Categories
ಕ್ರಿಕೆಟ್

ದುಬೈನಲ್ಲಿ ಕನ್ನಡಿಗರ ಕ್ರೀಡಾ ಹಬ್ಬ- ಯುನೈಟೆಡ್ ಕಾಪು ಟ್ರೋಫಿ-2022 ಟೀಮ್ ಎಲಿಗೆಂಟ್ ಚಾಂಪಿಯನ್ಸ್

ದುಬೈ-ಅರಬ್ ರಾಷ್ಟ್ರ ಯು‌.ಎ‌.ಇ ಶಾರ್ಜಾದ ಅಲ್ ಧಾಯಿದ್ ಮೈದಾನದಲ್ಲಿ ಸ್ಪಿನ್ ಝೋನ್ ಮತ್ತು ರಿಚ್ಮಂಡ್ ದುಬೈ ಪ್ರಾಯೋಜಕತ್ವದಲ್ಲಿ  ಅಭೂತಪೂರ್ವ,ಅದ್ಧೂರಿ,ಯಶಸ್ವಿಯಾಗಿ 3 ನೇ ಬಾರಿಗೆ  ಜರುಗಿದ ಯುನೈಟೆಡ್ ಕಾಪು ಟ್ರೋಫಿ 2022 ಚಾಂಪಿಯನ್ಸ್ ಪಟ್ಟವನ್ನು  ಟೀಮ್ ಎಲಿಗೆಂಟ್ ಅಲಂಕರಿಸಿತು‌.
ಉಡುಪಿ ಮಂಗಳೂರು  ಪರಿಸರದ ಆಟಗಾರರನ್ನೊಳಗೊಂಡ ಒಟ್ಟು 8 ಪ್ರತಿಷ್ಠಿತ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು.
ಲೀಗ್ ಹಂತದ ರೋಚಕ ಹೋರಾಟಗಳ ಬಳಿಕ ಫೈನಲ್ ನಲ್ಲಿ ಟೀಮ್ ಎಲಿಗೆಂಟ್,ನವೀನ್ ಇಲೆವೆನ್ ತಂಡದ ವಿರುದ್ಧ ರೋಚಕ ಗೆಲುವನ್ನು ಸಾಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಟೂರ್ನಮೆಂಟ್ ನ ಬೆಸ್ಟ್ ಬೌಲರ್ ಪ್ರಶಸ್ತಿ ನವೀನ್ ಇಲೆವೆನ್ ಶಾಜಾನ್ ಮತ್ತು ಟೀಮ್ ಎಲಿಗೆಂಟ್ ನ ಸಫ್ವಾನ್ ಬೆಸ್ಟ್ ಬ್ಯಾಟರ್ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಕಾಪು ಪರಿಸರದ ಪ್ರಸಿದ್ಧ ಆಟಗಾರರಾದ ಶಾಕಿರ್ ವಿಟ್ಲ,ಫೈಜಲ್ ಕಾಪು,ಆಶಿಕ್ ಬೆಳಪು,ಶಫಿ ಮತ್ತು ಆದಿಲ್ ಮುಲ್ಲಾ ಇವರೆಲ್ಲರ ಸಾರಥ್ಯದಲ್ಲಿ, ನಡೆದ 3 ನೇ ಆವೃತ್ತಿಯ ಯುನೈಟೆಡ್ ಕಾಪು ಟ್ರೋಫಿ-2022 ಅತ್ಯಂತ ಶಿಸ್ತುಬದ್ಧ ಹಾಗೂ ಅದ್ಧೂರಿಯಾಗಿ ನಡೆದಿದ್ದು,ಅರಬ್ ರಾಷ್ಟ್ರದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾಟಗಳಲ್ಲೊಂದಾಗಿ ಗುರುತಿಸಿಕೊಂಡು ಮನೆಮಾತಾಗಿದೆ.
ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ನಡೆಯಿತು ಈ ಸಂದರ್ಭ ಮುಖ್ಯ ಅತಿಥಿಯಾಗಿ ಡಾ.ಮೊಹಮ್ಮದ್ ಖಾಲಿದ್ ಅಜ್ಮನ್,ದೀಪಕ್ ಡಿ.ಜೆ ದುಬೈ, ಎಸ್‌.ಎಫ್.ಎಸ್ ಫ್ರೈಟ್ ಸರ್ವಿಸ್ ದುಬೈ ನ ಶಾಹ್ನವಾಜ್ ಹುಸೇನ್ ,ರೆಹಾನ್ ರಿಚ್ಮಂಡ್ ದುಬೈ,ಸ್ಪಿನ್ ಝೋನ್ ಫೈಸಲ್ ಅಬ್ದುಲ್ ಹಮೀದ್,ಸುಹೇಲ್ ಎಕ್ಸ್ಪರ್ಟ್ ದಾಫ್ಜಾ ದುಬೈ,ಹಸ್ನಾ ಡೆವೆಲಪರ್ಸ್ ನ  ಆದಿಲ್ ಮತ್ತು ಯಾಸೀನ್ ಭಾಗವಹಿಸಿ ಪಂದ್ಯಾಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಡಾ.ಉರಾಳ್ಸ್ ವೆರಿಕೋಸ್ ವೈನ್ಸ್ ಭಾರತ ಇವರು ಕೂಡ  ಟೂರ್ನಮೆಂಟ್ ನ ಸಹಪ್ರಾಯೋಜಕರಾಗಿ ಅತ್ಯುತ್ತಮ ಸಹಕಾರ ನೀಡಿದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

thirteen + 13 =