Categories
ಕ್ರಿಕೆಟ್

ಬೆಂಗಳೂರು-ಸನ್ಮಾನ್ಯ ಶ್ರೀ ಮುನಿರತ್ನರವರ ನೇತೃತ್ವದಲ್ಲಿ-ಅಗಲಿದ ಹಿರಿಯ ಆಟಗಾರರ ಸ್ಮರಣಾರ್ಥ-ಜೆ‌.ಎಂ.ಎಂ‌. ಮೆಮೋರಿಯಲ್ ಕಪ್

ರಾಜ್ಯ ಸರಕಾರದ ತೋಟಗಾರಿಕೆ ಮತ್ತುಯೋಜನೆ,
ಕಾರ್ಯಕ್ರಮ ಸಂಯೋಜನೆ,ಸಾಂಖ್ಯಿಕ ಹಾಗೂ ಕೋಲಾರ ಜಿಲ್ಲೆ ಉಸ್ತುವಾರಿ ಸಚಿವರಾದ ಶ್ರೀ ಮುನಿರತ್ನ ಇವರ ನೇತೃತ್ವದಲ್ಲಿ,ಐಟಿ ಬಿಟಿ ಮತ್ತು ಉನ್ನತ ಶಿಕ್ಷಣ ಸಚಿವರಾದ ಡಾ.ಸಿ.ಎನ್‌.ಅಶ್ವಥ್ ನಾರಾಯಣ್,
ಜೆ‌.ಪಿ‌.ಪಾರ್ಕ್ ವಾರ್ಡ್ ನಂ 17 ಬಿ.ಜೆ.ಪಿ ಮುಖಂಡರಾದ ಶ್ರೀಮತಿ ಸುನಂದಾ ಬೋರೇಗೌಡ ಮತ್ತು ಮಲ್ಲೇಶ್ವರ ವಾರ್ಡ್ 45 ಮಾಜಿ ಸದಸ್ಯರಾದ ಶ್ರೀ.ಎನ್.ಜೈಪಾಲ್ ಇವರೆಲ್ಲರ ಸಹಕಾರ,ಸಹಯೋಗದೊಂದಿಗೆ,ಹಾಲಿಡೇ ಕ್ರಿಕೆಟರ್ಸ್ ಇವರ ಆಶ್ರಯದಲ್ಲಿ,ಅಗಲಿದ ಹಿರಿಯ ಆಟಗಾರರಾದ ಜಗದೀಶ್ ನಾಯ್ಡು,ನರಸಿಂಹ ಮೂರ್ತಿ, ಮೆರಿಯನ್ ಮತ್ತು ಗಿರೀಶ್ ಇವರ ಸ್ಮರಣಾರ್ಥ ಜೆ.ಎಂ.ಎಂ.ಮೆಮೋರಿಯಲ್ ಕಪ್-2022 ಆಯೋಜಿಸಲಾಗಿದೆ.
ಜನವರಿ 8 ಮತ್ತು 9 ರಂದು ಮತ್ತಿಕೆರೆಯ ಜೆ‌.ಪಿ‌.ಪಾರ್ಕ್ ಕ್ರೀಡಾಂಗಣದಲ್ಲಿ ಹೊನಲು ಬೆಳಕಿನಲ್ಲಿ ನಡೆಯುವ ಈ ಪಂದ್ಯಾವಳಿಯಲ್ಲಿ ರಾಜ್ಯದ ಪ್ರತಿಷ್ಠಿತ 16 ತಂಡಗಳು ಭಾಗವಹಿಸಲಿದೆ.
M Sports ಪಂದ್ಯಾವಳಿಯ ನೇರಪ್ರಸಾರವನ್ನು ಬಿತ್ತರಿಸಿದರೆ,ಸ್ಪೋರ್ಟ್ಸ್ ಕನ್ನಡ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

nineteen − sixteen =