Categories
ಕ್ರಿಕೆಟ್

ಇಂದು ಭಾರತ – ದಕ್ಷಿಣ ಆಫ್ರಿಕಾ ನಡುವೆ 2 ನೇ ಟಿ20 ಕದನ

ಇಂದು ಭಾರತ ಮತ್ತು ಪ್ರವಾಸಿ ದಕ್ಷಿಣ ಆಫ್ರಿಕಾ ನಡುವೆ 2 ನೇ ಟಿ20 ಹೋರಾಟಕ್ಕೆ ಮೊಹಾಲಿಯ ಪಿಸಿಎ- ಐಎಸ್ ಬಿಂದ್ರಾ ಸ್ಟೇಡಿಯಂ ಸಜ್ಜುಗೊಂಡಿದ್ದು 2 ತಂಡಗಳು ಗೆಲ್ಲಲು ಕಠಿಣ ಅಭ್ಯಾಸ ನೆಡೆಸಿವೆ.

ಮೊದಲ ಪಂದ್ಯ ಒಂದೂ ಎಸೆತ ಕಾಣದೆ ಮಳೆಯಿಂದಾಗಿ ರದ್ದುಗೊಂಡಿತ್ತು. ಭಾರತ ಇನ್ನುಳಿದ 2 ಪಂದ್ಯಗಳನ್ನು ಗೆದ್ದು ಕ್ಲೀನ್ ಸ್ವೀಪ್ ಸಾಧಿಸುವ ವಿಶ್ವಾಸದಲ್ಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಗೆಲುವಿನ ಆರಂಭ ಪಡೆಯುವ ತವಕ ಉಭಯ ತಂಡಗಳದ್ದಾಗಿದೆ.

ತಂಡದಲ್ಲಿ ಕಾಯಂ ಸ್ಥಾನಕ್ಕಾಗಿ ರಿಷಬ್ ಪಂತ್ ಹೋರಾಟ :ಧೋನಿ ಅನುಪಸ್ಥಿತಿಯಲ್ಲಿ ಮುಂಬರುವ ಟಿ20 ವಿಶ್ವಕಪ್‌ಗೆ ಆಯ್ಕೆಯಾಗಬೇಕಾದರೆ ರಿಷಭ್‌ ಪಂತ್‌ಗೆ ಉತ್ತಮ ನಿರ್ವಹಣೆ ನೀಡಲು ಇದೊಂದು ಉತ್ತಮ ಅವಕಾಶವಾಗಿದೆ. ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ತಂಡದಲ್ಲಿ ಸ್ಥಾನ ಕಾಯಂ ಮಾಡಿಕೊಳ್ಳಬೇಕು,ಇಲ್ಲವಾದಲ್ಲಿ ಟಿ20 ವಿಶ್ವಕಪ್ ಗೆ ಬೇರೊಬ್ಬ ಆಟಗಾರ ಆಯ್ಕೆ ಆಗುವ ಸಂಭವ ಇದೆ.

ವರುಣನ ಅಡ್ಡಿ ಇಲ್ಲ: ಮೊಹಾಲಿಯಲ್ಲಿ ಕಳೆದ 2 ದಿನಗಳಿಂದ 30 ಡಿಗ್ರಿ ಉಷ್ಣಾಂಶ ಇದ್ದು ಮಳೆ ಬರುವ ಯಾವುದೇ ಸೂಚನೆಯಿಲ್ಲ.

ಇನ್ನೊಂದು ಮೈಲಿಗಲ್ಲಿನತ್ತ ವಿರಾಟ್ : ವಿರಾಟ್ ಕೊಹ್ಲಿ ಟಿ20 ಮಾದರಿಯಲ್ಲಿ ಅತಿಹೆಚ್ಚು ರನ್ ಗಳಿಸಲು ಇನ್ನು ಕೇವಲ 53 ರನ್ ಗಳ ಅವಶ್ಯಕತೆ ಇದೆ. ಪ್ರಸ್ತುತ ರೋಹಿತ್ ಶರ್ಮ ಅಗ್ರಸ್ಥಾನದಲ್ಲಿ ಇದುವರೆಗೂ 96 ಪಂದ್ಯಗಳನ್ನು ಆಡಿದ್ದು 2422 ರನ್ ಗಳಿಸಿದ್ದಾರೆ.

– ಪ್ರೀತಮ್ ಹೆಬ್ಬಾರ್

By ಕೋಟ ರಾಮಕೃಷ್ಣ ಆಚಾರ್ಯ

ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ
ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

Leave a Reply

Your email address will not be published.

18 + twelve =