Categories
ಕ್ರಿಕೆಟ್

ಬೆಂಗಳೂರು-ಮಹೇಶ್ ಅತ್ಯುತ್ತಮ ಆಟ-ಎಮ್.ಕೆ‌.ಎಸ್ ಕೋಲಾರ ಸತತ 3 ನೇ ಜಯ

ಕೆ.ಟಿ.ಪಿ.ಎಲ್ ನ 12 ನೇ ಪಂದ್ಯದಲ್ಲಿ ನದೀಮ್ ಅಖ್ತರ್ ಸಾರಥ್ಯದ ಎಮ್.ಕೆ.ಎಸ್ ಕೋಲಾರ,ತ್ರಿಶೂಲ್ ಸೇನಾ ಮಡಿಕೇರಿ ತಂಡವನ್ನು ಸೋಲಿಸಿ ಸತತ 3 ನೇ ಜಯ ದಾಖಲಿಸಿ ಕೆ.ಟಿ.ಪಿ.ಎಲ್ ನ ಬಲಿಷ್ಠ ತಂಡವಾಗಿ ಮುನ್ನುಗ್ಗುತ್ತಿದೆ.
ತ್ರಿಶೂಲ್ ಸೇನಾ ಮೊದಲ ಇನ್ನಿಂಗ್ಸ್ ನಲ್ಲಿ ರೋಹಿತ್ ಗಿಲ್ಲಿ 15,ಮೊಹ್ಸಿನ್ 11 ರನ್ ನೆರವಿನಿಂದ ನಿಗದಿತ 8 ಓವರ್ ಗಳಲ್ಲಿ 48 ರನ್ ಕಲೆ ಹಾಕಿತ್ತು.
ಗುರಿ ಬೆನ್ನತ್ತುವ ಭರದಲ್ಲಿ ಎಮ್.ಕೆ.ಎಸ್ ಆರಂಭಿಕ ಕ್ರಮಾಂಕದ ಆಟಗಾರರ ವಿಕೆಟ್ ಲಗುಬಗನೆ ಕಳೆದುಕೊಂಡ ಬಳಿಕ,ಅಂತಿಮ ಹಂತದಲ್ಲಿ
ಕ್ರೀಸ್ ಗೆ ಆಗಮಿಸಿದ ಮಹೇಶ್ ಭರ್ಜರಿ 2 ಸಿಕ್ಸರ್ ಗಳ ನೆರವಿನಿಂದ 18 ರನ್ ಸಿಡಿಸಿದ ಪರಿಣಾಮ
ಎಮ್.ಕೆ.ಎಸ್ ಕೋಲಾರ 5 ವಿಕೆಟ್ ಗಳ ಗೆಲುವು ಸಾಧಿಸಿದೆ.
ಮಹೇಶ್ ಪಂದ್ಯಶ್ರೇಷ್ಟ ಗೌರವಕ್ಕೆ ಭಾಜನರಾದರು.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

one × 3 =