ಕ್ರಿಕೆಟ್ಕೋಲಾರದಲ್ಲಿ ಅದ್ಧೂರಿಯ "E ZONE PREMIER LEAGUE-2019"

ಕೋಲಾರದಲ್ಲಿ ಅದ್ಧೂರಿಯ “E ZONE PREMIER LEAGUE-2019”

-

- Advertisment -spot_img

ಕೋಲಾರ ತನ್ನ ಗರ್ಭದಲ್ಲಿ ಚಿನ್ನವಷ್ಟೇ ಅಲ್ಲದೆ ಚಿನ್ನದಂತ ಬೆಲೆ ಬಾಳುವ ಕ್ರೀಡಾ ಪ್ರತಿಭೆಗಳನ್ನು ಹೊತ್ತು ಅತ್ಯಂತ ಶ್ರೀಮಂತವೆನಿಸಿದ ನಾಡು. ಈ ಚಿನ್ನದ ಮಣ್ಣಿನಲ್ಲಿ ಕ್ರೀಡೆಯ ಕೃಷಿ ನಡೆಸಿ ಯಶಸ್ಸು ಕಂಡ ಅಪ್ರತಿಮ ಸಂಘಟಕ,ಕ್ರೀಡಾ ಪೋಷಕ,ಕೋಲಾರದ ಕಣ್ಮಣಿ ಮಂಜುನಾಥ್ ರೆಡ್ಡಿ ಬಿ.ಆರ್ ಕೋಲಾರ.

ಟೆನ್ನಿಸ್ ಕ್ರಿಕೆಟ್ ಇತಿಹಾಸದ 90 ರ ದಶಕದ ಅಧ್ಯಾಯದ ಪುಟಗಳಲ್ಲಿ ಕೋಲಾರ ಅ್ಯಟಾಕರ್ಸ್ ತಂಡದ ದಾಖಲೆಗಳು ಚಿರಸ್ಥಾಯಿ.ಹಲವಾರು ಜಿಲ್ಲಾ,ರಾಜ್ಯ ಮಟ್ಟದ ಪ್ರತಿಷ್ಟಿತ ಪ್ರಶಸ್ತಿಗಳನ್ನು ಜಯಿಸಿದ್ದಲ್ಲದೆ, ಕೋಲಾರದಲ್ಲಿ ರಾಜ್ಯ,ರಾಷ್ಟ್ರ ಮಟ್ಟದ ಪಂದ್ಯಾಕೂಟಗಳನ್ನು ಸಂಘಟಿಸಿರುತ್ತದೆ. ಅಂದಿನ ದಿನಗಳಲ್ಲಿ ಈ ತಂಡವನ್ನು ದಶಕಗಳ‌ ಕಾಲ ಯಶಸ್ವಿಯಾಗಿ ಮುನ್ನಡೆಸಿದ ಕೀರ್ತಿ ಮಂಜುನಾಥ್ ರೆಡ್ಡಿ ಬಿ‌.ಆರ್ (ವಡು)ಯವರಿಗೆ‌ ಸಲ್ಲುತ್ತದೆ.

ನಂತರದ ದಿನಗಳಲ್ಲಿ ಪ್ರಸ್ತುತ ರಾಜ್ಯದ ಪ್ರಸಿದ್ಧ “ಈ ಝೋನ್ ಸ್ಪೋರ್ಟ್ಸ್ ಕ್ಲಬ್” ಸಂಸ್ಥೆಯನ್ನು ಸ್ಥಾಪಿಸಿ ಲೆದರ್ ಬಾಲ್ ನತ್ತ ಗಮನ ಹರಿಸಿದ ರೆಡ್ಡಿಯವರು ಕಳೆದ 10 ವರ್ಷಗಳಿಂದ ಯುವ ಪ್ರತಿಭೆಗಳಿಗೆ ಉಚಿತ ಬೇಸಿಗೆ ಶಿಬಿರಗಳನ್ನು ಏರ್ಪಡಿಸಿ ತರಬೇತಿ ನೀಡುತ್ತಾ,ಜಿಲ್ಲಾ ಮಟ್ಟದಿಂದ ರಾಜ್ಯಮಟ್ಟಕ್ಕೆ ಆಯ್ಕೆಯಾಗುವ ವಿವಿಧ ಕ್ರೀಡಾ ಸಾಧಕರಿಗೆ,ಯುವ ಪ್ರತಿಭಾನ್ವಿತ ಕ್ರೀಡಾಳುಗಳಿಗೆ ಆಯಾಯ ಕ್ರೀಡಾ ಕಿಟ್ ಗಳನ್ನು ನೀಡಿ ಪ್ರೋತ್ಸಾಹಿಸುತ್ತಿದ್ದು, ಕಳೆದ ಬಾರಿ ದಾಖಲೆಯ “E.P.L-2019 ಸೀಜನ್ 1” ಪಂದ್ಯಾಕೂಟ ನಡೆಸಿ ಯಶಸ್ಸು ಕಂಡಿದ್ದರು.

ಪ್ರ‌ಥಮ‌ ಆವೃತ್ತಿಯ ಪಂದ್ಯಾಕೂಟದಲ್ಲಿ ವಿಜೇತ ತಂಡ ಗರಿಷ್ಠ ನಗದು ಬಹುಮಾನದ ಜೊತೆಗೆ,ವಿಜೇತ ತಂಡದ 11ಮಂದಿ‌ ಆಟಗಾರರು FZ ಬೈಕ್ ಉಡುಗೊರೆ ಯಾಗಿ ಪಡೆದಿದ್ದರೆ,ತಂಡದ ನಾಯಕ R 1 5 ಬೈಕ್ ನ್ನು ಪಡೆದಿದ್ದರು.

ಈ ರೀತಿ ದುಬಾರಿ ಉಡುಗೊರೆಗೆ ರಾಷ್ಟ್ರೀಯ ಮಟ್ಟದಲ್ಲೇ ನಾಂದಿ ಹಾಡಿದ ಪ್ರಪ್ರಥಮ ಸಂಸ್ಥೆ “ಈ ಝೋನ್ ಸ್ಪೋರ್ಟ್ಸ್ ಕ್ಲಬ್”. ಇದೇ ಬರುವ 28 ರಿಂದ ಸತತ 18 ದಿನಗಳ ಕಾಲ ದ್ವಿತೀಯ ಆವೃತ್ತಿಯ “E.P.L-2019 ಸೀಜನ್ 2” ರಾಷ್ಟ್ರೀಯ ಮಟ್ಟದ ಟಿ-20 ಪಂದ್ಯಾಕೂಟ ಕೋಲಾರದ ಪವನ್ ಕಾಲೇಜ್ ಅಂಗಣದಲ್ಲಿ ನಡೆಯಲಿದ್ದು, 15 ಫ್ರಾಂಚೈಸಿ ತಂಡದ ಪ್ರತಿಷ್ಟಿತ ಪ್ರಶಸ್ತಿಗಾಗಿ ಕಾದಾಡಲಿದೆ.

ಚಾಂಪಿಯನ್ ತಂಡ 3,33,333 ರೂ, ರನ್ನರ್ಸ್ ತಂಡ 2,22,222 ರೂ ನಗದು ಸಹಿತ ಆಕರ್ಷಕ ಟ್ರೋಫಿ ,ಜೊತೆಯಾಗಿ ಅಂತಿಮ ಕ್ಷಣದ ಅಚ್ಛರಿಯ ದುಬಾರಿ ಉಡುಗೊರೆಗಳು ಪಂದ್ಯಾಕೂಟದ ಮೆರುಗು ಹೆಚ್ಚಿಸಲಿದೆ.

ರಾಷ್ಟ್ರ ಮಟ್ಟದ ಅನೇಕ ಆಟಗಾರರು ಪಂದ್ಯಾಕೂಟದ ಮುಖ್ಯ ಆಕರ್ಷಣೆಯಾಗಲಿದ್ದು, ಈ ಝೋನ್ ಸ್ಪೋರ್ಟ್ಸ್ ಕ್ಲಬ್ ನ ತರಬೇತುದಾರ ಶಿವು ಹಾಗೂಕಾರ್ತಿಕ್ ರೆಡ್ಡಿ ಜಾಕಿ(ರಾಕರ್ಸ್) ಈ ವೈಭವೋಪೇತ ಪಂದ್ಯಾಕೂಟದ ಉಸ್ತುವಾರಿ ವಹಿಸಲಿದ್ದು, M.Sports ಪಂದ್ಯಾಕೂಟದ ನೇರ ಪ್ರಸಾರ ಬಿತ್ತರಿಸಿದರೆ,ಕೋಲಾರದ ಕ್ರಿಕೆಟ್ ಪ್ರೇಮಿಗಳ ಹೃದಯ ಗೆದ್ದ ಡ್ಯಾನ್ಸಿಂಗ್ ಅಂಪಾಯರ್ ಮದನ್ ಮಡಿಕೇರಿ ತೀರ್ಪುಗಾರರಾಗಿ, ರಾಜ್ಯದ ಶ್ರೇಷ್ಠ ವೀಕ್ಷಕ ವಿವರಣೆಕಾರರು ಪಂದ್ಯಾಕೂಟದ ರಂಗೇರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರ್.ಕೆ‌.ಆಚಾರ್ಯ ಕೋಟ

ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ
ಕೋಟ ರಾಮಕೃಷ್ಣ ಆಚಾರ್ಯ ಪ್ರೀತಿಯಿಂದ ಕೆ.ಆರ್.ಕೆ ವೃತ್ತಿಯಲ್ಲಿ ಆಭರಣ ತಯಾರಕ ಹಾಗೂ ಪ್ರವೃತ್ತಿಯಲ್ಲಿ ಒಬ್ಬ ಟೆನ್ನಿಸ್ ಬಾಲ್ ಆಟಗಾರ ಹಾಗು ಸಂಘಟಕ. ಕಳೆದ ಇಪ್ಪತ್ತು ವರ್ಷಗಳಿಂದ ಕ್ರಿಕೆಟ್ ಆಟಗಾರರಾಗಿ ಕ್ರಿಕೆಟ್ ಅಂಗಣದಲ್ಲಿ ಕ್ರೀಡಾ ಸ್ಫೂರ್ತಿಯಿಂದ ಆಟವನ್ನು ಆಡಿ ವೈಭವೀಕರಿಸಿದವರು. 2019ರಲ್ಲಿ ಹಿರಿಯ ಮತ್ತು ಕಿರಿಯ ಆಟಗಾರರನ್ನು ಒಂದೆಡೆ ಸೇರಿಸುವ ಉದ್ದೇಶದಿಂದ ಲೋಕಾರ್ಪಣೆಗೊಂಡ ಜಾಲತಾಣ ಇವರ ಕನಸಿನ ಕೂಸು ಅದೇ www.sportskannada.com. ಉಡುಪಿಯ ಬಡಗುಪೇಟೆಯಲ್ಲಿರುವ ಆರ್.ಕೆ ಗೋಲ್ಡ್ ಇದರ ಕಛೇರಿಯಾಗಿದೆ .

LEAVE A REPLY

Please enter your comment!
Please enter your name here

two × 4 =

Latest news

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ?

ಆರ್‌ಸಿಬಿ ಮಾಲೀಕತ್ವದ ಬದಲಾವಣೆ: ಬೆಂಗಳೂರಿನ ಉದ್ಯಮಿಗಳ ಹೊಸ ಅಧ್ಯಾಯ? ಐಪಿಎಲ್‌ನ ಅತ್ಯಂತ ಜನಪ್ರಿಯ ಮತ್ತು ವ್ಯಾಪಾರಿಕವಾಗಿ ಯಶಸ್ವಿಯಾದ ಫ್ರಾಂಚೈಸಿಗಳಲ್ಲಿ ಒಂದಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಹೊಸ...

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..!

10 ಮಂದಿ ಹುಡುಗರ ಮಧ್ಯೆ ಒಬ್ಬಳು ಹೆಣ್ಣು ಹುಲಿ.. ಅವಳು ಬಂಗಾಳದ ಬಂಗಾರ..! ಪಶ್ಚಿಮ ಬಂಗಾಳದಲ್ಲಿ ಕ್ರಿಕೆಟ್ ಎಂದಾಕ್ಷಣ ಕಿವಿಗಪ್ಪಳಿಸುವ ಮೊದಲ ಹೆಸರು ‘ದಾದಾ’.. ಬಂಗಾಳದ ಮನೆ...

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ

ಬ್ರಹ್ಮಾವರದ ಹೆಮ್ಮೆ – ವಿಶ್ವವಿಜೇತ ಜೆಮೀಮಾ ರೊಡ್ರಿಗಸ್ ಅವರ ಕೋಚ್ ಪ್ರಶಾಂತ್ ಶೆಟ್ಟಿ ಇತ್ತೀಚೆಗೆ ನಡೆದ ಮಹಿಳೆಯರ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರತಿಭಾವಂತ ಕ್ರಿಕೆಟರ್ ಜೆಮೀಮಾ...

ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು

  ಲಾರೆನ್ಸ್ ಸಲ್ದಾನ: ಕೌಡೂರಿನ ಕ್ರೀಡೆ ಮತ್ತು ಕಲೆಗೆ ಹೊಸ ಉಸಿರು ಇತ್ತೀಚೆಗೆ ನಡೆದ ಮಹಿಳೆಯರ ವಿಶ್ವಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಭಾರತದ ಪ್ರತಿಭಾವಂತ ಬ್ಯಾಟ್ಸ್‌ವುಮನ್ ಜೆಮೀಮಾ ರೊಡ್ರಿಗಸ್ ಮಿಂಚಿ...
- Advertisement -spot_imgspot_img

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್

ಬಂಟ್ವಾಳದಲ್ಲಿ ‘ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್–2’ ಕ್ರಿಕೆಟ್ “ಟೀಮ್ ಬ್ರದರ್ಸ್ ಬರೆಕ್ಕಾಡ್ ಸೀಸನ್ –2” ಕ್ರಿಕೆಟ್ ಟೂರ್ನಮೆಂಟ್ ಡಿಸೆಂಬರ್ 27 ಮತ್ತು 28ರಂದು ಬಂಟ್ವಾಳ ಮೈದಾನದಲ್ಲಿ ಜರುಗಲಿದೆ. ‘ಟೀಮ್ ಬ್ರದರ್ಸ್ ವತಿಯಿಂದ ಆಯೋಜಿಸಲಾದ...

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ!

ಜೈ ಭೀಮ್ ಟ್ರೋಫಿ – 2025: ಹೊಳೆನರಸೀಪುರದಲ್ಲಿ “ಫ್ರೆಂಡ್ಸ್ ಬೆಂಗಳೂರು” ತಂಡದ ವಿಜಯ ಕಿರೀಟ! ಹೊಳೆನರಸೀಪುರದಲ್ಲಿ ನಡೆದ ಜೈ ಭೀಮ್ ಟ್ರೋಫಿ 2025 ಕ್ರಿಕೆಟ್ ಟೂರ್ನಿಯಲ್ಲಿ,...

Must read

- Advertisement -spot_imgspot_img

You might also likeRELATED
Recommended to you