6 C
London
Wednesday, April 24, 2024
Homeಕ್ರಿಕೆಟ್ಡೈನಾಮಿಕ್ ಡ್ಯಾಶರ್ಸ್ ದಂಡಿನದಿಬ್ಬ ತಂಡ "ಲಕ್ಷ್ಮೀಪುರ ಪ್ರಿಮಿಯರ್ ಲೀಗ್-2019"ರ ಚಾಂಪಿಯನ್

ಡೈನಾಮಿಕ್ ಡ್ಯಾಶರ್ಸ್ ದಂಡಿನದಿಬ್ಬ ತಂಡ “ಲಕ್ಷ್ಮೀಪುರ ಪ್ರಿಮಿಯರ್ ಲೀಗ್-2019″ರ ಚಾಂಪಿಯನ್

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img

ಲಕ್ಷ್ಮೀಪುರ ಲಯನ್ಸ್ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ,ಏಷ್ಯಾದ ಅತಿ ದೊಡ್ಡ ಏಕಶಿಲಾ ಬೆಟ್ಟ ಮಧುಗಿರಿ ಸಮೀಪದ ಬಡವನಹಳ್ಳಿ ಅಂಕಣದಲ್ಲಿ 2 ದಿನಗಳ ಹಗಲಿನ ಕ್ರಿಕೆಟ್ ಪಂದ್ಯಾಕೂಟ ಪ್ರಥಮ ಆವೃತ್ತಿಯ “ಲಕ್ಷ್ಮೀಪುರ ಪ್ರಿಮಿಯರ್ ಲೀಗ್” ಕಳೆದ ಶನಿವಾರ 12 ಮತ್ತು ರವಿವಾರ 13 ರಂದು ಜರುಗಿತ್ತು.

ಶಶಿಕುಮಾರ್ ಸಾರಥ್ಯದಲ್ಲಿ ಯುವ ಸ್ನೇಹಿತರ ಪಡೆಯ ಸಹಕಾರದೊಂದಿಗೆ ತುಮಕೂರು ಪರಿಸರದ 2 ಐಕಾನ್ ಆಟಗಾರರನ್ನು ಒಳಗೊಂಡ 10 ಫ್ರಾಂಚೈಸಿಗಳು ಪ್ರತಿಷ್ಟಿತ ಪ್ರಶಸ್ತಿಗಾಗಿ ಸೆಣಸಾಡಿತ್ತು.

ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಸಾಗಿದ ಈ ಪಂದ್ಯಾಕೂಟದ ಮೊದಲ ಕ್ವಾಲಿಫೈಯರ್ ಸುತ್ತಿನಲ್ಲಿ ವಂಶಿ ಮಧುಗಿರಿಯನ್ನು ಸೋಲಿಸಿದ ಡೈನಾಮಿಕ್ ಡ್ಯಾಶರ್ಸ್ ದಂಡಿನದಿಬ್ಬ ನೇರವಾಗಿ ಫೈನಲ್ ಗೆ ಜಿಗಿದಿತ್ತು. ಎಲಿಮಿನೇಟರ್ ಸುತ್ತಿನಲ್ಲಿ ರಾಕ್ ತುಮಕೂರು, ಪ್ರಿನ್ಸ್ ತಂಡವನ್ನು ಸೋಲಿಸಿದರೆ 2 ನೇ ಕ್ವಾಲಿಫೈಯರ್ ನಲ್ಲಿ ರಾಕ್ ತುಮಕೂರು ತಂಡವನ್ನು ವಂಶಿ ಬ್ರದರ್ಸ್ ತಂಡ ಸೋಲಿಸಿ ಫೈನಲ್ ಗೆ ಭಡ್ತಿ ಪಡೆದಿತ್ತು.

ಫೈನಲ್ ನಲ್ಲಿ ಡೈನಾಮಿಕ್ ಡ್ಯಾಶರ್ಸ್ ತಂಡ ವಂಶಿ ಬ್ರದರ್ಸ್ ಮಧುಗಿರಿಯ ತಂಡವನ್ನು ಸೋಲಿಸಿ ಚಾಂಪಿಯನ್ ಪಟ್ಟವನ್ನು ತನ್ನದಾಗಿಸಿಕೊಂಡಿತು.ಪ್ರಥಮ ಪ್ರಶಸ್ತಿಯಾಗಿ 1ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿ ಹಾಗೂ ರನ್ನರ್ಸ್ ವಂಶಿ ಬ್ರದರ್ಸ್ 50,000 ನಗದು ಹಾಗೂ ಆಕರ್ಷಕ ಟ್ರೋಫಿ ಪಡೆದುಕೊಂಡರು.

ವೈಯಕ್ತಿಕ ಬಹುಮಾನಗಳು ಕ್ರಮವಾಗಿ ಬೆಸ್ಟ್ ಬ್ಯಾಟ್ಸ್‌ಮನ್ ರಾಕ್ ತುಮಕೂರಿನ ಶಂಕು, ಬೆಸ್ಟ್ ಬೌಲರ್ ಡೈನಾಮಿಕ್ ನ ಅರ್ಜುನ್, ಬೆಸ್ಟ್ ಕೀಪರ್ ಪ್ರಿನ್ಸ್ ನೆಪೋಲಿ, ಬೆಸ್ಟ್ ಕೀಪರ್ ಹಾಗೂ ಫೈನಲ್ ನ ಪಂದ್ಯಶ್ರೇಷ್ಟ ಡೈನಾಮಿಕ್ ನ ರ‌್ಯಾಂಡಿ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ವಂಶಿಯ ಗಿರೀಶ್ ಪಡೆದುಕೊಂಡರು.

2 ವಾರಗಳ ಹಿಂದೆ ನಡೆದ ಆಟಗಾರರ ಹರಾಜು‌ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಅನುಭವಿ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ಈ ಪಂದ್ಯಾಕೂಟದ ವೀಕ್ಷಕ ವಿವರಣೆಯ ಸಾರಥ್ಯವನ್ನು ವಹಿಸಿದ್ದರು.

ಗಿರೀಶ್ ರಾವ್ ನೇತೃತ್ವದ “ಕ್ರಿಕ್ ಸೇ” ಈ ಪಂದ್ಯಾಕೂಟದ ನೇರ ಪ್ರಸಾರವನ್ನು ಬಿತ್ತರಿಸಿತ್ತು.

ಆರ್.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

nineteen + fourteen =