ಕ್ರಿಕೆಟ್ಟೆನಿಸ್ಬಾಲ್ ಕ್ರಿಕೆಟ್ ನ ಕ್ರಿಸ್ ಗೇಲ್ ಖ್ಯಾತಿಯ ಫ್ರೆಂಡ್ಸ್ ಬೆಂಗಳೂರಿನ ಸಾಗರ್...

ಟೆನಿಸ್ಬಾಲ್ ಕ್ರಿಕೆಟ್ ನ ಕ್ರಿಸ್ ಗೇಲ್ ಖ್ಯಾತಿಯ ಫ್ರೆಂಡ್ಸ್ ಬೆಂಗಳೂರಿನ ಸಾಗರ್ ಭಂಡಾರಿ(S.R.B ಸ್ಪೋರ್ಟ್ಸ್)

-

- Advertisment -spot_img
ಕರ್ನಾಟಕ ರಾಜ್ಯ ಕಂಡ ಬರಸಿಡಿಲಿನ ಹೊಡೆತದ ಈ ಬಲಗೈ ದಾಂಡಿಗ ತಾಂತ್ರಿಕ, ಮಾಂತ್ರಿಕ ಎಸೆತಗಳನ್ನು ಬಲಶಾಲಿ ಹೊಡೆತಗಳನ್ನಾಗಿ ಮಾರ್ಪಾಡಿಸಿ ಬೌಂಡರಿ,ಸಿಕ್ಸರ್ ಸಿಡಿಸುವುದರಲ್ಲಿ ನಿಸ್ಸೀಮ.
ಹೌದು ಸ್ನೇಹಿತರೇ ಟೆನ್ನಿಸ್ ಕ್ರಿಕೆಟ್ ನ ” ಸಾಗರ್  ಭಂಡಾರಿ” ಯಾರಿಗೆ ತಾನೇ ಗೊತ್ತಿಲ್ಲ.
ಈತ ದಾಂಡಿಗತನಕ್ಕಿಳಿದರೆ ಬೌಲರ್ ಗಳಿಗೆ ನಡುಕ.
ಈ ಆಟಗಾರನಿಗೆ ಎಸೆತಗಳನ್ನು ಎಸೆಯುವುದು
ತಲೆಬೇನೆಯ ವಿಚಾರವೇ ಸರಿ.
ಮೂಲತಃ  ಉಡುಪಿ ಸಮೀಪದ
ಪರ್ಕಳ ಮೂಲದವರಾದ,
ಪ್ರಾರಂಭದ ದಿನಗಳಲ್ಲಿ ಇವರ ಪ್ರತಿಭೆ ಮೊತ್ತಮೊದಲಿಗೆ ಗುರುತಿಸಿ ಕ್ರಿಕೆಟ್ ಗೆ  ಪರಿಚಯಿಸಿದವರು ಸ್ಪಾರ್ಕ್ ಉಡುಪಿಯ ಡಾ.ವಿನೋದ್.
ಸ್ಪಾರ್ಕ್ ತಂಡದಲ್ಲಿ ಮೊತ್ತಮೊದಲ ಬಾರಿ ಅಂಗಣದಲ್ಲಿ ಕಾಣಿಸಿಕೊಂಡ ಸಾಗರ್ ಭಂಡಾರಿ,ನಂತರದ ದಿನಗಳಲ್ಲಿ ಬೆಂಗಳೂರಿನ ಪೀಣ್ಯದ ಅಂಗಣದಲ್ಲಿ ತೋರುತ್ತಿದ್ದ ಅದ್ಭುತ ಪ್ರದರ್ಶನವನ್ನು ಗುರುತಿಸಿದ
ಕರ್ನಾಟಕ ರಾಜ್ಯ ಕಂಡ ಸಹೃದಯಿ ಕ್ರೀಡಾ ಪೋಷಕರಾದ” ಶ್ರೀಯುತ ರೇಣು ಗೌಡ” ರವರು ಕಳೆದ 26 ವರ್ಷಗಳಿಂದ ಕಟ್ಟಿ ಬೆಳೆಸಿದ ಬಲಿಷ್ಡ “ಫ್ರೆಂಡ್ಸ್ ಬೆಂಗಳೂರು” ತಂಡದಲ್ಲಿ
2006 ರಲ್ಲಿ ಭಂಡಾರಿಯವರಿಗೆ ಖಾಯಂ ಸ್ಥಾನವನ್ನು ದೊರಕಿಸಿಕೊಟ್ಟರು.
                   *”ಫ್ರೆಂಡ್ಸ್ ನ ಟ್ರಂಪ್ ಕಾರ್ಡ್”*
ಆರಂಭಿಕ ಆಟಗಾರನಾಗಿ ಸ್ಥಾನ ಭದ್ರಪಡಿಸಿಕೊಂಡ ಇವರು ತನ್ನ “ಒನ್ ಮ್ಯಾನ್ ಶೋ” ಪ್ರದರ್ಶನದ ಮೂಲಕ ತನ್ನ ತಂಡವನ್ನು ಹಲವಾರು ಪ್ರತಿಷ್ಟಿತ ಪಂದ್ಯಾಟಗಳಲ್ಲಿ ತಂಡವನ್ನು ಸೋಲಿನಿಂದ ಪಾರು ಮಾಡಿ, ಚಾಂಪಿಯನ್ ಪಟ್ಟವನ್ನು ತಂದು ಕೊಟ್ಟ
 ರೇಣು ಗೌಡರ ನಂಬಿಕಸ್ಥ ಹುಡುಗ.
ಬ್ಯಾಟಿಂಗ್ ಮಾತ್ರವಲ್ಲದೇ ಬೌಲಿಂಗ್ ವಿಭಾಗದಲ್ಲೂ ಮೇಲುಗೈ ಸಾಧಿಸಿದ ಈ ಆಟಗಾರ ವೇಗದ ಎಸೆತವನ್ನು ಎಸೆದು ಅಗ್ರಕ್ರಮಾಂಕದ ಆಟಗಾರರನ್ನು ಪೆವಿಲಿಯನ್ ಗೆ ಅಟ್ಟುವ ಬಲಗೈ  ಮಾರಕ ವೇಗಿ.
ಗೂಟದ ಹಿಂದೆ ಗೂಟ ರಕ್ಷಕನಾಗಿ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವ ಅದ್ಭುತ ಕೀಪರ್ ಕೂಡ ಹೌದು.
ಈ ಆಟಗಾರ ಸರಣಿ ಶ್ರೇಷ್ಠ ಪ್ರಶಸ್ತಿಗಾಗಿ ಪಡೆದ
3 ದ್ವಿಚಕ್ರ ವಾಹನಗಳನ್ನು ಪಡೆದ ಸಾಹಸಿ ಆಟಗಾರ.
ಕೇರಳದಲ್ಲಿ ನಡೆದ ಪಂದ್ಯಾಟದಲ್ಲಿ,
ಜಾಲಹಳ್ಳಿಯ ರಂಗ ಇಲೆವೆನ್ ಶಾರ್ಟ್ ಪಿಚ್ ಪಂದ್ಯಾಟ ಹಾಗೂ ಇತ್ತೀಚಿಗಷ್ಟೇ ಕೆ.ಆರ್.ಪುರಂ ನಲ್ಲಿ ನಡೆದ
“ನಾಗ ಇಲೆವೆನ್ ಟ್ರೋಫಿ” ಯ ಸರಣಿ ಶ್ರೇಷ್ಠ ಪ್ರಶಸ್ತಿ ಈತನ ಅದ್ಭುತ ಪ್ರದರ್ಶನಕ್ಕೆ ಸಾಕ್ಷಿ.
ಇವರು ಕಳೆದ 14 ವರ್ಷಗಳಿಂದ “ಫ್ರೆಂಡ್ಸ್ ಬೆಂಗಳೂರು” ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.ಇದಲ್ಲದೇ ಸಾಗರ್ ಭಂಡಾರಿ ತನ್ನ ಹುಟ್ಟೂರು ಉಡುಪಿಯ ತಂಡಗಳಲ್ಲೂ ತನ್ನ ಶ್ರೇಷ್ಠ ಪ್ರದರ್ಶನವನ್ನು ನೀಡಿರುತ್ತಾರೆ.
ಮುಂಬಯಿಯಲ್ಲಿ ನಡೆಯುವ ಪ್ರತಿಷ್ಟಿತ ಪಂದ್ಯಾವಳಿಗಳಲ್ಲಿ ಸಾಗರ್ ಭಂಡಾರಿ ಭಾಗವಹಿಸಿ ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ.
ಕಳೆದೆರಡು ವರ್ಷಗಳಿಂದ ಹೆಚ್ಚಾಗಿ ನಡೆಯುತ್ತಿರುವ ಪ್ರೀಮಿಯರ್ ಲೀಗ್ ಪಂದ್ಯಾವಳಿಗಳಲ್ಲಿ ಕೋಲಾರ,ತುಮಕೂರು,ತಿಪಟೂರಿನ ಪ್ರಸಿದ್ಧ ತಂಡಗಳನ್ನು ಪ್ರತಿನಿಧಿಸಿ ಸ್ಪೋಟಕ ಅರ್ಧಶತಕಗಳಿಸಿ ಬೃಹತ್ ಅಭಿಮಾನಿ ಬಳಗವನ್ನೇ ಸಂಪಾದಿಸಿರುತ್ತಾರೆ.
      *ಸಾಗರದಾಚೆಯೂ ಸಾಗರನ ಕೀರ್ತಿ*
ಸಾಗರನ ಕೀರ್ತಿ ಸಾಗರದಾಚೆಯೂ ಪಸರಿಸಿರುವುದು ರಾಜ್ಯ ಟೆನ್ನಿಸ್ ಕ್ರಿಕೆಟ್‌ ಗೆ ಹೆಮ್ಮೆಯ ವಿಷಯ.
“ಕುವೈಟ್ ರೈಡರ್ಸ್” ತಂಡದ ಪರವಾಗಿ ಆಡುವ ಇವರು
ಹಲವಾರು ದುಬಾರಿ ಮೊತ್ತದ ಪಂದ್ಯಾಕೂಟಗಳಲ್ಲಿ,
ಅತ್ಯುತ್ತಮ ದಾಂಡಿಗ ಪ್ರಶಸ್ತಿಯನ್ನು ಪಡೆದು
ಗಲ್ಫ್ ರಾಷ್ಟ್ರದ ಪ್ರೇಕ್ಷಕರನ್ನು ಗಮನ ಸೆಳೆದವರು.
 ಸಾಗರ್ ರ ಸಹೋದರ ಸಂದೀಪ್ ಭಂಡಾರಿ ಮುಂಬಯಿ ಅಂಡರ್ 22 ತಂಡದಲ್ಲಿ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಸಫಲರಾಗಿ,ನಂತರದ ದಿನಗಳಲ್ಲಿ
ಮುಂಬಯಿಯ ಪ್ರತಿಷ್ಠಿತ ಪಯ್ಯಡೆ ಸ್ಪೋರ್ಟ್ಸ್ ಕ್ಲಬ್,
ರಣಜಿ ಟ್ರೋಫಿ ತಂಡ, ಕರ್ನಾಟಕ  ಪ್ರೀಮಿಯರ್ ಲೀಗ್, ಬರೋಡಾ ಪ್ರೀಮಿಯರ್ ಲೀಗ್, ಮುಂಬಯಿ ಪ್ರೀಮಿಯರ್ ಲೀಗ್, ಮಂಗಳೂರು ಪ್ರೀಮಿಯರ್ ಲೀಗ್, ಗೋವಾ ಪ್ರೀಮಿಯರ್ ಲೀಗ್, ರಾಜಸ್ಥಾನ ಪ್ರೀಮಿಯರ್ ಲೀಗ್, ಗುಜರಾತ್ ಪ್ರೀಮಿಯರ್ ಲೀಗ್, ಮಲೇಷಿಯಾ ಪ್ರೀಮಿಯರ್ ಲೀಗ್, ಮುಂಬಯಿ ತಂಡದ ಪರವಾಗಿ ದುಬೈನಲ್ಲಿ ಆಡಿ,M.R.F. ಫೌಂಡೇಶನ್ ಚೆನ್ನೈ ಹಾಗೂ
ಅಕ್ಬರ್ ಟ್ರಾವೆಲ್ಸ್ ತಂಡದ ಪರವಾಗಿ D.Y ಪಾಟೀಲ್  ಟಿ.20 ಪಂದ್ಯವನ್ನಾಡಿದ ಹಿರಿಮೆ ಇವರದು.ತನ್ನ ವೇಗದ ಪಡೆ ಮೂಲಕ ಸ್ಕಾರ್ಪಿಯನ್ ವೇಗದ ಎಸೆತಗಾರ ಹಾಗೂ ಆಲ್ ಇಂಡಿಯಾ ಎರಡನೇ ವೇಗದ ಎಸೆತಗಾರ ಗೌರವಕ್ಕೆ ಪಾತ್ರರಾಗಿದ್ದಾರೆ.
ಅಣ್ಣನ ಹಾದಿ ಹಿಡಿದ “ಸಾಗರ್ ಭಂಡಾರಿ” ಯವರನ್ನು
ಅವರ ಬಲಶಾಲಿ ಹೊಡೆತಗಳಿಗಾಗಿ
ಟೆನ್ನಿಸ್ ಬಾಲ್ ನ “ಕ್ರಿಸ್ ಗೇಯ್ಲ್” ಬಿರುದನ್ನು ನೀಡಿರುತ್ತಾರೆ.
2018 ರ ಆಗಸ್ಟ್ ನಲ್ಲಿ S.R.B ಸ್ಪೋರ್ಟ್ಸ್ ಪ್ರಾರಂಭಿಸಿ ಕ್ರೀಡಾಪಟುಗಳಿಗೆ
ರಿಯಾಯಿತಿ ದರದಲ್ಲಿ S.R.B ಅತ್ಯುತ್ತಮ ಬ್ರಾಂಡ್ ನ ಕ್ರೀಡಾಪರಿಕರಗಳನ್ನು ಒದಗಿಸಿ,ಕ್ರೀಡೆಗೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಾ ಬಂದಿದ್ದಾರೆ.
ಉಡುಪಿಯ ಕೀರ್ತಿಯನ್ನು ಸಾಗರದಾಚೆಯೂ ಕೊಂಡೊಯ್ದ “ಸಾಗರ್ ಭಂಡಾರಿ” ಯವರಿಗೆ
ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ವತಿಯಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.ರಾಜ್ಯ,ರಾಷ್ಟ್ರ ಮಟ್ಟದಲ್ಲಿ ನಿಮ್ಮ ಕೀರ್ತಿ ಪಸರಿಸಲಿ.
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

nineteen − twelve =

Latest news

ತುಮಕೂರಿನಲ್ಲಿ ರಾಜ್ಯಮಟ್ಟದ  ಕ್ರಿಕೆಟ್ ಟೂರ್ನಮೆಂಟ್

ತುಮಕೂರಿನಲ್ಲಿ ರಾಜ್ಯಮಟ್ಟದ  ಕ್ರಿಕೆಟ್ ಟೂರ್ನಮೆಂಟ್ ಡಾ. ರಾಜ್ ಸಾಂಸ್ಕೃತಿಕ ಹಾಗೂ ಕ್ರೀಡಾ ಸಂಘ, ತುಮಕೂರು  ಹಾಗೂ ಚಕ್ರವರ್ತಿ ಸ್ಪೋರ್ಟ್ಸ್ ಕ್ಲಬ್ ತುಮಕೂರು ಇವರ ವತಿಯಿಂದ ರಾಜ್ಯಮಟ್ಟದ ಹೊನಲು ಬೆಳಕಿನ ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಲಾಗಿದೆ. ಈ ಟೂರ್ನಮೆಂಟ್ ಡಾ....

ಶೆಫ್‌ಟಾಕ್ ಪ್ರೀಮಿಯರ್ ಲೀಗ್ ಸೀಸನ್ 6 ಕ್ರಿಕೆಟ್ ಸಂಭ್ರಮ-ಕಂಪೆನಿ ಸಿಬ್ಬಂದಿಗಳ ಮಹಾಸಂಗಮ

ಶೆಫ್‌ಟಾಕ್ ಪ್ರೀಮಿಯರ್ ಲೀಗ್ ಸೀಸನ್ 6 ಕ್ರಿಕೆಟ್ ಸಂಭ್ರಮ-ಕಂಪೆನಿ ಸಿಬ್ಬಂದಿಗಳ ಮಹಾಸಂಗಮ! ಬೆಂಗಳೂರು:  ಪ್ರತೀ ಬಾರಿಯಂತೆ ಈ ವರ್ಷದ ‘Cheftalk Premier League – Season 6’ ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 13...

ಮಲ್ಪೆ ಬಂದರು ಸಹಕಾರಿ ನೌಕರರ ಸಂಘದಿಂದ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾ ಸ್ಪರ್ಧೆಗಳು

ಮಲ್ಪೆ ಬಂದರು ಸಹಕಾರಿ ನೌಕರರ ಸಂಘದಿಂದ ಕ್ರಿಕೆಟ್ ಟೂರ್ನಮೆಂಟ್ ಹಾಗೂ ಕ್ರೀಡಾ ಸ್ಪರ್ಧೆಗಳು! ಮಲ್ಪೆ, ಮೀನುಗಾರಿಕಾ ಬಂದರು: ಮಲ್ಪೆ ಬಂದರು ಸಹಕಾರಿ ನೌಕರರ ಸಂಘ, ಮಲ್ಪೆ ಇವರ ವತಿಯಿಂದ,...

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”

ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ ನಿಂದ “ಕಿನ್ನಿಮೂಲ್ಕಿ ಸೂಪರ್ ಲೀಗ್ – 2026”   ಉಡುಪಿ: ಕಿನ್ನಿಮೂಲ್ಕಿ ಸ್ಪೋರ್ಟ್ಸ್ ಕ್ಲಬ್ (Kinnimulki Sports Club) ವತಿಯಿಂದ ಪ್ರತಿಷ್ಠಿತ ಕಿನ್ನಿಮೂಲ್ಕಿ ಸೂಪರ್...
- Advertisement -spot_imgspot_img

ಗೆಳೆಯರು ಕಪ್ 2025 – 42 ವರ್ಷ ಮೇಲ್ಪಟ್ಟ ಲೆಜೆಂಡ್ಸ್‌ಗಳ ಟೂರ್ನಿಯಲ್ಲಿ ಫ್ರೆಂಡ್ಸ್ ಬೆಂಗಳೂರು ವಿಜಯ! 

ಗೆಳೆಯರು ಕಪ್ 2025 – 42 ವರ್ಷ ಮೇಲ್ಪಟ್ಟ ಲೆಜೆಂಡ್ಸ್‌ಗಳ ಟೂರ್ನಿಯಲ್ಲಿ ಫ್ರೆಂಡ್ಸ್ ಬೆಂಗಳೂರು ವಿಜಯ!  ಕ್ರಿಕೆಟ್ ಲೋಕದ ಅಭಿಮಾನಿಗಳನ್ನು ರಂಜಿಸಿದ ಗೆಳೆಯರು ಕಪ್ 2025 ಟೂರ್ನಮೆಂಟ್...

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ.

ದುಬೈ ಕರ್ನಾಟಕ ಕ್ರಿಕೆಟ್ ಲೀಗ್:ಮುಖ್ಯ ಸಲಹೆಗಾರರಾಗಿ ವಿಠಲ್ ರಿಶಾನ್ ನೇಮಕ. ಖ್ಯಾತ ಕ್ರಿಕೆಟ್ ಆಟಗಾರ ವಿಠಲ್ ರಿಶಾನ್ ನಾಯಕ್ ಅವರು ದುಬೈನ ಪ್ರಸಿದ್ಧ ಕ್ರಿಕೆಟ್ ತಂಡವಾದ ಕರ್ನಾಟಕ...

Must read

- Advertisement -spot_imgspot_img

You might also likeRELATED
Recommended to you