Categories
ಭರವಸೆಯ ಬೆಳಕು

ಉಪ್ಪುಂದ- ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಡಾ.ಗೋವಿಂದಬಾಬು ಪೂಜಾರಿಯವರಿಗೆ ಸನ್ಮಾನ

ಸಮಾಜರತ್ನ,ಕೊಡುಗೈ ದಾನಿ,ಇತ್ತೀಚೆಗಷ್ಟೇ ಸಮಾಜಸೇವೆಗಾಗಿ  ಡಾಕ್ಟರೇಟ್ ಗೌರವಕ್ಕೆ ಭಾಜನರಾದ ಡಾ.ಗೋವಿಂದಬಾಬು ಪೂಜಾರಿಯವರ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ (ರಿ)ನ ಕಛೇರಿಗೆ ಸ್ಪೋರ್ಟ್ಸ್ ಕನ್ನಡ ತಂಡ ಭೇಟಿ ನೀಡಿ ಶ್ರೀಯುತರನ್ನು ಸನ್ಮಾನಿಸಲಾಯಿತು ಹಾಗೂ ನಂಚಾರಿನಲ್ಲಿ 95 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಕಾಮಧೇನು ಗೋಶಾಲೆ ಮಹಾಸಂಘ ಟ್ರಸ್ಟ್(ರಿ) ನ ಶಿಲಾನ್ಯಾಸ ಕಾರ್ಯಕ್ರಮದ ಗೌರವ ಉಪಸ್ಥಿತಿಗಾಗಿ ಆಹ್ವಾನಿಸಲಾಯಿತು..
ಈ ಸಂದರ್ಭ ಕಾಮಧೇನು ಗೋಶಾಲೆ ಮಹಾಸಂಘ ಟ್ರಸ್ಟ್(ರಿ)ಅಧ್ಯಕ್ಷರು,ಪತಂಜಲಿ ಯೋಗ ಗುರುಗಳಾದ ಶ್ರೀ.ರಾಜೇಂದ್ರ ಚಕ್ಕೇರ ನಂಚಾರು,ಟ್ರಸ್ಟ್ ನ ಗೌರವ ಸಲಹೆಗಾರರಾದ ಡೊನಾಲ್ಡ್ ಅರುಣ್ ಸಲ್ದಾನ,ಟ್ರಸ್ಟ್ ನ‌ ಕೋಶಾಧಿಕಾರಿ ಹಾಗೂ ಸ್ಪೋರ್ಟ್ಸ್ ಕನ್ನಡ ಸಂಪಾದಕರಾದ ಕೋಟ ರಾಮಕೃಷ್ಣ ಆಚಾರ್,ಪತ್ರಕರ್ತರು ಹಾಗೂ ಸ್ಪೋರ್ಟ್ಸ್ ಕನ್ನಡ ಜಾಹೀರಾತು ವಿಭಾಗ ಹಾಗೂ ಕಾರ್ಯಕ್ರಮ ಸಂಯೋಜನೆಯ ಮುಖ್ಯಸ್ಥರಾದ ಸುಶಾಂತ್ ಬೈಂದೂರು,ಪ್ರಸಾದ್ ಬೈಂದೂರು ಹಾಗೂ ಲೋಕೇಶ್ ಬೈಂದೂರು ಉಪಸ್ಥಿತರಿದ್ದರು…

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

12 − nine =