10 C
London
Tuesday, April 23, 2024
Homeಕ್ರಿಕೆಟ್ದುಬೈನಲ್ಲಿ ಕನ್ನಡಿಗರ ಕ್ರೀಡಾ ಹಬ್ಬ- ಯುನೈಟೆಡ್ ಕಾಪು ಟ್ರೋಫಿ-2022 ಟೀಮ್ ಎಲಿಗೆಂಟ್ ಚಾಂಪಿಯನ್ಸ್

ದುಬೈನಲ್ಲಿ ಕನ್ನಡಿಗರ ಕ್ರೀಡಾ ಹಬ್ಬ- ಯುನೈಟೆಡ್ ಕಾಪು ಟ್ರೋಫಿ-2022 ಟೀಮ್ ಎಲಿಗೆಂಟ್ ಚಾಂಪಿಯನ್ಸ್

Date:

Related stories

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...
spot_imgspot_img
ದುಬೈ-ಅರಬ್ ರಾಷ್ಟ್ರ ಯು‌.ಎ‌.ಇ ಶಾರ್ಜಾದ ಅಲ್ ಧಾಯಿದ್ ಮೈದಾನದಲ್ಲಿ ಸ್ಪಿನ್ ಝೋನ್ ಮತ್ತು ರಿಚ್ಮಂಡ್ ದುಬೈ ಪ್ರಾಯೋಜಕತ್ವದಲ್ಲಿ  ಅಭೂತಪೂರ್ವ,ಅದ್ಧೂರಿ,ಯಶಸ್ವಿಯಾಗಿ 3 ನೇ ಬಾರಿಗೆ  ಜರುಗಿದ ಯುನೈಟೆಡ್ ಕಾಪು ಟ್ರೋಫಿ 2022 ಚಾಂಪಿಯನ್ಸ್ ಪಟ್ಟವನ್ನು  ಟೀಮ್ ಎಲಿಗೆಂಟ್ ಅಲಂಕರಿಸಿತು‌.
ಉಡುಪಿ ಮಂಗಳೂರು  ಪರಿಸರದ ಆಟಗಾರರನ್ನೊಳಗೊಂಡ ಒಟ್ಟು 8 ಪ್ರತಿಷ್ಠಿತ ತಂಡಗಳು ಪಂದ್ಯಾಟದಲ್ಲಿ ಭಾಗವಹಿಸಿದ್ದರು.
ಲೀಗ್ ಹಂತದ ರೋಚಕ ಹೋರಾಟಗಳ ಬಳಿಕ ಫೈನಲ್ ನಲ್ಲಿ ಟೀಮ್ ಎಲಿಗೆಂಟ್,ನವೀನ್ ಇಲೆವೆನ್ ತಂಡದ ವಿರುದ್ಧ ರೋಚಕ ಗೆಲುವನ್ನು ಸಾಧಿಸಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು.
ಟೂರ್ನಮೆಂಟ್ ನ ಬೆಸ್ಟ್ ಬೌಲರ್ ಪ್ರಶಸ್ತಿ ನವೀನ್ ಇಲೆವೆನ್ ಶಾಜಾನ್ ಮತ್ತು ಟೀಮ್ ಎಲಿಗೆಂಟ್ ನ ಸಫ್ವಾನ್ ಬೆಸ್ಟ್ ಬ್ಯಾಟರ್ ಮತ್ತು ಸರಣಿ ಶ್ರೇಷ್ಠ ಗೌರವಕ್ಕೆ ಭಾಜನರಾದರು.
ಕಾಪು ಪರಿಸರದ ಪ್ರಸಿದ್ಧ ಆಟಗಾರರಾದ ಶಾಕಿರ್ ವಿಟ್ಲ,ಫೈಜಲ್ ಕಾಪು,ಆಶಿಕ್ ಬೆಳಪು,ಶಫಿ ಮತ್ತು ಆದಿಲ್ ಮುಲ್ಲಾ ಇವರೆಲ್ಲರ ಸಾರಥ್ಯದಲ್ಲಿ, ನಡೆದ 3 ನೇ ಆವೃತ್ತಿಯ ಯುನೈಟೆಡ್ ಕಾಪು ಟ್ರೋಫಿ-2022 ಅತ್ಯಂತ ಶಿಸ್ತುಬದ್ಧ ಹಾಗೂ ಅದ್ಧೂರಿಯಾಗಿ ನಡೆದಿದ್ದು,ಅರಬ್ ರಾಷ್ಟ್ರದ ಪ್ರತಿಷ್ಠಿತ ಕ್ರಿಕೆಟ್ ಪಂದ್ಯಾಟಗಳಲ್ಲೊಂದಾಗಿ ಗುರುತಿಸಿಕೊಂಡು ಮನೆಮಾತಾಗಿದೆ.
ವರ್ಣರಂಜಿತ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ವಿತರಣೆ ನಡೆಯಿತು ಈ ಸಂದರ್ಭ ಮುಖ್ಯ ಅತಿಥಿಯಾಗಿ ಡಾ.ಮೊಹಮ್ಮದ್ ಖಾಲಿದ್ ಅಜ್ಮನ್,ದೀಪಕ್ ಡಿ.ಜೆ ದುಬೈ, ಎಸ್‌.ಎಫ್.ಎಸ್ ಫ್ರೈಟ್ ಸರ್ವಿಸ್ ದುಬೈ ನ ಶಾಹ್ನವಾಜ್ ಹುಸೇನ್ ,ರೆಹಾನ್ ರಿಚ್ಮಂಡ್ ದುಬೈ,ಸ್ಪಿನ್ ಝೋನ್ ಫೈಸಲ್ ಅಬ್ದುಲ್ ಹಮೀದ್,ಸುಹೇಲ್ ಎಕ್ಸ್ಪರ್ಟ್ ದಾಫ್ಜಾ ದುಬೈ,ಹಸ್ನಾ ಡೆವೆಲಪರ್ಸ್ ನ  ಆದಿಲ್ ಮತ್ತು ಯಾಸೀನ್ ಭಾಗವಹಿಸಿ ಪಂದ್ಯಾಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಡಾ.ಉರಾಳ್ಸ್ ವೆರಿಕೋಸ್ ವೈನ್ಸ್ ಭಾರತ ಇವರು ಕೂಡ  ಟೂರ್ನಮೆಂಟ್ ನ ಸಹಪ್ರಾಯೋಜಕರಾಗಿ ಅತ್ಯುತ್ತಮ ಸಹಕಾರ ನೀಡಿದರು.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

five × 3 =