹೋಪ್ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಅವರ ಬ್ಯಾಟ್‌ನಿಂದ 43 ರನ್‌ಗಳ ಇನ್ನಿಂಗ್ಸ್ ಕಂಡುಬಂದಿತು. ಇವರಲ್ಲದೆ ಅಲಿಕ್ ಅತಾಂಜೆ ಮತ್ತು ಬ್ರೆಂಡನ್ ಕಿಂಗ್ ಕ್ರಮವಾಗಿ 22 ಮತ್ತು 17 ರನ್ ಗಳಿಸಿದರು. ವೆಸ್ಟ್ ಇಂಡೀಸ್ ತಂಡ 23 ಓವರ್‌ಗಳಲ್ಲಿ 114 ರನ್ ಗಳಿಸಿ ಆಲೌಟ್ ಆಯಿತು.
ಭಾರತ ತಂಡದ ಪರ ಕುಲದೀಪ್ ಯಾದವ್ 3 ಓವರ್ ಗಳಲ್ಲಿ 6 ರನ್ ನೀಡಿ 4 ವಿಕೆಟ್ ಪಡೆದರು. ಇವರಲ್ಲದೆ ರವೀಂದ್ರ ಜಡೇಜಾ ಕೂಡ 3 ವಿಕೆಟ್ ಪಡೆದರು. ಹಾರ್ದಿಕ್ ಪಾಂಡ್ಯ, ಮುಖೇಶ್ ಕುಮಾರ್ ಮತ್ತು ಶಾರ್ದೂಲ್ ಠಾಕೂರ್ ಕೂಡ 1-1 ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಪಡೆದರು. ಇದು ಮುಖೇಶ್ ಕಮರ್ ಅವರ ಚೊಚ್ಚಲ ಪಂದ್ಯವಾಗಿತ್ತು . ಇದಕ್ಕೆ ಉತ್ತರವಾಗಿ ಭಾರತ ಕೂಡ ಕಳಪೆ ಆರಂಭ ಪಡೆಯಿತು. ಗಿಲ್ ಮತ್ತು ಇಶಾನ್ ಕಿಶನ್ ಓಪನಿಂಗ್ ಮಾಡಿದರು. ಗಿಲ್ 7 ರನ್ ಗಳಿಸುವ ಮೂಲಕ ಜೇಡನ್ ಸೀಲ್ಸ್‌ಗೆ ಬಲಿಯಾದರು. ಅವರ ನಂತರ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್‌ಗೆ ಬಂದು 19 ರನ್‌ಗಳಿಗೆ ಔಟಾದರು. ಇಶಾನ್ ಕಿಶನ್ ಒಂದು ತುದಿಯಲ್ಲಿ ನಿಂತಿದ್ದರು. 5 ರನ್ ಗಳಿಸಿದ್ದಾಗ ಪಾಂಡ್ಯ ರನೌಟ್ ಆದರು. ದಿಟ್ಟ ಬ್ಯಾಟಿಂಗ್ ಮಾಡುತ್ತಿದ್ದ ಕಿಶನ್ 45 ಎಸೆತಗಳಲ್ಲಿ ಅರ್ಧಶತಕ ಗಳಿಸಿದರು. 52 ರನ್ ಗಳಿಸಿ ಔಟಾದರು. . ರೋಹಿತ್ ಶರ್ಮಾ ಆಡಲು ಇಳಿದರೂ ಕೊಹ್ಲಿ ಡ್ರೆಸ್ಸಿಂಗ್ ರೂಂನಲ್ಲಿಯೇ ಉಳಿದರು. ರೋಹಿತ್ ಜಡೇಜಾ ಜೊತೆಗೂಡಿ ತಂಡವನ್ನು 5 ವಿಕೆಟ್ ಗಳಿಂದ ಗೆಲ್ಲಿಸಿದರು. ಜಡೇಜಾ ಔಟಾಗದೆ 16 ಮತ್ತು ರೋಹಿತ್ 8 ರನ್ ಗಳಿಸಿದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

10 + 15 =