ಇತರೆದೇವಿ ಪ್ರಸಾದ್ ಸ್ಪೋರ್ಟ್ಸ್ ಸೆಂಟರ್ ಉದ್ಘಾಟನಾ ಸಮಾರಂಭ.

ದೇವಿ ಪ್ರಸಾದ್ ಸ್ಪೋರ್ಟ್ಸ್ ಸೆಂಟರ್ ಉದ್ಘಾಟನಾ ಸಮಾರಂಭ.

-

- Advertisment -spot_img

 

ಕ್ರೀಡಾ ಕ್ಷೇತ್ರಗಳಿಗೆ ಸಂಬಂಧಿಸಿದ ಎಲ್ಲ ರೀತಿಯ ವಸ್ತುಗಳು ಒಂದೇ ಸೂರಿನಡಿ ತರುವ ನಿಟ್ಟಿನಲ್ಲಿ ದೇವಿ ಪ್ರಸಾದ್ ಸ್ಪೋರ್ಟ್ಸ್ ಸೆಂಟರ್ ಮುನಿಯಾಲು. ಇದರ ಹಿರಿಯಡಕ ಶಾಖೆಯ ಉದ್ಘಾಟನಾ ಸಮಾರಂಭ ಕಾರ್ಯಕ್ರಮ ದಿನಾಂಕ 1-3-2020 ರವಿವಾರ ಹಿರಿಯಡಕ ಸರಕಾರಿ ಪದವಿ ಪೂರ್ವ ಕಾಲೇಜು ಎದುರು ಕೀರ್ತಿ ಕಾಂಪ್ಲೆಕ್ಸ್ ನಲ್ಲಿ “ಸ್ಮರಣಿಕಾ” “ವಸ್ತ್ರ” ಮತ್ತು “ಸ್ಪೋರ್ಟ್ಸ್ ಗ್ಯಾಲರಿ” ಈ ಮೂರು ನಾಮಾಂಕಿತದೊಂದಿಗೆ ಏಕ ಕಾಲದಲ್ಲಿ ಈ ಮೂರು ಶಾಖೆಗಳ ಉದ್ಘಾಟನೆ ಬೆಳಗ್ಗೆ 10 ಗಂಟೆಗೆ ಶ್ರೀ ಶ್ರೀ ಶ್ರೀ ಈಶ ವಿಠ್ಠಲ ದಾಸ ಸ್ವಾಮೀಜಿ, ಶ್ರೀ ಸಾಂದೀಪನಿ ಸೇವಾಶ್ರಮ ಕೇಮಾರು ಮಠ ಕಾರ್ಕಳ ಇವರ ಆಶೀರ್ವಚನದೊಂದಿಗೆ ಶ್ರೀ. ಲಾಲಾಜಿ ಮೆಂಡನ್ ಇವರಿಂದ ಉದ್ಘಾಟನೆಗೊಳ್ಳಲಿದೆ.

ಉದ್ಘಾಟನಾ ಕಾರ್ಯಕ್ರಮದ ಅಂಗವಾಗಿ ನಡೆಯಲಿರುವ ಸಭಾ ಕಾರ್ಯಕ್ರಮ ಸಾಯಂಕಾಲ 5 ಗಂಟೆಗೆ ಆರಂಭಗೊಳ್ಳಲಿದು ಮುಖ್ಯ ಅತಿಥಿಗಳಾಗಿ ಶ್ರೀ ಮುನಿಯಾಲು ಉದಯ ಶೆಟ್ಟಿ. ಉದ್ಯಮಿಗಳು ಮತ್ತು ಅಧ್ಯಕ್ಷರು ಉದಯ ಕೃಷ್ಣ ಚಾರಿಟೇಬಲ್ ಟ್ರಸ್ಟ್, ಶ್ರೀ ವಿಷ್ಣುವರ್ಧನ ಐಪಿಎಸ್. ಜಿಲ್ಲಾ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ, ಶ್ರೀ ಶಿವಕುಮಾರ್ ಕರ್ಜೆ ಸ್ಥಾಪಕರು ಸರ್ವ ಕಾಲೇಜ್ ವಿದ್ಯಾರ್ಥಿ ಶಕ್ತಿ (ರಿ) , ಕರ್ನಾಟಕ, ಶ್ರೀ ಉಮೇಶ್ ಶೆಟ್ಟಿ ಸದಸ್ಯರು ಗ್ರಾಮ ಪಂಚಾಯತ್ ಬೊಮ್ಮಾರಬೆಟ್ಟು, ಶ್ರೀ ಕುಯಿಲಾಡಿ ಸುರೇಶ್ ನಾಯಕ್ ಅಧ್ಯಕ್ಷರು ಭಾರತೀಯ ಜನತಾ ಪಕ್ಷ ಉಡುಪಿ ಜಿಲ್ಲೆ, ಶ್ರೀ ಅರುಣ್ ಜತ್ತನ್ ಮಾಲೀಕರು ಕೀರ್ತಿ ಕಾಂಪ್ಲೆಕ್ಸ್, ಶ್ರೀಮತಿ ಸವಿತಾ ನಾಯಕ್ ಅಧ್ಯಕ್ಷರು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್, ಶ್ರೀ ಸುಧಾಕರ ಠಾಣಾಧಿಕಾರಿ ಆರಕ್ಷಕ ಠಾಣೆ ಹಿರಿಯಡ್ಕ, ಶ್ರೀ ಹರೀಶ್ ಸಾಲಿಯಾನ್ ಉಪಾಧ್ಯಕ್ಷರು ಬೊಮ್ಮಾರಬೆಟ್ಟು ಗ್ರಾಮ ಪಂಚಾಯತ್, ಶ್ರೀ ರತ್ನಾಕರ ದೇವಾಡಿಗ ಉದ್ಯಮಿಗಳು ಹಿರಿಯಡ್ಕ. ಈ ಎಲ್ಲಾ ಮಹನೀಯರ ಗಣ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಎಂಕುಲು ಫ್ರೆಂಡ್ಸ್ ಕಲಾವಿದರು ಹಿರಿಯಡಕ ಇವರಿಂದ ತುಳು ಹಾಸ್ಯಮಯ ನಾಟಕ “ನಂಬುಲೆಕ್ಕ ಇಜ್ಜೆರ್” ಪ್ರದರ್ಶನ ನಡೆಯಲಿದೆ. ಈ ಎಲ್ಲಾ ಕಾರ್ಯಕ್ರಮಗಳಿಗೆ ಪ್ರೀತಿಯಿಂದ ಸ್ವಾಗತ ಬಯಸುವವರು
ನಯನ ಕುಮಾರ್ ಜೋಗಿ. ಮುನಿಯಾಲು, ನಯನ ಟ್ರೇಡಿಂಗ್ ಕಂಪೆನಿ ಮುನಿಯಾಲು.

ಕಾರ್ಯಕ್ರಮಕ್ಕೆ ಶುಭ ಕೋರುವ:
ಕೆ. ರಾಮಕೃಷ್ಣ ಆಚಾರ್ಯ
ಸ್ಪೋರ್ಟ್ಸ್ ಕನ್ನಡ ಜಾಲತಾಣ, ಉಡುಪಿ.

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

2 × two =

Latest news

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ

ತೆಂಕಪೇಟೆ ಫ್ರೆಂಡ್ಸ್ ಉಡುಪಿ ಚಾಂಪಿಯನ್ – ಎಂಜಾಯ್ ಪ್ರೀಮಿಯರ್ ಲೀಗ್ 2026 ಯಶಸ್ವಿ ಸಮಾಪ್ತಿ ಮಂಗಳೂರು: ಎಂಜಾಯ್ ಟೈಟನ್ಸ್ ಯುನೈಟೆಡ್ ಆಯೋಜಿಸಿದ್ದ ಜಿಎಸ್‌ಬಿ ಸಮುದಾಯದ ಪ್ರತಿಷ್ಠಿತ “ಎಂಜಾಯ್...

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ

ಕಲ್ಲು ಗಣಪತಿ ಟ್ರೋಫಿ 2026-27 – 16 ತಂಡಗಳ ಕ್ರಿಕೆಟ್ ಮಹಾಸಂಗ್ರಾಮ ಕುಂದಾಪುರದ ಪ್ರತಿಷ್ಠಿತ  ನಕ್ಷತ್ರ ಜ್ಯುವೆಲ್ಲರ್ಸ್ ಪ್ರಸ್ತುತಪಡಿಸುವ ಕಲ್ಲು ಗಣಪತಿ ಟ್ರೋಫಿ 2026-27 ಕ್ರಿಕೆಟ್ ಟೂರ್ನಮೆಂಟ್‌ಗೆ...

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ

ವಿಕ್ರಮ್ ಟ್ರೋಫಿ 2026 – ಉದಯೋನ್ಮುಖ ಕ್ರಿಕೆಟಿಗರಿಗೆ ಅದ್ಭುತ ವೇದಿಕೆ ಬೈಂದೂರಿನ ಪ್ರತಿಷ್ಠಿತ ವಿಕ್ರಮ್ ಕ್ರಿಕೆಟ್ ಕ್ಲಬ್ (VCC) ವತಿಯಿಂದ, ಉಡುಪಿ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ (UDCA)...

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ

ಸಿರ್ಸಿಯಲ್ಲಿ ‘ಶ್ರೀ ಮಾರಿಕಾಂಬಾ ಟ್ರೋಫಿ’ ಕ್ರಿಕೆಟ್ ಟೂರ್ನಮೆಂಟ್‌ಗೆ ಭರ್ಜರಿ ಸಿದ್ಧತೆ ಸಿರ್ಸಿಯ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ Shri Marikamba Trophy ಓಪನ್ ಹಾರ್ಡ್ ಟೆನಿಸ್ ಕ್ರಿಕೆಟ್...
- Advertisement -spot_imgspot_img

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ!

ಹೆಜಮಾಡಿಯಲ್ಲಿ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆದ “ಅಭರಣ್ GPL ಉತ್ಸವ 2026” – ಸಿಡಿಲಿನ ಸಮರದಲ್ಲಿ Temple Square Puttur ಗೆ ಚಾಂಪಿಯನ್ ಪಟ್ಟ! ಹೆಜಮಾಡಿ ಸಮೀಪದ ಶಾನುಭಾಗ...

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ

ಕಟಪಾಡಿಯಲ್ಲಿ ಕ್ರಿಕೆಟ್ ಪ್ರೇರಿತ ಮಿಯಾವಾಕಿ ಅರಣ್ಯ ಯೋಜನೆ ಉದ್ಘಾಟನೆ ಉಡುಪಿ, ಏಪ್ರಿಲ್ 5, 2026: ಪರಿಸರ ಸಂರಕ್ಷಣೆಗೆ ಹೊಸ ದಿಕ್ಕು ತೋರಿಸುವ ವಿಶಿಷ್ಟ ಪ್ರಯತ್ನವಾಗಿ, ಕ್ರಿಕೆಟ್ ದಂತಕಥೆ...

Must read

- Advertisement -spot_imgspot_img

You might also likeRELATED
Recommended to you