ಕ್ರಿಕೆಟ್ದಾಸನಪುರ ಹೋಬಳಿ ಹೊನಲು ಬೆಳಕಿನ ಅದ್ಧೂರಿಯ ಕ್ರಿಕೆಟ್ ಪಂದ್ಯಾವಳಿ ಚಾಂಪಿಯನ್ಸ್ ಲೀಗ್...

ದಾಸನಪುರ ಹೋಬಳಿ ಹೊನಲು ಬೆಳಕಿನ ಅದ್ಧೂರಿಯ ಕ್ರಿಕೆಟ್ ಪಂದ್ಯಾವಳಿ ಚಾಂಪಿಯನ್ಸ್ ಲೀಗ್ – 2019

-

- Advertisment -spot_img

ಟೆನ್ನಿಸ್ ಕ್ರಿಕೆಟ್ ವಲಯದಲ್ಲಿ ಈ ಋತುವಿನ ಅತ್ಯಂತ ಶ್ರೀಮಂತ ಪಂದ್ಯಾವಳಿ ಇಂದಿನಿಂದ ಬೆಂಗಳೂರಿನಲ್ಲಿ ನಡೆಯಲಿದೆ. ರವಿಕುಮಾರ್ ಕಿತ್ತನಹಳ್ಳಿ,ಡಿ.ಸಿ.ಗಂಗಾಧರ್ ಗೌಡ್ರು ಹಾಗೂ ಸೃಷ್ಟಿ ಲೋಕೇಶ್ ರವರ ತ್ರಿಮೂರ್ತಿಗಳ ಸಾರಥ್ಯದಲ್ಲಿ ಬೆಂಗಳೂರಿನ ಮಾದವಾರ ನೈಸ್ ರೋಡ್ ಮೈದಾನದಲ್ಲಿ 25 ಬುಧವಾರದಿಂದ 29 ರವಿವಾರದ ತನಕ 5 ದಿನಗಳ ಕಾಲ ಹೊನಲು ಬೆಳಕಿನಲ್ಲಿ ನಡೆಯಲಿದೆ.

12 ಫ್ರಾಂಚೈಸಿಗಳು ಸ್ಪರ್ಧಾ ಕಣದಲ್ಲಿದ್ದು, ದಾಸನಪುರ ಹಾಗೂ ಹೆಸರಘಟ್ಟ ಹೋಬಳಿಯ ಆಟಗಾರರಿಗೆ ಸೀಮಿತವಾಗಿರುವ ಈ ಪಂದ್ಯಾವಳಿಯಲ್ಲಿ ಜೈ ಕರ್ನಾಟಕದ ಸವ್ಯಸಾಚಿ ಕ್ರಿಕೆಟಿಗ ಪ್ರದೀಪ್ ಗೌಡ, ಫ್ರೆಂಡ್ಸ್ ಮಾಜಿ ಕ್ರಿಕೆಟಿಗ ಆದರ್ಶ ಗೌಡ, ಕಾಶಿ ಸಹಿತ ಒಬ್ಬ ಐಕಾನ್ ಆಟಗಾರರು ಒಂದೊಂದು ತಂಡವನ್ನು ಪ್ರತಿನಿಧಿಸಲಿದ್ದಾರೆ.

ಪಂದ್ಯಾವಳಿಯ ವಿಜೇತ ತಂಡಗಳು 7.5 ಲಕ್ಷ ಮೌಲ್ಯದ ನಗದು ಮತ್ತು 6 ಲಕ್ಷ ಮೌಲ್ಯದ ಬೆಳ್ಳಿಯ ಬಹುಮಾನಗಳಿಂದ ಪುರಸ್ಕರಿಸಲಾಗುತ್ತಿದೆ. ಪ್ರಥಮ ಸ್ಥಾನಿ ತಂಡ 4 ಲಕ್ಷ ನಗದು, ವಿಜೇತ ತಂಡ 2 ಲಕ್ಷ ನಗದು, ತೃತೀಯ ಸ್ಥಾನಿ ತಂಡ 1ಲಕ್ಷ,

ಚತುರ್ಥ ಸ್ಥಾನಿ ತಂಡ 50 ಸಾವಿರ ನಗದು ಸಹಿತ ಬೆಳ್ಳಿ ಟ್ರೋಫಿಗಳು ಹಾಗೂ ಬೆಳ್ಳಿ ಪದಕಗಳು,
ಪ್ರತಿ ಪಂದ್ಯದ ಪಂದ್ಯ ಶ್ರೇಷ್ಠ ಪ್ರಶಸ್ತಿಯಾಗಿ 7 ಸಾವಿರ ಮೌಲ್ಯದ ಬೈಸಿಕಲ್,ವಿಶೇಷವಾಗಿ ಟೆನ್ನಿಸ್ ಕ್ರಿಕೆಟ್ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ಸರಣಿ‌ ಶ್ರೇಷ್ಠ ಪ್ರಶಸ್ತಿಯಾಗಿ ದ್ವಿಚಕ್ರ ವಾಹನ,ಶ್ರೇಷ್ಠ ಎಸೆತಗಾರ ಹಾಗೂ ಶ್ರೇಷ್ಠ ದಾಂಡಿಗರಿಗೂ ದ್ವಿಚಕ್ರ ವಾಹನ ಬಹುಮಾನವಾಗಿ ನೀಡಲಾಗುತ್ತಿದೆ.

12 ಫ್ರಾಂಚೈಸಿಗಳು,ಮಾಲೀಕರು, ಐಕಾನ್ ಹಾಗೂ ತಂಡಗಳ ಚಿತ್ರ ಸಹಿತ ವಿವರ ಈ ಕೆಳಗಿನಂತಿದೆ.

1)ಯಶೋಗಂಗಾ ಸ್ಪೋರ್ಟ್ಸ್ ಕ್ಲಬ್

2)ರೂರಲ್ ಸಾಮ್ರಾಟ್ ಫ್ರೆಂಡ್ಸ್

3)ವಾಯುಪುತ್ರ ಕ್ರಿಕೆಟರ್ಸ್

4)ಹನುಮಾನ್ ವಾರಿಯರ್ಸ್

5)ದಾಸನಪುರ ರಾಕರ್ಸ್

6)ರೆಡ್ ಬುಲ್ಸ್

7) ವಿ.ಜಿ.ಜೆ ಜಾಗ್ವರ್ಸ್

8) ಜೆ.ಬಿ.ಸಿ‌.ಸಿ ಅಂಚೆಪಾಳ್ಯ

9) ಜಿ.ವೈ.ಸಿ

10) M.R ಕ್ರಿಕೆಟ್ ಟೀಮ್

11) ಜಿ.ಜೆ ಆರ್ಮಿ

12) E.K ಈಗಲ್ಸ್

ಕಳೆದ ವಾರ ನಡೆದಿದ್ದ ಆಕ್ಷನ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದ ಹಿರಿಯ ವೀಕ್ಷಕ ವಿವರಣೆಕಾರ ಶಿವನಾರಾಯಣ ಐತಾಳ್ ಕೋಟ ಹಾಗೂ ಪ್ರಸಿದ್ಧ ಕಾಮೆಂಟೇಟರ್ ಪ್ರಶಾಂತ ಅಂಬಲಪಾಡಿ ವೀಕ್ಷಕ ವಿವರಣೆ ನೀಡಲಿದ್ದು, M.Sports ನೇರ ಪ್ರಸಾರ ಬಿತ್ತರಿಸಿದರೆ, ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.

ಆರ್‌.ಕೆ.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

17 + 4 =

Latest news

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ

ಯಲಹಂಕದಲ್ಲಿ ಮೇ 29ರಿಂದ ‘ರಾಕರ್ಸ್ ಟ್ರೋಫಿ 2026’ ಕ್ರಿಕೆಟ್ ಟೂರ್ನಿ ಬೆಂಗಳೂರು ಉತ್ತರದ ಯಲಹಂಕ ನ್ಯೂಟೌನ್‌ನ ಹೊಯ್ಸಳ ಮೈದಾನದಲ್ಲಿ ಮೇ 29, 30 ಮತ್ತು 31ರಂದು “ಯಲಹಂಕ...

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ

ಕಡಿಯಾಳಿಯಲ್ಲಿ ‘ಸೈಮಂಡ್ಸ್ ಪ್ರೀಮಿಯರ್ ಲೀಗ್’ ಕ್ರಿಕೆಟ್ : ಮೇ 24ರಂದು ಟೂರ್ನಿ ಉಡುಪಿ ಜಿಲ್ಲೆಯ ಕಡಿಯಾಳಿ ಶಾಲಾ ಮೈದಾನದಲ್ಲಿ ಮೇ 24, 2026ರಂದು “ಸೈಮಂಡ್ಸ್ ಪ್ರೀಮಿಯರ್ ಲೀಗ್...

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್

ಕಟಪಾಡಿಯಲ್ಲಿ ಜರುಗಿದ ವಿಶ್ವಕರ್ಮ ಸಮಾಜದ ಕ್ರಿಕೆಟ್ ಟೂರ್ನಮೆಂಟ್ : ರತನ್ ರಾಕರ್ಸ್ ಕುಂದಾಪುರ ಚಾಂಪಿಯನ್ ಕಟಪಾಡಿ : ಯುವಕ ಸೇವಾದಳ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನ,...

ಬೈಂದೂರಿನಲ್ಲಿ ಆರಂಭವಾದ “ವಿಕ್ರಂ ಟ್ರೋಫಿ-2026” ಕ್ರಿಕೆಟ್ ಸಂಭ್ರಮ;  ಇಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು

ಬೈಂದೂರಿನಲ್ಲಿ ಆರಂಭವಾದ “ವಿಕ್ರಂ ಟ್ರೋಫಿ-2026” ಕ್ರಿಕೆಟ್ ಸಂಭ್ರಮ;  ಇಂದು ಸೆಮಿಫೈನಲ್ ಹಾಗೂ ಫೈನಲ್ ಪಂದ್ಯಗಳು ಬೈಂದೂರು : ವಿಕ್ರಂ ಕ್ರಿಕೆಟ್ ಕ್ಲಬ್ ಆಶ್ರಯದಲ್ಲಿ ಹಾಗೂ ಉಡುಪಿ ಜಿಲ್ಲಾ...
- Advertisement -spot_imgspot_img

ಮಹಿಳಾ ಅಂಡರ್-15 ಕ್ರಿಕೆಟ್ ತಂಡಕ್ಕೆ ಸಮೃದ್ಧಿ ಆಯ್ಕೆ

ಮಹಿಳಾ ಅಂಡರ್-15 ಕ್ರಿಕೆಟ್ ತಂಡಕ್ಕೆ ಸಮೃದ್ಧಿ ಆಯ್ಕೆ ಉಡುಪಿ ಜಿಲ್ಲೆಯ ಪ್ರತಿಭಾವಂತ ಕ್ರಿಕೆಟಿಗೆಯಾದ ಸಮೃದ್ಧಿ ಅವರು ಮಹಿಳಾ ಅಂಡರ್-15 ಲೆದರ್ ಬಾಲ್ ಕ್ರಿಕೆಟ್ ಅಸೋಸಿಯೇಷನ್ ತಂಡಕ್ಕೆ ಆಲ್‌ರೌಂಡರ್‌...

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ

ಆರ್‌ಪಿ ಟ್ರೋಫಿಗೆ ಕರ್ನಾಟಕದ ಅಕುಲ್ ಟೂರಿಸಂ XI ತಂಡ ಘೋಷಣೆ ಮಂಗಳೂರು/ಬೆಂಗಳೂರು: ಪ್ರತಿಷ್ಠಿತ ಆರ್‌ಪಿ ಟ್ರೋಫಿ 2026 ರಾಜ್ಯ ಮಟ್ಟದ ಕ್ರಿಕೆಟ್ ಟೂರ್ನಿಗೆ ಕರ್ನಾಟಕದ ಅಕುಲ್ ಟೂರಿಸಂ...

Must read

- Advertisement -spot_imgspot_img

You might also likeRELATED
Recommended to you