Categories
Uncategorized ಕ್ರಿಕೆಟ್

ದೇವದತ್ ಪಡಿಕ್ಕಲ್ ಬಿರುಸಿನ ಅರ್ಧ ಶತಕ ಕರ್ನಾಟಕಕ್ಕೆ ಜಯ

ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿಯ ಸೂಪರ್ ಲೀಗ್ ನ ಗ್ರೂಪ್ ‘ಬಿ’ ಪಂದ್ಯದಲ್ಲಿ ಝಾರ್ಖಂಡ್ ವಿರುದ್ಧ ಕರ್ನಾಟಕ 13 ರನ್ ಗಳ ರೋಚಕ ಜಯ ಗಳಿಸಿದೆ
ದೇವದತ್ ಪಡಿಕ್ಕಲ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ 13 ರನ್ ಗಳ ರೋಚಕ ಜಯ ಸಾಧಿಸಿದೆ.

ಟಾಸ್ ಗೆದ್ದ ಝಾರ್ಖಂಡ್ ಕರ್ನಾಟಕಕ್ಕೆ ಬ್ಯಾಟಿಂಗ್ ಮಾಡಲು ಅವಕಾಶ ನೀಡಿತು ಕರ್ನಾಟಕ ಪರ ಕೆಎಲ್ ರಾಹುಲ್ 36, ದೇವದತ್ ಪಡಿಕ್ಕಲ್ 63, ಮನೀಷ್ ಪಾಂಡೆ 16, ಕರುಣ್ ನಾಯರ್ 19, ಪವನ್ ದೇಶಪಾಂಡೆ 14, ಪ್ರವೀಣ್ ದೂಬೆ 10, ಜಗದೀಶ್ ಸುಚಿತ್ 11 ರನ್‌ ನೆರವಿನಿಂದ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 189 ರನ್ ಬಾರಿಸಿತು.

ಈ ಗುರಿ ಬೆನ್ನತ್ತಿದ ಝಾರ್ಖಂಡ್, ಆನಂದ್ ಸಿಂಗ್ 41, ಉತ್ಕರ್ಷ್ ಸಿಂಗ್ 11, ವಿರಾಟ್ ಸಿಂಗ್ 76, ಕುಮಾರ್ ಡಿಯೋಬ್ರಾತ್ 13, ಸುಮಿತ್ ಕುಮಾರ್ 23 ರನ್‌ ಗಳಿಸಿದರು ಅಂತಿಮವಾಗಿ ಝಾರ್ಖಂಡ್ 20 ಓವರ್‌ಗೆ 5 ವಿಕೆಟ್ ಕಳೆದುಕೊಂಡು176 ರನ್‌ ಗಳಿಸಲಷ್ಟೇ ಶಕ್ತವಾಯಿತು.

– ಪ್ರೀತಮ್ ಹೆಬ್ಬಾರ್.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

fourteen + six =