21.3 C
London
Saturday, May 11, 2024
Homeಸಂತಾಪಬ್ಲೂ ಸ್ಟಾರ್ ಶಿರ್ವ ಸ್ಥಾಪಕ ಸದಸ್ಯ-ನಿವೃತ್ತ ದೈಹಿಕ ಶಿಕ್ಷಕ ಡೇವಿಡ್ ಮಥಾಯಸ್ ನಿಧನ

ಬ್ಲೂ ಸ್ಟಾರ್ ಶಿರ್ವ ಸ್ಥಾಪಕ ಸದಸ್ಯ-ನಿವೃತ್ತ ದೈಹಿಕ ಶಿಕ್ಷಕ ಡೇವಿಡ್ ಮಥಾಯಸ್ ನಿಧನ

Date:

Related stories

ನಿನ್ನ ಟೈಮ್ ಬಂದೇ ಬರುವುದು, ಹೀಗೇ ಆಡುತ್ತಿರು ಕರುಣ್..!

1996ರಲ್ಲಿ ಅರ್ಜುನ ರಣತುಂಗ ನಾಯಕತ್ವದ ಶ್ರೀಲಂಕಾ ತಂಡ ಏಕದಿನ ವಿಶ್ವಕಪ್ ಗೆದ್ದಾಗ...

ದುಡ್ಡಿನ ಮದದಲ್ಲಿ ಕೊಬ್ಬಿರುವ ಈ business tycoonಗಳಿಗೆ ದೇಶದ ಕ್ರಿಕೆಟ್ ಹೀರೊಗಳ ಮೇಲೆ ಗೌರವ ಇರಲು ಹೇಗೆ ಸಾಧ್ಯ..?

17 ವರ್ಷಗಳ ಐಪಿಎಲ್ ಚರಿತ್ರೆಯಲ್ಲಿ ಸಾವಿರಕ್ಕೂ ಹೆಚ್ಚು ಪಂದ್ಯಗಳು ನಡೆದಿವೆ. ಆ...

Reject ಪೀಸ್‌ಗಳು ವಾಪಸ್ ಎದ್ದು ಬಂದ ಕಥೆ..!

ಒಬ್ಬ by mistake ಪಂಜಾಬ್ ಕಿಂಗ್ಸ್ ತಂಡ ಸೇರಿದ್ದವ. ಇನ್ನೊಬ್ಬ ತನ್ನ...

ಇಂದು ವಿಶ್ವದ ಅತ್ಯಂತ ಪ್ರೀತಿಪಾತ್ರ ಕ್ರಿಕೆಟಿಗ ಧೋನಿಯ ಕೊನೆಯ ಪಂದ್ಯ..

ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ...

T20 ವಿಶ್ವಕಪ್‌ನಲ್ಲಿ ಭಾರತದ ವಿಕೆಟ್‌ಕೀಪರ್ ಯಾರು? 5 ಆಟಗಾರರು ರೇಸ್ ನಲ್ಲಿ

ಐಪಿಎಲ್  ನಂತರ ಟಿ20 ವಿಶ್ವಕಪ್ ಆಡಬೇಕಿದೆ. ಈ ಮೆಗಾ  ಟೂರ್ನಿಯನ್ನು ಜೂನ್‌ನಲ್ಲಿ...
spot_imgspot_img
ಉಡುಪಿ-1978-79 ರಲ್ಲಿ ಶಿರ್ವದಲ್ಲಿ ಸ್ಥಾಪನೆಯಾದ ಬ್ಲೂ ಸ್ಟಾರ್ ಕ್ರಿಕೆಟ್ ಕ್ಲಬ್ ನ ಸಕ್ರಿಯ, ಸ್ಥಾಪಕ ಸದಸ್ಯರಲ್ಲಿ ಒಬ್ಬರಾಗಿ, ಸುಮಾರು 40 ವರ್ಷದ ಸುಧೀರ್ಘ ಅವಧಿಗೆ, ಉಡುಪಿಯ ಸೈಂಟ್ ಮೇರೀಸ್ ಕನ್ನಡ ಮೀಡಿಯಂ ಹೈಸ್ಕೂಲಿನಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಜನಪ್ರಿಯರಾಗಿದ್ದ ಡೇವಿಡ್ ಮಥಾಯಸ್ ರವರು ನಿನ್ನೆ ನಮ್ಮನ್ನು ಅಗಲಿದ್ದಾರೆ.
1979 ರಿಂದ ಸರಿ ಸುಮಾರು 13,14 ವರುಷ, ಶಿರ್ವ ಬ್ಲೂ ಸ್ಟಾರ್ ತಂಡದ ಆಡುವ ಬಳಗದಲ್ಲಿ, ಸದಾ ಗುರುತಿಸಿಕೊಂಡಿದ್ದ ,ಒಬ್ಬ ಉತ್ತಮ ಸವ್ಯಸಾಚಿ ಡೇವಿಡ್. ಒಂದೇ ಶೈಲಿಯಲ್ಲಿ ಆಫ್ ಮತ್ತು ಲೆಗ್ ಸ್ಪಿನ್ನರ್ ಬೌಲರ್ ಆಗಿದ್ದ ಡೇವಿಡ್, ಎರಡೂ ಕೈಗಳಿಂದ ಏಕ ರೀತಿಯಲ್ಲಿ ಬೌಲಿಂಗ್ ನಡೆಸುವ, ಅಪರೂಪದ ಪ್ರಾವಿಣ್ಯತೆ ಅವರು ಹೊಂದಿದ್ದರು.ಉತ್ತಮ ಬ್ಯಾಟಿಂಗ್ ನಿಂದ, ತಂಡದಲ್ಲಿ ಆಲ್ ರೌಂಡರ್ ಆಗಿಯೂ ಗುರುತಿಸಿ ಕೊಂಡಿದ್ದರು. ದಿನಾ 7-8 ಕಿಲೋಮೀಟರ್ ಸೈಕಲ್ ತುಳಿದು ಪ್ರಾಕ್ಟೀಸ್ ಗೆ ಬರುತ್ತಿದ್ದ, ಒಬ್ಬ ಅಪ್ಪಟ ಕ್ರಿಕೆಟ್ ಪಟು, ಪ್ರೇಮಿ.
ದೈಹಿಕ ಶಿಕ್ಷಕರಾಗಿಯೂ ಅವರು ಉಡುಪಿ ಪರಿಸರದಲ್ಲಿ ಜನಪ್ರಿಯತೆ ಗಳಿಸಿದ್ದರು.
ಪಾರ್ಥಿವ ಶರೀರದ ಅಂತಿಮ ಯಾತ್ರೆ ಮೃತರ  ಕುತ್ಯಾರ್ ನಿವಾಸದಿಂದ   ಮಧ್ಯಾಹ್ನ 3:30 ಗಂಟೆಗೆ     ಪ್ರಾರಂಭವಾಗಿ ಲೇಡಿ ಆಫ್ ಹೆಲ್ತ್ ಚರ್ಚ್ ಶಿರ್ವಕ್ಕೆ ಅಂತ್ಯಕ್ರಿಯೆ ಗಾಗಿ  ತೆರಳುತ್ತದೆ.
ಅಗಲಿದ ದಿವ್ಯಾತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಎಂದು ಸ್ಪೋರ್ಟ್ಸ್ ಕನ್ನಡ ವೆಬ್ಸೈಟ್ ಮತ್ತು ಸ್ಟಾರ್ ವರ್ಟೆಕ್ಸ್-ಸ್ಪೋರ್ಟ್ಸ್ ಕನ್ನಡ ಯೂಟ್ಯೂಬ್ ಲೈವ್ ಚಾನೆಲ್ ವತಿಯಿಂದ ಪ್ರಾರ್ಥಿಸುತ್ತೇವೆ‌.
ಮಾಹಿತಿ ಕೃಪೆ-ಸದಾನಂದ ಶಿರ್ವ(ಬ್ಲೂಸ್ಟಾರ್ ಶಿರ್ವ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Latest stories

LEAVE A REPLY

Please enter your comment!
Please enter your name here

3 + 12 =