ಟೆನಿಸ್ಎಪ್ಪತ್ತನಾಲ್ಕರಲ್ಲಿ ಈ ಮೂವರೆ ಎತ್ತಿದ್ದು ಅರವತ್ತ ಒಂದು..!!

ಎಪ್ಪತ್ತನಾಲ್ಕರಲ್ಲಿ ಈ ಮೂವರೆ ಎತ್ತಿದ್ದು ಅರವತ್ತ ಒಂದು..!!

-

- Advertisment -spot_img
ಹಾರ್ಡ್ ಕೋರ್ಟಿನಲ್ಲಿ ನಡೆದ ನಿನ್ನೆಯ ಮೆಲ್ಬೋರ್ನ್ ಮೇಲಾಟದಲ್ಲಿ ಮಡ್ವಡೇವ್ ವಿರುಧ್ಧ ರೋಚಕವಾಗಿ ರಫಾಲ್ ನಡಾಲ್  ಜಯಭೇರಿ ಬಾರಿಸುವ ಮೂಲಕ ಪುರುಷರ ಟೆನಿಸ್‌ ಇತಿಹಾಸದಲ್ಲಿ ಇಪ್ಪತ್ತೊಂದು ಗ್ರಾಂಡ್ ಸ್ಲಾಮ್ ಎತ್ತಿದ ವಿಶ್ವದಾಖಲೆ ಬರೆದುಬಿಟ್ಟರು.
ಈ ಶತಮಾನದ ಸಮಕಾಲಿನರು ಸರ್ವಶ್ರೇಷ್ಠರು ಆದ ಫೆಡರರ್, ಜೊಕೊವಿಕ್, ನಡಾಲ್ ನಡುವಿನ ತ್ರಿಬಲ್ ತ್ರೆಟ್ ಸರಣಿಯಲ್ಲಿ ಸದ್ಯಕ್ಕೆ ನಡಾಲ್ ಇತಿಹಾಸ ನಿರ್ಮಿಸಿ ಲೀಡ್ ಪಡೆದುಕೊಂಡರು ಕೂಡ ಜೊಕೊವಿಕ್ ಓವರ್‌ಟೇಕ್ ಮಾಡುವುದು ಖಚಿತ. ವಯಸ್ಸು, ಫಿಟ್ನೆಸ್ ಕಾರಣದಿಂದ ರೋಜರ್ ಪೆಡರರ್ ಇನ್ಮುಂದೆ ಸ್ಲಾಮ್ ಗೆಲ್ಲುವುದು ಅನುಮಾನ ಆದರೆ ವ್ಯಾಕ್ಸಿನೇಷನ್‌ ವಿವಾದದಿಂದಾಗಿ ಆಸ್ಟ್ರೇಲಿಯಾ ಓಪನ್ ಮಿಸ್ ಮಾಡಿಕೊಂಡ ನಂಬರ್ ಒನ್ ಜೊಕೊವಿಕ್ ಸದ್ಯ ಇರುವ ಫಾರ್ಮಿನಲ್ಲಿ ಮುಂದಿನ ಫ್ರೆಂಚ್, ಯು ಎಸ್ ಓಪನ್ ಮತ್ತು ವಿಂಬಲ್ಡನ್‌ ಮೇಲೆ ಕಣ್ಣಿಟ್ಟಿರುವುದು ಸತ್ಯ, ಗೆಲ್ಲುವುದು ಗ್ಯಾರಂಟಿ.
ನಡಾಲ್ ವಿಶ್ವದಾಖಲೆಗೆ ಕಂಟಕ ಇರುವುದಂತು ಖಂಡಿತ.
ಇದರ ನಡುವೆ ಇಂತಹದ್ದೊಂದು ಆರೋಗ್ಯಕರ ಟೆನಿಸ್ ಸಮರಗಳಿಗೆ ಕ್ರೀಡಾ ಸೊಬಗಿಗೆ ಸಾಕ್ಷಿಯಾಗುವುದರ ಜೊತೆಗೆ ಇವರುಗಳ ಆಟವನ್ನು ಕಣ್ತುಂಬಿಕೊಳ್ಳುವುತ್ತಿರುವುದು ಬಹಳ ಖುಷಿಯ ಸಂಗತಿ..
ಎರಡು ದಶಕಗಳ ಹಿಂದೆ ಈ‌ ಮೂರು ಬಲಾಡ್ಯರ ಟೆನಿಸ್ ಪ್ರವೇಶ ಆಗುವ ಮೊದಲಿನ ಕಥೆ ಹೀಗಿರಲಿಲ್ಲ. ಅಂಡ್ರೆ ಅಗಸ್ಸಿ ಕೊನೆಯ ಸ್ಲಾಮ್ ಗೆದ್ದದ್ದು 2003ನೇ ಇಸವಿಯಲ್ಲಿ. ಅದೆ ವರ್ಷ ರೊಜರ್ ಪೆಡರರ್ ತಮ್ಮ ಚೊಚ್ಚಲ ಗ್ರಾಂಡ್ ಸ್ಲಾಮ್ ವಿಂಬಲ್ಡನ್ ಗೆಲ್ಲುವ ಮೊದಲು ಒಬ್ಬನೆ  ಒಬ್ಬ ಪುರುಷ ಆಟಗಾರ ಸಿಂಗಲ್ಸ್‌ ‌ನಲ್ಲಿ ಹದಿನೈದು ಗ್ರಾನ್ ಸ್ಲಾಮ್ ಮೇಲೆ ಹಕ್ಕು ಚಲಾಯಿಸಿರಲಿಲ್ಲ. ಪೀಟ್ ಸಂಪ್ರಾಸ್ ಗೆದ್ದ ಹದಿನಾಲ್ಕು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳೆ ರೆಕಾರ್ಡ್ ಆಗಿತ್ತು.!
ಮಹಿಳೆಯರಲ್ಲಿ ಮಾತ್ರ ಆ ಕಾಲದಲ್ಲಿ ಮಾರ್ಗರೆಟ್ ಕೋರ್ಟ್ 24, ಸ್ಟೆಫಿ ಗ್ರಾಫ್ 22 ಗ್ರಾಂಡ್ ಸ್ಲಾಮ್ ಗೆದ್ದಿದ್ದರು. ಸದ್ಯ ನಮ್ಮ ಕಾಲದ ಯು.ಎಸ್ ಸೆನ್ಸೆಷನ್ ಸೆರೆನಾ ವಿಲಿಯಮ್ಸ್ 23 ಗೆದ್ದು ಚಾಲ್ತಿಯಲ್ಲಿದ್ದಾರೆ..
ನೂರ ನಲವತ್ತೈದು ವರ್ಷಗಳ ಟೆನಿಸ್ ಗ್ರಾಂಡ್ ಸ್ಲಾಮ್ ಇತಿಹಾಸದಲ್ಲಿ
ನಿನ್ನೆಯದನ್ನು ಹೊರತುಪಡಿಸಿ ರೊಜರ್ ಪದಾರ್ಪಣೆಯ ನಂತರ ಹತ್ತೊಂಬತ್ತೆ ವರ್ಷಗಳಲ್ಲಿ ಈ ಮೂರು ಅತಿರಥರು ದೋಚಿದ್ದು ಭರ್ತಿ ಅರವತ್ತು ಗ್ರಾಂಡ್ ಸ್ಲಾಮ್ ಪ್ರಶಸ್ತಿಗಳು..ತಲಾ ಇಪ್ಪತ್ತರಂತೆ. ನಿನ್ನೆಯದು ಅರವತ್ತ ಒಂದನೇಯದು‌.. ಮತ್ತುಳಿದ ಸಹಸ್ರಕ್ಕು ಮಿಕ್ಕಿದ ಟೆನಿಸ್ ಆಟಗಾರರು ಎತ್ತಿದ್ದು‌ ಕೇವಲ ಹದಿಮೂರು ಗ್ರಾಂಡ್ ಸ್ಲಾಮ್…
ಅಬ್ಬಾಬ್ಬಾ…!
ತ್ರಿಮೂರ್ತಿಗಳ ಪಾರುಪತ್ಯದ ನಡುವೆ ಸೊರಗಿ ಹೋಗಿದ್ದು ಆ್ಯಂಡಿ ರಾಡಿಕ್, ಮರ್ರೆ, ವಾವ್ರಿಂಕ, ಮರಿನ್ ಸಿಲಿಕ್, ಪೊಟ್ರೊ, ಮಡ್ವಡೇವ್ ಅಂತ ಪ್ರತಿಭಾನ್ವಿತರು.  ಇಲ್ಲವಾದಲ್ಲಿ ಈ ಆಟಗಾರರ ಜೋಳಿಗೆಯಲ್ಲಿ ಮತ್ತಷ್ಟು ಪ್ರಶಸ್ತಿಗಳು ತುಂಬಿಕ್ಕೊಳ್ಳುತ್ತಿದ್ದವು.
ಹೇಗೆಂದರೆ ಸತತ ಹತ್ತು ಬ್ಯಾಲನ್ ಡೀಓರ್ ಗೆದ್ದ ಮೆಸ್ಸಿ ಮತ್ತು ರೊನಾಲ್ಡೊ ಡೊಮಿನೆನ್ಸ್ ನಡುವೆ ಸಿಕ್ಕಿಬಿದ್ದ ನೇಮರ್, ಬೆಂಜಮಾ,ಇನಿಯಸ್ತ, ಹಜಾರ್ಡ್, ಗ್ರೀಜ್‌ಮನ್ ರೀತಿ..
ಅವರು ಚಾಂಪಿಯನ್ ಆಟಗಾರರೆ ಆದರೆ ಇವರು ಚಾಂಪಿಯನ್ ಆಫ್ ಚಾಂಪಿಯನ್ಸ್…
ಪ್ರದೀಪ್ ಪಡುಕರೆ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

2 × two =

Latest news

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್

ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) – ಡಾ|| ಎಚ್ಎಸ್ ಪ್ರಸನ್ನ ಕುಮಾರ್ ಸ್ವಾಮೀಜಿ ಕಪ್ ಕ್ರಿಕೆಟ್ ಗೊರವನಹಳ್ಳಿ ಪ್ರೀಮಿಯರ್ ಲೀಗ್ (GPL) –  ಡಾ|| ಎಚ್ಎಸ್...

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3

ಜಿಎಸ್‌ಬಿ ಕ್ರಿಕೆಟ್ ಲೋಕದ ಮಹಾಸಂಗ್ರಾಮಕ್ಕೆ ದಿನಾಂಕ ನಿಗದಿ: ಡಿಸೆಂಬರ್ 5 ಮತ್ತು 6ರಂದು ನಡೆಯಲಿದೆ BPPL ಸೀಸನ್-3 ಕರ್ನಾಟಕದ ಜಿಎಸ್‌ಬಿ ಕ್ರಿಕೆಟ್ ವಲಯದಲ್ಲಿ ಅತ್ಯಂತ ನಿರೀಕ್ಷಿತ...

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ

ಕ್ರೀಡಾಭಿಮಾನಿಗಳು, ಆಟಗಾರರು ಹಾಗೂ ಆಯೋಜಕರಿಗೆ ಮತ್ತು ಅಭಿಮಾನಿಗಳಿಗೆ ಸ್ಪೋರ್ಟ್ಸ್ ಕನ್ನಡದ ಹೃತ್ಪೂರ್ವಕ ಕೃತಜ್ಞತೆ ಕರಾವಳಿ ಭಾಗದ ಗ್ರಾಮೀಣ ಕ್ರಿಕೆಟ್‌ಗೆ ಹೊಸ ಆಯಾಮ ನೀಡಿರುವ ಸ್ಪೋರ್ಟ್ಸ್ ಕನ್ನಡ, ಮತ್ತೊಂದು...

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ…!!!

ಕಟ್ಟೆ ಫ್ರೆಂಡ್ಸ್ ಕಾಳಾವರ-ಬ್ಲೂ ಬರ್ಡ್ಸ್ ನಾಗಾರ್ಜುನ ಬುಕ್ಕಿಗುಡ್ಡೆ ತಂಡಗಳಿಗೆ ಉಚಿತ ಪ್ರವೇಶ ಘೋಷಣೆ...!!! ನೊಂದ ಜೀವಗಳಿಗೆ ಆಸರೆಯಾದ ಕಟ್ಟೆ ಫ್ರೆಂಡ್ಸ್ ಕಾಳಾವರ ಮತ್ತು ಬ್ಲೂ ಬರ್ಡ್ಸ್ ನಾಗಾರ್ಜುನ...
- Advertisement -spot_imgspot_img

ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ

  ಮಾನವೀಯತೆಯ ಮೆರಗು: ಬಹುಮಾನ ಮೊತ್ತವನ್ನೆಲ್ಲಾ ಗಾಯಾಳು ಕ್ರಿಕೆಟಿಗನ ಚಿಕಿತ್ಸೆಗೆ ನೀಡಿದ ಕಟ್ಟೆ ಫ್ರೆಂಡ್ಸ್ ಕಾಳಾವರ ತಂಡ ಉಡುಪಿ: ಕ್ರೀಡಾ ಕ್ಷೇತ್ರದಲ್ಲಿ ಕ್ರಿಕೆಟ್ ಆಟಗಾರನ ಸಂಕಷ್ಟಕ್ಕೆ ಸ್ಪಂದಿಸಿ ಮಾನವೀಯತೆಯ...

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ

ವಿದ್ಯಾಬೆಳಕು ಕಾರ್ಯಕ್ರಮ; ಜೂನ್ 7ರಂದು ಪಿತ್ರೋಡಿಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಣೆ ಉಡುಪಿ: ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ವೆಂಕಟರಮಣ ಸ್ಪೋರ್ಟ್ಸ್ ಅಂಡ್ ಕಲ್ಚರಲ್...

Must read

- Advertisement -spot_imgspot_img

You might also likeRELATED
Recommended to you