9 C
London
Wednesday, April 17, 2024
HomeAction Replayಅಪಮಾನದ ಕಿಚ್ಚಿಗೆ ಗೆಲುವಿನುತ್ತರ ನೀಡಿದ ಡಾನಿಲ್ ಮಡ್ವಡೇವ್

ಅಪಮಾನದ ಕಿಚ್ಚಿಗೆ ಗೆಲುವಿನುತ್ತರ ನೀಡಿದ ಡಾನಿಲ್ ಮಡ್ವಡೇವ್

Date:

Related stories

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...

ಇಂತಹ ಒಬ್ಬ ಆಟಗಾರನನ್ನು RCB ತಯಾರು ಮಾಡಿದೆಯೇ..?

ರಿಯಾನ್ ಪರಾಗ್’ನಂಥವರು ಕರ್ನಾಟಕದಲ್ಲಿ ಅದೆಷ್ಟು ಹುಡುಗರಿದ್ದರು..! ಈಗಲೂ ಇದ್ದಾರೆ.. ಆದರೆ ಅವರೆಲ್ಲಾ ಐಪಿಎಲ್’ನಲ್ಲಿ...

RCB ಫ್ರಾಂಚೈಸಿಗೆ ಕನ್ನಡಿಗರ ಮೇಲಿರುವುದು ನಿರ್ಲಕ್ಷ್ಯವಲ್ಲ, ಅಲರ್ಜಿ..!

ನಾಲ್ಕೇ ನಾಲ್ಕು ದಿನಗಳ ಹಿಂದೆ..  4 ಓವರ್’ಗಳಲ್ಲಿ 23 ರನ್, ಒಂದು...

RCB ಯನ್ನು ಸುಟ್ಟು ಹಾಕಿದ ಮಯಾಂಕ್ ಯಾದವ್ ಅವರ ವೇಗ

RCB ವಿರುದ್ಧ 3/14 ರ ಅದ್ಭುತ ಬೌಲಿಂಗ್ ಅಂಕಿಅಂಶಗಳಿಗಾಗಿ  ಮಯಾಂಕ್ ಯಾದವ್...
spot_imgspot_img

ಪಂದ್ಯವೊಂದರ ವೇಳೆ ಸಣ್ಣದ್ದೊಂದು ಒರಟು ವರ್ತನೆಗೆ ಜನ ಛಿಮಾರಿ ಹಾಕಿದ್ದರು ಈ ಹುಡುಗನಿಗೆ.ಪಂದ್ಯ ಪೂರ್ತಿ ಕೂಗುತ್ತಲೇ ಇವನನ್ನು ಅಪಹಾಸ್ಯ ಮಾಡಿದ್ದರು ಪ್ರೇಕ್ಷಕರು.ಅಷ್ಟಾಗಿಯೂ ಧೃತಿಗೆಡದೇ ಪಂದ್ಯವನ್ನು ಗೆದ್ದು ಮುಗಿಸಿದ ಈತ,’ನನ್ನನ್ನು ಅಪಹಾಸ್ಯ ಮಾಡುತ್ತಿರುವ ನಿಮಗೆ ಧನ್ಯವಾದಗಳು.ನಿಮ್ಮ ಈ ಅಪಹಾಸ್ಯದ ಧ್ವನಿಯೇ ನನ್ನನ್ನು ಅವುಡುಗಚ್ಚಿ ಆಡುವಂತೆ ಪ್ರೋತ್ಸಾಹಿಸುತ್ತದೆ.

ಇದೊಂದು ಪಂದ್ಯದಲ್ಲಿನ ನಿಮ್ಮ ತಿರಸ್ಕಾರದಿಂದ ನನ್ನಲ್ಲಿ ಹುಟ್ಟಿಕೊಂಡಿರುವ ಕಿಚ್ಚು ಕನಿಷ್ಟ ಮುಂದಿನ ಐದು ಪಂದ್ಯಗಳನ್ನು ಗೆಲ್ಲುವ ಶಕ್ತಿ ಕೊಟ್ಟಿದೆ’ ಎಂದಿದ್ದ.ಮಾತಿಗೆ ತಕ್ಕ ಹಾಗೆ ಮುಂದಿನ ಎಲ್ಲ ಪಂದ್ಯಗಳನ್ನು ಗೆದ್ದು ಬಂದವನು ಪ್ರಶಸ್ತಿ ಗೆಲ್ಲುವ ಕೊನೆಯ ಹಂತದಲ್ಲಿ ವಿಶ್ವ ಶ್ರೇಷ್ಠ ಎದುರಾಳಿಗೆ ಸಂಪೂರ್ಣ ಬೆವರಿಳಿಸಿ ವೀರೋಚಿತ ಸೋಲು ಕಂಡ .ಆವತ್ತಿನ ಮಾತುಗಳನ್ನೇ ಇವತ್ತಿಗೂ ಪುನರಾವರ್ತಿಸಿದವನ ಧಾಟಿ ಕೊಂಚಬದಲಾಗಿತ್ತು.’ನಿಮ್ಮ ಅಪಹಾಸ್ಯದ ಕೂಗು ನನ್ನನ್ನ ಗೆಲ್ಲಿಸುತ್ತಿದೆ ಎಂದು ಆವತ್ತು ಕೊಂಚ ಕೋಪದಲ್ಲಿ ನುಡಿದಿದ್ದೆ.ಇವತ್ತಿಗೂ ಅದೇ ಮಾತನ್ನ ಹೇಳುತ್ತೇನಾದರೂ ಕೋಪದಲ್ಲಿ ಅಲ್ಲ,ನಿಮ್ಮ ಪ್ರೋತ್ಸಾಹವೇ ನನ್ನನ್ನು ಇಲ್ಲಿಯವರೆಗೂ ಎಳೆದುತಂದಿದ್ದು’ ಎಂದು ನುಡಿದವನ ಧ್ವನಿಯಲ್ಲಿ ಪ್ರಾಮಾಣಿಕತೆ ಇತ್ತು.ಅಂದು ಅಪಹಾಸ್ಯದ ಕೂಗಿದ್ದ ಪ್ರೇಕ್ಷಕರ ಧ್ವನಿಯಲ್ಲಿಂದು ಮೆಚ್ಚುಗೆಯ ಹರ್ಷೋಧ್ಘಾರವಿತ್ತು.

ಇಪ್ಪತ್ಮೂರರ ಹರೆಯದ ಹುಡುಗನ ಆಟದಲ್ಲಿ ಅದ್ಭುತ ಶಾಸ್ತ್ತಿಯತೆಯಿದೆ,ಗೆಲ್ಲುವ ಛಲವಿದೆ.ಸಧ್ಯಕ್ಕಂತೂ ಎಟಿಪಿ ರ‌್ಯಾಂಕಿಂಗ್‌ನಲ್ಲಿ ನಾಲ್ಕನೆ ಸ್ಥಾನದಲ್ಲಿರುವ ರಷ್ಯಾದ ಡಾನಿಲ್ ಮಡ್ವಡೇವ್ ಭವಿಷ್ಯದ ಟೆನ್ನಿಸ್ ಭರವಸೆಯ ಆಟಗಾರನೇನೋ ಎನ್ನಿಸುತ್ತದೆ.ಹೌದಾ ಅಲ್ಲವಾ ಎಂಬ ಪ್ರಶ್ನೆಗೆ ಕಾಲವೇ ಉತ್ತರವಾದೀತು.

-ಗುರುರಾಜ್ ಕೊಡ್ಕಣಿ ಯಲ್ಲಾಪುರ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

four + eleven =