ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ ಚಂದ್ ಜನ್ಮದಿನಾಚರಣೆಯ ಪ್ರಯುಕ್ತ ದೇಶದಾದ್ಯಂತ ಆಚರಿಸಲಾಗುವ ರಾಷ್ಟ್ರೀಯ ಕ್ರೀಡಾದಿನಾಚರಣೆಯ ಅಂಗವಾಗಿ, ಕಳೆದ 4 ದಶಕಗಳಿಂದ ಕ್ರೀಡಾ ಕೃಷಿಯಲ್ಲಿ ಸತತ ನಿರತವಾಗಿರುವ ಸಂಸ್ಥೆ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ಲಬ್” ಈ ಬಾರಿ DigFlick(Insurance) ಪ್ರಾಯೋಜಕತ್ವದಲ್ಲಿ,ಗುರುವಾರದಂದು ಹಳೆಯಂಗಡಿಯ ಸ್ಪೋರ್ಟ್ಸ್ ಕ್ಲಬ್ ನಲ್ಲಿ “ಟೊರ್ಪೆಡೋಸ್ ಸ್ಪೋರ್ಟ್ಸ್ ಕ್ವಿಜ್-2019″ಆಯೋಜಿಸಲಾಗಿತ್ತು.

ದೇಶದಾದ್ಯಂತ ಹಲವಾರು ಯಶಸ್ವಿ ಕ್ವಿಜ್ ಕಾರ್ಯಕ್ರಮಗಳನ್ನು ನೀಡಿದ ಪ್ರಸಿದ್ಧ ಕ್ವಿಜ್ ಮಾಸ್ಟರ್,ಪ್ರೇರಕ ಭಾಷಣಕಾರ,ತರಬೇತುದಾರ,ನುರಿತ ಕ್ರೀಡಾತಜ್ಞ, ಮಿ.ರಂಜನ್ ನಗರಕಟ್ಟೆಯವರು ದೂರದ ಮುಂಬಯಿಯಿಂದ ಆಗಮಿಸಿದ್ದರು. ಕ್ರೀಡೆಗಳ ವೈವಿಧ್ಯತೆಯ ಪರಿಚಯ ನೀಡುತ್ತಾ, ಪ್ರಶ್ನೋತ್ತರ ಕಾರ್ಯಕ್ರಮ ನಡೆಸಿ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಿದರು.
ಮಾಜಿ ಕ್ರೀಡಾ ಸಚಿವ,ಮೂಡಬಿದಿರೆಯ ಶಾಸಕ ಅಭಯಚಂದ್ರ ಜೈನ್ ರವರಿಂದ ಉದ್ಘಾಟಿಸಲ್ಪಟ್ಟ ಈ ಕ್ವಿಜ್ ಕಾರ್ಯಕ್ರಮದಲ್ಲಿ 37 ಶಾಲಾ ತಂಡಗಳು ಭಾಗವಹಿಸಿದ್ದು ,ಅದರಲ್ಲಿ 10 ಬೆಸ್ಟ್ ತಂಡಗಳನ್ನು ಆಯ್ಕೆಯಾಗಿ,4 ತಂಡಗಳು ಫೈನಲ್ ಪ್ರವೇಶಿಸಿದವು.

ಲಿಖಿತ ರೌಂಡ್ಸ್ ನಲ್ಲಿ ಅತ್ಯಧಿಕ ಅಂಕಗಳಿಸಿದ 2 ತಂಡಗಳು ನೇರವಾಗಿ ಫೈನಲ್ ಪ್ರವೇಶಿಸಿದವರು
ರಿಕಿ ರೋಜರ್ ಮತ್ತು ಮ್ಯಾಥ್ಯೂ (ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು)
ಲಾರ್ಡ್ಸನ್ ಮತ್ತು ನಿಖಿಲ್ (ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು)

ಮೊದಲ ಸೆಮಿಫೈನಲ್:
ಪ್ರಣಮ್ಯ ಹಾಗೂ ಕೃತಿ
(ಸೈಂಟ್ ಅ್ಯಾಗ್ನೆಸ್ ಸ್ಕೂಲ್)
ಅನಿಕೇತ್ ಹಾಗೂ ಚಿನ್ಮಯ್ ಎಚ್.ಜಿ
(ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ)
ಪ್ರಥಮೇಶ್ ಹಾಗೂ ಮೋಕ್ಷಿತ್
(ದಿಲ್ಲಿ ಪಬ್ಲಿಕ್ ಸ್ಕೂಲ್)
ಹಿಮಾಂಕ್ ಪಾಂಡೆ ಹಾಗೂ ಅನುಷ್ಕಾ ಸಿಂಗ್
(ದಿಲ್ಲಿ ಪಬ್ಲಿಕ್ ಸ್ಕೂಲ್)

ಎರಡನೇ ಸೆಮಿಫೈನಲ್:
ಸಮರ್ಥ್ ಹಾಗೂ ರೋಶ್
(ಸಿದ್ಧಿ ವಿನಾಯಕ ಸ್ಕೂಲ್ ಹಟ್ಟಿಯಂಗಡಿ)
ದಿವ್ಯಾ ಅಮೀನ್ ಹಾಗೂ ಶ್ರೀ ಲಕ್ಷ್ಮೀ
(ದಿಲ್ಲಿ ಪಬ್ಲಿಕ್ ಸ್ಕೂಲ್)
ರಕ್ಷಿತ್.ಜಿ.ಮಲ್ಯ ಹಾಗೂ ಅಂಕಿತ್ ಕಿಣಿ
(ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್)
ಮುರಳೀಧರ್ ರಾವ್ ಹಾಗೂ ಗಣೇಶ್ ಭಟ್
(ಲಿಟ್ಲ್ ರಾಕ್ ಇಂಡಿಯನ್ ಸ್ಕೂಲ್ ಬ್ರಹ್ಮಾವರ)

ಫೈನಲ್ ಫಲಿತಾಂಶ:
ಪ್ರಥಮ-
ಲಾರ್ಡ್ಸನ್ ಮತ್ತು ನಿಖಿಲ್
(ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು)
ದ್ವಿತೀಯ-
ರಿಕಿ ರೋಜರ್ ಮತ್ತು ಮ್ಯಾಥ್ಯೂ
(ಸೈಂಟ್ ತೆರೆಸಾ ಸ್ಕೂಲ್ ಮಂಗಳೂರು)
ತೃತೀಯ-
ಪ್ರಣಮ್ಯ ಮತ್ತು ಕೃತಿ
(ಸೈಂಟ್ ಅ್ಯಾಗ್ನೆಸ್ ಸ್ಕೂಲ್ ಮಂಗಳೂರು)
ಚತುರ್ಥ ಸ್ಥಾನಿ-
ದಿವ್ಯಾ ಅಮೀನ್ ಹಾಗೂ ಶ್ರೀ ಲಕ್ಷ್ಮೀ
(ದಿಲ್ಲಿ ಪಬ್ಲಿಕ್ ಸ್ಕೂಲ್ M.R.P.L)

ಸೀನಿಯರ್ಸ್ ವಿಭಾಗದ ವಿಜೇತರು :
ಪ್ರಥಮ -5000,ದ್ವಿತೀಯ-3000,ತೃತೀಯ-2000 ನಗದು ಹಾಗೂ
ಜ್ಯೂನಿಯರ್ಸ್ ವಿಭಾಗದ ವಿಜೇತರು :
ಪ್ರಥಮ-3000,ದ್ವಿತೀಯ-2000 ತೃತೀಯ-1000 ನಗದು ಬಹುಮಾನ ಪಡೆದರು.

ವಿಜೇತರಿಗೆ ಕ್ವಿಜ್ ಮಾಸ್ಟರ್ ಮಿ.ರಂಜನ್ ನಗರಕಟ್ಟೆಯವರು ವಿಜೇತರಿಗೆ ಆಕರ್ಷಕ ಟ್ರೋಫಿ, ನಗದು ಬಹುಮಾನ, ಪದಕಗಳನ್ನು ನೀಡಿ ಪುರಸ್ಕರಿಸಿ, ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣಪತ್ರ ವಿತರಿಸಿದರು. ಕ್ವಿಜ್ ಕಾರ್ಯಕ್ರಮಕ್ಕೆ ಅಗತ್ಯ ಪರಿಕರಗಳನ್ನು ಗಣೇಶ್ ಕಾಮತ್ ನೇತೃತ್ವದ “ಸ್ಪೋರ್ಟ್ಸ್ ಡೆನ್ ಈವೆಂಟ್” ಸಂಸ್ಥೆ ಪೂರೈಸಿತ್ತು.

ಸಂಸ್ಥೆಯ ಅಧ್ಯಕ್ಷ ಗೌತಮ್ ಶೆಟ್ಟಿ ವಿಜೇತರನ್ನು ಅಭಿನಂದಿಸಿದರು, ಮಂಗಳೂರು ಮಹಾನಗರ ಪಾಲಿಕೆ ಕಾರ್ಪೋರೇಟರ್ ಪ್ರತಿಭಾ ಕುಳಾಯಿ,ಸಂಸ್ಥೆಯ ಉಪಾಧ್ಯಕ್ಷ ನಾಗಭೂಷಣ್ ರೆಡ್ಡಿ ಉಪಸ್ಥಿತರಿದ್ದರು.

ಅಶ್ವಿನ್ ಪಡುಕೋಣೆ ಕಾರ್ಯಕ್ರಮ ನಿರ್ವಹಿಸಿದರೆ,ಮೆನೇಜರ್ ಕೆ.ಪಿ.ಸತೀಶ್,ಕೋಚ್ ಸಂತೋಷ್ ಖಾರ್ವಿ,ಭಾಗ್ಯರಾಜ್,ಪ್ರಜ್ವಲ್ ಕುಳಾಯಿ,ದೀಪಕ್ ಕೋಟ್ಯಾನ್, ಕಾರ್ತಿಕ್,ಸಂಪತ್,ಚರಣ್, ನವನೀತ್,ತೇಜಸ್ ಹಾಗೂ ರಾಘವೇಂದ್ರ ಸಹಕರಿಸಿದರು.
ಕಾರ್ಯಕ್ರಮದ ನೇರ ಪ್ರಸಾರವನ್ನು ಕ್ರಿಕ್ ಸೇ ಯೂಟ್ಯೂಬ್ ಚಾನೆಲ್ ಬಿತ್ತರಿಸಿತ್ತು.
ಆರ್.ಕೆ.ಆಚಾರ್ಯ ಕೋಟ