Categories
ಕ್ರಿಕೆಟ್

ಬೆಂಗಳೂರು- ಕೆರಳಿದ ಮುರಳಿ-ಗೆಲುವಿನ ಲಯಕ್ಕೆ ಮರಳಿದ ಕ್ರಿಶಾ ಕುಂದಾಪುರ

ಕೆ.ಟಿ.ಪಿ.ಎಲ್ 12 ನೇ ಪಂದ್ಯದಲ್ಲಿ ಕ್ರಿಶಾ ಇಲೆವೆನ್ ಕುಂದಾಪುರ,ಸ್ನೇಹಜೀವಿ ಮೈಸೂರು ವಿರುದ್ಧ 25 ರನ್ ಅಂತರದ ಜಯ ಗಳಿಸಿದೆ.
ಕ್ರಿಶಾ ಇಲೆವೆನ್ ಆರಂಭಿಕ‌ ಆಟಗಾರರಾದ ಮುರಳಿ 3 ಭರ್ಜರಿ ಸಿಕ್ಸರ್ ಸಹಿತ 24 ರನ್ ಸಿಡಿಸಿದರೆ, ಶಶಿ 13,
ಸುಜಿತ್ 11 ರನ್ ಗಳಿಸಿ ನಿಗದಿತ 8 ಓವರ್ ಗಳಲ್ಲಿ ಎದುರಾಳಿಗಳಿಗೆ 67 ರನ್ ಗಳ ಲಕ್ಷ್ಯ ನೀಡಿತ್ತು.
ಸ್ನೇಹಜೀವಿ ಮೈಸೂರಿನ ಪರವಾಗಿ ಪ್ರದೀಪ್ ಬಿರುಸಿನ 17 ರನ್ ಗಳಿಸಿದರು ಅಂತಿಮವಾಗಿ 41 ರನ್ ಗಳಿಸಲಷ್ಟೇ ಶಕ್ತವಾಯಿತು.
ಮುರಳಿ ಅರ್ಹವಾಗಿ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದುಕೊಂಡರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

eighteen + thirteen =